nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ

    July 31, 2026

    ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!

    July 31, 2026

    ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ

    July 31, 2026
    Facebook Twitter Instagram
    ಟ್ರೆಂಡಿಂಗ್
    • ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
    • ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
    • ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
    • ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
    • ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
    • ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
    • ತುಮಕೂರು:  ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
    • ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಂಬೇಡ್ಕರ್ ಜಯಂತಿ ಪ್ರಯುಕ್ತ ‘ಅಂಬೇಡ್ಕರ್ ಚಿಂತನ – ಮಂಥನ’: ಅಂಬೇಡ್ಕರ್ ರಥ
    ತುರುವೇಕೆರೆ April 19, 2022

    ಅಂಬೇಡ್ಕರ್ ಜಯಂತಿ ಪ್ರಯುಕ್ತ ‘ಅಂಬೇಡ್ಕರ್ ಚಿಂತನ – ಮಂಥನ’: ಅಂಬೇಡ್ಕರ್ ರಥ

    By adminApril 19, 2022No Comments2 Mins Read
    ambedkar chinthana manthana

    ತುರುವೇಕೆರೆ: ತಾಲ್ಲೂಕಿನ ಬಾಣಸಂದ್ರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ‘ಅಂಬೇಡ್ಕರ್ ಚಿಂತನ – ಮಂಥನ’ ಹಮ್ಮಿಕೊಳ್ಳಲಾಗಿತ್ತು.

    ಅಂಬೇಡ್ಕರ್ ರಥವು ಜೈ ಭೀಮ್ ಘೋಷಣೆಯೊಂದಿಗೆ ದಲಿತ ಕೇರಿಯಿಂದ ಹೊರಟು ಊರಿನ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ  ಜನತೆಯನ್ನು ಆಕರ್ಷಿಸಿತು. ಮುಸ್ಲಿಮರು ಕೂಡ ಕೂಡಾ ಜೈ ಭೀಮ್ ಮೆರವಣಿಗೆಯಲ್ಲಿ ಪಾಲ್ಗೊಂಡು ಅಂಬೇಡ್ಕರ್ ರಥಕ್ಕೆ ಗೌರವ ಸಲ್ಲಿಸಿದರು.

    ಚಿಂತನ – ಮಂಥನ ವೇದಿಕೆಯಲ್ಲಿ  ಶಾಖ್ಯಗೌತಮ್ ರವರು ಮಾತನಾಡಿ, ಅಂಬೇಡ್ಕರ್ ಚಿಂತನೆಯ ಜೊತೆ ಜೊತೆಗೆ ಆದಿ ಕರ್ನಾಟಕ ಮತ್ತು ಆದಿದ್ರಾವಿಡ  ಮತ್ತು ಮುಸಾಲ್ಮಾನ್ ಬಾಂಧವರ ಇತಿಹಾಸವನ್ನು ತೆರದಿಟ್ಟರು. ಭಾರತವನ್ನು ಆಳಿದ ಮೊದಲಿಗರು ನಾವು. ರಾಜವಂಶಸ್ಥರು ಇಂದು ಈ ಮನುವಾದಿಗಳ ಸೃಷ್ಟಿಸಿದ ಶಾಸ್ತ್ರ ಪುರಾಣಗಳಿಂದ ನಾವು ಅಸ್ಪೃಶ್ಯರಾದೆವು. ಇಂದು ನಾವುಗಳು ನಮ್ಮ ಇತಿಹಾಸವನ್ನು ಮರು ಕಟ್ಟಬೇಕಾಗಿದೆ. ಮತ್ತೆ ನಾವು ರಾಜರಾಗಬೇಕಿದೆ. ಅದಕ್ಕಾಗಿ ನಾವು ಎಲ್ಲಾರು ಅಂಬೇಡ್ಕರ್ ಕೊಟ್ಟ ಚಿಂತನೆಯನ್ನು ನಮ್ಮದಾಗಿಸಿಕೊಳ್ಳಬೇಕಿದೆ. 

