Author: admin

ವರದಿ: ಚಂದ್ರಹಾದನೂರು ಮೈಸೂರು: ಇವತ್ತೇನಾದ್ರೂ ಕೋರೋನಾ ಲಾಕ್ ಡೌನ್ ನಾ ಅಥವಾ ಕರ್ನಾಟಕ ಬಂದ್ ಗಿಂದ್ ಏನಾದ್ರೂ ಆಗಿದ್ದೀಯಾ ಬಸ್ ಸ್ಟ್ಯಾಂಡ್ ನಲ್ಲಿ ಒಂದು ಕೆಂಪು ಬಸ್ ಕೂಡ ಕಾಣ್ತಿಲ್ವಲ್ಲ ಅಂತಿದ್ದೀರಾ. ಆಗಿದ್ರೇ ನಿಮ್ಮ ಊಹೆ ತಪ್ಪು ಸ್ವಾಮಿ. ಈ ತಾಲೂಕಿನಲ್ಲಿ ಬೃಹತ್ ಬಸ್ ನಿಲ್ದಾಣ ಇದೆ ಆದ್ರೂ ಕೂಡ ಪ್ರತಿದಿನ ಲಾಕ್ ಡೌನ್, ಬಂದ್ ಆಗಿರುವ ವಾತಾವರಣವೇ ಕಣ್ಣಿಗೆ ಕಾಣೋದು. ನಿಲ್ದಾಣಕ್ಕೆ ಬಂದೌರೆಲ್ಲ ಗಂಟೆಗಟ್ಟಲೇ ಕಾದರೂ ಬಸ್ಬರಲೇ ಇಲ್ಲ.ಈಗಲಾದ್ರೂ ಬಸ್ ಬರುತ್ತಾ ಸ್ವಾಮಿ ಎಂದು ಕೇಳೋದೇ ಆಯ್ತು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾರಿಗೆ ಸೌಲಭ್ಯ ಇಲ್ಲ ಅಂತ ಸುದ್ದಿ ಆಗೋದುಂಟು. ಅದ್ರೇ ಇದು ಒಂದು ತಾಲೂಕು ತಾಲೂಕಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲ ಅಂದ್ರೇ ನೀವು ನಂಬುವಿರ. ಆದರೂ ನೀವು ನಂಬಲೇ ಬೇಕು. ಹೌದು ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ಪ್ರತಿದಿನ ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಜನರು ಹೈರಾಣಾಗಿದ್ದಾರೆ.ಅದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದ್ರೇ ಇದು ನೋಡಿ. ಬಸ್…

Read More

ಡಾ.ವಡ್ಡಗೆರೆ ನಾಗರಾಜಯ್ಯ 8722724174 ಹಿಂದೊಮ್ಮೆ ಇದು ವಜ್ರಯಾನ ಕವಲಿನ ಬೌದ್ಧ ಕೇಂದ್ರವಾಗಿದ್ದು ಕಾಲಾನಂತರದಲ್ಲಿ ಕಾಪಾಲಿಕ ಶಾಕ್ತ ಕೇಂದ್ರವಾಗಿ, ಕಾಪಾಲಿಕದಿಂದ ಪಲ್ಲಟಗೊಂಡು ಭೈರವಾರಾಧಕ ನಾಥಸಿದ್ಧರ ನೆಲೆಯಾಗಿ, ಆನಂತರದಲ್ಲಿ ಬೌದ್ಧ- ಕಾಪಾಲಿಕ – ನಾಥ ಪಂಥಗಳು ಒಂದರೊಳಗೊಂದು ಬೆರೆತು ಬಹುರೂಪಿ ದೇಶಿ ಧಾರೆಗಳ ಸಂಗಮ ಕ್ಷೇತ್ರವಾಗಿ ರೂಪಾಂತರವಾಗಿರುವ ಅನೇಕ ಕುರುಹುಗಳನ್ನು ನಾನಿಲ್ಲಿ ಕಂಡುಕೊಂಡೆನು. ಹೆಂಜೇರು ಹೇಮಾವತಿಯ ಸಿದ್ದೇಶ್ವರನ ಆಲಯದ ಪೌಳಿಯಲ್ಲಿ ನಿರ್ಮಿಸಲಾಗಿರುವ ಉಪ ಆಲಯಗಳಲ್ಲಿ ಬೌದ್ಧ ಮತ್ತು ಕಾಪಾಲಿಕ ಪಂಥದ ಕುರುಹುಗಳೊಂದಿಗೆ ನಾಥ ಪಂಥದ ಕುರುಹುಗಳು ಈಗಲೂ ಉಳಿದುಕೊಂಡಿವೆ. ಹೆಂಜೇರು ಹೇಮಾವತಿ ಪ್ರಧಾನವಾಗಿ ಒಂದು ಶೈವ ಕೇಂದ್ರವಾಗಿದೆ. ಇಲ್ಲಿರುವ ಹೆಂಜೇರು ಸಿದ್ದೇಶ್ವರನನ್ನು ಜನಪದರು ಹೆಂಜೇರಪ್ಪ, ಹೆಂಜಾರಪ್ಪ, ಯಂಜಾರಪ್ಪ, ಹೆಂಜಾರ ಸಿದ್ದಪ್ಪ, ಹೆಂಜಾರು ಸಿದ್ದೇಶ್ವರ ಮುಂತಾದ ಹೆಸರುಗಳಿಂದ ಆರಾಧಿಸುತ್ತಾರೆ. ಈಗ ಹೇಮಾವತಿ ಎಂಬ ಹೆಸರಿನಿಂದ ಕರೆಯಲಾಗುತ್ತಿರುವ ಈ ಊರನ್ನು ಹೆಂಜೇರು (ಕನ್ನಡ) – ಪೆಂಜೇರು ಅಥವಾ ಪೆರುಂಚೇರೈ (ತಮಿಳು) ಹೆಸರುಗಳಿಂದ ಕರೆಯಲಾಗುತ್ತಿತ್ತೆಂದು ಇಲ್ಲಿನ ಸ್ಥಳನಾಮ ಚರಿತ್ರೆಯಿಂದ ತಿಳಿದುಬರುತ್ತದೆ. ಹೆಂಜೇರು ಅಂದರೆ ಅತಿ ಹೆಚ್ಚು ವಿಸ್ತಾರವಾಗಿ ಹಾಗೂ…

Read More

ಎಲ್ಲವೂ ಬದಲಾದ ಸ್ಥಿತಿಯಲ್ಲಿ ಶಿಕ್ಷಕವರ್ಗ ಮಾತ್ರ ಬದಲಾಗಿಲ್ಲ. ಸಮಾಜವನ್ನು ಸರಿದಾರಿಗೆ ತರುವ ಶಿಕ್ಷಕರಿಗೆ ಸಮಾಜವೇ ಬೇರೆದಾರಿಗೆ ಸೆಳೆಯುತ್ತಿದೆ ಎನ್ನುವುದೇ ವಾಸ್ತವದ ಸ್ಥಿತಿಗತಿ. ಇದನ್ನು ವಿವರಿಸುವಲ್ಲಿ ಹಲವಾರು ವಿಷಯಗಳು ಸಿಗುವಂಥದ್ದೇ ನಮಗೆ ಗಮನೀಯ ಮತ್ತು ವಿಪರ್ಯಾಸದ ಸಂಗತಿ. ಎಲ್ಲವೂ, ಒಳಿತು-ಕೆಡುಕುಗಳನ್ನು ಒಳಗೊಂಡಂತೆ ಶಿಕ್ಷಕ ಸಮುದಾಯವೂ ಸಹ ಒಳಗೊಂಡಿದೆ. ಹಿಂದೆಲ್ಲಾ ಗುರುವಿನ ಸ್ಥಾನವನ್ನು ಸಾಮಾನ್ಯರು ತುಂಬುವಂತಿರಲಿಲ್ಲ, ಅದಕ್ಕೆ ಒಂದು ಮೌಲ್ಯಯುತ ನೈತಿಕ ವ್ಯಕ್ತಿತ್ವವಿರಬೇಕಾಗಿತ್ತು, ನಂತರವೇ ಬೋಧನೆ ಎಂಬುವುದು ಜರಗುತ್ತಿತ್ತು. ಹಾಗಾಗಿಯೂ ಸ್ವತಃ ಯಾರ್ಯಾರೋ ಆ ಹುದ್ದೆಯನ್ನು ಬಯಸುತ್ತಿರಲಿಲ್ಲ. ಆ ಹುದ್ದೆಗೆ ತಾನು ಸೂಕ್ತ ಮತ್ತು ಪ್ರಾಮಾಣಿಕ ಕರ್ತವ್ಯನಿಷ್ಠನಾಗಿರುವೆ ಎನಿಸಿದಾಗಲೇ ಆಸಕ್ತಿಗನುಗುಣವಾಗಿ ಮತ್ತು ಅಭ್ಯಾಸ ಪೂರ್ಣವಾಗಿ ಆ ಗುರುಸ್ಥಾನವನ್ನು ಅಲಂಕರಿಸುತ್ತಿದ್ದರು‌. ಆದರೆ ಈಗ ಹಾಗಲ್ಲ, ಪದವಿಗಳನ್ನು ಹೊಂದಿದರೆ ಸಾಕು ಅವರೆಲ್ಲರೂ ಶಿಕ್ಷಕರಾಗಲು ಒಂದು ವಿಧದಲ್ಲಿ ಅರ್ಹರೇ. ಇನ್ನೊಂದು ಪ್ರಮುಖ ವಿಷಯ ಎಂದರೆ ಆಗಿನ‌ ಗುರುಗಳಿಗೆ ಒಂದು ಸೂಚ್ಯವಾದ ವೇಷಭೂಷಣ, ನಡೆ-ನುಡಿ, ಜೀವನ ಶೈಲಿ ಎಲ್ಲವೂ ಇತ್ತು. ಯಾರೇ ಅವರನ್ನು ಕಂಡರೂ ತಕ್ಷಣ ಹೇಳಿಬಿಡುತ್ತಿದ್ದರು ಇವರು ಗುರುಗಳು…

Read More

ವರದಿ: ಚಂದ್ರಹಾದನೂರು ಹೆಚ್.ಡಿ.ಕೋಟೆ :ಇಂದು ಬೆಳಿಗ್ಗೆ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರು  ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿದೇ೯ಶಕರಾದ ಜಯಪ್ರಕಾಶ್ ರವರನ್ನು ಭೇಟಿ ಮಾಡಿ. ನಮ್ಮ ತಾಲ್ಲೂಕಿನ ಕೆರೆಗಳು ಬತ್ತಿ ಹೋಗಿವೆ. ಕೆರೆಗೆ ನೀರು ತುಂಬಿಸುವ ವಿಚಾರವನ್ನು ಪ್ರಸ್ತಾಪಿಸಿದಾಗ  ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಭರವಸೆ ನೀಡಿದರು. ಜೊತೆಯಲ್ಲಿ ಸರಗೂರು ತಾಲ್ಲೂಕಿನ ಕಪಿಲ ನದಿ ಹಾಗೂ ನುಗು ಜಲಾಶಯದ ಮೇಲ್ದಂಡೆಯಲ್ಲಿನ  ಹಳೆಯೂರು ಬೆಜ್ಜಲಪುರ ಹುಲ್ಲೇಮಾಳ ದೇವಲಾಪುರ ವಲ್ಲಹಳ್ಳಿ ಮಟಕೆರೆ ಹಿರೇಹಳ್ಳಿ ಮೊಳೆಯೂರು ಅಳಗಂಚಿ ಕಾಟವಾಳು ಸಾಗರೆ ಚೆನ್ನೀಪುರ ಹಂಚೀಪುರ ರಾಚಯ್ಯನ ಅವಳಿ ಕೆರೆಗುರುವಯ್ಯನ ಕೆರೆ ನರಸೀಪುರ ಹಾಗೂ ಇನ್ನಿತರೆ ಗ್ರಾಮಗಳ ಬರಿದಾದ ಕೆರೆಗಳಿಗೆ ಕುಡಿಯುವ ನೀರಿಗಾಗಿ ಏತ ನೀರಾವರಿ ಯೋಜನೆಗೆ ಅನುದಾನ ನೀಡುವಂತೆ ಕೋರಿದರು. ಮೈಸೂರು ಮಾನಂದವಾಡಿ ರಸ್ತೆ ಹೈರಿಗೆ ಗ್ರಾಮದಿಂದ ನಾಲೆ ಮುಖಾಂತರ ಹಳೆ ಹೈರಿಗೆ ಗ್ರಾಮಕ್ಕೆ ಹಾದುಹೋಗುವ ರಸ್ತೆ ತೀವ್ರ ಹದಗೆಟ್ಟಿರುವುದರಿಂದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲು ಮನವಿ ಮಾಡಿರುತ್ತಾರೆ. ಇದರ…

Read More

 ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವ್ಯಾಪ್ತಿಯ ರಾಜೇನಹಳ್ಳಿ ಸಂಪರ್ಕ ದ ಸೇತುವೆ ಕುಸಿದು ಸಂಪೂರ್ಣ ಸ್ಥಳೀಯ ಹೊಲ ಗದ್ದೆ ಗಳಿಗೆ ನೀರು ಹರಿದು ಲಕ್ಷಾಂತರ ರೂ ಬೆಳೆ ನಷ್ಟ ಸಂಭವಿಸಿದ್ದರು ಸಹ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರಾಜೇನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಸುರಿದ ಮಳೆಗೆ ಕುಸಿದ ಸೇತುವೆ.ಇತ್ತೀಚೆಗೆ ಸುರಿದ ಮಳೆಯಿಂದ ಸೇತುವೆ ಕುಸಿದು ಸಂಚಾರಕ್ಕೆ ತೊಂದರೆಯಾದ ಹಿನ್ನಲೆಯಲ್ಲಿ ಸ್ವತಃ ಗ್ರಾಮಸ್ಥರು ನೀರು ಪೋಲಾಗುವುದನ್ನು ತಡೆಯವಲ್ಲಿ ಸಾಕಷ್ಟು ಪರಿಶ್ರಮ ವಹಿಸಿದರು ಸಹ ಯಾವುದೇ ಪ್ರಯೋಜನ ವಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕ ಮಣ್ಣಿನ ತಡೆಗೋಡೆ ನಿರ್ಮಾಣ ಕ್ಕೆ ಮುಂದಾದರು ಇನ್ನೂ ಸ್ಥಳಕ್ಕೆ ಶಾಸಕ ಮಸಾಲೆ ಜಯರಾಂ ಭೇಟಿ ನೀಡಿ ಸೇತುವೆ ಪರಿಶೀಲನೆ ನೆಡೆಸಿ ಕಾಮಗಾರಿ ಪ್ರಾರಂಭ ದ ಬಗ್ಗೆ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಕಾಮಗಾರಿ ಪ್ರಾರಂಭ ಮಾಡುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು. ಶಾಸಕರ ಮಾತಿಗೆ ಕಿಮ್ಮತ್ತು ನೀಡದ ಲೋಕೋಪಯೋಗಿ ಅಧಿಕಾರಿಗಳು.ತುರುವೇಕೆರೆ…

Read More

ಸರಗೂರು: ತಾಲ್ಲೂಕಿನ ಕೊತ್ತೇಗಾಲ ಗ್ರಾ.ಪಂ.ನ ಕೊತ್ತೇಗಾಲ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ವತಿಯಿಂದ ಶ್ರೀಗಂಧದ ಮರ ಬೆಳೆಯಲು ರೈತ ಪಾಠಶಾಲೆ ಕ್ಷೇತ್ರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್. ಶಿವಣ್ಣ ವಹಿಸಿದ್ದರು. ನಂತರ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ನಿವೃತ್ತಿ ಅಧಿಕಾರಿಗಳಾದ ಡಿ.ಎ.ಎಫ್. ಪ್ರಸನ್ನಕುಮಾರ್  ಹಾಗೂ ಮುಖಂಡರು ಸೇರಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಮಾಡಿದರು. ಕಾರ್ಯಕ್ರಮ ಕುರಿತು ನಿವೃತ್ತ ಅರಣ್ಯ ಇಲಾಖೆ ಡಿ.ಎ.ಎಫ್. ಪ್ರಸನ್ನಕುಮಾರ್ ಮಾತನಾಡಿ, ಇಲಾಖೆಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳನ್ನು ವಿವಿಧ ಮರಗಳು ಸಿಗುತ್ತವೆ ಹಾಗೂ ಶ್ರಿಗಂಧ ಸಸಿಗಳನ್ನು ರೈತರು ಹಾಕಿದ್ದಾರೆ ತುಂಬಾ ಲಾಭ ಪಡೆಯಲು ಅವಕಾಶವಾಗುತ್ತದೆ ಎಂದರು. ಡಿ ಎ ಎಫ್ ಅವರ  ಭಾಷಣವನ್ನು ಕೇಳಿ ಸ್ಥಳದಲ್ಲೇ 60 ಜನ ರೈತರು  ಅರಣ್ಯ ಕೃಷಿ ಮಾಡಲು ಅಧಿಕಾರಿಗಳ ಎದುರಿಗೆ ಅರಣ್ಯ ಇಲಾಖೆಯ ಸಸಿಗಳನ್ನು ನೆಟ್ಟು ಮಾಡುತ್ತೇವೆ ಎಂದು ರೈತರು ಹೇಳಿದರು. ನಂತರ ಕೃಷಿ ಇಲಾಖೆ ಅಧಿಕಾರಿಗಳಾದ ಮಹೇಶ ಕುಮಾರ್ ಇಲಾಖೆಯಲ್ಲಿ ಶ್ರೀಗಂಧದ ಬೆಳೆಯುವ ಬಗ್ಗೆ ಸೌಲಭ್ಯದ ಬಗ್ಗೆ…

Read More

ಕುಣಿಗಲ್: ನಿಮ್ಮ  ವ್ಯಾಪಾರ, ಉದ್ದಿಮೆಗೆ ಇನ್ನೂ ಲೈಸೆನ್ಸ್ ಮಾಡಿಸಿಲ್ಲವೇ? ಹಾಗಿದ್ದರೆ, ಈಗ ಕಚೇರಿಗೆ ಸುತ್ತಾಡದೇ ನೀವು ಕುಳಿತಲ್ಲಿಂದಲೇ ನೀವು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ ಲೈನ್ ನಲ್ಲಿಯೇ ನಿಮಗೆ ಲೈಸೆನ್ಸ್ ದೊರೆಯುತ್ತದೆ. ಈ ಸೌಲಭ್ಯ ಕುಣಿಗಲ್ ನಲ್ಲಿ ಕೂಡ ಆರಂಭವಾಗಿದೆ. ನಿಮ್ಮ ವ್ಯಾಪಾರ ಉದ್ದಿಮೆಗಳಿಗೆ ಲೈಸೆನ್ಸ್ ಇಲ್ಲವಾದರೆ, ನೀವು ದಂಡ ಪಾವತಿಸಬೇಕಾಗುತ್ತದೆ. ಈವರೆಗೆ ಯಾರೆಲ್ಲ ವ್ಯಾಪಾರ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುತ್ತಿದ್ದಾರೋ ಅಂತಹವರು ಶೀಘ್ರವೇ ನಿಮ್ಮ ವಿವರಗಳೊಂದಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಲೈಸೆನ್ಸ್ ಪಡೆದುಕೊಳ್ಳಬಹುದಾಗಿದೆ. ಈ ಲಿಂಕ್ ಗೆ ಕ್ಲಿಕ್ ಮಾಡಿ http://www.mrc.gov.in/TradeLicense/login ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ನಲ್ಲಿಯೇ ಅರ್ಜಿ ಭರ್ತಿ ಮಾಡಿ, ಅರ್ಜಿ ಸಲ್ಲಿಸಿ. ನೀವು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಲು ಕೂಡ ಇದೇ ವೆಬ್ ಸೈಟ್ ನಲ್ಲಿ ಅವಕಾಶವಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ…

Read More

ತುಮಕೂರು: ಇಲ್ಲಿನ ಅಮಾನಿಕೆರೆ ಉದ್ಯಾನವನದಲ್ಲಿ  ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಅಖಿಲ ಕರ್ನಾಟಕ ಡಾಕ್ಟರ್ ಜಿ. ಪರಮೇಶ್ವರ್ ಯುವಸೇನೆ ಹಾಗೂ ದಲಿತಪರ ಪ್ರಗತಿಪರ ಸಂಘಟನೆಗಳಿಂದ ಬುಧವಾರ ಟಿಪ್ಪು ಸುಲ್ತಾನ್ ಜಯಂತೋತ್ಸವ ಆಚರಿಸಲಾಯಿತು. ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಟಿಪ್ಪು ಸುಲ್ತಾನ್ ಜಯಂತೋತ್ಸವ ಆಚರಿಸಲಾಯಿತು. ಇದೇ ವೇಳೆ ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ್ ಯುವ ಸೇನೆ ಜಿಲ್ಲಾ ಅಧ್ಯಕ್ಷರು ನರಸಿಂಹಮೂರ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷರು ಪಿ. ಎನ್. ರಾಮಯ್ಯ. ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕರು ಟಿ ಆರ್ ನಾಗೇಶ್ ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾ ಗೌರವಧ್ಯಕ್ಷರು ಗುರುಪ್ರಸಾದ್ ಟಿ ಆರ್ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್.ಕೆ. ನಿಧಿ ಕುಮಾರ್. ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾ…

Read More

ತುಮಕೂರು: ಯುವ ಕಲಾವಿದ ನಾಗೇಶ್  ವಿ. ಇವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವು ನಗರದ ಡಾ.ಗುಬ್ಬಿ ವೀರಣ್ಣ ಸ್ಮಾರಕ ಭವನದ ಕಲ್ಪಕುಂಜ ಕಲಾಗ್ಯಾಲರಿಯಲ್ಲಿ  ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಶ್ರೀನಿವಾಸ್,  ಕಲೆಗಳು ನಶಿಸಿ ಹೋಗಬಾರದು. ಇನ್ನೂ ಹೆಚ್ಚಾಗಿ ಚಿಗುರೊಡೆಯಲಿ. ಮುಂದೆ ಚಿತ್ರ ಕಲೆಯು ಶಿಲ್ಪ ಕಲೆಯು ನಮಗೆ ಮುಖ್ಯವಾಗಿದೆ ಎಂದು ಪ್ರೋತ್ಸಾಹಕರ ನುಡಿಗಳನ್ನಾಡಿದರು. ಹಿರಿಯ ಚಿತ್ರಕಲಾ ಕಲಾವಿದ ಹಾಗೂ ನಿವೃತ್ತ ಶಿಕ್ಷಕರಾದ ಎಂ.ಎನ್.ಸುಬ್ರಹ್ಮಣ್ಯ ಮಾತನಾಡಿ, ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸಬೇಕಿದೆ ಎಂದರು. ಇದೇ ವೇಳೆ ಹಲವು ಬಗೆಯ ರೇಖಾ ಚಿತ್ರಗಳ ಬಗ್ಗೆ ಅವರು ಮಾಹಿತಿ ನೀಡಿದರು. ಬಾಣಾವಾರ ವಿದ್ಯವರ್ಧಕ ಸಂಘ ಹಾಗೂ ಕರ್ನಾಟಕ ಚಿತ್ರಕಲಾ ಶಿಕ್ಷಕ ಸಂಘದ ನಿರ್ದೇಶಕ, ಚಿತ್ರಕಲಾ ಶಿಕ್ಷಕರಾಗಿರುವ ಡಿ.ಭೂತಯ್ಯನವರು ಮಾತನಾಡಿ, ಸಂಗೀತ ಸಾಹಿತ್ಯಕ್ಕೆ ಮತ್ತು ಕಲೆಗೆ ಪ್ರಾಮುಖ್ಯತೆ ಇದೆ. ಸಾಧನೆಗಳು ಹೆಚ್ಚಾಗಿರಬೇಕು. ಕಡಿಮೆಯಾಗಿರಬಾರದು. ಕಲೆಯು ಬೆಲ್ಲದ ಸವಿಯಂತೆ ತುಂಬಾ ಸಿಹಿಯಾಗಿರುತ್ತದೆ ಎಂದು ಕಲೆಯ ಬಗ್ಗೆ ವಿವರಿಸಿದರು.…

