Subscribe to Updates
Get the latest creative news from FooBar about art, design and business.
- ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
- ಅಪ್ರಾಪ್ತೆ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನ ಪುತ್ರನ ಬಂಧನ
- ಬೈಕ್ ಟಾಕ್ಸಿ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ
- ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣ: ಡಾ.ಜಿ.ಪರಮೇಶ್ವರ್
- ಚಿಕ್ಕನಾಯಕನಹಳ್ಳಿ: ತುಳುನಾಡಿನ ಪಂಜುರ್ಲಿ ದೈವಕ್ಕೆ ಭಕ್ತಿ ಸಮರ್ಪಣೆ
- ಮಧುಗಿರಿ | ಜೀತ ವಿಮುಕ್ತರಿಗೆ ಪುನರ್ ವಸತಿ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ!
- ಕೊರಟಗೆರೆ ಪಟ್ಟಣ ಪಂಚಾಯಿತಿ ‘ಪುರಸಭೆ’ಯಾಗಿ ಮೇಲ್ದರ್ಜೆಗೆ!
- ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!
Author: admin
ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೆಟ್: ನಾಯಕಿಯರಿಗೆ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬಾಲಿವುಡ್ ಹೀರೋಯಿನ್, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಒಂದು ಮಗುವಿನ ತಾಯಿಯಾಗಿದ್ದರೂ ತನ್ನ ಸೌಂದರ್ಯವನ್ನು ಇನ್ನೂ ಕಾಪಾಡಿಕೊಂಡಿದ್ದಾರೆ. ಮದುವೆ ಮತ್ತು ಮಕ್ಕಳೊಂದಿಗೆ, ಅವರು ಕೆಲವು ವರ್ಷಗಳ ಕಾಲ ಚಲನಚಿತ್ರಗಳಿಗೆ ಗ್ಯಾಪ್ ನೀಡಿದರು… ಶೀಘ್ರದಲ್ಲೇ ಚಲನಚಿತ್ರಗಳಿಗೆ ಮರಳುತ್ತಾರೆ. ಕೆಲವು ವರ್ಷಗಳ ಅಂತರವಿದ್ದರೂ ಆಕೆಯ ಸೌಂದರ್ಯ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತನ್ನ ಸೌಂದರ್ಯದ ಗುಟ್ಟನ್ನು ಹೇಳಿದ್ದಾಳೆ. ಅನುಷ್ಕಾ ಶರ್ಮಾ ಈ ಬಗ್ಗೆ ಮಾತನಾಡಿ.. ”ನನ್ನ ನಯವಾದ ಚರ್ಮಕ್ಕಾಗಿ ನಾನು ಅನುಸರಿಸುವ ಸಲಹೆ ಒಂದೇ. ನಾನು ಫೇಸ್ ಪ್ಯಾಕ್ ಬಳಸುತ್ತೇನೆ. ನಾನು ಸ್ವಲ್ಪ ಮೊಸರು, ರೋಸ್ ವಾಟರ್ ಮತ್ತು ಸ್ವಲ್ಪ ಬೇವಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚುತ್ತೇನೆ. ಅದು ಒಣಗಿದ ನಂತರ, ನಾನು ತಣ್ಣೀರಿನಿಂದ ನನ್ನ ಮುಖವನ್ನು ತೊಳೆಯುತ್ತೇನೆ. ನಾನು ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುತ್ತೇನೆ. ನಾನು ಚಿಕ್ಕವಳಿದ್ದಾಗ ನನಗೆ…
ವಿಧಾನಮಂಡಲದ ಅಧಿವೇಶನ ಕರೆಯಲು ಒತ್ತಾಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸದನಕ್ಕೆ ಬರಲ್ಲ ಎಲ್ಲಿದ್ಯಪ್ಪಾ ಕುಮಾರಸ್ವಾಮಿ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ವಿರುದ್ಧ ಕಿಡಿಕಾರಿ ನಕಲಿಸರ್ಟಿಫಿಕೇಟ್ ರಾಜಾ, ನಕಲಿ ಸರ್ಟಿಫಿಕೇಟ್ ಶೂರ, ನನ್ನನ್ನು ಹುಡುಕುತ್ತಿದ್ದಾರೆ. ಸದನದಲ್ಲೂ ಕಾಣಿಸಿಲ್ಲವಂತೆ, ರಾಮನಗರದಲ್ಲೂ ಕಂಡಿಲ್ಲವಂತೆ, ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣಕುರುಡಾದರೂ ಇರಬೇಕು ಎಂದು ತಿರುಗೇಟು ನೀಡಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು ಕರಾವಳಿ ಕೊಲೆಗಳು, ಮಳೆ-ನೆರೆ, ಚರ್ಚೆಗೆ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿರುವುದು ನಿಜ. ಇದರಿಂದ ಉನ್ನತ ಶಿಕ್ಷಣ ಸಚಿವರಿಗೇಕೆ ಉರಿ, ತಮ್ಮ ಇಲಾಖೆಯ ಹುಳುಕು ಹೊರ ಬಂದಾವು ಎಂಬ ಭಯವೇ? ನನ್ನಲ್ಲೂ ದಾಖಲೆಗಳಿವೆ, ಬಿಚ್ಚಿದರೆ ಅವೇ ಸರ್ಟಿಫಿಕೇಟ್ ಕೋರ್ಸ್ಗಿಂತ ಬೃಹತ್ ಚಾಪ್ಟರ್ ಬಿಚ್ಚಲೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ. ಕಲಾಪವೆಂದರೆ ಉನ್ನತ ಶಿಕ್ಷಣ ಸಚಿವರಿಗೆ ಮೈ ಬೆಚ್ಚಗಾಗುತ್ತದಾ? ಅವರ ಕೌಶಲ್ಯ ಗೊತ್ತಿದೆ. ಅಕ್ರಮ ಮುಚ್ಚಿ ಹಾಕಿಕೊಳ್ಳಲು ಅಕ್ರಮ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೆ ಬೆಂಕಿ ಹಾಕಿಸಿದ್ದು, ಆಪರೇಷನ್ ಕಮಲದಲ್ಲೂ…
ಐವತ್ತು ವರ್ಷಗಳ ಹಿಂದೆ ತಮಿಳುನಾಡಿನ ದೇವಸ್ಥಾನದಿಂದ ಕಳವಾಗಿದ್ದ ಪಾರ್ವತಿ ದೇವಿಯ ವಿಗ್ರಹವು ನ್ಯೂಯಾರ್ಕ್ನಲ್ಲಿ ಪತ್ತೆಯಾಗಿದೆ. ಚೋಳರ ಕಾಲದ ಸುಮಾರು 12ನೇ ಶತಮಾನದ ತಾಮ್ರ ಮಿಶ್ರಲೋಹದ ವಿಗ್ರಹವು ಸುಮಾರು 52 ಸೆಂ.ಮೀ ಎತ್ತರವಿದ್ದು, ಇದರ ಮೌಲ್ಯ ಯುಸ್ ಡಾಲರ್ 212,575 (ಸುಮಾರು 1,68,26,143 ರೂ.) ಬೆಲೆ ಬಾಳುವ ವಿಗ್ರಹವು ಇದೀಗ ನ್ಯೂಯಾರ್ಕ್ನ ಬೋನ್ಹಮ್ಸ್ ಹರಾಜು ಹೌಸ್ನಲ್ಲಿ ಪತ್ತೆಯಾಗಿದೆ ಎಂದು ತಮಿಳುನಾಡು ವಿಗ್ರಹ ವಿಭಾಗದ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಎಂದು ಐಡಲ್ ವಿಂಗ್ ತಿಳಿಸಿದೆ. ತಮಿಳುನಾಡಿನ ಕುಂಭಕೋಣಂನ ತಂಡನ್ತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ ದೇವಸ್ಥಾನದಿಂದ ಈ ವಿಗ್ರಹ ನಾಪತ್ತೆಯಾಗಿತ್ತು. ಈ ಕುರಿತು 1971ರಲ್ಲಿ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿತ್ತು. 2019ರ ಫೆಬ್ರವರಿಯಲ್ಲಿ ಕೆ.ವಾಸು ಎಂಬ ವ್ಯಕ್ತಿಯ ಮತ್ತೊಮ್ಮೆ ದೂರು ನೀಡಿದ್ದು, ವಿಗ್ರಹ ವಿಭಾಗವು ಎಫ್ಐಆರ್ ದಾಖಲಿಸಿಕೊಂಡಿತ್ತು. ಐಡಲ್ ವಿಂಗ್ ಇನ್ಸ್ಪೆಕ್ಟರ್ ಎಂ ಚಿತ್ರಾ ಅವರು ತನಿಖೆಯನ್ನು ಕೈಗೆತ್ತಿಕೊಂಡ ನಂತರ, ವಿದೇಶದಲ್ಲಿರುವ ವಿವಿಧ ವಸ್ತು ಸಂಗ್ರಹಾಲಯಗಳು ಮತ್ತು ಹರಾಜು ಕೇಂದ್ರಗಳಲ್ಲಿ ಚೋಳರ ಕಾಲದ ಪಾರ್ವತಿ ವಿಗ್ರಹಗಳನ್ನು ಬ್ರೌಸ್…
ನವದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಇದರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ವೈರಸ್ ಹರಡುವುದನ್ನು ತಡೆಯಲು ಜನರು ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಈಗ ದೆಹಲಿಯಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಆದಾಗ್ಯೂ, ಕಡ್ಡಾಯ ಫೇಸ್ ಮಾಸ್ಕ್ ನಿಯಮವು ಖಾಸಗಿ ಕಾರಿನಲ್ಲಿ ಪ್ರಯಾಣಿಸುವಾಗ ಅನ್ವಯಿಸುವುದಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಕುಸಿತ ಕಂಡು ಬಂದಿದೆ. ದೆಹಲಿಯಲ್ಲಿ ಮಂಗಳವಾರದಂದು 2,495 ಕರೋನಾ ಪ್ರಕರಣಗಳು ವರದಿ ಆಗಿದ್ದರೆ, ಬುಧವಾರದಂದು 2,146 ಕರೋನಾ ಪ್ರಕರಣಗಳು ದಾಖಲಾಗಿದೆ. ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ಕರೋನಾವೈರಸ್ನಿಂದ 8 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ನಗರದ ಕೋವಿಡ್ ಪಾಸಿಟಿವಿಟಿ ದರವು ಶೇಕಡಾ 17.83…
ಹಾವೇರಿ : ಉತ್ತರ ಕರ್ನಾಟಕದಲ್ಲಿ ಜನಪ್ರಿಯ ಪಡೆದ ಹಬ್ಬ ಅಂದರೆ ಅದು ಕೊಬ್ಬರಿ ಹೋರಿ ಹಬ್ಬ. ಲಕ್ಷಾಂತ ಜನರ ನಡುವೆ ಭಯವಿಲ್ಲದೆ ವೇಗವಾಗಿ ಸಾಗೋ ಕೊಬ್ಬರಿ ಹೋರಿ ಕಂಡು ಹೋರಿ ಅಭಿಮಾನಿಗಳು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಾರೆ. ಈ ಹಬ್ಬದ ವೇಳೆ ಸಾವಿರಾರು ಜನ ಅಲ್ಲಿ ನೆರೆದಿರುತ್ತಾರೆ. ಈ ಭಾಗದ ಜನರ ಹೋರಿ ಹಬ್ಬ ಸಂಭ್ರಮವನ್ನು ಹೇಳತೀರದು. ನೆರೆದಿರುವ ಲಕ್ಷಾಂತ ಜನರ ನಡುವೆ ಭಯವಿಲ್ಲದೆ ವೇಗವಾಗಿ ಸಾಗೋ ಕೊಬ್ಬರಿ ಹೋರಿಗೆ ಅಭಿಮಾನಿಗಳು ಹೆಚ್ಚು. ಅಂಥಹ ಹೋರಿಗಳ ಸಾಲಲ್ಲಿ ವಾಸನ ಗ್ರಾಮದ ಬ್ರಹ್ಮ ಅನ್ನೋ ಹೋರಿ ಕೂಡಾ ಒಂದಾಗಿತ್ತು. ಕರ್ನಾಟಕದಲ್ಲಿ ನಡೆಯೋ ಪ್ರತಿ ಹೋರಿ ಹಬ್ಬದಲ್ಲಿ ವಾಸನ ಗ್ರಾಮದ ‘ಬ್ರಹ್ಮ’ ಅಭಿಮಾನಿಗಳ ಮನಸ್ಸು ಗೆದ್ದಿದ್ದ. ‘ಬ್ರಹ್ಮ ಇದ್ದಾನೆಂದರೆ ಆ ಹೋರಿ ಹಬ್ಬದ ಕಳೆ ಹೆಚ್ಚುತ್ತಿತ್ತು. ಆದರೆ ಈಗ ‘ಬ್ರಹ್ಮ ತಮಿಳುನಾಡ ಪಾಲಾಗಿದ್ದಾನೆ. ಹೌದು, ಕರ್ನಾಟಕದ ಹೈ ಸ್ಪಿಡ್ ಎಂದೇ ಪ್ರಖ್ಯಾತಿ ಪಡೆಡಿದ್ದ ಕೊಬ್ಬರಿ ಹೋರಿ ‘ಬ್ರಹ್ಮ ಈಗ ತಮಿಳುನಾಡಿನ ಪಾಲಾಗಿದೆ. ಹಾವೇರಿ ಜಿಲ್ಲೆ…
ನವದೆಹಲಿ : ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ(ಸಿಜೆಐ) ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಎನ್ವಿ ರಮಣ ಅವರು ನಿವೃತ್ತಿ ಹೊಂದಿದ್ದ ಕರಣ ಇವರನ್ನು ನೇಮಕ ಮಾಡಲಾಗಿದೆ. ನ್ಯಾಯಮೂರ್ತಿ ಲಲಿತ್ ಅವರು ಆಗಸ್ಟ್ 27 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭಾರತದ ಸಂವಿಧಾನದ 124 ನೇ ವಿಧಿಯ ಷರತ್ತು (2) ರ ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ, 27 ರಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ರಾಷ್ಟ್ರಪತಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಕಾನೂನು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ನ್ಯಾಯಮೂರ್ತಿ ಲಲಿತ್ ಅವರು ಕೇವಲ ಮೂರು ತಿಂಗಳಿಗಿಂತ ಕಡಿಮೆ ಅವಧಿಗೆ ಸಿಜೆಐ ಆಗಿ ಕಾರ್ಯನಿರ್ವಹಿಸಿಸಲಿದ್ದಾರೆ. ನವೆಂಬರ್ 8 ರಂದು ಅವರು 65 ನೇ ವರ್ಷಕ್ಕೆ ಕಾಲಿಡಲಿದ್ದಾರೆ, ಹೀಗಾಗಿ ನಿವೃತ್ತಿಹೊಂದಲಿದ್ದಾರೆ. ವರದಿ ಆಂಟೋನಿ ಬೇಗೂರು…
ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಇದೀಗ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಈಗ ಅವರ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸಲಾಗುತ್ತದೆ. ತಮ್ಮ ವಿರುದ್ಧ ದಾಖಲಾಗಿರುವ ದೂರುಗಳನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಸ್ವತಃ ನೂಪುರ್ ಶರ್ಮಾ ಅವರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು ಎಂದು ತಿಳಿಸೋಣ, ಇದೀಗ ನ್ಯಾಯಾಲಯವೂ ಅದೇ ದಿಕ್ಕಿನಲ್ಲಿ ತೀರ್ಪು ನೀಡಿದೆ. ‘ನೂಪುರ್ ಬಂಧನಕ್ಕೆ ನಿಷೇಧ : ದೆಹಲಿ ಹೈಕೋರ್ಟ್’ ಇದರೊಂದಿಗೆ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ನೂಪುರ್ ಬಂಧನಕ್ಕೆ ನಿಷೇಧ ಹೇರಲಾಗಿದೆ. ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವಂತೆ ನೂಪುರ್ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ನೂಪುರ್ ಶರ್ಮಾ ಜೀವಕ್ಕೆ ಅಪಾಯವಿದೆ! ದೆಹಲಿ ಪೊಲೀಸರು ಈಗ ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ನೂಪುರ್ ಶರ್ಮಾ ಅವರ ಜೀವಕ್ಕೆ ಅಪಾಯವಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಒಪ್ಪಿಕೊಂಡಿದೆ, ಇದನ್ನು ದೃಢಪಡಿಸುವ…
೨೩ ಬಾರಿ ಸಿಂಗಲ್ಸ್ ಗ್ರ್ಯಾಂಡ್ಸ್ಲ್ಯಾಮ್ ಗೆದ್ದುಕೊಂಡಿರುವ ಖ್ಯಾತ ಮಹಿಳಾ ಟೆನಿಸ್ ತಾರೆ, ಅಮೆರಿಕಾದ ಸೆರೆನಾ ವಿಲಿಯಮ್ಸ್ ಇದೀಗ ಟೆನಿಸ್ ಜೀವನಕ್ಕೆ ನಿವೃತ್ತಿಯ ಸನಿಹಕ್ಕೆ ಬಂದಿದ್ದಾರೆ. ಮುಂದೆ ನಡೆಯಲಿರುವ ಯುಎಸ್ ಓಪನ್ ಬಳಿಕ ಟೆನಿಸ್ ಜೀವನಕ್ಕೆ ಗುಡ್ಬೈ ಹೇಳಲಿದ್ದೇನೆ ಎಂದು ಸೆರೆನಾ ತಿಳಿಸಿದ್ದಾರೆ. ಗಾಯದ ಸಮಸ್ಯೆಯಿಂದ ಹಲವು ತಿಂಗಳ ಕಾಲ ಟೆನಿಸ್ನಿಂದ ದೂರ ಉಳಿದಿದ್ದ ಸೆರೆನಾ, ಕಳೆದ ಜೂನ್ನಲ್ಲಿ ನಡೆದ ವಿಂಬಲ್ಡನ್ಗೆ ಮರಳಿದ್ದರು. ಆದರೆ ಮೊದಲ ಪಂದ್ಯದಲ್ಲೇ ಸೋಲುಂಡು ಅಭಿಮಾನಿಗಳಲ್ಲಿ ಆಘಾತ ಮೂಡಿಸಿದ್ದರು. ಇದೀಗ ಸದ್ಯ ನಡೆಯುತ್ತಿರುವ ಟೊರಂಟೋ ಓಪನ್ನ ಮೊದಲ ಸುತ್ತಿನಲ್ಲಿ ಸ್ಪೇನ್ನ ನುರಿಯಾ ಪರಿಝಾಸ್ ಡಿಯಾಸ್ ಗೆಲುವು ಸಾಧಿಸಿ, ಎರಡನೇ ಸುತ್ತಿಗೆ ಪ್ರವೇಶಿಸಿದ ಬಳಿಕ ಸೆರೆನಾ ಅವರು ನಿವೃತ್ತಿಯ ಹೇಳಿಕೆ ಘೋಷಿಸಿದ್ದಾರೆ. ನಾನು ನಿವೃತ್ತಿ ಎಂಬ ಪದವನ್ನು ಎಂದಿಗೂ ಇಷ್ಟಪಟ್ಟಿಲ್ಲ. ಇದು ನನಗೆ ಆಧುನಿಕ ಪದದಂತೆ ಅನಿಸುವುದಿಲ್ಲ. ನಾನು ಇದನ್ನು ಪರಿವರ್ತನೆ ಎಂದು ಯೋಚಿಸುತ್ತಿದ್ದೇನೆ. ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ. ಬಹುಶಃ ನಾನು…
ದಾವಣಗೆರೆ, ಆ.19: ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ೫೦ರಲ್ಲಿ ಖಾಸಗಿ ಬಸ್ ಪಲ್ಟಿಯಾಗಿ 2೦ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ 2೦ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಪ್ರಯಾಣಿಸುತ್ತಿದ್ದ 2೦ ಮಂದಿ ಪೈಕಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ತಿಳಿದು ಬಂದಿದೆ. ಇನ್ನೂ ಗಾಯಾಳುಗಳನ್ನು ಜಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ಬಸ್ ಬೆಂಗಳೂರಿನಿಂದ ಸಿಂಧಗಿಗೆ ತೆರಳುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬಂಗಾಳಿ ನಟ ಸೈಬಲ್ ಭಟ್ಟಾಚಾರ್ಯ ಅವರು ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ಬಂಗಾಳಿ ನಟ ಸೈಬಲ್ ಭಟ್ಟಾಚಾರ್ಯ ಕೊಲ್ಕತ್ತಾದ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಾಯಾಳುವಾಗಿರುವ ನೋವಿನ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು.ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಂಗಾಳಿ ಧಾರಾವಾಹಿ ಪ್ರೋಥೋಮ ಕದಂಬಿನಿಯಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಸೈಬಲ್ ಭಟ್ಟಾಚಾರ್ಯ ಪ್ರಾದೇಶಿಕ ದೂರದರ್ಶನ ಉದ್ಯಮದಲ್ಲಿ ನಟನಾಗಿ ದೀರ್ಘಕಾಲ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚೆಗೆ ಅವರು ಕೆಲಸ ಹುಡುಕಲು ಹೆಣಗಾಡುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ವೃತ್ತಿಪರ ಹಿನ್ನಡೆಯಿಂದ ಖಿನ್ನತೆಗೆ ಒಳಗಾಗಿದ್ದ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬಲ್ ಭಟ್ಟಾಚಾರ್ಯ ಗಂಭೀರವಾಗಿ ಗಾಯಗೊಂಡಿರುವುದನ್ನು ಅವರ ಮನೆಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಅವರು ಹರಿತವಾದ ವಸ್ತುವಿನಿಂದ ಹೊಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಅವರನ್ನು ಚಿತ್ತರಂಜನ್ ಆಸ್ಪತ್ರೆಗೆ ಸಾಗಿಸಲಾಯಿತು. ಮೊದಲ ನೋಟದಲ್ಲಿ, ನಟ ತನ್ನ ಜೀವನವನ್ನು ಕೊನೆಗೊಳಿಸಲು…