    ಶತಮಾನದಿಂದ ಅಕ್ಷರವಂಚಿತರಾದ ನಮಗೆ  ಶಿಕ್ಷಣವನ್ನು ಕೊಟ್ಟಿದ್  ಬ್ರಿಟಿಷರು. ಮೂರನೇ ಮಾರಾಠ್-ಆಂಗ್ಲೋ ಯುದ್ಧದಲ್ಲಿ ಮಹರ್ ಜನಾಂಗದ 500 ಸೈನಿಕರು ವೀರವೇಶದಿಂದ ಹೋರಾಡಿ ವಿಜಯಶಾಲಿಯಾದ ಕಾರಣವಾಗಿ ರಾಣಿ ಎಲಿಜಬೆತ್ ನಿಮಗೆ ಏನು ಬೇಕಾದರೂ  ಕೇಳಿ ನಾವು ಕೊಡುವುದಕ್ಕೆ ಸಿದ್ಧ ಎಂದಾಗ ನಮ್ಮ ಭಾರತೀಯರೆಲ್ಲರಿಗೂ ಶಿಕ್ಷಣವನ್ನು ಕೊಡಿ ಎಂದದ್ದು ಮಹರ್ ಸೈನಿಕರ  ನಿಸ್ವಾರ್ಥ ಮತ್ತು ಸ್ವಾಭಿಮಾನದ ಶೌರ್ಯವನ್ನು ತೋರುತ್ತದೆ. ಇಂದು ನಾವು ಎಲ್ಲರೂ ಶಿಕ್ಷಿತರಾಗಲು ಕಾರಣವೇ ಆ ಮಹರ್ ಜನಾಂಗದ ಯುದ್ಧ ಎಂಬುದನ್ನು ನೆನಪಿಸಿದರು. ನಮ್ಮನ್ನು ಜ್ಞಾನವಂತರನ್ನಾಗಿ ಮಾಡಿದ್ದು ಗಣೇಶ, ಶಾರದಾದೇವಿಯಲ್ಲ, ಬದಲಾಗಿ ಜ್ಯೋತಿ ಬಾ ಪುಲೆ ಮತ್ತು ಸಾವಿತ್ರ ಬಾಯಿ ಪುಲೆ ಎಂಬ ನೈಜ ಇತಿಹಾಸವನ್ನು ಭೀಮವಾದದೊಂದಿಗೆ ಹಂಚಿಕೊಂಡರು. ‘ ಇತಿಹಾಸ ಮರೆತವರು ಇತಿಹಾಸದ ಸೃಷ್ಟಿಸಲಾರರು’ ಎಂಬ ಭೀಮಚಿಂತನೆಯೊಂದಿಗೆ ಮಾತಿಗೆ ವಿರಾಮಕೊಟ್ಟರು.

    ಕೆ. ಧರ್ಮರತ್ನರವರು ಮಾತನಾಡಿ, ಇಂದು ಸಂವಿಧಾನವನ್ನು ಬದಲಾಯಿಸುವ ಮಾತುಗಳು ಸಂವಿಧಾನದಡಿಯಲ್ಲಿಯೇ ಬದುಕನ್ನು ಕಟ್ಟಿಕೊಂಡಿರುವವರ ನಾಲಗೆಯಲ್ಲಿ ಪುನಾರವರ್ತನೆಯಾಗುತ್ತವೆ. ಸಂವಿಧಾನವನ್ನು ಬದಲಾಯಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಕೋಮು ಗಲಭೆ, ಜಾತಿಜಾತಿಯ ನಡುವೆ ವೈರತ್ವ, ಮತ್ತು ಮೀಸಲಾತಿಯು ಕೇವಲ ಪರಿಶಿಷ್ಟ ಜಾತಿ ,ಪ‌.ಪಂಗಡದವರಿಗೆ ಮಾತ್ರ ಸೀಮಿತವಾಗಿದೆ ಎಂಬುದಾಗಿ ಸುಳ್ಳು ಆರೋಪಿಸಿ ಪ್ರಜಪ್ರಭುತ್ವವನ್ನು ದಾರಿತಪ್ಪಿಸುವ ಅಜೆಂಡಾಗಳು ನಮ್ಮೊಂದಿಗೆ ಇವೆ. ಆಗಾಗಿ ನಾವು ಒಟ್ಟಾಗಿದ್ದರೆ ಸಂವಿಧಾನವು ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ಚಟುವಟಿಕೆಯ ಮೂಲಕ ಜನಸಾಮಾನ್ಯರಿಗೆ ಅರ್ಥೈಯಿಸಿದರು. ಅಂಬೇಡ್ಕರ್ ಕೊಟ್ಟ ಆಶಯದಂತೆ ನಾವು ಜಾಗೃತರಾಗಿ , ಚಿಂತಿಸಿ,  ಒಂದಾಗಿ ಎಂಬುದಾಗಿ ಅಭಿಪ್ರಾಯಪಟ್ಟರು.

    ಗಂಗಾಧರ ನಿರೂಪಿಸಿದರು.  ಕೃಷ್ಣ ಮಾದಿಗ ವಂದಿಸಿದರು.  ಮುಖ್ಯ ಅತಿಥಿಗಳಾಗಿ

    ಕರ್ನಾಟಕ ಬುದ್ಧ ಸಮಾಜ ಸಂಚಾಲಕ ಸಾಕ್ಯ ಗೌತಮ್, ಕರ್ನಾಟಕ ಬೌದ್ಧ ಧರ್ಮ ಸಮಾಜ ಸಂಚಾಲಕ ಪಿ.ಕೆ. ದಮ್ಮ ರತ್ನ, ಕರ್ನಾಟಕ ಬೌದ್ಧ ಸಮಾಜದ ಸುರೇಶ್ ಮಹೇಶ, ಅಂಬೇಡ್ಕರ್ ವಿಚಾರವಾದಿ ನವೀನ್ ಕುಮಾರ್, ದಲಿತ ಮುಖಂಡ ರಾಘು ಯಗಚಿಕಟ್ಟೆ, ಪಟ್ಟಣ ಪಂಚಾಯತಿ ಅಧ್ಯಕ್ಷ ಚಿದಾನಂದ್ , ಲೋಕೇಶ್ ಗ್ರಾಮ ಪಂಚಾಯತ್ ಸದಸ್ಯರು ಬಾಣಸಂದ್ರ ಭೀಮ ಪಡೆ ಹೇಮಂತ್ ರಂಗಸ್ವಾಮಿ ಕೋಳಿ ಕಿರಣ್ ಗೋವಿಂದ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಣಸಂದ್ರ ಲಕ್ಷ್ಮೀದೇವಮ್ಮ, ಮುಸ್ಲಿಮ್  ಮುಖಂಡ  ರಿಯಾಜ್ ಹಾಗೂ ಊರಿನ ಎಲ್ಲಾ ಮುಖಂಡರು ಭಾಗವಹಿಸಿದ್ದರು.

    ವರದಿ: ಸುರೇಶ್ ಬಾಬು ಎಂ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

     

    admin
    • Website

    Related Posts

    ಬೆಳೆ ವಿಮೆ ನೋಂದಣಿ: ರೈತರಿಗೆ ಸಲಹೆ

    July 10, 2026

    ಹಸಿರು ಶಾಲು ರೈತರಿಗೆ ನ್ಯಾಯ ಕೊಡಿಸುವ ಅಸ್ತ್ರ: ಇಂದುವಾಳು ಚಂದ್ರಶೇಖರ್

    July 7, 2026

    ಹೊಸ ಮೊಬೈಲ್ ಆಪ್ ನಿಂದ ಗೊಂದಲ: ಹಳೇ ರಸಗೊಬ್ಬರ ಮಾರಾಟ ವ್ಯವಸ್ಥೆ ಮುಂದುವರಿಸಲು ಕೃಷಿ ಪರಿಕರ ಮಾರಾಟಗಾರರ ಒತ್ತಾಯ

    June 30, 2026

    Leave A Reply Cancel Reply

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ

    July 31, 2026

    ಬೆಂಗಳೂರು: ಕರ್ನಾಟಕದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಮತ್ತು ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಆಗಸ್ಟ್ 3ರಂದು ಬೆಂಗಳೂರಿಗೆ ನಿಗದಿಯಾಗಿದ್ದ ತಮಿಳುನಾಡು…

    ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!

    July 31, 2026

    ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ

    July 31, 2026

    ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್

    July 31, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.