ಕೊರಟಗೆರೆ: ಮೊಮ್ಮಗನನ್ನು ಸರಕಾರಿ ಶಾಲೆಗೆ ಬಿಟ್ಟು ಮನೆಗೆ ಹೋಗುತ್ತಿದ್ದ ವೃದ್ದೆಗೆ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿ ವೃದ್ದೆಯ ಕಾಲು ಮುರಿದಿದೆ.
ಜೆಟ್ಟಿಅಗ್ರಹಾರ ಗ್ರಾಮದ ದಾಸಪ್ಪನ ಮಡದಿಯಾದ ಗಿರಿಯಮ್ಮ(65)ನ ಮೇಲೆ ದ್ವಿಚಕ್ರ ವಾಹನ ಹರಿದು ವೃದ್ದೆಯ ಎರಡು ಕಾಲುಗಳು ಮುರಿದು ಕೊರಟಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ.
ಕೇಶಿಪ್ ವಿರುದ್ದ ಸ್ಥಳೀಯರಿಂದ ಪ್ರತಿಭಟನೆ:
ಜೆಟ್ಟಿಅಗ್ರಹಾರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ತಿಂಗಳಿಗೆ ನೂರಾರು ಅಪಘಾತ ಆಗುತ್ತಿವೆ. ಅಪಘಾತವಾದಾಗ ಮಾತ್ರ ಪೊಲೀಸರು ಬರುತ್ತಾರೆ. ಅಪಘಾತದಲ್ಲಿ ಸತ್ತವರ ಕುಟುಂಬದ ನೋವು ಕೇಳೋರು ಯಾರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಉಬ್ಬು ನಿರ್ಮಾಣಕ್ಕೆ ಸ್ಥಳೀಯರ ಆಗ್ರಹ:
ರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತ ತಡೆಯಲು ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಬೇಕಿದೆ. 100 ಕಿ.ಮೀ. ವೇಗವಾಗಿ ಬರುವ ವಾಹನಗಳಿಂದ ಪದೇ ಪದೇ ಅಪಘಾತ ಆಗುತ್ತಿವೆ. ದಯವಿಟ್ಟು ಅಪಘಾತ ತಡೆದು ಜನರ ಜೀವ ಉಳಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗಂಟೆ ಗಟ್ಟಲೇ ಸಾಲಾಗಿ ನಿಂತ ವಾಹನಗಳು:
ಅಪಘಾತ ಆದ ಸ್ಥಳದಲ್ಲೇ ಸ್ಥಳೀಯರು ವಾಹನ ತಡೆದ ಪರಿಣಾಮ ಕಿ.ಮೀ. ಉದ್ದಕ್ಕೂ ವಾಹನಗಳು ನಿಂತಿವೆ. ನಂತರ ಪೊಲೀಸರ ಮಧ್ಯ ಪ್ರವೇಶದಿಂದ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.
ವರದಿ: ಮಂಜುಸ್ವಾಮಿ, ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz