Subscribe to Updates
Get the latest creative news from FooBar about art, design and business.
- ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಕಾಶ್ ರಾಜ್ ರಾಯಭಾರಿ, ಮಹಿಳಾ ಸಬಲೀಕರಣವೇ ಈ ಬಾರಿಯ ‘ಥೀಮ್’
- ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ನನ್ನ ಪೂರ್ಣ ಸಹಮತವಿದೆ: ಸಿಎಂ ಸಿದ್ದರಾಮಯ್ಯ
- ಹಾವೇರಿ: 7ಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನ, ಚಹಾ ಕುಡಿದು ಹೋದ ಕಳ್ಳರು!
- ಕೊರಟಗೆರೆ: ಜಿ.ಎಂ.ಕಾಮರಾಜ್ ಪಶ್ಚಿಮ ರೈಲ್ವೆ ಬೋರ್ಡ್ ನಿರ್ದೇಶಕರಾಗಿ ಆಯ್ಕೆ
- ಭ್ರಷ್ಟಾಚಾರ ಆರೋಪ: ಶ್ರವಣೂರು ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ತಮಟೆ ಚಳವಳಿ
- ಚಿರತೆ ದಾಳಿಯಿಂದಾಗಿ ಮಹಿಳೆ ಸಾವು: ದಾಳಿ ನಡೆದ 24 ಗಂಟೆ ಒಳಗೆ ಚಿರತೆ ಸೆರೆ
- ತಿಪಟೂರು: ಡಿಸೆಂಬರ್ 24ರಂದು ‘ಸಾಂಸ್ಕೃತಿಕ ವೈಭವ’ ಬೃಹತ್ ಕಾರ್ಯಕ್ರಮ
- ಪಾವಗಡ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
Author: admin
ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪ್ರವೇಶಿಸಲಿದೆ. ವಾಸ್ತವವಾಗಿ, ಓಲಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಲಿದೆ. Ola S1 ಮತ್ತು Ola S1 Pro ಬಿಡುಗಡೆಯ ನಂತರ ಕಂಪನಿಯು ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ನ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಹೊಸ ಸ್ಕೂಟರ್ ಅನ್ನು ತರಲಿದೆ ಎಂದು ಓಲಾ ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ವೀಡಿಯೊ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಕಂಪನಿಯು ತನ್ನ S1 ಪ್ರೊ ಇ-ಸ್ಕೂಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ಕೇವಲ ಒಂದು ವರ್ಷದ ನಂತರ ಆಗಸ್ಟ್ 15 ರಂದು ಹೊಸ ಉತ್ಪನ್ನವನ್ನು ತರಲಿದೆ ಎಂಬು ಗಮನಾರ್ಹ ಸಂಗತಿ. ಓಲಾ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾಹಿತಿ ನೀಡಿದ ಕಂಪನಿಯ ಸಿಇಒ ಭವಿಶ್ ಅಗರ್ವಾಲ್, “ಆಗಸ್ಟ್ 15 ರಂದು, ನಾವು ನಮ್ಮ ಹಸಿರು ಇವಿಯನ್ನು ಪ್ರಸ್ತುತಪಡಿಸುತ್ತೇವೆ” ಎಂದು ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ. ಈ ವೀಡಿಯೊ ಟ್ವೀಟ್ನಲ್ಲಿ ಟೀಸರ್ ಎಲೆಕ್ಟ್ರಿಕ್ ಸ್ಕೂಟರ್…
ಬೆಂಗಳೂರು : ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎಲ್ಲ ವರ್ಗಗಳಿಗೂ ವಯೋಮಿತಿಯಲ್ಲಿ 2 ವರ್ಷ ಏರಿಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1, ವಿಕಲಚೇತನರಿಗೆ 47 ವರ್ಷ ಮೀರಬಾರದು. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗೆ 45 ವರ್ಷ ಹಾಗೂ ಸಾಮಾನ್ಯ ವರ್ಗಗಳಿಗೆ 42 ವರ್ಷ ಮೀರಬಾರದು. ಇನ್ನೂ ಶಿಕ್ಷಕರಾಗಿ ಆಯ್ಕೆಯಾಗಲು ಇದ್ದ ಕಟ್ ಆಫ್ಅಂಕಗಳನ್ನು 60 ರಿಂದ 50 ಕ್ಕೆ ಇಳಿಸಲು ಸರ್ಕಾರ ಮುಂದಾಗಿದೆ. ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು – ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಓಬಿಸಿ ಮೀಸಲಾತಿ ಸಂಬಂಧ ಭಕ್ತವತ್ಸಲ ಕಮಿಟಿ ಶಿಫಾರಸು ಅನುಮೋದನೆ ನೀಡಿದೆ. ಶೇ. 50 ಕ್ಕೂ ಮೀರದಂತೆ ಮೀಸಲಾತಿ ನೀಡಲಾಗುತ್ತಿದೆ. ಎಸ್ಸಿ, ಎಸ್ಟಿ, ಓಬಿಸಿ ಶೇಕಡಾ 50 ಮೀರುವಂತಿಲ್ಲ ಎಂದು ತಿಳಿಸಿದೆ. ವರದಿಯ ಪ್ರಾಥಮಿಕ ಶಿಫಾರಸುಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಶೇ.…
ಬೆಂಗಳೂರು : ಇಲ್ಲಿಯವರೆಗೂ ದೇಶದ ಕೆಂಪು ಕೋಟೆ ಸೇರಿದಂತೆ ಸರ್ಕಾರಿ ಕಟ್ಟಡಗಳು, ಸಂಘಸಂಸ್ಥೆಗಳಲ್ಲಿ ಖಾದಿ ರಾಷ್ಟ್ರಧ್ವಜಗಳು ದೇಶದ ಹೆಮ್ಮೆಯ ಪ್ರತೀಕವಾಗಿ ರಾರಾಜಿಸುತ್ತಿದ್ದವು. ಇದೀಗ ಕೇಂದ್ರ ಸರ್ಕಾರ ಧ್ವಜ ಸಂಹಿತೆಯಲ್ಲಿ ಮಾಡಿದ ತಿದ್ದುಪಡಿಯಿಂದಾಗಿ ಕೈಯಲ್ಲಿ ನೂಲುವ ಖಾದಿ ತ್ರಿವರ್ಣ ಧ್ವಜಗಳೇ ಅಲ್ಲದೆ ಯಂತ್ರಗಳಲ್ಲಿ ಮಾಡುವ ಪಾಲಿಸ್ಟರ್ ಧ್ವಜಗಳನ್ನು ಕೂಡ ಬಳಸಲು ಅನುಮತಿಸಿದೆ. ಅಲ್ಲದೆ ಹರ್ ಘರ್ ತಿರಂಗ ಅಭಿಯಾನದಡಿ ರಾತ್ರಿ ಹಗಲು ಸಾರ್ವಜನಿಕವಾಗಿ ಮನೆಗಳಲ್ಲಿ ಪ್ರದರ್ಶಿಸಲು ಬಯಸಿದರೆ, ಇದಕ್ಕೆ ಅನುಮತಿ ನೀಡುವ ತಿದ್ದುಪಡಿಯನ್ನೂ ಮಾಡಲಾಗಿದೆ. ಗಾಂಧಿ ಭವನ ಬಳಿಯ ಖಾದಿ ಎಂಪೋರಿಯಂ ವ್ಯವಸ್ಥಾಪಕ ಸಂಗಮೇಶ್ವರ್ ಮಠ್, ಮಾರುಕಟ್ಟೆಗಳಲ್ಲಿ ಪಾಲಿಸ್ಟರ್ ಧ್ವಜಗಳು ಕೈಗೆಟಕುವ ದರದಲ್ಲಿದೆ ಎಂಬ ಕಾರಣಕ್ಕಾಗಿ ಹೆಚ್ಚು ಮಾರಾಟ ನಡೆಯುತ್ತಿವೆ. ಈ ನಡುವೆ ಖಾದಿ ವಸ್ತ್ರದ ತ್ರಿವರ್ಣ ಧ್ವಜಕ್ಕೂ ಉತ್ತಮ ಬೇಡಿಕೆ ಇದೆ. ಈ ವರ್ಷ ಮನೆ ಮನೆ ತ್ರಿವರ್ಣ ಧ್ವಜದ ಅಭಿಯಾನದ ಹಿನ್ನಲೆ ಪ್ರತೀ ವರ್ಷಕ್ಕಿಂತ ಈ ಬಾರಿ ಮೂರು ಪಟ್ಟು ಹೆಚ್ಚು ವ್ಯಾಪಾರ ನಡೆದಿದೆ. ಈ ವರ್ಷ 34 ಲಕ್ಷ…
ಇಂದು ದೇಶದ ಹಲವು ರಾಜ್ಯಗಳಲ್ಲಿ ಭಾತೃತ್ವದ ಸಂಕೇತವಾಗಿರುವ ರಕ್ಷಾಬಂಧನ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟಿದ್ದಾರೆ. ಇಂತಹುದರಲ್ಲಿ ರಾಜಸ್ಥಾನದ ರಾಜಸಮಂಜ್ ಜಿಲ್ಲೆಯಿಂದ ಒಂದು ವಿಶಿಷ್ಟ ಸುದ್ದಿಯೊಂದು ಹೊರಹೊಮ್ಮಿದೆ. ವಾಸ್ತವದಲ್ಲಿ ಅಲ್ಲಿನ ಓರ್ವ ಮಹಿಳೆಯು ಒಂದು ಚಿರತೆಯ ಕೈಗೆ ರಾಖಿಯನ್ನು ಕಟ್ಟಿ ರಕ್ಷಾಬಂಧನ ಉತ್ಸವವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದ್ದಾರೆ. ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ರಾಖಿ ಕಟ್ಟುವ ಸಂದರ್ಭದಲ್ಲಿ ಚಿರತೆ ಮಹಿಳೆಗೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಿಲ್ಲ ಎಂಬುದು ಇಲ್ಲಿ ತುಂಬಾ ವಿಶೇಷವಾಗಿದೆ. ಚಿರತೆಗೆ ರಾಖಿ ಕಟ್ಟಿದ ಮಹಿಳೆ ರಾಜಸಮಂಜ್ ಜಿಲ್ಲೆಯ ಖೇಡಾ ಗ್ರಾಮದ ನಿವಾಸಿಯಾಗಿರುವ ಲೀಲಾ ಹೆಸರಿನ ಮಹಿಳೆ ತನ್ನ ಪತಿಯೊಂದಿಗೆ ತವರು ಮನೆಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಗಾಯಗೊಂಡ ಒಂದು ಚಿರತೆ ರಸ್ತೆಯ ಪಕ್ಕದಿಂದ ಸಾಗುತ್ತಿರುವುದನ್ನು ಆಕೆ ಗಮನಿಸಿದ್ದಾಳೆ. ಆಗ ವಾಹನವನ್ನು ನಿಲ್ಲಿಸಲು ಹೇಳಿದ ಮಹಿಳೆ ಚಿರತೆಯ ಮುಂದಿನ ಕೈಗೆ ರಾಖಿಯನ್ನು…
ಮುಂಬೈ: ಸಾಲ ವಸೂಲಿ ವೇಳೆ ರಿಕವರಿ ಏಜೆಂಟರು ಗ್ರಾಹಕರಿಗೆ ಬೆದರಿಕೆ ಹಾಕುವುದು ಮತ್ತು ಬೆಳಗ್ಗೆ 8 ಗಂಟೆಯಿಂದ ಮೊದಲು ಮತ್ತು ರಾತ್ರಿ 7 ಗಂಟೆಯ ನಂತರ ಪೋನ್ ಮಾಡುವಂತಿಲ್ಲವೆಂದು ಆರ್ಬಿಐ ಹೊಸ ಸುತ್ತೋಲೆ ಬಿಡುಗಡೆ ಹೊರಡಿಸಿದ್ದು, ಖಡಕ್ ಎಚ್ಚರಿಕೆ ನೀಡಿದೆ. ಬ್ಯಾಂಕ್ ಗಳು, ಎನ್ಬಿಎಫ್ಸಿಗಳು ಮತ್ತು ಎಆರ್ಸಿಗಳು ಸೇರಿದಂತೆ ನಿಯಂತ್ರಿತ ಘಟಕಗಳಿಗೆ ಹೆಚ್ಚುವರಿ ಸೂಚನೆ ನೀಡುವಾಗ ರಿಸರ್ವ್ ಬ್ಯಾಂಕ್ (RBI) ಸಾಲ ವಸೂಲಾತಿಗೆ ಸಂಬಂಧಿಸಿದಂತೆ ವಸೂಲಾತಿ ಏಜೆಂಟ್ಗಳು ತನ್ನ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದೆ. ಈ ಹಿಂದೆಯೇ ಹೊರಡಿಸಲಾಗಿರುವ ನಿಯಮಗಳನ್ನು ಸಂಸ್ಥೆಗಳು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಸಾಲ ವಸೂಲಿ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಪ್ರತಿನಿಧಿಗಳು ಬಲಪ್ರಯೋಗ, ಕಿರುಕುಳ ನೀಡುವಂಥ ಕ್ರಮಗಳನ್ನು ಅನುಸರಿಸುವಂತೆ ಇಲ್ಲ. ಅನಪೇಕ್ಷಿತ ಸಂದೇಶಗಳನ್ನು, ಅನಾಮಧೇಯರ ಹೆಸರಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮೊದಲು ಮತ್ತು ರಾತ್ರಿ 7 ಗಂಟೆಯ ಬಳಿಕ ಫೋನ್ ಮಾಡುವಂತಿಲ್ಲವೆಂದು ತನ್ನ ಸುತ್ತೋಲೆಯಲ್ಲಿ ಆರ್ಬಿಐ…
ನವದೆಹಲಿ: ಪಶ್ಚಿಮ ನ್ಯೂಯಾರ್ಕ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಸಲ್ಮಾನ್ ರಶ್ದಿಗೆ ಅಪರಿಚಿತ ವ್ಯಕ್ತಿಯೊಬ್ಬ ಚಾಕು ಇರಿದು ಹಲ್ಲೆ ನಡೆಸಿದ್ದಾನೆ. ಷಟೌಕ್ವಾ ಇನ್ಸ್ಟಿಟ್ಯೂಟ್ ನ ವೇದಿಕೆಯ ಮೇಲೆ ಆಯೋಜಕರು ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸುತ್ತಿದ್ದಂತೆಯೇ ದಿಢೀರ್ ದಾಳಿ ನಡೆಸಿದ ಅಪರಿಚಿತ ವ್ಯಕ್ತಿ ರಶ್ದಿ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಅವರು ನೆಲಕ್ಕೆ ಕುಸಿದುಬಿದ್ದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ವೆಂಟಿಲೇಟರ್ನಲ್ಲಿ ಸಲ್ಮಾನ್ ರಶ್ದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ದಾಳಿಯ ಪರಿಣಾಮ ಅವರು ತಮ್ಮ ಒಂದು ಕಣ್ಣನ್ನು ಕಳೆದುಕೊಳ್ಳೂವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಚಾಕು ಇರಿತದಿಂದ ರಶ್ದಿಯವರ ತೋಳಿನ ನರಗಳು ತುಂಡಾಗಿದ್ದು, ಯಕೃತ್ತಿಗೆ ಹಾನಿಯುಂಟಾಗಿದೆ. ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಬಫಲೋದಿಂದ ದಕ್ಷಿಣಕ್ಕೆ 75 ಮೈಲುಗಳಷ್ಟು ದೂರದಲ್ಲಿರುವ ಷಟೌಕ್ವಾದಲ್ಲಿ ಈ ಘಟನೆ ನಡೆದಿದೆ. ಇನ್ಸ್ಟಿಟ್ಯೂಟ್ ಪ್ರಕಾರ ‘ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಾಗಿ’ ದೇಶಭ್ರಷ್ಟ ಲೇಖಕರಿಗೆ ಅಮೆರಿಕ’ ವಿಷಯದ ಬಗ್ಗೆ ರಶ್ದಿ ಮಾತನಾಡಬೇಕಿತ್ತು. ಚಾಕು ಇರಿತದ ನಂತರ ಅವರನ್ನು ಹೆಲಿಕಾಪ್ಟರ್ ಮೂಲಕ…
ಯಾದಗಿರಿ: ಗಿರಿನಾಡು ಯಾದಗಿರಿಯಲ್ಲಿ ಗಾಂಜಾ ಘಾಟಿನ ಹಾವಳಿ ಹೆಚ್ಚಾಗಿದೆ. ಪಾನ್-ಬೀಡಾ ಅಂಗಡಿಗಳಲ್ಲಿ ಗಾಂಜಾ ಜಾಕಲೇಟ್ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಾದಕ ವ್ಯಸನಿಗಳ ಹಾಟ್ ಸ್ಪಾಟ್ ಆಯಿತಾ ಕರುನಾಡು ಅನ್ನೋ ಪ್ರಶ್ನೆ ಮೂಡಿದೆ. ವಿದ್ಯಾರ್ಥಿಗಳು ಹಾಗೂ ಮಧ್ಯ ವಯಸ್ಕರೇ ಗಾಂಜಾ ಆರೋಪಿಗಳ ಟಾರ್ಗೆಟ್ ಆಗಿದ್ದು, ಉತ್ತರ ಪ್ರದೇಶದ ಗಾಂಜಾ ನಶೆಯ ಜಾಕಲೇಟ್ ಯಾದಗಿರಿ ಜಿಲ್ಲೆಯಲ್ಲಿ ಮಾರಾಟವಾಗುತ್ತಿವೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಮೂಲದವರಿಂದ ರಾಜಾರೋಷವಾಗಿ ಗಾಂಜಾ ಚಾಕಲೇಟ್ ಮಾರಾಟ ನಡೆಯುತ್ತಿದೆ. ‘ಉಡ್ತಾ ಪಂಜಾಬ್’ ಆಗುತ್ತಿದೇಯಾ ಯಾದಗಿರಿ ಅನ್ನೋ ಪ್ರಶ್ನೆ ಮೂಡಿದೆ. ಶಹಾಪೂರ ನಗರದಲ್ಲಿ ಪಾನ್ಶಾಪ್ ಇಟ್ಟುಕೊಂಡು ಗಾಂಜಾ ಚಾಕಲೇಟ್ ಮಾರಾಟ ಮಾಡುತ್ತಿದ್ದವರು ಆರೋಪಿಗಳು ಅಂದರ್ ಆಗಿದ್ದಾರೆ. 3 ಪಾನ್ಶಾಪ್ಗಳ ಮೇಲೆ ಅಬಕಾರಿ ಪೋಲಿಸರ ಮಿಂಚಿನ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ಜೀತೆಂದ್ರ ಹಾಗೂ ಮೋಹಿತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಹಾಪೂರ ಅಬಕಾರಿ ಉಪ ಅಧೀಕ್ಷಕ…
ಬೆಂಗಳೂರು ಮೂಲದ ಉದ್ಯಮಿಗೆ ಹನಿಟ್ರಾಪ್ ಮಾಡಿದ್ದ ಉದಯೋನ್ಮುಖ ನಟ ಅರೆಸ್ಟ್ ಆಗಿದ್ದಾನೆ. ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಆರೋಪಿ. ‘ಮಿಸ್ಟರ್ ಭೀಮರಾವ್’ ಎಂಬ ಸಿನಿಮಾಕ್ಕೆ ನಾಯಕನಾಗಿದ್ದ ಅರೋಪಿ ಯುವ ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ. ಉದ್ಯಮಿಗೆ ಇತ್ತೀಚೆಗೆ ಪರಿಚಯವಾಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದನೆಂದು ತಿಳಿದುಬಂದಿದೆ. ಉದ್ಯಮಿಗೆ ಭೇಟಿಯಾಗಿದ್ದ ಆತ ತಾವು ಕ್ರೈಂ ಪೊಲೀಸರು ಎಂದು ಹೇಳಿ ಹೆದರಿಸಿದ್ದ. ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಸಹ ಬೆದರಿಕೆ ಹಾಕಿದ್ದ. ಈ ಕೇಸ್ ಕ್ಲೋಸ್ ಮಾಡಬೇಕೆಂದರೆ ನೀವು ನನಗೆ ಹಣ ನೀಡಬೇಕೆಂದು ