ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ವಿಶ್ವದ ಅತ್ಯಮೂಲ್ಯ ರಾಮಾಯಣ ಅಯೋಧ್ಯೆಗೆ ಆಗಮಿಸಿದೆ. ಪುಸ್ತಕ ಮಾರಾಟಗಾರ ಮನೋಜ್ ಸತಿ ಅವರು ರಾಮಾಯಣವನ್ನು ಅಯೋಧ್ಯೆಗೆ ತಂದರು. ರಾಮಾಯಣ ಪುಸ್ತಕವು 1.65 ಲಕ್ಷ ರೂ. ಬೆಲೆಯದ್ದಾಗಿದೆ.
ಪುಸ್ತಕದ ಹಲವಾರು ವೈಶಿಷ್ಟ್ಯಗಳಿಂದಾಗಿ, ಪುಸ್ತಕವು 400 ವರ್ಷಗಳವರೆಗೆ ಭದ್ರವಾಗಿರುತ್ತದೆ. ಪುಸ್ತಕವನ್ನು ಹಾನಿಯಾಗದಂತೆ ರಕ್ಷಿಸಲು ಬುಕ್ ಕೇಸ್ ಮಾಡಲಾಗಿದೆ. ಹಾಗಾಗಿ ರಾಮಾಯಣ ಸುರಕ್ಷಿತವಾಗಿದೆ. ನಾಲ್ಕು ತಲೆಮಾರುಗಳು ಈ ರಾಮಾಯಣವನ್ನು ಓದಬಹುದು ಎಂದು ಮನೋಜ್ ಹೇಳಿದ್ದಾರೆ.
ರಾಮ ಮಂದಿರದ ಮಾದರಿಯಲ್ಲಿ ನಿರ್ಮಾಣವಾಗಿರುವ ರಾಮಾಯಣ ಇದಾಗಿದೆ ಎಂದು ಮನೋಜ್ ಸತಿ ಸ್ಪಷ್ಟಪಡಿಸಿದ್ದಾರೆ. ಪುಸ್ತಕವನ್ನು ಅಮೇರಿಕನ್ ಆಕ್ರೋಡು ಮರದಿಂದ ಮಾಡಲಾಗಿದೆ. ಪುಸ್ತಕದಲ್ಲಿ ಬಳಸಲಾದ ಶಾಯಿಯನ್ನು ಜಪಾನ್ ನಿಂದ ಆಮದು ಮಾಡಿಕೊಳ್ಳಲಾಗಿದೆ.
ರಾಮಾಯಣವನ್ನು ಫ್ರಾನ್ಸ್ ನಲ್ಲಿ ಮಾಡಿದ ಕಾಗದದ ಮೇಲೆ ಬರೆಯಲಾಗಿದೆ. ಪುಸ್ತಕವನ್ನು ಮೂರು ಅಂತಸ್ತಿನ ರಚನೆಯೊಳಗೆ ಇರಿಸಲಾಗಿದೆ. ಇವು ಆಮ್ಲ-ಮುಕ್ತ ಪೇಟೆಂಟ್ ಪೇಪರ್ ಗಳಾಗಿವೆ. ಇವು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂದು ಮನೋಜ್ ಸತಿ ತಿಳಿಸಿದ್ದಾರೆ.


