ಹಣಕಾಸಿನ ವಿಚಾರದಲ್ಲಿ ಗೆಳೆಯನೇ ತನ್ನ ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆ ಯಾಕತ್ ಪುರ್ ಗ್ರಾಮದಲ್ಲಿ ನಡೆದಿದೆ.
ಶಹಾಗಂಜ್ ನಿವಾಸಿ ಮೊಹಮ್ಮದ್ ಸಿರಾಜ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ಈತ ತನ್ನ ಬಾಲ್ಯ ಸ್ನೇಹಿತ ಯಾಸಿನ್ ಎಂಬಾತನಿಗೆ 12 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ. ಯಾಸಿನ್ 11 ಲಕ್ಷ ರೂಪಾಯಿ ತೀರಿಸಿದ್ದ. ಇನ್ನು 1 ಲಕ್ಷ ರೂಪಾಯಿ ಕೊಡೋದು ಬಾಕಿ ಇತ್ತು. ಇದಕ್ಕಾಗಿ ಸಿರಾಜ್ ದಿನವೂ ಪೀಡಿಸುತ್ತಿದ್ದನಂತೆ. ಬೇಗ ಹಣ ಕೊಡುವಂತೆ ದಿನವೂ ಒತ್ತಡ ಹೇರುತ್ತಿದ್ದನಂತೆ. ಇದರಿಂದ ಆಕ್ರೋಶಗೊಂಡಿದ್ದ ಯಾಸಿನ್, ಹಣ ನೀಡುತ್ತೇನೆ ಬಾ ಎಂದು ಮೊಹಮ್ಮದ್ ಸಿರಾಜ್ ನನ್ನು ಕರೆಸಿಕೊಂಡಿದ್ದಾನೆ.
ಹಣ ಕೊಡುತ್ತಾನೆ ಎಂದು ನಂಬಿಕೊಂಡು ಬಂದ ಸಿರಾಜ್ ಗೆ ಮೊದಲು ಯಾಸಿನ್ ಸುತ್ತಿಗೆಯಿಂದ ತಲೆಗೆ ಬಲವಾದ ಪೆಟ್ಟು ನೀಡಿದ್ದಾನೆ. ನಂತರ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA