ಕೊರಟಗೆರೆ: ಅದೊಂದು ಆಕಸ್ಮಿಕ ಸಾವು ಅಂತ ಎಲ್ರು ಅಂದುಕೊಂಡಿದ್ರು… ಆದ್ರೆ ಪೊಲೀಸರ ತನಿಖೆಯಲ್ಲಿ ಅಣ್ಣ- ತಂಗಿಯ ಅಸಲಿ ಕಳ್ಳಾಟ ಬಯಲಾಗಿದೆ… ಅಷ್ಟಕ್ಕೂ ಆ ಸ್ಟೋರಿ ನೋಡಿದ್ರೆ ಛೇ ಇವರೆಂತಾ ಅಣ್ಣ ತಂಗಿ ಅಂತ ಬಾಯಿಗೆ ಬಂದಾಗೆ ನೀವು ಕೂಡಾ ಬೈತಿರಾ…ಅದರ ಡಿಟೈಲ್ಸ್ ಸ್ಟೋರಿ ಇಲ್ಲಿದೆ.
ಅವತ್ತು ಜನವರಿ 30 ಬೆಳ್ಳಂಬೆಳಗ್ಗೆ ಕಲ್ಪತರು ನಾಡು ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ನಿವಾಸಿ 43 ವರ್ಷದ ಸುಮಿತ್ರಮ್ಮ ಸಾವನ್ನಪ್ಪಿದ್ರು… ಏರಿಯಾ ಜನರೆಲ್ಲಾ ಸಾವಿತ್ರಮ್ಮ ಮನೆಯಲ್ಲಿದ್ದ ಸಂಪ್ ಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಅಂದು ಕೊಂಡಿದ್ರು… ಈ ಸಂಬಂಧ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು… ಸುಮಿತ್ರಮ್ಮನ ತಿಥಿ ಕಾರ್ಯವು ಸಹ ಮುಗಿದು ಹೋಗಿತ್ತು.. ಆದರೆ ದಿನ ಕಳೆದಂತೆ ಸುಮಿತ್ರಮ್ಮನ ಸಾವಿನ ಬಗ್ಗೆ ಪೊಲೀಸರಿಗೆ ಅನುಮಾನ ಬರೋಕೆ ಶುರುವಾಗಿತ್ತು.. ಅನುಮಾನದ ಬೆನ್ನತ್ತಿದ ಪೊಲೀಸರಿಗೆ ಸಾವಿತ್ರಮ್ಮ ನದು ಆಕಸ್ಮಿಕ ಸಾವಲ್ಲ ಕೊಲೆ ಅನ್ನೋದು ತನಿಖೆ ವೇಳೆ ಕನ್ಪಮ್ ಆಗಿತ್ತು.. ಅಣ್ಣ ತಂಗಿಯಂತಿದ್ದ ಇಬ್ಬರನ್ನ ಠಾಣೆಗೆ ಕರೆತಂದು ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ ಸಾವಿತ್ರಮ್ಮನದು ಕೊಲೆ ಅನ್ನೋ ಅಸಲಿ ಸತ್ಯ ಹೊರಬಿದ್ದಿದೆ..
ಇನ್ನು ಹೀಗೆ ಈ ಪೋಟೋದಲ್ಲಿ ಕಾಣ್ತಿರುವ ಇವ್ಳ ಹೆಸ್ರು ಶೈಲಜಾ.. ಇವ್ನ ಹೆಸ್ರು ಪುನೀತ್… ಇವರಿಬ್ಬರು ಬೇರ್ಯಾರು ಅಲ್ಲ ಕೊಲೆಯಾದ ಸುಮಿತ್ರಮ್ಮನ ಸ್ವತಃ ಅಕ್ಕನ ಮಗ… ಅಂದ್ರೆ ಶೈಲಜಾ ಹಾಗೂ ಪುನೀತ್ ಅಣ್ಣ ತಂಗಿಯ ಹಾಗೇ … ಹೊರಜಗತ್ತಿಗೆ ಇವರಿಬ್ಬರೂ ಇದಿದ್ದು ಅಣ್ಣ- ತಂಗಿಯ ಹಾಗೇ ಆದ್ರೆ ಇವರು ಮನೆಯಲ್ಲಿ ಮಾಡ್ತಿದಿದ್ದೆ ಬೇರೆ… ತಂಗಿಯ ಜೊತೆ ಅಣ್ಣ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ.. ಈ ವಿಷಯ ಸುಮಿತ್ರಮ್ಮ ಹಾಗೂ ಸುಮಿತ್ರಮ್ಮನ ಅಕ್ಕನಿಗೂ ಗೊತ್ತಿತ್ತು… ಈ ವಿಚಾರ ತಿಳಿತಿದ್ದಂತೆ ಇಬ್ಬರಿಗೂ ಬುದ್ದಿ ಮಾತು ಹೇಳಿ ಕಾಲ್ ಮಾಡದಂತೆ ಎಚ್ಚರಿಕೆ ಕೊಟ್ಟಿದ್ರು…ಆದ್ರೆ ಸ್ವಲ್ಪ ದಿನ ನಮ್ಮ ನಡುವೆ ಏನು ಇಲ್ಲಾ ಅಂತ ನಾಟಕವಾಡಿದ್ದ ಇವರಿಬ್ಬರೂ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿ ಬರ್ತಿದ್ದ ಸುಮಿತ್ರಮ್ಮನ ಕೊಲೆಗೆ ಸ್ಕೇಚ್ ಹಾಕಿದ್ರು…
ನಮ್ಮಬ್ಬಿರ ನಡುವೆ ಏನು ಇಲ್ಲಾ ಅಂತ ಜನವರಿ 29 ರ ರಾತ್ರಿ ಸುಮಿತ್ರಮ್ಮನ ಮನೆಗೆ ಎಂಟ್ರಿ ಕೊಟ್ಟಿದ್ದ ಪುನೀತ್, ಸಾವಿತ್ರಮ್ಮನ ಮನೆಯಲ್ಲೇ ಮಲಗಿದ್ದ… ಮೊದಲೇ ಪ್ಲಾನ್ ಇವರಿಬ್ಬರೂ ಮದ್ಯರಾತ್ರಿ ಸುಮಿತ್ರಮ್ಮನನ್ನ ಕತ್ತು ಹಿಸುಕಿ ಕೊಲೆ ಮಾಡಿದ್ರು… ಬಳಿಕ ಯಾರಿಗೂ ಅನುಮಾನ ಬಾರದ ರೀತಿ ಮನೆ ಮುಂದೆ ಇದ್ದ ಸಂಪ್ ಗೆ ಸುಮಿತ್ರಮ್ಮ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಅಂತ ಕಥೆ ಕಟ್ಟಿ ನಾಟಕವಾಡಿದ್ರು… ಈ ಸಂಬಂಧ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು… ಜೊತೆಗೆ ಸುಮಿತ್ರಮ್ಮನ ತಿಥಿ ಕಾರ್ಯವು ಮುಗಿದಿತು.. ನಮ್ಮನ್ನ ಇನ್ಯಾರು ಕೇಳಲ್ಲ ಇನ್ಮುಂದೆ ನಾವು ಆಡಿದ್ದೆ ಆಟ ಅಂತ ಇಬ್ಬರು ಜೋಡಿ ಹಕ್ಕಿಗಳಾಗಿ ಏರಿಯಾ ಪೂರ್ತಿ ಮೇರೆಯೋಕೆ ಶುರು ಮಾಡಿದ್ರು… ಇವರಿಬ್ಬರ ಆಟೋಟೋಪ ನೋಡಿದ ಪೊಲೀಸರಿಗೆ ಅನುಮಾನ ಬಂದಿತ್ತು ..ಪೊಲೀಸ್ ಠಾಣೆಗೆ ಕರೆತಂದು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಸುಮಿತ್ರಮ್ಮನದು ಆಕಸ್ಮಿಕ ಸಾವಲ್ಲ… ಕೊಲೆ ಅನ್ನೋದು ಬೆಳಕಿಗೆ ಬಂದಿದೆ…
ಸದ್ಯ ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಅಣ್ಣ ತಂಗಿ ಇಬ್ಬರು ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ…
ಕ್ಯಾಮರಾ ಮ್ಯಾನ್ ದೇವರಾಜ್ ಜೊತೆ ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy