Author: admin

ಮುಂದಿನ ತಿಂಗಳು ಏಪ್ರಿಲ್ ನಲ್ಲಿ 14 ದಿನಗಳ ಕಾಲ ಬ್ಯಾಂಕ್‌ ಗಳು ಬಂದ್ ಇರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ ತಿಂಗಳ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಹಂಚಿಕೊಂಡಿದೆ. ಈ ಪಟ್ಟಿಯ ಪ್ರಕಾರ ಮುಂಬರುವ ತಿಂಗಳಲ್ಲಿ 14 ದಿನಗಳವರೆಗೆ ಬ್ಯಾಂಕುಗಳಿಗೆ ರಜೆಯಿದೆ. ಇತ್ತೀಚೆಗೆ ಆರ್‌ಬಿಐ ಮಾರ್ಚ್ 31 ರ ಭಾನುವಾರ ಕೂಡ ಬ್ಯಾಂಕ್‌ ಗಳಿಗೆ ರಜೆಯಿಲ್ಲ. ಕೆಲಸ ಮಾಡಬೇಕು ಎಂದು ಘೋಷಿಸಿದೆ. ಹಣಕಾಸು ವರ್ಷದ ಮುಕ್ತಾಯವಾಗಿರುವುದಿಂದ ವಾರ್ಷಿಕ ಲೆಕ್ಕಪತ್ರಗಳ ಕೆಲಸ ಹೆಚ್ಚಾಗಿದೆ. ಇದೆ ಕಾರಣಕ್ಕೆ ಮಾರ್ಚ್ 30 ರ ಶನಿವಾರ ಮತ್ತು ಮಾರ್ಚ್ 31ರ ಭಾನುವಾರ ಆರ್‌ ಬಿಐ ಕಚೇರಿಗಳು ಓಪನ್ ಇರಲಿವೆ. ಏಪ್ರಿಲ್ 1, 2024: ಏಪ್ರಿಲ್ 1 ರಂದು ಬ್ಯಾಂಕುಗಳು ಮುಚ್ಚಿರಲಿದೆ. ಆದರೆ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಂ, ಚಂಡೀಗಢ, ಸಿಕ್ಕಿಂ ಮತ್ತು ಮೇಘಾಲಯದಂತಹ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ ಗಳು ಕಾರ್ಯನಿರ್ವಹಿಸಲಿವೆ. ಏಪ್ರಿಲ್ 5, 2024: ಬಾಬು ಜಗಜೀವನ್ ಮತ್ತು ಜುಮಾ-ಉಲ್-ವಿದಾ ಅವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು, ತೆಲಂಗಾಣ…

Read More

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮರೆಯಾಗದ ಜಾತಿಪದ್ದತಿ ಇದ್ದು, ದಲಿತರು ಎಂಬ ಒಂದು ಕ್ಷುಲ್ಲಕ ಕಾರಣಕ್ಕೆ ಮಲ್ಲಿಗೆರೆ ದಲಿತ ಕಾಲೋನಿ ಜನತೆಗೆ ಅಧಿಕಾರಿಗಳು ನೀರು ಬಿಟ್ಟುಕೊಡುತ್ತಿಲ್ಲ. ದಲಿತರಾಗಿ ಹುಟ್ಟಿದ್ದೇ ತಪ್ಪಾ..? ಎಂದು ಕಾಲೋನಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಿಗೆರೆ ದಲಿತ ಕಾಲೋನಿ ಜನತೆ ನೀರಿಲ್ಲದೇ ಪರದಾಡ್ತಿದ್ದಾರೆ. ಇದು ಚಿಕ್ಕನಾಯಕನಹಳ್ಳಿ ಮಲ್ಲಿಗೆರೆ ಗ್ರಾಮ ಪಂಚಾಯತಿಯ ಕರ್ಮಕಾಂಡವಾಗಿದ್ದು, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಲ್ಲಿಗೆರೆಯಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳು ದಲಿತ ಕಾಲೋನಿಗೆ ತಿಂಗಳಿಂದ ನೀರು ಬಿಡದೇ ತಾರತಮ್ಯ ಮಾಡುತ್ತಿದ್ದಾರೆ. ಮೇಲ್ವರ್ಗದ ಜನರ ರಸ್ತೆಗೆ ನೀರು ಬಿಡುವಾತ ಕಾಲೋನಿಗೆ ನೀರು ಬಿಡದೆ ತಾರತಮ್ಯ ಮಾಡುತ್ತಿದ್ದಾರೆ. ದಲಿತ ಕಾಲೋನಿ ಎಂಬ ಕಾರಣಕ್ಕೆ ನೀರು ಬಿಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಮೇಲ್ವರ್ಗದವರ ಮನೆಯ ಮುಂದೆ ನೀರು ಹಿಡಿಯಲು ಹೋದಾಗ ಗಲಾಟೆ ಮಾಡಿದ್ದಾರೆ. ಇದರಿಂದಾಗಿ, ಸದ್ಯ ಖಾಲಿ ಕೊಡ ಹಿಡಿದು ದಲಿತ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಜಾತಿ ತಾರತಮ್ಯ ಮಾಡುವ ಅಧಿಕಾರಿಗಳನ್ನ ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದಾರೆ. ಶೀಘ್ರವೇ…

Read More

ತುಮಕೂರು: ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಕುಣಿಗಲ್ ಪಟ್ಟಣದ ಹೊರಹೊಲಯದಲ್ಲಿ ನಡೆದಿದೆ. ಟ್ರೈನ್ ಸ್ವಲ್ಪ ಮುಂದೆ ಸಾಗಿದ್ರು ಶಾಕ್ ನಿಂದ ಹೊತ್ತಿ ಉರಿಯೋ ಸಾಧ್ಯತೆಯಿತ್ತು, ಸಾವಿರಾರು ಜನ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ತರುತ್ತಿತ್ತು. ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಿದ್ದರು. ಕುಣಿಗಲ್ ಬಳಿ ರೈಲ್ವೆ ಟ್ರಾಕ್ ನಲ್ಲಿ ಹೈವೊಲ್ಟೇಜ್ ಎಲೆಕ್ಟ್ರಿಕ್ ವೈರ್ ಬಿದ್ದಿತ್ತು. ವಿದ್ಯುತ್ ಲೈನ್ ಕಟ್ ಆಗಿರೋದು ನೋಡಿದ ಚಾಲಕ ತಕ್ಷಣ ಟ್ರೈನ್ ನಿಲ್ಲಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ ತಪ್ಪಿದೆ. ಚಾಲಕನ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುರುವೇಕೆರೆ: ಏಪ್ರಿಲ್ 1 ರಿಂದ ಕೊಬ್ಬರಿ ಖರೀದಿ ಪ್ರಾರಂಭವಾಗಲಿದೆ. ತಾಲ್ಲೂಕಿನಲ್ಲಿ 7 ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವು ಮಾನ ದಂಡಗಳನ್ನು ಅನುಸರಿಸಿ ಖರೀದಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾಳ್ಕೆರೆ ನಾಗೇಂದ್ರ ತಿಳಿಸಿದ್ದಾರೆ. ಪಟ್ಟಣದ ಎಪಿಎಂಸಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಬ್ಬೇಘಟ್ಟ(ಗಾಂಧಿಗ್ರಾಮ) -1 ದಂಡಿನಶಿವರ(ಮುನಿಯೂರು) -1 ಟಿ.ಬಿ. ಕ್ರಾಸ್ (ಮಾಯಸಂದ್ರ)-2 ಕಸಬಾ ಹೋಬಳಿಗೆ ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ -3 ಕೌಂಟರ್ ಗಳನ್ನೂ ತೆರೆಯಲಾಗಿದ್ದು, ಆಯಾ ಭಾಗದ ಹೋಬಳಿಯ ರೈತರು ನಿಗದಿ ಪಡಿಸಿದ ಕೌಂಟರ್ ನಲ್ಲಿ ಕೊಬ್ಬರಿಯನ್ನು ಮಾರಾಟ ಮಾಡಬೇಕು. ದಿನಕ್ಕೆ10ರೈತರಿಂದ ಮಾತ್ರ ಖರೀದಿಸಲಾಗುವುದು. ನಿಗದಿಯಾದ ದಿನ ಬಾರದ ರೈತರ ಕೊಬ್ಬರಿಯನ್ನು ಮಾರನೇ ದಿನ ಖರೀದಿಸುವುದಿಲ್ಲ. ಅದಕ್ಕೆ ಬೇರೆ ದಿನ ನಿಗದಿಪಡಿಸಲಾಗುತ್ತದೆ. ಕೌಂಟರ್ ಹತ್ತಿರ ರೈತರ ಹೆಸರುಗಳನ್ನು ಹಾಕಲಾಗುವುದು. ಅವರುಗಳು ಮಾತ್ರ ಕೊಬ್ಬರಿಯನ್ನು ತರುವುದು. ಉಂಡೆ ಕೊಬ್ಬರಿಯನ್ನು ಪರೀಕ್ಷಿಸುವ ನೆಪದಲ್ಲಿ ಅದನ್ನು ಚೂರು ಮಾಡಬೇಡಿ” ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಪ್ರತಿ ರೈತರಿಂದ ನೋಂದಣಿಯಾದ ಕೊಬ್ಬರಿಯನ್ನು…

Read More

ತುರುವೇಕೆರೆ: “ಮತದಾನ ಬಹಿಷ್ಕರಿಸಿ ಲೋಕಸಭಾ ಚುನಾವಣೆ ಸಂಬಂಧ ಮತದಾನದ ಹಕ್ಕನ್ನು ಚಲಾಯಿಸದೆ ಇರಬೇಡಿ. ನಿಮ್ಮ ಹಕ್ಕನ್ನು ನೀವು ಚಲಾಯಿಸದಿದ್ದರೆ ಒಂದು ಅಧ್ಬುತವಾದ ಶಕ್ತಿಯನ್ನುಕಳೆದುಕೊಳ್ಳುತ್ತೀರಿ. ನಿಮ್ಮ ಹೋರಾಟ ಏನೇ ಇದ್ದರೂ ನಾವು ಅದಕ್ಕೆ ಸ್ಫಂದಿಸುತ್ತೇವೆ” ಎಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಮನವಿ ಮಾಡಿದರು. ಕೋಬಾಲ್ಡ್ ಹಾಗೂ ನಿಕ್ಕಲ್ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ, ಸ್ಥಳೀಯ ರೈತರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿದ್ದ ಹಿನ್ನಲೆಯಲ್ಲಿ, ತಿಪಟೂರು ಉಪವಿಭಾಗಾಧಿಕಾರಿಗಳು ಕೋಡಿಹಳ್ಳಿ ಕುಣಿಕೇನಹಳ್ಳಿ ಗ್ರಾಮಗಳಲ್ಲಿ ಮತದಾನ ಜಾಗೃತಿ ಸಭೆ ನಡೆಸಿದರು. ಚುನಾವಣಾಧಿಕಾರಿ ಜಿ.ಎನ್. ಮಂಜುನಾಥ್, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಕುಣಿಗಲ್ ಡಿ.ವೈ.ಎಸ್ ಪಿ ಓಂ ಪ್ರಕಾಶ್  ಸರ್ಕಲ್ ಇನ್ಸ್ಪೆಕ್ಟರ್ ಲೋಹಿತ್ ಕುಮಾರ್  ಹಾಗೂ ರೆವಿನ್ಯೂ ಇಲಾಖಾಧಿಕಾರಿಗಳು ಮಂಗಳವಾರ ದುಂಡ ಗ್ರಾಮಕ್ಕೆ ಆಗಮಿಸಿದ ಸಂಧರ್ಭದಲ್ಲಿ, ಗ್ರಾಮಸ್ಥರು ಒಕ್ಕೊರಲಿನಿಂದ “ಗಣಿಗಾರಿಕೆ ಬಗ್ಗೆ ನಿಖರ ಮಾಹಿತಿ ನೀಡುವವರೆಗೂ ನಾವ್ಯಾರೂ ಮತ ಹಾಕುವುದಿಲ್ಲ” ಎಂಬ ವಿಚಾರವಾಗಿ ಇಂದು, ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಕೋಡಿಹಳ್ಳಿ ಹಾಗೂ ಕುಣಿಕೇನ ಹಳ್ಳಿಯಲ್ಲಿ ಸುತ್ತಮುತ್ತಲ ಗ್ರಾಮಸ್ಥರನ್ನು ಸೇರಿಸಿ…

Read More

ಹಲಸಿನ ಹಣ್ಣಿನಲ್ಲಿದೆ ಇಷ್ಟೆಲ್ಲ ಆರೋಗ್ಯ ಲಾಭ!: ಹಲಸಿನ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ರೋಗಗಳು, ಸೋಂಕುಗಳು ಮತ್ತು ವೈರಸ್‌ ಗಳ ವಿರುದ್ಧ ಹೋರಾಡಲು ದೇಹವನ್ನು ಅನುಮತಿಸುತ್ತದೆ. ವೈರಲ್ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಹಲಸು ಉಪಯುಕ್ತವಾಗಿದೆ. ಇದು ದೃಷ್ಟಿ ಸುಧಾರಿಸುವ, ಕಣ್ಣಿನ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಹಲಸು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ, ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ಪಾರಿಜಾತ ಹೂವು ಅನೇಕ ಪ್ರಯೋಜನಗಳನ್ನು ಹೊಂದಿದೆ: ಪಾರಿಜಾತ ಗಿಡವನ್ನು ಕೆಮ್ಮಿಗೆ ಔಷಧಿಯಾಗಿ ಬಳಸುತ್ತಾರೆ. ಮರದ ತೊಗಟೆಯನ್ನು ಆಯುರ್ವೇದ ಔಷಧಿಯಾಗಿ ಬಳಸಲಾಗುತ್ತದೆ. ಇದರ ಎಲೆ, ತೊಗಟೆ, ಹೂವುಗಳನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ ಕಷಾಯವನ್ನು ಕುಡಿಯುತ್ತಾರೆ. ಇದನ್ನು ಹೆಚ್ಚಾಗಿ ಆಯುರ್ವೇದ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಶೀತ ಮತ್ತು ಕೆಮ್ಮಿಗೆ ಪಾರಿಜಾತ ಹೂವಿನ ಚಹಾ ಅಥವಾ ಕಷಾಯವು ತುಂಬಾ ಉಪಯುಕ್ತವಾಗಿದೆ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.…

Read More

ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ಪ್ರತಿಭಟನೆಗಳು, ಪ್ರತಿಪಕ್ಷಗಳನ್ನು ಶಕ್ತಿ ಪ್ರದರ್ಶನವಾಗಿ ಪರಿವರ್ತಿಸಲು, ನಾಳೆ ದೆಹಲಿಯಲ್ಲಿ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರತಿಭಟನಾ ಸಭೆ ನಡೆಯಲಿದೆ. ಪಕ್ಷದ ಎಲ್ಲ ಹಿರಿಯ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಮಮತಾ ಬ್ಯಾನರ್ಜಿ ಬದಲಿಗೆ ಪಕ್ಷದ ಹಿರಿಯ ನಾಯಕರೊಬ್ಬರು ಟಿಎಂಸಿಯನ್ನು ಪ್ರತಿನಿಧಿಸಲಿದ್ದಾರೆ. ನಾಳೆಯ ರ್ಯಾಲಿಯ ಸಂಘಟನೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ಣಯಿಸಲು ಇಂಡಿಯಾ ಫ್ರಂಟ್ ‌ನ ನಾಯಕರು ಇಂದು ಸಂವಹನ ನಡೆಸಲಿದ್ದಾರೆ. ಇಡಿ ಕಸ್ಟಡಿಯಲ್ಲಿ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಗೋವಾದ ಮುಖಂಡರನ್ನು ಕೂರಿಸಿ ವಿಚಾರಣೆ ನಡೆಸಲಾಗುವುದು ಎಂದು ಇಡಿ ಮಾಹಿತಿ ನೀಡಿದೆ. ಇದೇ ವೇಳೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಪ್ರತಿಕ್ರಿಯಿಸಿದ್ದು, ಮದ್ಯ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದಲ್ಲಿ ವಿದೇಶಗಳು ಹಸ್ತಕ್ಷೇಪ ಮಾಡಬಾರದು. ಬೇರೆ ದೇಶಗಳು ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳಬೇಕು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296…

Read More

ಬೆಂಗಳೂರಿನಲ್ಲಿ ಕಳೆದ 5 ವರ್ಷಗಳಲ್ಲಿ ಮಾರ್ಚ್ ತಿಂಗಳಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ದಾಖಲಾದ ತಾಪಮಾನ ಹೋಲಿಸಿದರೆ ಇದು 3 ನೇ ಅತಿ ಹೆಚ್ಚು ಉಷ್ಣಾಂಶ. ಇನ್ನು ಕಳೆದ 15 ವರ್ಷಗಳಲ್ಲಿ ದಾಖಲಾದ ತಾಪಮಾನಕ್ಕೆ ಹೋಲಿಸಿದರೆ ಇದು 4 ನೇ ಅತಿ ಹೆಚ್ಚು. HAL ವಿಮಾನ ನಿಲ್ದಾಣದ ಇತಿಹಾಸದಲ್ಲಿ 6 ನೇ ಅತಿ ಹೆಚ್ಚು: 35.5 ° C (+1.7 ° C) ದಾಖಲಾಗಿದೆ. ಅದೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 36.4°C (+2°C) ದಾಖಲಾಗಿತ್ತು. 2017 ಮತ್ತು 2019 ರಲ್ಲಿ 37°C+ ಉಷ್ಣಾಂಶ ದಾಖಲಾಗಿತ್ತು. 29 ನೇ ಮಾರ್ಚ್ 1996 ರಂದು ಇಲ್ಲಿಯತನಕ ದಾಖಲಾದ ಅತ್ಯಂತ ಉಷ್ಣಾಂಶವಾಗಿದ್ದು,ಅಂದು 37.3°C ದಾಖಲಾಗಿತ್ತು. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಮೇಲೆಯೇ ಇಂದೂ ಇರಲಿದ್ದು, ದಾಖಲಾಗಿ ವಾತಾವರಣದ ಉಷ್ಣಾಂಶ ದಾಖಲೆ ಸ್ಥಾಪಿಸುತ್ತಿದೆ. ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ…

Read More

ಆತ ಶತ್ರುವೇ ಆಗಿರಲಿ ರಕ್ಷಣೆ ಕೋರಿ ಬಂದವರನ್ನು ರಕ್ಷಿಸುವುದು ನಮ್ಮ ಭಾರತೀಯರ ಗುಣ. ಅದೇ ರೀತಿಯಲ್ಲಿ ಭಾರತೀಯ ನೌಕಾಪಡೆ ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರ ದಾಳಿಯಿಂದ 23 ಜನ ಪಾಕಿಸ್ತಾನ ಸಿಬ್ಬಂದಿಯನ್ನು ರಕ್ಷಣೆ ಮಾಡಿದೆ. ಅರಬ್ಬೀ ಸಮುದ್ರದಲ್ಲಿ ಕಡಲ್ಗಳ್ಳರ ದಾಳಿಯನ್ನು ಹಿಮ್ಮೆಟ್ಟಿಸಿರುವ ಭಾರತೀಯ ನೌಕಾಪಡೆಯು, 12 ಗಂಟೆಗಳ ಕಾಲ ನಡೆದ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯಲ್ಲಿ, ಇರಾನಿನ ಮೀನುಗಾರಿಕಾ ಹಡಗನ್ನು ವಶಕ್ಕೆ ಪಡೆದು ಅದರಲ್ಲಿದ್ದ 23 ಪಾಕಿಸ್ತಾನಿ ಸಿಬ್ಬಂದಿಯನ್ನು ರಕ್ಷಿಸಿದೆ. “ಮಾರ್ಚ್ 28ರ ತಡರಾತ್ರಿ ಇರಾನಿನ ಮೀನುಗಾರಿಕಾ ಹಡಗು ‘ಅಲ್-ಕಂಬರ್ 786’ ನಲ್ಲಿ ಸಂಭವಿಸಬಹುದಾದ ಕಡಲ್ಗಳ್ಳತನದ ಘಟನೆಯ ಮಾಹಿತಿಯ ಆಧಾರದ ಮೇಲೆ, ಅರೇಬಿಯನ್ ಸಮುದ್ರದಲ್ಲಿ ಕಡಲ ಭದ್ರತಾ ಕಾರ್ಯಾಚರಣೆಗಾಗಿ ನಿಯೋಜಿಸಲಾದ ಎರಡು ಭಾರತೀಯ ನೌಕಾಪಡೆಯ ಹಡಗುಗಳು, ಅಪಹರಣಕ್ಕೊಳಗಾದ ಮೀನುಗಾರಿಕಾ ಹಡಗುಗಳನ್ನು ತಡೆಯಲು ಕಳುಹಿಸಲಾಯಿತು” ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ನೌಕಾ ತಂಡಗಳು ನಂತರ ಹಡಗನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಮೀನುಗಾರಿಕೆ ಚಟುವಟಿಕೆಗಳನ್ನು ಪುನರಾರಂಭಿಸಲು, ಸುರಕ್ಷತೆಯ ದೃಷ್ಟಿಯಿಂದ ಅದು ಸಮುದ್ರದಲ್ಲಿ ಸಾಗುವ ಸಾಮರ್ಥ್ಯ ಪರಿಶೀಲಿಸಿತು…

Read More

ಖ್ಯಾತ ನಟ ಡೇನಿಯಲ್ ಬಾಲಾಜಿ ಅವರು ತಮ್ಮ 48 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಅದ್ಬುತ ನಟನೆಗೆ ಹೆಸರಾದ ತಮಿಳು ನಟನ ಹಠಾತ್ ನಿಧನದಿಂದಾಗಿ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ. ಅನೇಕ ನಾಟಕಗಳು ಮತ್ತು ಚಲನಚಿತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ನಟನ ಮೃತ ದೇಹವನ್ನು ಇಂದು ಅಂದರೆ ಶನಿವಾರದಂದು ಪುರಸೈವಲಕಂನಲ್ಲಿರುವ ಅವರ ನಿವಾಸದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ವರದಿಯಾಗಿದೆ. ವಡಾ ಚೆನ್ನೈನ ವೆಟ್ಟೈಯಾಡು ವಿಲಾಯಡು, ತಂಬಿ ಚಿತ್ರಗಳಲ್ಲಿ ಅದ್ಭುತ ನಟನೆಗೆ ಹೆಸರುವಾಸಿಯಾಗಿರುವ ಡೇನಿಯಲ್ ಬಾಲಾಜಿ ತಮ್ಮ ಉತ್ತಮ ನಟನೆಗೆ ಹೆಸರು ವಾಸಿಯಾಗಿದ್ದು. ಶುಕ್ರವಾರ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಚೆನ್ನೈನ ಕೊಟ್ಟಿವಾಕಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಡೇನಿಯಲ್ ತನ್ನ ನಟನಾ ವೃತ್ತಿಜೀವನವನ್ನು ಪ್ರಸಿದ್ಧ ಧಾರಾವಾಹಿ ಚಿಥಿಯೊಂದಿಗೆ ಪ್ರಾರಂಭಿಸಿದ್ದು, ಇದಾದ ನಂತರ ಹಿಂತಿರುಗಿ ನೋಡದೆ ಕಾಕ ಕಾಖ, ಪೊಲ್ಲಾಧವನ್, ವೆಟ್ಟೈಯಾಡು ವಿಲಾಯಡು, ವಡ ಚೆನ್ನೈ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದರು. ನಟ ತನ್ನ ಜೀವನದಲ್ಲಿ…

Read More