ಪಾವಗಡ: ಸಿ.ಕೆ.ಪುರ ಗ್ರಾಮದಲ್ಲಿ ಶ್ರೀ ಚನ್ನಕೇಶವ ಕ್ರಿಕೆಟರ್ಸ್ ವತಿಯಿಂದ ಏರ್ಪಡಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಹಾಗೂ ಸಮಾಜಸೇವಕರಾದ ನೆರಳು ಕುಂಟೆ ನಾಗೇಂದ್ರಪ್ಪ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸಾಯಿಸುಮನ ಹನುಮಂತರಾಯಪ್ಪ ಅವರು ಮಾತನಾಡಿದರು ಹಾಗೂ ಶ್ರೀಸಾಯಿ ಲಾ ಛೇಂಬರ್ಸ್ ವತಿಯಿಂದ ಟ್ರೋಫಿಗಳನ್ನು ಹಾಗೂ ಕ್ರೀಡಾಪಟುಗಳಿಗೆ ಮೆಡಲ್ ಗಳನ್ನು ವಿತರಿಸಿದರು.
ಟೂರ್ನಿಯ ಅಧ್ಯಕ್ಷತೆಯನ್ನು ಅಜಯ್ ನಾಗೇಶ್ ರಾವ್ ಅವರು ವಹಿಸಿಕೊಂಡಿದ್ದರು. ಬಿಂದುಮಾಧವ ರಾವ್ ಅವರು ಕ್ರೀಡಾಪಟುಗಳಿಗೆ ಕ್ರೀಡಾಸ್ಫೂರ್ತಿಯ ಕುರಿತು ತಿಳಿಸಿದರು. ಟೂರ್ನಿಯ ಅತಿಥಿಗಳಾಗಿ ಸಿ.ಕೆ.ಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಮ್ಮ ಈರಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಮತಾ ನಾಗರಾಜ್ ಕೊತ್ತೂರು ನಾಗೇಂದ್ರಕುಮಾರ್, ಪಾಳೆಗಾರ ಲೋಕೇಶ್, ದೇವಲಕೆರೆ ಅಜಯ್ ಉಪಸ್ಥಿತರಿದ್ದರು.
ವರದಿ: ನಂದೀಶ್, ಕೊತ್ತೂರು ನಿಡಗಲ್ ಹೋಬಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB