ತಿಪಟೂರು: ಬಡವರ ಪಾಲಿನ ಸಂಜೀವಿನಿ ಎಂದರೆ ಸರ್ಕಾರಿ ಆಸ್ಪತ್ರೆ ಆದರೆ ಅಲ್ಲಿನ ದಂತ ವೈದ್ಯರೊಬ್ಬರು ದಿನನಿತ್ಯ ಕುಡಿದಿರುತ್ಥಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇಂದು ಕರ್ತವ್ಯದ ವೇಳೆಯಲ್ಲಿಯೇ ಕುಡಿದು ಟೇಬಲ್ ಮೇಲೆ ಕಾಲು ಹಾಕಿಕೊಂಡು ಬಂದ ರೋಗಿಗಳಿಗೆ ಕೈಮುಗಿದು ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿನ ಕರ್ತವ್ಯನಿರತ ದಂತ ವೈದ್ಯ ಡಾ.ಜಯಪ್ರಕಾಶ್ ಇಷ್ಟೆಲ್ಲಾ ಅವಾಂತರ ಮಾಡಿಕೊಂಡಿದ್ದಾರೆ. ಈ ವೈದ್ಯ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಬಂದಾಗಿನಿಂದಲೂ ಈತ ಯಾವಾಗಲು ಪಾನ ಮತ್ತನಾಗಿರುತ್ತಾನೆಂದು ಚಿಕಿತ್ಸೆ ಪಡೆದ ರೋಗಿಗಳು ಹೇಳುತ್ತಿದ್ದರು.
ಇನ್ನು ಯಾವಾಗ ಹೋದರು ಇನ್ನೊಂದು ದಿನ ಬನ್ನಿ ಎನ್ನುತ್ತಾ ದಿನವನ್ನು ತಳ್ಳುತ್ತಿದ್ದರು. ಆದರೆ ಇಂದು ಕರ್ತವ್ಯದ ವೇಳೆಯಲ್ಲಿಯೇ ಪಾನಮತ್ತನಾಗಿ ಛೇರ್ಮೇಲೆ ಕುಳಿತು ಟೇಬಲ್ ಮೇಲೆ ಕಾಲು ಹಾಕಿಕೊಂದ್ದಾರೆ. ಕೊಠಡಿಯ ಹೊರಗೆ ಬಂದಿರುವ ಹೊರ ರೋಗಿಗಳು ಸರದಿಯ ಸಾಲಿನಲ್ಲಿ ನಿಂತಿದ್ದಾರೆ. ಹೀಗೆ ಮಲಗಿರುವ ವೈದ್ಯರನ್ನು ರೋಗಿಯೊಬ್ಬರು ಎಚ್ಚರಿಸಲು ಹೋದಾಗ ಅವರನ್ನು ಮಾತನಾಡಿಸಲು ಸಾಧ್ಯವಾಗದಷ್ಟು ಪಾನಮತ್ತನಾದ ವೈದ್ಯ ಕೈ ಸನ್ನೆಯಲ್ಲಿಯೇ ನಾಳೆ ಬಾ ಎಂದು ತೋರಿಸುವ ಜೊತೆಗೆ ಕೈ ಮುಗಿಯುತ್ತಿದ್ದಾರೆ.
ಈಗಾಗಲೇ ಸಾರ್ವಜನಿಕ ಆಸ್ಪತ್ರೆ ಎಂದರೇ ಒಂದು ರೀತಿಯಲ್ಲಿ ನೋಡುವ ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ವೈದ್ಯರಿದ್ದಾರೆಂದರೆ ಸಾಮಾನ್ಯ ಜನರು ಎಲ್ಲಿ ಹೋಗಬೇಕು, ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಣಕೊಡಲು ಸಾಧ್ಯವಾಗದೇ ಬಡವ ನೀನು ಮಡಗಿದಂಗೆ ಇರಬೇಕು ಎಂದು ರೋಗಿಗಳು ನೊಂದು ನುಡಿಯುತ್ತಾರೆ.
ಈ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳನ್ನು ಕೇಳಿದರೆ ನಾನು ಕರ್ತವ್ಯದಲ್ಲಿದ್ದೇ, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ, ಹಾಗೇನಾದರು ಆಗಿದ್ದರೆ ಕ್ರಮ ಕೈಗೊಳ್ಳುತ್ತೇನೆಂದು ತಿಳಿಸಿದ್ದಾರೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA