ಪಾವಗಡ: ಮಹಿಳಾ ದಿನಾಚರಣೆಯು ಸಮಾಜದಲ್ಲಿ ಆಗುವ ಮತ್ತು ಆಗಿರುವ ಬದಲಾವಣೆಯ ಸಂಕೇತವಾಗಿದೆ ಎಂದು ಹೆಲ್ಪ್ ಸೊಸೈಟಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂದ್ಯಾ ಮಾನಂ ಶಶಿಕಿರಣ್ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರನ್ನು ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಮಾತನಾಡಿದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರ ಧರ್ಮಪತ್ನಿ ಸಂದ್ಯಾ ಮಾನಂ ಶಿಶಿಕಿರಣ್, ಮಹಿಳೆ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ತನ್ನ ಕೌಟುಂಬಿಕ ಹೊಣೆಯನ್ನು ನಿಭಾಯಿಸಲೇ ಬೇಕಾಗುತ್ತದೆ. ಈಗಿನ ಕಾಲದಲ್ಲಿ ಪುರುಷರ ಎಲ್ಲಾ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ವನ್ನು ಮಹಿಳೆ ಪಡೆದಿದ್ದಾಳೆ ಆದರೆ ಅದರಿಂದ ಜವಾಬ್ದಾರಿಗಳು ಹೆಚ್ಚು, ಹೊಣೆಗಾರಿಕೆಯು ಹೆಚ್ಚು ಎಂದು ಬನ್ನಿಸಿದರು.
ಈ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕಿಯರಾದ ಆರೋಗ್ಯ ಇಲಾಖೆಯ ನಿವೃತ್ತ ಅರೋಗ್ಯ ಸಹಾಯಕಿ ಯಶೋದಮ್ಮ,ಸಮಾಜ ಸೇವಕಿ ಹಾಗೂ ವಾಲ್ಮೀಕಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಅಂಬಿಕಾ ರಮೇಶ್, ತಹಸೀಲ್ದಾರ್ ಕಚೇರಿಯ ಸರ್ವೇಯರ್ ನರಸಮ್ಮ, ಬ್ಯಾಡನೂರು ಅಂಗನವಾಡಿ ಶಿಕ್ಷಕಿ ಭವಾನಿ , ಹೆಸರಾಂತ ಹೆರಿಗೆ ತಾಯಿ ಎಂದು ಖ್ಯಾತರಾದ ಬ್ಯಾಡನೂರು ಮಲ್ಲೇಶಕ್ಕ ಹಾಗೂ ಪುರಸಭೆ ಇಲಾಖೆ ಮಹಿಳಾ ಪೌರಾಕಾರ್ಮಿಕೆ ನಾಗಲಕ್ಷ್ಮಮ್ಮರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ವೆಂಕಟೇಶ್ ನಾಯ್ಡು, ಶ್ರೀಕಾಂತ್, ಸಾಯಿ, ನಂದೀಶ್ ನಾಯ್ಕ್, ಸಂಜೀವ, ಗೌತಮ್, ಮಂಜುನಾಥ್, ಮೋಹನ್ ಹಾಗೂ ಹೆಲ್ಪ್ ಸೊಸೈಟಿ ಮಹಿಳಾ ಪದಾಧಿಕಾರಿ ಹರಿತ ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB