ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ಧರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೇನಹಳ್ಳಿ ಗ್ರಾಮಕ್ಕೆ ರಸ್ತೆ ಇಲ್ಲದೆ ಹರಿಯುವ ಹಳ್ಳದಲ್ಲಿ ಪ್ರತಿ ನಿತ್ಯವೂ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು ಈ ವಿಚಾರವಾಗಿ ನಮ್ಮ ತುಮಕೂರು ವಾಹಿನಿಯು ನಿರಂತರವಾದ ವರದಿಯನ್ನು ಪ್ರಸಾರ ಮಾಡಿತ್ತು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ನಮ್ಮ ವರದಿಗಾರ ಮಂಜುಸ್ವಾಮಿ.ಎಂ.ಎನ್ ರವರು ತಂದಿದ್ದರು.
ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ಕುಮಟೇನಹಳ್ಳಿ ಗ್ರಾಮಕ್ಕೆ ತಹಶೀಲ್ದಾರ್ ನಹೀದ ಜಂ ಜಂ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್, ಸಹಾಯಕ ಇಂಜಿನಿಯರ್ ಮುಶೀರ್, ರಾಜಸ್ವ ನಿರೀಕ್ಷಕರಾದ ಅಮ್ಜದ್, ಗ್ರಾಮ ಲೆಕ್ಕಿಗ ರಮೇಶ, ತಾಲ್ಲೂಕು ಸರ್ವೆ ಇಲಾಖೆಯ ನಾಗಲಾಂಬಿಕೆ, ಮತ್ತು ಗ್ರಾಮ ಸಹಾಯಕರು ಈ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಕಾಶೆ ರಸ್ತೆ ತೆರವು ಮಾಡಲು ಭೂ ಸರ್ವೆ ಮಾಡಿ ಗ್ರಾಮದ ಸರ್ವೇ ನಂಬರ್ 10 ರ ಮತ್ತು 59 ಮದ್ಯೇ ಹಾದು ಹೋಗುವ ಬಂಡಿ ಜಾಡು ರಸ್ತೆ ಒತ್ತುವರಿ ಮಾಡಿರುವ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದರು.
ಕುಮಟೇನಹಳ್ಳಿಯಲ್ಲಿ ಗ್ರಾಮಕ್ಕೆ ನಕಾಶೆ ರಸ್ತೆ ಇದ್ದು ಇಲ್ಲದಂತೆ ಮಾಯವಾಗಿತ್ತು.ನಮ್ಮ ತುಮಕೂರು ವಾಹಿನಿ ವರದಿ ನೋಡಿದ ಅಧಿಕಾರಿಗಳು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ..
ಹರಿಯುವ ಹಳ್ಳದ ಮದ್ಯೆಯಲ್ಲಿಯೇ ಇಷ್ಟು ದಿನ ಸಾರ್ವಜನಿಕರು, ವಿದ್ಯಾರ್ಥಿ ಗಳು, ರೈತರು ಓಡಾಡುತ್ತಿದ್ದರು ಈ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ತಹಶೀಲ್ದಾರ್ ರವರಿಗೆ ನಮ್ಮ ವಾಹಿನಿ ಮೂಲಕ ಮನವಿ ಮಾಡಿದ್ದರು ನಕಾಶೆ ರಸ್ತೆ ತೆರವು ಮಾಡಿ ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಲು ಮನವಿ ಸಲ್ಲಿಸಿದ್ದರು.
ನಮ್ಮ ತುಮಕೂರು ವಾಹಿನಿಯು ಇಲ್ಲಿನ ಜನರ ಕಷ್ಟಗಳ ಬಗ್ಗೆ ನಿರಂತರವಾದ ವರದಿ ಮಾಡಿದ ತಕ್ಷಣವೇ ತಹಶೀಲ್ದಾರ್ ಎಚ್ಚೆತ್ತು ಕೊಂಡು ನಕಾಶೆ ರಸ್ತೆ ತೆರವು ಕಾರ್ಯಾಚರಣೆ ಕ್ರಮ ಜರುಗಿಸಿದ್ದಾರೆ.
ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈ ಗ್ರಾಮಕ್ಕೆ ಮೇಲ್ ಸೇತುವೆ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ಮಾಡಿ ಉನ್ನತ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ವರದಿ ನೀಡಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್.
ಈ ಕುಗ್ರಾಮಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಜೊತೆಗೆ ಮುಖ್ಯವಾಗಿ ಅಭಿವೃದ್ದಿ ಕಾರ್ಯ ಮಾಡಬೇಕೆಂದು ಪವರ್ ವರದಿ ಮಾಡಿದ ನಮ್ಮ ತುಮಕೂರು ವಾಹಿನಿಗೆ ಗ್ರಾಮದ ಜನರು ಧನ್ಯವಾದಗಳನ್ನು ತಿಳಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz