ಗುಬ್ಬಿ: ತಾಲ್ಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ವೀರಣ್ಣ ಗುಡಿಯಲ್ಲಿ ಶ್ರೀಭದ್ರಕಾಳಿ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ವೈಭವಯುತವಾಗಿ ಜರುಗಿತು.
ಗುರುವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಶ್ರೀ ವೀರಭದ್ರ ಸ್ವಾಮಿಯ ಮಹಾ ರಥೋತ್ಸವ ಸಾಕಷ್ಟು ಸಂಖ್ಯೆಯ ಆಗಮಿಸಿದ್ದ ಭಕ್ತರು ತೆರನ್ನು ಎಳೆಯುವ ಮೂಲಕ ತೆರಿಗೆ ಬಾಳೆಹಣ್ಣು. ದವನ ಎಸೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ಕೊರೋನಾ ಸೊಂಕಿನ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಜಾತ್ರಾ ಮಹೋತ್ಸವ ಈ ಬಾರಿ ಹೆಚ್ಚು ಅದ್ದೂರಿ ಯಾಗಿ ನೆಡೆಯಿತು.
ಜಾತ್ರಾಮಹೋತ್ಸವ ಕ್ಕೆ ಆಗಮಿಸಿದ ಭಕ್ತ ರಿಗೆ ದೇವಾಲಯದ ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ಜಾತ್ರಾ ಮಹೋತ್ಸವ ಕ್ಕೆ ಶಿಕ್ಷಣ ಬಿ.ಸಿ.ನಾಗೇಶ್. ತುರುವೇಕೆರೆ ಶಾಸಕ ಮಸಾಲೆ ಜಯರಾಂ. ಆಧ್ಯಾತ್ಮಿಕ ಚಿಂತಕರು ಹಾಗೂ ಜ್ಯೋತಿಷಿಗಳಾದ ಶ್ರೀ ರಾಮಕೃಷ್ಣ ಶರ್ಮಾ . ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣ ಪ್ಪ. ರಮೇಶ್ ಕೌಲಗಿ.ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜ್ ಹಾಗೂಇತರ ಗಣ್ಯರು ದೇವಾಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆಯಲ್ಲಿ ದೇವಾಸ್ಥಾನ ದ ಆಡಳಿತ ಮಂಡಳಿ ಯ ಪುಟ್ಟಸ್ವಾಮಿ, ವಿ. ಶಿವರುದ್ರಯ್ಯ, ಎಂ.ವಿ.ಬಸವರಾಜು. ನಂಜುಂಡಯ್ಯ, ಶಿವಶಂಕರ್ ಇತರ ಪಧಾಧಿಕಾರಿಗಳು ಈ ವೇಳೆಯಲ್ಲಿ ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5