ತುರುವೇಕೆರೆ: ತುಮಕೂರು ಜಿಲ್ಲೆಯಲ್ಲಿಯೇ ಇತಿಹಾಸದಲ್ಲಿ ಪ್ರಥಮ ಬಾರಿಗೆ ತುಮಕೂರು ಜಿಲ್ಲಾಡಳಿತ ವತಿಯಿಂದ ದಸರಾ ಉತ್ಸವವನ್ನು ಹಮ್ಮಿಕೊಂಡಿದ್ದು, ತುರುವೇಕೆರೆ ತಾಲೂಕಿನ ಸಮಸ್ತ ನಾಗರಿಕ ಬಂಧುಗಳು ತಮ್ಮ ಕುಟುಂಬ ಸಮೇತವಾಗಿ ತುಮಕೂರು ದಸಾರ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿ ದಸರಾ ಉತ್ಸವವನ್ನು ಕಣ್ತುಂಬಿಕೊಳ್ಳಬೇಕೆಂದು ತುರುವೇಕೆರೆ ತಾಲೂಕು ದಂಡಾಧಿಕಾರಿ ಕುಂ.ಇ. ಅಹಮದ್ ವಿಶೇಷವಾಗಿ ಮನವಿ ಮಾಡಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಕ್ಟೋಬರ್ 3ರಿಂದ ಅ. 12 ರವರೆಗೆ ಅದ್ದೂರಿ ದಸರಾವೂ ಪ್ರಾರಂಭವಾಗಿದ್ದು, ಈ ಹಿಂದೆ ನಾವೆಲ್ಲರೂ ದಸರಾದ ವೀಕ್ಷಣೆಗೆ ದೂರದ ಮೈಸೂರು, ಮಡಿಕೇರಿ, ಹಾಗೂ ಮುಂತಾದ ಜಿಲ್ಲೆಗಳಿಗೆ ತೆರಳಿ ದಸರಾ ಸಂಭ್ರಮವನ್ನು ವೀಕ್ಷಿಸಬೇಕಿತ್ತು, ಆದರೆ ಇದೀಗ ಸರ್ಕಾರವು ಮತ್ತು ತುಮಕೂರು ಜಿಲ್ಲಾಡಳಿತ ನಮ್ಮ ಜಿಲ್ಲೆಯ ಜನತೆಗೆ ದಸರಾ ಸಂಭ್ರಮ ವೀಕ್ಷಿಸಲು ನಮ್ಮ ಜಿಲ್ಲೆಯಲ್ಲಿಯೇ ಆಯೋಜಿಸಿರುವ ಹಿನ್ನೆಲೆ ಬಹಳ ವಿಶೇಷವಾದ ಕಾರ್ಯಕ್ರಮಗಳು ಜರುಗಲಿವೆ. ವಿಶೇಷವಾಗಿ ಅಕ್ಟೋಬರ್ 11ರಂದು ಶುಕ್ರವಾರ ಕ್ರೀಡಾ ದಸರಾ ಉತ್ಸವ. ಆಹಾರಮೇಳ. ವಿಜ್ಞಾನ ಮೇಳ. ನಾಡ ಕುಸ್ತಿ, ಸೇರಿದಂತೆ ಎಚ್.ಎ.ಎಲ್, ವತಿಯಿಂದ ಹೆಲಿಕ್ಯಾಪ್ಟರ್ ಏರ್ ಶೋ, ಇಸ್ರೋ ಕಾರ್ ಶೋ, ವಿವಿಧ ಇಲಾಖೆಗಳ ವತಿಯಿಂದ ವೈಜ್ಞಾನಿಕ ವಸ್ತು ಪ್ರದರ್ಶನಗಳನ್ನು, ಸುಮಧುರ ಸಂಗೀತ ಕಾರ್ಯಕ್ರಮಗಳ ಜೊತೆಗೆ ಲೇಸರ್ ಶೋ ಕಾರ್ಯಕ್ರಮಗಳು ನಡೆಯಲಿವೆ ಕಾರ್ಯಕ್ರಮದಲ್ಲಿ ಸಚಿವರುಗಳು, ಜನಪ್ರತಿನಿಧಿಗಳು, ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ಮತ್ತು ಗುರುಕಿರಣ್ ತಂಡದವರಿಂದ ಸಂಗೀತ ಕಾರ್ಯಕ್ರಮ ಚಲನಚಿತ್ರ ನಟರಾದ ಡಾ. ಶಿವರಾಜ್ ಕುಮಾರ್ ಅವರು ಭಾಗವಹಿಸಲಿದ್ದಾರೆ.
ಬಹು ಮುಖ್ಯವಾಗಿ ಅಕ್ಟೋಬರ್ 12ರ ವಿಜಯದಶಮಿಯಂದು ಧಾರ್ಮಿಕ ಪೂಜೆ ಆಚರಣೆ, ಜೊತೆ ಕವಿಗೋಷ್ಠಿಗಳು, ಪ್ರಸಿದ್ಧ ಗಾಯಕ ವಿಜಯಪ್ರಕಾಶ್ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ, ಸಾಂಸ್ಕೃತಿಕ ದಸರಾ ಶೋ ಮತ್ತು ರಾತ್ರಿ ಹಸಿರು ಸಿಡಿಮದ್ದು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ, ಇಂತಹ ಕಾರ್ಯಕ್ರಮಗಳಲ್ಲಿ ನಮ್ಮ ತಾಲೂಕಿನ ಸರ್ವರು ಸಹಾ ಪಾಲ್ಗೊಂಡು ದಸರಾ ಕಣ್ತುಂಬಿಕೊಂಡು ದಸರಾ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದಸರಾ ಉತ್ಸವದ ಕರಪತ್ರ, ಬ್ಯಾನರ್ ಬಿಡುಗಡೆ, ತಾಲೂಕಿನ ಸಂಘ ಸಂಸ್ಥೆಯ ಮುಖಂಡರುಗಳಿಗೆ ವಿತರಣೆ ಮಾಡುವ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶ್ರೀನಾಥ್ ಬಾಬು ಮತ್ತು ಮುಂತಾದವರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು, ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296