ಮಧುಗಿರಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ದೇಶವು ಜಯಶೀಲರಾಗುವಂತೆ ಬೆಂಬಲಿಸಿ ಕ್ರೀಡಾಭಿಮಾನಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾಕ್ ಜಾಥಾವನ್ನು ಹಮ್ಮಿಕೊಂಡಿದ್ದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣ ದಲ್ಲಿ ರಾಷ್ಟ್ರ ಗೀತೆಯೊಂದಿಗೆ ಆರಂಭವಾದ ಜಾಥವು ಪಟ್ಟಣದ ಅಂಬೇಡ್ಕರ್ ವೃತ್ತ , ದಂಡೂರು ಬಾಗಿಲು ರಸ್ತೆ , ಹೈಸ್ಕೂಲ್ ರಸ್ತೆ , ಖಾಸಗಿ ಬಸ್ ನಿಲ್ದಾಣಗಳಲ್ಲಿ ಭಾರತ ಗೆಲ್ಲಲಿ ಎಂಬ ಘೋಷ ವಾಕ್ಯಗಳೊಂದಿಗೆ ಕ್ರೀಡಾಭಿಮಾನಿಗಳು ಜಾಥದಲ್ಲಿ ಭಾಗವಹಿಸಿದ್ದರು.
ಪುರಸಭಾ ಸದಸ್ಯರಾದ ಚಂದ್ರಶೇಖರ್ ಬಾಬು , ಎಂ ಆರ್ ಜಗನ್ನಾಥ್ , ರುದ್ರಾರಾಧ್ಯ , ಜಗದೀಶ್ , ಜಯಣ್ಣ , ಆನಂದ ಕೃಷ್ಣ , ನಾರಾಯಣರಾಜು , ಅನಂತನಾರಾಯಣ ಬಾಬು , ಪ್ರದೀಪ್ , ಎಸ್ ಬಿ ಟಿ ರಾಮು , ಸಿದ್ದಾಪುರ ಕೃಷ್ಣಮೂರ್ತಿ ಹಾಗೂ ಮತ್ತಿತರರು ಇದ್ದರು.