ಗಂಟಲು ನೋವು, ಕಫದಿಂದ ಕಿರಿಕಿರಿ, ಊತಕ್ಕೆ ಹೇಳಿ ಗುಡ್ ಬೈ: ಕೇವಲ ಈ ಟಿಪ್ಸ್ ಅನುಸರಿಸಿದರೆ ಸಾಕು..!
ಗಂಟಲು ನೋವು, ಕಫದಿಂದ ಕಿರಿಕಿರಿ, ಕೆಮ್ಮಿನಿಂದಾಗಿ ನೋವು ಮತ್ತು ಊತವು ಬದಲಾಗುತ್ತಿರುವ ಋತುವಿನಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ. ಇದನ್ನು ತಪ್ಪಿಸಲು ಅರಿಶಿನ ಪುಡಿ ಬೆರೆಸಿದ ಉಗುರು ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಇದನ್ನು ಉಪ್ಪು ನೀರಿನೊಂದಿಗೂ ಸಹ ಮಾಡಬಹುದು ಹೀಗೆ ಮಾಡಿದರೆ ಗಂಟಲು ನೋವು, ಕಿರಿಕಿರಿ ಕಡಿಮೆಯಾಗುತ್ತದೆ. ಜತೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆಯನ್ನು ಸೇವಿಸುವುದರಿಂದ ಗಂಟಲಿನ ಊತವು ಕಡಿಮೆಯಾಗುತ್ತದೆ.
ಮೂಲಂಗಿ ಎಲೆಯಲ್ಲಿದೆ ಆರೋಗ್ಯ..
ಮೂಲಂಗಿಯನ್ನು ಅಡುಗೆಗೆ ಬಳಕೆ ಮಾಡುವುದು ಸಾಮಾನ್ಯ. ಆದರೆ ಮೂಲಂಗಿ ಎಲೆಯಲ್ಲಿ ಹೆಚ್ಚಿನ ಪೋಷಕಾಂಶ ಇದೆ. ಇದರ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುತ್ತದೆ. ಕರುಳಿನ ಕಾರ್ಯವನ್ನು ಸುಗಮಗೊಳಿಸುತ್ತದೆ. ಮೂಲಂಗಿ ಎಲೆಗಳನ್ನು ತಿನ್ನುವುದರಿಂದ ಮಲಬದ್ಧತೆ, ಆಮ್ಮಿಯತೆ ಮತ್ತು ಗ್ಯಾಸ್ ತಡೆಯುತ್ತದೆ. ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿ ಎಲೆಗಳನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು. ಇದು ರಕ್ತದಲ್ಲಿನ ಹಿಮೊಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ.
ಕಪ್ಪು ಬೆಳ್ಳುಳ್ಳಿಯಲ್ಲಿವೆ ಹಲವು ಆರೋಗ್ಯ ಪ್ರಯೋಜನಗಳು:
ಆಹಾರದಲ್ಲಿ ಕಪ್ಪು ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಗ್ಲಕೋಸ್ ಅನ್ನು ನಿಯಂತ್ರಿಸುತ್ತದೆ. ಮೆದುಳು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಜಾಯಿಕಾಯಿಯಿಂದ ದೇಹಕ್ಕಾಗುವ ಪ್ರಯೋಜನಗಳೇನು..? ಇಲ್ಲಿದೆ ಈ ಬಗ್ಗೆ ಇಂಟೆರೆಸ್ಟಿಂಗ್ ಮಾಹಿತಿ:
ಜಾಯಿಕಾಯಿಯಲ್ಲಿ ಫೈಬರ್, ಥಯಾಮಿನ್, ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಜಾಯಿಕಾಯಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಸೋಂಕುಗಳನ್ನು ತಡೆಯುತ್ತದೆ. ನೋವು ನಿವಾರಕದಂತೆ ಕೆಲಸ ಮಾಡುತ್ತದೆ. ನೆಮ್ಮದಿಯ ನಿದ್ರೆಯನ್ನು ನೀಡುತ್ತದೆ. ದರಲ್ಲಿನ ಮಿರಿಸ್ಟಿಸಿನ್ ಮೆದುಳಿನ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ದುರ್ಬಲ ಲೈಂಗಿಕ ಸಾಮರ್ಥ್ಯ & ಬಂಜೆತನ ಸಮಸ್ಯೆಗಳಿಂದ ಬಳಲುತ್ತಿರುವ ಪುರುಷರಿಗೆ ಜಾಯಿಕಾಯಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.