ಕೊರಟಗೆರೆ : ಘನ ಸರ್ಕಾರವು ನಿವೇಶನ ರಹಿತರಿಗೆ, ನಿರಾಶ್ರಿತರಿಗೆ,ಬಡವರಿಗೆಂದು “ಆಶ್ರಯ ಯೋಜನೆ”ಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಜಮೀನುಗಳನ್ನ ಹುಡುಕಿ ನಿವೇಶನ ಮಂಜೂರು ಮಾಡಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುತ್ತಿರುವುದು ಕಾಣಬಹುದು.
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಗ್ಗನಹಳ್ಳಿ ಗ್ರಾಮದ ಸರ್ವೆ ನಂಬರ್ 51 ರಲ್ಲಿ 3.00 ಎಕರೆ ಸರ್ಕಾರಿ ಗೋಮಾಳದ ಜಮೀನನ್ನು ತುಮಕೂರು ಜಿಲ್ಲಾಧಿಕಾರಿಗಳು ನಿವೇಶನ ರಹಿತರಿಗೆ ನಿವೇಶನ ವಿತರಿಸಲು ಆಶ್ರಯ ಯೋಜನೆಯಡಿ ಆದೇಶ ಮಾಡಿದ್ದರು.
ಕೊರಟಗೆರೆಯ ತಹಶೀಲ್ದಾರ್ ಮತ್ತು ಮಧುಗಿರಿ ಉಪ ವಿಭಾಗಾಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಪರಿಶೀಲಿಸಿ ದೊಗ್ಗನಹಳ್ಳಿ ಗ್ರಾಮದ ಸರ್ವೆ ನಂಬರ್ 51 ರಲ್ಲಿ 11 ಎಕರೆ 06 ಗಂಟೆ ಸರ್ಕಾರಿ ಗೋಮಾಳದ ಜಮೀನಿದ್ದು ಅದರ ಪೈಕಿ 3.00 ಎಕರೆ ಜಮೀನನ್ನು ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಸ್ಕೆಚ್ ಮಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಜಮೀನು ಹಸ್ತಾಂತರ ಮಾಡಿದ್ದರು.
ತುಮಕೂರು ಜಿಲ್ಲಾಧಿಕಾರಿಗಳ ಆದೇಶ:
ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರ ನಿಯಮ 18ಎ (1) ರಡಿ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ವಿತರಿಸುವ ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿ ಮಂಜೂರು ಮಾಡಿ ಜಮೀನನ್ನು ಪಹಣಿಯಲ್ಲಿ ಇಂಡೀಕರಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಕೊರಟಗೆರೆ ತಾಲ್ಲೂಕು ತಹಶೀಲ್ದಾರ್ ಸ್ಕೆಚ್ ತಯಾರಿಸಿ ಭೂಮಿಯನ್ನು ಹಸ್ತಾಂತರ ಮಾಡಲು ಹಾಗೂ ದುರಸ್ತು ಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು..
ಕೊರಟಗೆರೆ ತಹಶೀಲ್ದಾರ್ ರವರು ಜಿಲ್ಲಾಧಿಕಾರಿಗಳ ಆದೇಶದಂತೆ ಮತ್ತು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಜಿ ಪರಮೇಶ್ವರ್ ಅವರ ಮಾರ್ಗದರ್ಶನದಂತೆ ಕಾನೂನು ರೀತಿ ಕ್ರಮ ಕೈಗೊಂಡು ಬೂದಗವಿ ಗ್ರಾಮ ಪಂಚಾಯಿತಿಗೆ ಭೂಮಿಯನ್ನು ಹಸ್ತಾಂತರಿಸಿದರು.
ಅಕ್ರಮವಾಗಿ ಭೂಮಿಯನ್ನ ಕಬಳಿಸಲು ಖಾಸಗಿ ವ್ಯಕ್ತಿಯಿಂದ ಹುನ್ನಾರ:
ಜಿಲ್ಲಾಧಿಕಾರಿಗಳ ಆದೇಶ ಮತ್ತು ತಾಲ್ಲೂಕು ಆಡಳಿತದ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಕಾನೂನು ಬಾಹಿರವಾಗಿ ಆಶ್ರಯ ಯೋಜನೆ ನಿವೇಶನ ಭೂಮಿ ಕಬ್ಜ ಮಾಡಲು ಹುನ್ನಾರ ನಡೆಸಿದ್ದ ದೊಗ್ಗನಹಳ್ಳಿ ಗ್ರಾಮದ ಖಾಸಗಿ ವ್ಯಕ್ತಿ ಬಲರಾಮಯ್ಯ..
ಸ್ಥಳ ಪರಿಶೀಲನೆಗೆ ಮುಂದಾದ ಅಧಿಕಾರಿಗಳಿಗೆ ಖಾಸಗಿ ವ್ಯಕ್ತಿಯಿಂದ ಧಮ್ಕಿ:
ಬೂದಗವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂದಾಯ ಇಲಾಖೆಯ ಆರ್ ಐ ಖಾಸಗಿ ವ್ಯಕ್ತಿಗೆ ಒತ್ತುವರಿ ತೆರವು ಮಾಡಲು ಎರಡನೇ ಭಾರೀ ನೋಟಿಸ್ ನೀಡಲು ಹೋದಾಗ ಖಾಸಗಿ ವ್ಯಕ್ತಿಯಾದ ಬಲರಾಮಯ್ಯ ಅಧಿಕಾರಿಗಳಿಗೆ ಐ ಯಾಮ್ ನಾಟ್ ಆರ್ಡಿನರಿ ಮ್ಯಾನ್ ನನ್ನನ್ನು ಎದುರು ಹಾಕಿಕೊಂಡರೆ ನಾನು ಎಲ್ಲಿಗೆ ಬೇಕಾದರೂ ಹೋಗುತ್ತೇನೆ ಏನು ಬೇಕಾದರೂ ಮಾಡುತ್ತೇನೆ ನೀವೆಲ್ಲರೂ ಹುಷಾರಾಗಿರಿ ಎಂದು ಧಮ್ಕಿ ಹಾಕಿರುವ ಘಟನೆಯು ಸಹ ನಡೆದಿದೆ.
ತಹಶೀಲ್ದಾರ್ ಅವರ ಆದೇಶದಂತೆ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರ ಸಮ್ಮುಖದಲ್ಲಿ ಆಶ್ರಯ ಯೋಜನೆಯ ನಿವೇಶನದ ಭೂಮಿಯನ್ನು ಒತ್ತುವರಿ ಮಾಡಿದ್ದ ಜಾಗವನ್ನ ಸರ್ವೆ ಮಾಡಿ ಒತ್ತುವರಿಯನ್ನು ಯಶಸ್ವಿಯಾಗಿ ತೆರವು ಮಾಡಲಾಯಿತು.
ತಹಶೀಲ್ದಾರ್ ಮಂಜುನಾಥ್ ಕೆ, ಆರ್.ಐ. ರಮೇಶ್, ತಾಲ್ಲೂಕು ಭೂ ಮಾಪಕರಾದ ನಾಗಲಾಂಬಿಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘು ನಂದನ್, ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಚಂದ್ರಶೇಖರ್ ಸದಸ್ಯರಾದ ರವಿ ಕುಮಾರ್, ಮುಖಂಡರಾದ ಕೆಂಪಣ್ಣ, ಅಡವೀಶ್,ರಾಜ ರವೀಂದ್ರ ನಾಯ್ಕ,ಕರ್ನಾಟಕ ರಣಧೀರರ ವೇದಿಕೆಯ ಅಧ್ಯಕ್ಷ ಮಂಜುಸ್ವಾಮಿ ಎಂ ಎನ್, ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಎಸ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು,ಸ್ಥಳೀಯ ಮುಖಂಡರು,ಸಾರ್ವಜನಿಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA