ಕೊರಟಗೆರೆ: ತಾಲೂಕಿನಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತಂಡಾಗಿ ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದು ವಿಕೃತಿ ಮೆರೆಯಲಾಗಿದೆ.
ಮಹಿಳೆಯ ಹತ್ಯೆ ಮಾಡಿದ ನಂತರ ಮೃತದೇಹವನ್ನು ತುಂಡು ತುಂಡಾಗಿ ಬೇರ್ಪಡಿಸಿ ಕೈ ಭಾಗವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಒಂದು ಕಡೆ ಬಿಸಾಡಿದರೆ, ಅದರಿಂದ ಕೇವಲ ಇನ್ನೂಂದು ಕಿ.ಲೋ. ದೂರದಲ್ಲಿಯೇ ಇನ್ನೊಂದು ಕೈ ಪತ್ತೆಯಾಗಿದೆ. ಸ್ವಲ್ಪ ದೊರದಲ್ಲಿಯೇ ಕರುಳನ್ನು ಚೀಲದಲ್ಲಿ ಕಟ್ಟಿ ಎಸೆಯಲಾಗಿದೆ.
ಇನ್ನಷ್ಟು ದೂರದಲ್ಲಿ ದೇಹದ ಮುಂಡದ ಭಾಗವನ್ನು ಛಿದ್ರ ಛಿದ್ರಗೊಳಿಸಿ ಬಿಸಾಡಲಾಗಿದೆ. ಕೈ ಒಂದು ಕಡೆ, ಕರುಳೊಂದು ಕಡೆ, ಮುಂಡವೇ ಇನ್ನೊಂದು ಕಡೆ ಪತ್ತೆಯಾಗಿದೆ ಎನ್ನಲಾಗಿದೆ.
ಸಿದ್ದರಬೆಟ್ಟದಿಂದ ತೋವಿನಕೆರೆಗೆ ಸಂರ್ಪಕಿಸುವ ರಸ್ತೆ ಬದಿಯಲ್ಲೂ ಕೂಡ ಮೂಟೆ ಕಟ್ಟಿದ ಚೀಲ ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯ ಹೊಟ್ಟೆಯ ಭಾಗ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC