ಪಾವಗಡ : ಹಿಂದೂ ಮುಸ್ಲಿಂ ಎಂದಿಗೂ ಸಹೋದರರಿದ್ದಂತೆ ನಾವೆಲ್ಲ ಭಾರತೀಯರು, ಪಾವಗಡದ ಅಳಿಯನಾಗಿ ಇಂದು ಪವಿತ್ರವಾದ ರಂಜಾನ್ ಹಬ್ಬದ ಪ್ರಯುಕ್ತ ಹೆಲ್ಪ್ ಸೊಸೈಟಿ ವತಿಯಿಂದ ಮಹಿಳೆಯರಿಗೆ ಸೀರೆ ಹಾಗೂ ದಿನಸಿ ಪದಾರ್ಥಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ನನ್ನ ಕೈ ಇಂದ ವಿತರಿಸುತ್ತಿರುವುದು ನನಗೆ ತುಂಬಾ ಖುಷಿ ಉಂಟಾಗುತ್ತಿದೆ ಎಂದು ಖ್ಯಾತ ತೆಲುಗು ಚಿತ್ರ ನಟ ಸಾಯಿರಾಮ್ ಶಂಕರ್ ಅಭಿಪ್ರಾಯಪಟ್ಟರು.
ಪಾವಗಡ ಪಟ್ಟಣದ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಇಂದು ರಂಜಾನ್ ಪ್ರಯುಕ್ತ ಸುಮಾರು 50ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರಿಗೆ ಸೀರೆ ಹಾಗೂ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡುತ್ತ ಹೆಲ್ಪ್ ಸೊಸೈಟಿ ಸಂಸ್ಥೆ ಮೂಲಕ ಮಾನಂ ಶಶಿಕಿರಣ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಇಮ್ರಾನ್,ಮಾತನಾಡುತ್ತ ಪ್ರತಿವರ್ಷ ಎಲ್ಲಾ ಹಬ್ಬ ಹರಿದಿನಗಳಿಗೆ ಸಹಾಯ ಹಸ್ತ ನೀಡುತ್ತಿರುವ ಹೆಲ್ಪ್ ಸೊಸೈಟಿ ಮತ್ತಷ್ಟು ಸೇವಾ ಕಾರ್ಯ ನಡೆಸಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸರಳ ಕಾರ್ಯಕ್ರಮದಲ್ಲಿ ಎನ್ ಬಿ ಕೆ ಫ್ಯಾನ್ಸ್ ಕ್ಲಬ್ ಅಧ್ಯಕ್ಷ ಶಾಂತಿ ಕ್ಲಿನಿಕ್ ದೇವರಾಜ್, ಸಾಯಿ ರಾಮ್ ಶಂಕರ್ ರವರ ಮಾವ ವೇಣುಗೋಪಾಲ್, ಸಂದ್ಯಾ ಶಶಿಕಿರಣ್, ವೀರಮ್ಮನಹಳ್ಳಿ ಲೋಕೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ,ಬ್ಲಡ್ ಶಶಿಕಲಾ, ಗೌತಮ್, ಲತಿಶ್ ನಾಯ್ಡು, ವೀರಭದ್ರಪ್ಪ, ರಾಮಚಂದ್ರ, ಆದಿಕೇಶವ, ನರೇಶ್ ಕುಮಾರ್, ತೇಜ, ಅನಿಲ್ ಕುಮಾರ್, ವೆಂಕಟೇಶ್ ನಾಯಕ್, ವರುಣ್, ಹರೀಶ, ಪ್ರಶಾಂತ್ ,ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5