Read More

ವರದಿ: ಚಂದ್ರ ಹಾದನೂರು ಹೆಚ್.ಡಿ.ಕೋಟೆ: ತಾಲ್ಲೂಕಿನ ಹಾದನೂರು ಗ್ರಾ.ಪಂ.ದಲ್ಲಿ ಶುದ್ಧ ಕುಡಿಯುವ ನೀರು ಘಟಕವೊಂದಿದ್ದು, ಸ್ಥಾಪನೆಯಾಗಿ 6 ವರ್ಷಗಳಾದರೂ ಈ ಘಟಕ ಯಾವ ಇಲಾಖೆಯವರ ಉಸ್ತುವಾರಿಯಲ್ಲಿದೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಇಲ್ಲಿನ ಸ್ಥಳೀಯರು ದೂರುತ್ತಿದ್ದಾರೆ. ಸ್ಥಳೀಯ ಪಂಚಾಯತ್ ಬಳಿ ಈ ಬಗ್ಗೆ ವಿಚಾರಿಸಿದರೆ, ನಮಗೆ ಇನ್ನೂ ಉಸ್ತುವಾರಿ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಈ ಘಟಕದಲ್ಲಿ ನೀರು ಶುದ್ಧೀಕರಣ ಕೂಡ ಆಗುತ್ತಿಲ್ಲ. ಬೋರ್ ವೇಲ್ ನಿಂದ ಘಟಕಕ್ಕೆ ನೀರು ಹೋಗುತ್ತದೆ. ನೀರು ಅಲ್ಲಿ ಫಿಲ್ಟರ್ ಆಗುವುದಿಲ್ಲ ಎನ್ನಲಾಗುತ್ತಿದೆ. ಇನ್ನೂ ಘಟಕದ ಸುತ್ತ ಕಂಪೌಂಡ್ ಕೂಡ ಇಲ್ಲ. ಘಟಕದ ಸುತ್ತ ಮದ್ಯದ ಬಾಟಲಿಗಳು, ಪ್ಯಾಕೆಟ್ ಗಳು ಬಿದ್ದಿವೆ. ಇದೇ ಪ್ರದೇಶದಲ್ಲಿ ಕಿಡಿಗೇಡಿಗಳು ಮೂತ್ರ ವಿಸರ್ಜನೆಯೂ ಮಾಡುತ್ತಿದ್ದಾರೆ. ಹೀಗಾಗಿ ಘಟಕದ ಸಮೀಪ ಹೋದಾಗಲೇ ದುರ್ವಾಸನೆ ಮೂಗಿಗೆ ಬಡಿಯುತ್ತದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ. ಶುದ್ಧ ಕುಡಿಯುವ ನೀರು ಘಟಕಕ್ಕೆ ಯಾರು ಅಧಿಕಾರಿಗಳು ಎನ್ನುವುದು ಗೊತ್ತಿಲ್ಲ. ಯಾರನ್ನು ಪ್ರಶ್ನಿಸಬೇಕು ಎಂತಲೂ ಗೊತ್ತಿಲ್ಲ.  ನೀರಿಗೆನಿಂದ ಬಂದ ಹಣವನ್ನು  ಅಧಿಕಾರಿಗಳು ತೆಗೆದುಕೊಂಡು…

Read More