ತುಮಕೂರು: ಈಗಾಗಲೇ ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ನಡೆಯುತ್ತಿದೆ. ಮಿಸ್ಡ್ ಕಾಲ್ ಅಭಿಯಾನ ಒಂದೂವರೆ ಲಕ್ಷ ಆಗೋಗಿದೆ. ಯುವಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ನಿರಂತರವಾಗಿ 57 ದಿನಗಳ ಕಾಲ ನಡೆಯುತ್ತಿದೆ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬುಕ್ಕಾಪಟ್ಟಣದಲ್ಲಿ ಮಾತನಾಡಿದ ಅವರು, ಜನರೊಂದಿಗೆ ಜನತಾದಳ ಎರಡನೇ ದಿನ ನಡೆಯುತ್ತಿದೆ. ಬುಕ್ಕಾಪಟ್ಟಣದಲ್ಲಿ ಜೆಡಿಎಸ್ ಫೇವರ್ ಆಗಿದೆ ಎಂದರು.
ರಾಜ್ಯ ಸರ್ಕಾರದ ಗ್ಯಾರೆಂಟಿ ಬಗ್ಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪ್ರತಿ ತಿಂಗಳು ಗ್ಯಾರಂಟಿ ಯೋಜನೆ ಕೊಡ್ತೀನಿ ಅಂತಾ ಹೇಳಿದ್ರು. ಅಂತಿಮವಾಗಿ ಗ್ಯಾರಂಟಿ ಯೋಜನೆ ಯಾವ ಸಂದರ್ಭಗಳಲ್ಲಿ ಬರ್ತಿವೆ. ಯಾವುದಾದರೂ ಉಪಚುನಾವಣೆ, ಎಂ.ಪಿ ಚುನಾವಣೆ ಬಂದಾಗ ಈ ಗ್ಯಾರಂಟಿ ಯೋಜನೆ ಕೊಡ್ತಿದ್ದಾರೆ. ಕೆಲವೊಂದಷ್ಟು ಕೊಡ್ತಿದ್ದಾರೆ. ಇನ್ನು ಕೆಲವೊಂದಷ್ಟು ಗ್ಯಾರಂಟಿಯನ್ನ ಕೊಡುತ್ತಿಲ್ಲ. ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳು ಜನರಿಗೆ ಹೋಗ್ತಿಲ್ಲ ಅನ್ನೋದು ರಾಜ್ಯದ ಜನತೆಯ ಅಭಿಪ್ರಾಯ ಎಂದರು.
ಗ್ಯಾರಂಟಿ ಕೊಡೋದು ತಪ್ಪು ಅಂತಾ ಹೇಳ್ತಿಲ್ಲ. ನೀವು ಎಲ್ಲೋ ಒಂದು ಕಡೆ ಗ್ಯಾರಂಟಿ ಕೊಡ್ತಾ ಕೊಡ್ತಾ ಅಭಿವೃದ್ಧಿಯನ್ನ ಮರೆಯುತ್ತಿದ್ದೀರಿ. ಗ್ಯಾರಂಟಿ ಹೆಸರಲ್ಲಿ ರಾಜ್ಯ ಅಭಿವೃದ್ಧಿ ಕಾಣ್ತಿಲ್ಲ. ಎಷ್ಟು ಜನ ಶಾಸಕರಿದ್ದಾರೆ. ಎಷ್ಟು ಅನುದಾನ ಕೊಟ್ಟಿದ್ದೀರಿ..? ಕಳೆದ ಎರಡು ವರ್ಷದಲ್ಲಿ ನೀವು ಅನುದಾನ ಎಷ್ಟು ಕೊಡಲಿಕ್ಕೆ ಆಗಿದೆ. ಅಂತಿಮವಾಗಿ ತೆರಿಗೆಯನ್ನೂ ಜಾಸ್ತಿ ಮಾಡಿ, ಸಮರ್ಪಕವಾಗಿ ಗ್ಯಾರಂಟಿಯನ್ನೂ ಕೊಡ್ತಿಲ್ಲ. ಅಭಿವೃದ್ಧಿ ಕಾರ್ಯ ಕೂಡ ಸ್ಥಗಿತವಾಗಿದೆ. ಸಂಪೂರ್ಣವಾಗಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಜೆಡಿಎಸ್ ಗೆ ಹೊಸ ಸಾರಥಿಯಾಗಿ ನಿಖಿಲ್ ಕುಮಾರಸ್ವಾಮಿ ಬರ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಪಕ್ಷದಲ್ಲಿ ಯಾವಾಗಲೂ ನಾಯಕರನ್ನ ಬೆಳೆಸುವ ಕಾರ್ಯಕರ್ತರು ಇದ್ದಾರೆ. ಎಷ್ಟೋ ಜನ ನಾಯಕರು ಈ ಪಕ್ಷದಿಂದ ಬೆಳೆದು ಬೇರೆ — ಬೇರೆ ಪಕ್ಷಗಳಿಗೆ ಹೋಗಿರುವ ಇತಿಹಾಸ ನೋಡಿದ್ದೀರಾ..? ಇವತ್ತು ಈ ಪಕ್ಷ ನಾಯಕರುಗಳನ್ನ ತಯಾರು ಮಾಡುವ ಪ್ಯಾಕ್ಟರಿ ಆಗಿದೆ ಎಂದರು.
ಜೆಡಿಎಸ್ನ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜೆಡಿಎಸ್ ನ ಭವಿಷ್ಯ ಭದ್ರವಾಗಿದೆ, ಸುಭದ್ರವಾಗಿದೆ. ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಬೇಕಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW