ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ ಎಸ್) ಪಕ್ಷದ ಕುಣಿಗಲ್ ತಾಲೂಕು ಘಟಕದ ವತಿಯಿಂದ ಇಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಘಟಕದ ಸಂಚಾಲಕರ ಶ್ರೀನಿವಾಸಮೂರ್ತಿ ಅವರು, ಕಳೆದ ಮೂರು ದಶಕದಲ್ಲಿ ರಾಜಕಾರಣ ಸರಿಪಡಿಸಲಾಗದ ಮಟ್ಟಕ್ಕೆ ಹಾಳಾಗಿದ್ದು, ತತ್ವ, ಸಿದ್ಧಾಂತ, ನೈತಿಕತೆ, ಸಾಮಾಜಿಕ ಕಳಕಳಿಗಳನ್ನು ಎಲ್ಲಾ ಪಕ್ಷಗಳು ಮೂಲೆಗುಂಪು ಮಾಡಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣವನ್ನು ಎಗ್ಗಿಲ್ಲದೆ ನಡೆಸುತ್ತಿದ್ದಾರೆ.
ಜನ ಸಾಮಾನ್ಯರ ಬದುಕನ್ನು ಆಯೋಮಯವನ್ನಾಗಿ ಮಾಡಿ, ಬರಿ ಹಣ ಹಾಕಿ, ಹಣ ತೆಗೆಯುವ ರಾಜಕಾರಣದಲ್ಲಿ ಮುಳುಗಿದ್ದು, ಎಲ್ಲಾ ಪಕ್ಷಗಳು ಒಂದು ರೀತಿಯ ಮೂರು ತಲೆಯ ಒಂದೇ ಹಾವು ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವಣ್ಣ ಗಾಂಧಿ ಇತ್ಯಾದಿ ಮಹಾಪುರುಷರ ಆಶಯದ ರಾಜಕಾರಣ ಮಾಡುವ ಸಲುವಾಗಿ ಕರ್ನಾಟಕ ಸಮಿತಿ ನಿರಂತರವಾಗಿ ಶ್ರಮಿಸುತ್ತಿದ್ದು, ನಮ್ಮ ತಾಲೂಕಿಗೆ ರಘು ಜಾಣಗೆರೆಯವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಪಕ್ಷವು ಘೋಷಿಸಿದೆ. ರಘು ಜಾಣಗೆರೆಯವರ ಅಧ್ಯಯನಶೀಲತೆ, ಸಾಮಾಜಿಕ ಕಳಕಳಿ ವಾಕ್ಚಾತುರ್ಯ, ಕಾನೂನಿನ ಅರಿವು , ಸಜ್ಜನ ಸಂಘ, ಇತ್ಯಾದಿಗಳಿಗೆ ಹೋಲಿಸಿದರೆ ಕರುನಾಡಿನಲ್ಲಿ ಅವರಿಗೆ ಸರಿಸಮವಾಗುವ ಯಾವೊಬ್ಬ ರಾಜಕಾರಣಿ ಇಲ್ಲ ಎಂದು ಹೇಳಿದರು.
ಶಿಕ್ಷಣ, ಆರೋಗ್ಯ, ಪರಿಸರ, ಮೂಲಭೂತ ಸೌಕರ್ಯ, ಇತ್ಯಾದಿಗಳ ಬಗ್ಗೆ ಕರ್ನಾಟಕ ರಾಜ್ಯ ಸಮಿತಿ ಪಕ್ಷ ಸ್ಪಷ್ಟ ನಿಲುವುಗಳನ್ನು ಹೊಂದಿದ್ದು ಅದರ ಅನುಷ್ಠಾನಕ್ಕಾಗಿ ಕಟ್ಟಿಬದ್ಧವಾಗಿ ದುಡಿಯುವುದರ ಜೊತೆಗೆ ಸಾರ್ವಜನಿಕ ಸೇವೆಗೆ ಬಂದವನು ಪಾರದರ್ಶಕವಾಗಿ ಸರಳವಾಗಿ ನಿಸ್ವಾರ್ಥವಾಗಿ ಬದುಕಬೇಕು ಎಂದಿರುವ ಗಾಂಧಿ ಮಾರ್ಗದಲ್ಲಿ ನಂಬಿಕೆ ಇಟ್ಟು ಹೊಸತನದ ರಾಜಕಾರಣಕ್ಕೆ ಕರುನಾಡಿನಲ್ಲಿ ಮುನ್ನುಡಿ ಬರೆಯಲಿದೆ ಎಂದು ಅವರು ಹೇಳಿದರು.
ಕಾರ್ಯದರ್ಶಿ ನಾಗರಾಜು, ಮಂಜುನಾಥ, ಹೋಬಳಿ ಮುಖಂಡರಾದ ವೆಂಕಟೇಶ್ ಹಾಗೂ ವಿಜಯಕುಮಾರ್ ಈ ವೇಳೆ ಜೊತೆಗಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA