ಮಧುಗಿರಿ: ಇತಿಹಾಸ ಪ್ರಸಿದ್ಧ ಏಷ್ಯಾದ ಪ್ರಥಮ ಏಕಶಿಲಾ ಬೆಟ್ಟದಲ್ಲಿ 12 ಬೆಟಾಲಿಯನ್ ಕೆ ಎಸ್ ಆರ್ ಪಿ ತಂಡ ಮತ್ತು ಮಧುಗಿರಿಯ ತಾಲೂಕು ಆಡಳಿತ ಅಧಿಕಾರಿಗಳ ತಂಡ ಇಂದು ಮಧುಗಿರಿ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರೀಯತೆಯ ಭಕ್ತಿಯನ್ನು ತೋರಿದ್ದಾರೆ.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ಪ್ರಯುಕ್ತ ತ್ರಿವರ್ಣ ಧ್ವಜವನ್ನು ಎತ್ತರದ ಪ್ರದೇಶದಲ್ಲಿ ಹಾರಿಸುವುದು ದೇಶದ ಹೆಮ್ಮೆ ಮತ್ತು ತಿರಂಗ ಧ್ವಜದ ಗೌರವ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ.
ಈ ಬಗ್ಗೆ ಮಾತನಾಡಿದ ಕೆ ಎಸ್ ಆರ್ ಪಿ 12ನೇ ಬೆಟಾಲಿಯನ್ ಇನ್ಸ್ಪೆಕ್ಟರ್ ಹರೀಶ್, ನಮ್ಮ 12ನೇ ಬೆಟಾಲಿಯನ್ ಪ್ರತಿವಾರವೂ ಒಂದೊಂದು ಟ್ರಕ್ಕಿಂಗ್ ಪ್ರದೇಶಗಳಿಗೆ ಹೋಗುತ್ತೇವೆ. ಅದರಂತೆ ಇಂದು ಸ್ವತಂತ್ರ ಮಹೋತ್ಸವದ ಅಂಗವಾಗಿ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಏರಿ ತಿರಂಗ ಧ್ವಜವನ್ನು ಕೇಂದ್ರ ಸರ್ಕಾರದ ಆಗ್ನೇಯದ ಅತಿ ಎತ್ತರದಲ್ಲಿ ಹಾರಿಸಿದ್ದು ಖುಶಿ ತಂದಿದೆ. ಇದರ ಸಾರಥ್ಯವನ್ನು ವಹಿಸಿದ್ದ ಹಾಗೂ ನಮ್ಮೆಲ್ಲರಿಗೂ ಇಂತಹ ಅವಕಾಶವನ್ನು ಕೊಟ್ಟಿದ್ದಕ್ಕೆ ಅಸಿಸ್ಟೆಂಟ್ ಕಮಂಡೆಂಟ್ ಪಟೇಲ್ ಬಿಸಿ ಅವರಿಗೆ ಧನ್ಯವಾದಗಳು ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿದರು.
ಬಳಿಕ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಮಾತನಾಡಿ, ಇಂದು ಮಧುಗಿರಿ ಬೆಟ್ಟವನ್ನು ಹತ್ತಿ ತುಂಬ ಖುಷಿಯಾಗಿದೆ. ತುಂಬಾ ಕಡಿದಾದ ಬೆಟ್ಟ ಇದಾಗಿದ್ದು, ಸಾರ್ವಜನಿಕರು ಬೆಟ್ಟ ಹತ್ತುವಾಗ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು. ನಮ್ಮ ಪಿಸಿ ಯಾರೇ ಪ್ರವಾಸಿಗರು ಆಗಮಿಸಿದ್ದರು, ಅವರ ಹೆಸರು ಮತ್ತು ವಿಳಾಸಗಳನ್ನು ನೋಂದಾಯಿಸಿಕೊಂಡು ತದನಂತರದಲ್ಲಿ ಬೆಟ್ಟದಿಂದ ವಾಪಸ್ ಹೋಗಿರುವ ಬಗ್ಗೆ ವಿಚಾರಣೆ ನಡೆಸುತ್ತಾರೆ. ಆಗಸ್ಟ್ 15ರಂದು ಸಾರ್ವಜನಿಕರು ಸಹ ಪೊಲೀಸರೊಟ್ಟಿಗೆ ಸಹಕರಿಸಬೇಕು ಯಾವುದೇ ಬೂಟಾಟಿಗಳಿಗೆ ಇಲ್ಲಿ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಪಟೇಲ್ ಪಿ.ಸಿ., ಇನ್ಸ್ ಪೆಕ್ಟರ್ ಗಳಾದ ಹರೀಶ್, ಶ್ರೀಕಾಂತ್ ನಾಯಕ್, ಲೋಕೇಶ್ ಮತ್ತು ತಾಲೂಕು ಆಡಳಿತ ಅಧಿಕಾರಿಗಳು , ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ, ತಾಸಿಲ್ದಾರ್ ಸುರೇಶ್ ಮತ್ತು ತಾಲೂಕಿನ ಪಂಚಾಯಿತಿಯ ಹಲವು ಪಿ ಡಿಒಗಳು ಮತ್ತಿತರರು ಹಾಜರಿದ್ದರು
ವರದಿ: ದೊಡ್ಡೇರಿ, ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz