ತುರುವೇಕೆರೆ: ತಾಲ್ಲೂಕಿನ ಬಾಣಸಂದ್ರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ‘ಅಂಬೇಡ್ಕರ್ ಚಿಂತನ – ಮಂಥನ’ ಹಮ್ಮಿಕೊಳ್ಳಲಾಗಿತ್ತು.
ಅಂಬೇಡ್ಕರ್ ರಥವು ಜೈ ಭೀಮ್ ಘೋಷಣೆಯೊಂದಿಗೆ ದಲಿತ ಕೇರಿಯಿಂದ ಹೊರಟು ಊರಿನ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ ಜನತೆಯನ್ನು ಆಕರ್ಷಿಸಿತು. ಮುಸ್ಲಿಮರು ಕೂಡ ಕೂಡಾ ಜೈ ಭೀಮ್ ಮೆರವಣಿಗೆಯಲ್ಲಿ ಪಾಲ್ಗೊಂಡು ಅಂಬೇಡ್ಕರ್ ರಥಕ್ಕೆ ಗೌರವ ಸಲ್ಲಿಸಿದರು.
ಚಿಂತನ – ಮಂಥನ ವೇದಿಕೆಯಲ್ಲಿ ಶಾಖ್ಯಗೌತಮ್ ರವರು ಮಾತನಾಡಿ, ಅಂಬೇಡ್ಕರ್ ಚಿಂತನೆಯ ಜೊತೆ ಜೊತೆಗೆ ಆದಿ ಕರ್ನಾಟಕ ಮತ್ತು ಆದಿದ್ರಾವಿಡ ಮತ್ತು ಮುಸಾಲ್ಮಾನ್ ಬಾಂಧವರ ಇತಿಹಾಸವನ್ನು ತೆರದಿಟ್ಟರು. ಭಾರತವನ್ನು ಆಳಿದ ಮೊದಲಿಗರು ನಾವು. ರಾಜವಂಶಸ್ಥರು ಇಂದು ಈ ಮನುವಾದಿಗಳ ಸೃಷ್ಟಿಸಿದ ಶಾಸ್ತ್ರ ಪುರಾಣಗಳಿಂದ ನಾವು ಅಸ್ಪೃಶ್ಯರಾದೆವು. ಇಂದು ನಾವುಗಳು ನಮ್ಮ ಇತಿಹಾಸವನ್ನು ಮರು ಕಟ್ಟಬೇಕಾಗಿದೆ. ಮತ್ತೆ ನಾವು ರಾಜರಾಗಬೇಕಿದೆ. ಅದಕ್ಕಾಗಿ ನಾವು ಎಲ್ಲಾರು ಅಂಬೇಡ್ಕರ್ ಕೊಟ್ಟ ಚಿಂತನೆಯನ್ನು ನಮ್ಮದಾಗಿಸಿಕೊಳ್ಳಬೇಕಿದೆ.
ಶತಮಾನದಿಂದ ಅಕ್ಷರವಂಚಿತರಾದ ನಮಗೆ ಶಿಕ್ಷಣವನ್ನು ಕೊಟ್ಟಿದ್ ಬ್ರಿಟಿಷರು. ಮೂರನೇ ಮಾರಾಠ್-ಆಂಗ್ಲೋ ಯುದ್ಧದಲ್ಲಿ ಮಹರ್ ಜನಾಂಗದ 500 ಸೈನಿಕರು ವೀರವೇಶದಿಂದ ಹೋರಾಡಿ ವಿಜಯಶಾಲಿಯಾದ ಕಾರಣವಾಗಿ ರಾಣಿ ಎಲಿಜಬೆತ್ ನಿಮಗೆ ಏನು ಬೇಕಾದರೂ ಕೇಳಿ ನಾವು ಕೊಡುವುದಕ್ಕೆ ಸಿದ್ಧ ಎಂದಾಗ ನಮ್ಮ ಭಾರತೀಯರೆಲ್ಲರಿಗೂ ಶಿಕ್ಷಣವನ್ನು ಕೊಡಿ ಎಂದದ್ದು ಮಹರ್ ಸೈನಿಕರ ನಿಸ್ವಾರ್ಥ ಮತ್ತು ಸ್ವಾಭಿಮಾನದ ಶೌರ್ಯವನ್ನು ತೋರುತ್ತದೆ. ಇಂದು ನಾವು ಎಲ್ಲರೂ ಶಿಕ್ಷಿತರಾಗಲು ಕಾರಣವೇ ಆ ಮಹರ್ ಜನಾಂಗದ ಯುದ್ಧ ಎಂಬುದನ್ನು ನೆನಪಿಸಿದರು. ನಮ್ಮನ್ನು ಜ್ಞಾನವಂತರನ್ನಾಗಿ ಮಾಡಿದ್ದು ಗಣೇಶ, ಶಾರದಾದೇವಿಯಲ್ಲ, ಬದಲಾಗಿ ಜ್ಯೋತಿ ಬಾ ಪುಲೆ ಮತ್ತು ಸಾವಿತ್ರ ಬಾಯಿ ಪುಲೆ ಎಂಬ ನೈಜ ಇತಿಹಾಸವನ್ನು ಭೀಮವಾದದೊಂದಿಗೆ ಹಂಚಿಕೊಂಡರು. ‘ ಇತಿಹಾಸ ಮರೆತವರು ಇತಿಹಾಸದ ಸೃಷ್ಟಿಸಲಾರರು’ ಎಂಬ ಭೀಮಚಿಂತನೆಯೊಂದಿಗೆ ಮಾತಿಗೆ ವಿರಾಮಕೊಟ್ಟರು.
ಕೆ. ಧರ್ಮರತ್ನರವರು ಮಾತನಾಡಿ, ಇಂದು ಸಂವಿಧಾನವನ್ನು ಬದಲಾಯಿಸುವ ಮಾತುಗಳು ಸಂವಿಧಾನದಡಿಯಲ್ಲಿಯೇ ಬದುಕನ್ನು ಕಟ್ಟಿಕೊಂಡಿರುವವರ ನಾಲಗೆಯಲ್ಲಿ ಪುನಾರವರ್ತನೆಯಾಗುತ್ತವೆ. ಸಂವಿಧಾನವನ್ನು ಬದಲಾಯಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಕೋಮು ಗಲಭೆ, ಜಾತಿಜಾತಿಯ ನಡುವೆ ವೈರತ್ವ, ಮತ್ತು ಮೀಸಲಾತಿಯು ಕೇವಲ ಪರಿಶಿಷ್ಟ ಜಾತಿ ,ಪ.ಪಂಗಡದವರಿಗೆ ಮಾತ್ರ ಸೀಮಿತವಾಗಿದೆ ಎಂಬುದಾಗಿ ಸುಳ್ಳು ಆರೋಪಿಸಿ ಪ್ರಜಪ್ರಭುತ್ವವನ್ನು ದಾರಿತಪ್ಪಿಸುವ ಅಜೆಂಡಾಗಳು ನಮ್ಮೊಂದಿಗೆ ಇವೆ. ಆಗಾಗಿ ನಾವು ಒಟ್ಟಾಗಿದ್ದರೆ ಸಂವಿಧಾನವು ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ಚಟುವಟಿಕೆಯ ಮೂಲಕ ಜನಸಾಮಾನ್ಯರಿಗೆ ಅರ್ಥೈಯಿಸಿದರು. ಅಂಬೇಡ್ಕರ್ ಕೊಟ್ಟ ಆಶಯದಂತೆ ನಾವು ಜಾಗೃತರಾಗಿ , ಚಿಂತಿಸಿ, ಒಂದಾಗಿ ಎಂಬುದಾಗಿ ಅಭಿಪ್ರಾಯಪಟ್ಟರು.
ಗಂಗಾಧರ ನಿರೂಪಿಸಿದರು. ಕೃಷ್ಣ ಮಾದಿಗ ವಂದಿಸಿದರು. ಮುಖ್ಯ ಅತಿಥಿಗಳಾಗಿ
ಕರ್ನಾಟಕ ಬುದ್ಧ ಸಮಾಜ ಸಂಚಾಲಕ ಸಾಕ್ಯ ಗೌತಮ್, ಕರ್ನಾಟಕ ಬೌದ್ಧ ಧರ್ಮ ಸಮಾಜ ಸಂಚಾಲಕ ಪಿ.ಕೆ. ದಮ್ಮ ರತ್ನ, ಕರ್ನಾಟಕ ಬೌದ್ಧ ಸಮಾಜದ ಸುರೇಶ್ ಮಹೇಶ, ಅಂಬೇಡ್ಕರ್ ವಿಚಾರವಾದಿ ನವೀನ್ ಕುಮಾರ್, ದಲಿತ ಮುಖಂಡ ರಾಘು ಯಗಚಿಕಟ್ಟೆ, ಪಟ್ಟಣ ಪಂಚಾಯತಿ ಅಧ್ಯಕ್ಷ ಚಿದಾನಂದ್ , ಲೋಕೇಶ್ ಗ್ರಾಮ ಪಂಚಾಯತ್ ಸದಸ್ಯರು ಬಾಣಸಂದ್ರ ಭೀಮ ಪಡೆ ಹೇಮಂತ್ ರಂಗಸ್ವಾಮಿ ಕೋಳಿ ಕಿರಣ್ ಗೋವಿಂದ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಣಸಂದ್ರ ಲಕ್ಷ್ಮೀದೇವಮ್ಮ, ಮುಸ್ಲಿಮ್ ಮುಖಂಡ ರಿಯಾಜ್ ಹಾಗೂ ಊರಿನ ಎಲ್ಲಾ ಮುಖಂಡರು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ಎಂ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy