nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ

    June 17, 2026

    ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ

    June 17, 2026

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026
    Facebook Twitter Instagram
    ಟ್ರೆಂಡಿಂಗ್
    • ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ
    • ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ
    • ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
    • ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ
    • ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು
    • ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ
    • ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗದಂತೆ ಕ್ರಮ: ಸಚಿವ ಈಶ್ವರ ಖಂಡ್ರೆ
    • ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈ ದಿನದ ಕಥೆಯ ಶೀರ್ಷಿಕೆ: ರಾಜನ ಪರೀಕ್ಷೆ
    Uncategorized August 18, 2024

    ಈ ದಿನದ ಕಥೆಯ ಶೀರ್ಷಿಕೆ: ರಾಜನ ಪರೀಕ್ಷೆ

    By adminAugust 18, 2024No Comments3 Mins Read
    venu gopal

    Provided by
    Provided by

    ಒಮ್ಮೆ ಸತ್ಯಪುರ ರಾಜ್ಯಕ್ಕೆ ಸೇರಿದ ಸಿರಿವನ ಎಂಬ ಅರಣ್ಯದಲ್ಲಿ ಪ್ರಖ್ಯಾತ ಗುರು ಪ್ರಭುಶಿಖಿರ ಎಂಬುವರ ಗುರುಕುಲದಲ್ಲಿ ಸರ್ವವಿದ್ಯಾ ಪರಂಗತರಾಗಿದ್ದ ಜ್ಞಾನದೇವ, ಸತ್ಯದೇವ ಮತ್ತು ಅಮರದೇವಗಳೆಂಬ ಮೂವರು ಪಂಡಿತರು ರಾಜ ವೀರಬಲ್ಲಾಳನ ಆಸ್ಥಾನಕ್ಕೆ ಬಂದರು.

    ಅವರ ಮುಖದ ವರ್ಚಸ್ಸನ್ನು ನೋಡಿ ಎದ್ದು ನಿಂತು ಗೌರವಿಸಿ ನಂತರ ರಾಜ ಪಂಡಿತರುಗಳೇ ನನ್ನಿಂದ ನಿಮಗೆ ಏನಾಗಬೇಕು ಎಂದಾಗ ಮೂವರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡ ನಂತರ ಅಮರದೇವನು ರಾಜರೇ ನಮಗೆ ನಿಮ್ಮ ಆಸ್ಥಾನದಲ್ಲಿ ನಮಗೆ ರಾಜಗುರು ಸ್ಥಾನಬೇಕು ನೀಡುವಿರಾ ಎಂದಾಗ ಹರ್ಷಿತನಾದ ರಾಜನು ಆಗಬಹುದು, ಆದರೆ ರಾಜಗುರು ಸ್ಥಾನ ಕೇವಲ ಒಬ್ಬರಿಗೆ ಮಾತ್ರ ದೊರಕುವುದು ಎಂದಾಗ ಸತ್ಯದೇವನು ಮುಂದೆ ಬಂದು ಇವರಿಬ್ಬರಿಗಿಂತ ನನಗೆ ಹೆಚ್ಚು ಜ್ಞಾನ ನನಗೆ ನೀಡಬೇಕು ಎಂದಾಗ ಅವರಿಬ್ಬರಲ್ಲಿ ಮಾತಿನ ವೈಮನಸ್ಯ ಉಂಟಾಯಿತು.

    ನಂತರ ಸುಮ್ಮನೆ ನಿಂತಿದ್ದ ಜ್ಞಾನದೇವನನ್ನು ಕುರಿತು ರಾಜ ನೀವು ಏನು ಹೇಳುವಿರಿ ಎಂದಾಗ ಜ್ಞಾನದೇವನು ಮಹಾರಾಜರೇ ತಮ್ಮ ತೀರ್ಮಾನವೇ ಅಂತಿಮ ನಾನು ಹೇಳುವುದು ಏನೂ ಇಲ್ಲ ಎಂದಾಗ ರಾಜನು ಯೋಚಿಸಿ ಆಯಿತು. ಈಗ ನಿಮ್ಮ ಮೂವರಿಗೂ ಒಂದು ಪರೀಕ್ಷೆ ನೀಡುವೆ ಅದರಲ್ಲಿ ವಿಜಯಿಶಾಲಿಯಾದ ಒಬ್ಬರಿಗೆ ರಾಜಗುರು ಪದವಿ ನೀಡುವೆ ಒಪ್ಪಿಗೆಯೇ ಎಂದಾಗ ಪಂಡಿತರುಗಳು ಒಪ್ಪಿದರು.

    ನಂತರ ರಾಜ ಮೂವರಿಗೂ ಒಂದೊಂದು ಅತ್ಯಂತ ಬೆಲೆಬಾಳುವ ವಜ್ರಗಳನ್ನು ನೀಡಿ ನಂತರ ಮೂವರನ್ನು ಕುರಿತು ನೋಡಿ ಇನ್ನು ಒಂದು ವರುಷದ ಅವಧಿಯಲ್ಲಿ ಈ ವಜ್ರವನ್ನು ಹೇಗೆ ಬಳಸುತ್ತೀರೊ ಗೊತ್ತಿಲ್ಲ ಆದರೆ ಈ ಒಂದು ವಜ್ರದಿಂದ ಅತಿಹೆಚ್ಚು ಸಂಪಾದನೆ ಮಾಡಿ ತೋರಿಸಿಸುತ್ತಾರೋ ಅವರಿಗೆ ರಾಜಗುರು ಪದವಿ ನೀಡಲಾಗುವುದು ಎಂದಾಗ ಸರಿ ಎಂದು ಹೇಳಿ ಮೂವರೂ ಮೂರುದಿಕ್ಕುಗಳನ್ನು ಹಿಡಿದು ಹೊರಟುಹೋದರು.

    ಒಂದು ವರುಷವಾಯಿತು ನಂತರ ಮೂವರೂ ಸತ್ಯಪುರ ರಾಜ ಮಹಲಿಗೆ ಬಂದರು ರಾಜನು ಅವರಿಗೆ ಸ್ವಾಗತಕೋರಿ ಈಗ ಹೇಳಿ ಯಾರು ಏನೇನು ಮಾಡಿ ಸಂಪಾದಿಸಿದಿರಿ ಎಂದಾಗ ಮೊದಲು ಅಮರದೇವನು ಮುಂದೆ ಬಂದು ರಾಜರೇ ನಾನು ಪಕ್ಕದ ರಾಜ್ಯದ ನಗರವೊಂದಕ್ಕೆ ಹೋಗಿ ತಾವು ನೀಡಿದ ವಜ್ರವನ್ನು ಅಧಿಕ ಬೆಲೆಗೆ ಮಾರಿ ಬಂದ ಹಣದಿಂದ ಲೇವಾದೇವಿ ವ್ಯವಹಾರ ಮಾಡಲು ಶುರು ಮಾಡಿದೆ. ಅದು ದಿನದಿಂದ ದಿನಕ್ಕೆ ಅತ್ಯಧಿಕ ಲಾಭ ತಂದು ಕೊಟ್ಟಿತು. ಆದ್ದರಿಂದ ಇಂದು ನನ್ನಬಳಿ ಒಂದು ಸಾವಿರಕ್ಕೂ ಅಧಿಕ ಅಂತಹ ವಜ್ರಗಳಿವೆ ಎಂದಾಗ ರಾಜನಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿ ಶಹಬಾಷ್ ಎಂದರು.
    ನಂತರ ಸತ್ಯದೇವನು ಮುಂದೆ ಬಂದು ರಾಜರೇ ನಾನು ತಾವು ನೀಡದ ವಜ್ರವನ್ನು ಒಬ್ಬ ಜಮೀನು ದಾರನಿಗೆ ಕೊಟ್ಟು ಒಂದಿಷ್ಟು ಭೂಮಿಕೊಂಡು ಕೊಂಡೆ, ನಂತರ ಅದೇ ಭೂಮಿಯನ್ನು ಅಧಿಕ ಬಲೆಗೆ ಬೇರೆಯವರಿಗೆ ಮಾರಿದೆ, ಬಂದ ಅಧಿಕಹಣದಿಂದ ಬೇರೆಡೆ ಮತ್ತಷ್ಟು ಭೂಮಿ ಕೊಂಡುಕೊಂಡೆ, ಮತ್ತೆ ಅಧಿಕ ಬಲೆಗೆ ಮಾರಿದೆ ಹೀಗೆಯೇ ಮಾಡುತ್ತಾ ಮಾಡುತ್ತಾ ಇಂದು ನನ್ನ ಬಳಿ ಎರಡು ಸಾವಿರಕ್ಕೂ ಅಧಿಕ ಮಂಡಲ ಭೂಮಿ ಇದೆ ಎಂದಾಗ ಮತ್ತೆ ರಾಜನಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿದರು.

    ನಂತರ ರಾಜನು ಜ್ಞಾನದೇವರೇ ತಾವು ಏನು ಮಾಡಿದಿರಿ ಎಂದಾಗ ಜ್ಞಾನದೇವನು ಕೈ ಮುಗಿದು ಮುಂದೆ ಬಂದು ವಿನಯದಿಂದ ಮಹಾರಾಜರೇ ನೀವು ಕೊಟ್ಟ ವಜ್ರವು ನನಗೆ ತಮ್ಮಿಂದ ದಾನಸ್ವರೂಪವಾಗಿ ಬಂದಿದ್ದರಿಂದ ಅದನ್ನು ನಾನು ಬಳಸಲು ಮನಸ್ಸು ಬಾರದೆ ಅದನ್ನು ಅರಮನೆಯ ಹೊರಗೆ ನಿಂತಿದ್ದ ಒಬ್ಬ ನಿರ್ಗತಿಕನಿಗೆ ಅಂದೇ ದಾನ ನೀಡಿದೆ ಎಂದಾಗ ಅಲ್ಲಿದ್ದ ಎಲ್ಲರೂ ಇನ್ನು ಇವರಿಗೆ ರಾಜಗುರು ಸ್ಥಾನ ಸಿಕ್ಕಂತೆ ಎಂದುಕೊಳ್ಳುವಾಗು ರಾಜನು ಹಾಗಾದರೆ ತಾವು ಏನು ಸಂಪಾದಿಸಿದಿರಿ ಎಂದು ಕೇಳಿದಾಗ ಜ್ಞಾನದೇವನು ನಾನು ಸೀದಾ ಅರಣ್ಯಕ್ಕೆ ಹೋಗಿ ಅಲ್ಲಿ ನನ್ನ ಸ್ವಪ್ರಯತ್ನದಿಂದ ಒಂದು ಸಣ್ಣ ಕುಟೀರ ಕಟ್ಟಿದೆ, ನಂತರ ಅಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾ ದಾನ ನೀಡುತ್ತಿರುವೆನು, ಇದರಿಂದ ಇಂದು ನೂರಾರು ಬಡವರು, ನಿರ್ಗತಿಕರು ವಿದ್ಯೆಕಲಿಯುತ್ತಿದ್ದಾರೆ. ಇದರಿಂದ ಮುಂದೊಂದು ದಿನ ತಮ್ಮ ರಾಜ್ಯ ಅಧಿಕ ವಿದ್ಯಾವಂತರಿಂದ ಕೂಡುವುದು ಮತ್ತು ಅವರೆಲ್ಲಾ ಸ್ವಾವಲಂಬಿಗಳಾಗಿ ಬದುಕುವರು ರಾಜರೇ ಇದೇ ನಾನು ಸಂಪಾದಿಸಿದ್ದು ಎಂದಾಗ ರಾಜನಾದಿಯಾಗಿ ಕುಳಿತಿದ್ದ ಎಲ್ಲರೂ ಎಂದು ನಿಂತು ಜೋರಾದ ಚಪ್ಪಾಳೆಯೊಂದಿಗೆ ಜೈಕಾರ ಹಾಕಿದರು.
    ನಂತರ ರಾಜನು ಅಮರದೇವ ಮತ್ತು ಸತ್ಯದೇವರನ್ನು ಕುರಿತು ನೋಡಿ ನಾನು ವಜ್ರ ನೀಡಿದ್ದು ನೀವು ಅದನ್ನು ಹೇಗೆ ಸದ್ಬಳಕೆ ಮಾಡುತ್ತೀರಿ ಎಂದು ಪರೀಕ್ಷಿಸಲು ಆದರೆ ನೀವು ನಿಮ್ಮ ಸ್ವಾರ್ಥಕ್ಕಾಗಿ ಸಂಪಾದಿಸಿದಿರಿ ಅದರಿಂದ ನೀವು ಸಿರಿವಂತರಾದಿರಿ, ಆದರೆ ಜ್ಞಾನದೇವರನು ಸಮಾಜಕ್ಕಾಗಿ, ದೇಶದ ಹಿತಕ್ಕಾಗಿ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಅವರಿಗೇ ರಾಜಗುರು ಸ್ಥಾನ ಸಲ್ಲುವುದು ಎಂದಾಗ ರಾಜನಿಗೆ ಜೈಕಾರ ಹಾಕಿದರು.

    ನೀತಿ: ಸಾಂದರ್ಭಿಕ ಪರೀಕ್ಷೆಗಳ ಮೂಲ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಹು ಮುಖ್ಯ.

    ವಿಶೇಷ ಲೇಖನ
    ಉದಯೋನ್ಮುಖ ಬರಹಗಾರರು
    ರಚನೆ : ಶ್ರೀ ವೇಣುಗೋಪಾಲ್ ತುಮಕೂರು
    ಅನಿಸಿಕೆ ಅಭಿಪ್ರಾಯ ತಿಳಿಸಲು ದೂರವಾಣಿ ಸಂಖ್ಯೆ: 9449138522

    admin
    • Website

    Related Posts

    ಬೆಂಗಳೂರು: ವಿಐಪಿ ಸಂಚಾರಕ್ಕೆ ಗರ್ಭಿಣಿ ಇದ್ದ ಕಾರು ತಡೆದಿದ್ದಕ್ಕೆ ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ!

    June 2, 2026

    ಬೆಂಗಳೂರು: ಆರ್ಟ್ ಆಫ್ ಲಿವಿಂಗ್‌ನಲ್ಲಿ ನೂತನ ‘ಧ್ಯಾನ ಮಂದಿರ’ ಉದ್ಘಾಟಿಸಿದ ಪ್ರಧಾನಿ ಮೋದಿ

    May 10, 2026

    ರಸ್ತೆ, ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ನಿರ್ಮಿಸಿ: ಶಾಸಕ ಕೆ.ಎನ್.ರಾಜಣ್ಣ ಸೂಚನೆ

    May 7, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ

    June 17, 2026

    ತುಮಕೂರು: ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹಿಸಿ, ಗ್ರಾಮಸ್ಥರು ಹಾಗೂ ಪೋಷಕರು AIDSO ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ…

    ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ

    June 17, 2026

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.