ಸರಗೂರು: ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ನಡೆದ ಪ್ರತಿಭಟನೆಯು ಬಹಳ ಯಶಸ್ವಿಯಾಗಿದ್ದು, ಸರಗೂರು ತಾಲೂಕಿನಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ಇದುವರೆಗೂ ಸರಗೂರಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ನಡೆದ ಉದಾಹರಣೆ ಇಲ್ಲ. ಈ ಪ್ರತಿಭಟನೆಗೆ ಆರು ಸಾವಿರಕ್ಕೂ ಹೆಚ್ಚಿನ ಜನ ಭಾಗಿಯಾಗಿದ್ದರು ಎಂದು ಗ್ರಾಮೀಣ ಮಹೇಶ್ ಹೇಳಿದರು.
ಸರಗೂರಿನಲ್ಲಿ ಇರುವ ಅತಿಥಿಗೃಹದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ, ಸರಗೂರು ಘಟಕ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಮಾಜಿ ಪ.ಪಂ.ಅಧ್ಯಕ್ಷ ಶಿವಣ್ಣ ಸರಗೂರು ಮಾತನಾಡಿ, ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದರೆ ಮಾತ್ರ ನಾನು ಬರುತ್ತಿನಿ ಎಂದಿದಕ್ಕೆ ಅವನ ವಿರುದ್ಧ ಸರಗೂರು ನಲ್ಲಿ ಪ್ರತಿಭಟನೆ ಮಾಡಿದ್ದೇವೆ. ಮಲ್ಲಿಕಾರ್ಜುನ ಗೌಡನನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಗ್ರಾ.ಪಂ. ಸದಸ್ಯ ಬೆಟ್ಟಸ್ವಾಮಿ ಮಾತನಾಡಿ, ಸಂವಿಧಾನ ಸಂರಕ್ಷಣಾ ಸಮಿತಿಯ ಎಲ್ಲಾ ಸದಸ್ಯರು ಗ್ರಾಮಗಳಿಗೆ ಭೇಟಿಕೊಟ್ಟಾಗ ಜನರು ಬೆಂಬಲಿಸಿ ಸಹಕಾರ ನೀಡಿದರು. ಪರಿಣಾಮವಾಗಿ ಬೃಹತ್ ಪ್ರತಿಭಟನೆ ಯಶಸ್ಸಿ ನಡೆದಿದೆ. ಇದೆ ಸಂದರ್ಭದಲ್ಲಿ ಪೋಲಿಸ್ ಇಲಾಖೆಯವರು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಿದ್ದು, ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಪ್ರತಿಭಟನೆಗೆ ಪ್ರತಿ ಹಳ್ಳಿಗಳಿಂದ ಬಂದಂತಹ ಎಲ್ಲಾ ಭೀಮ ಅನುಯಾಯಿಗಳಿಗೆ ತುಂಬುಹೃದಯದ ಧನ್ಯವಾದಗಳನ್ನು ಸಂವಿಧಾನ ಸಂರಕ್ಷಣಾ ಸಮಿತಿ, ಸರಗೂರು ಘಟಕ ತಿಳಿಸುತ್ತದೆ. ಮುಖ್ಯವಾಗಿ ಸರಗೂರು ಪಟ್ಟಣದ ಯಜಮಾನರು ಪ್ರತಿಭಟನೆಗೆ ಬಂದಂತಹ ಆರು ಸಾವಿರ ಜನರಿಗೆ ಅನ್ನ ನೀಡಿ ಸತ್ಕರಿಸಿದ್ದಾರೆ. ಅವರಿಗೂ ವಿಶೇಷವಾಗಿ ಸಂವಿಧಾನ ಸಂರಕ್ಷಣಾ ಸಮಿತಿಯ ವತಿಯಿಂದ ಧನ್ಯವಾದಗಳನ್ನು ತಿಳಿಸಿದ ಅವರು, ಪ್ರತಿಭಟನೆಗೆ ಸಹಕರಿಸಿದವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಸರಗೂರು ಘಟಕದ ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷರಾದ ಶಿವಣ್ಣ, ಡಿಎಸ್ಎಸ್ ಸಂಚಾಲಕರಾದ ಇಟ್ನ ರಾಜಣ್ಣ, ಬಿಡುಗಲು ಶಿವಣ್ಣ, ಹೊಸಬೀರ್ವಾಳು ಗ್ರಾಮೀಣ ಮಹೇಶ್,ಸರಗೂರು ಕೃಷ್ಣ .ಕುರ್ಣೇಗಾಲ ಬೆಟ್ಟಸ್ವಾಮಿ ಗ್ರಾಪಂ ಸದಸ್ಯ.
ಸರಗೂರು ಭೀಮಯ್ಯ, ಇದಿಯಪ್ಪ, ದೇವಲಾಪುರ ಸಿದ್ದರಾಜು, ಲಂಕೆ ಶ್ರೀನಿವಾಸ್, ಚೆನ್ನಿಪುರ ಮಲ್ಲೇಶ್, ಸಾಗರೆ ಶಂಕರ್, ಮುಳ್ಳೂರು ನಿಂಗರಾಜು.ಬಾಸ್ಕರ್ ನಂಜಿಪುರ. ಮತ್ತು ಮಹೇಶ್, ಸರಗೂರು ಕೃಷ್ಣ ಕಲ್ಲಂಬಾಳು ನಾಗಣ್ಣ, ಕೊರ್ಣೇಗಾಲ ಬೆಟ್ಟಸ್ವಾಮಿ, ಅಂಚಿಪುರ ನಾಗರಾಜ್, ಹಳೆ ಹೆಗ್ಗುಡಿಲು ಸೋಮಣ್ಣ, ಶಂಕರ್ ಯಾಜಮಾರುಸರಗೂರು. ಕಂದೇಗಾಲ ಶಿವರಾಜು, ವೆಂಕಟಪ್ಪ. ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB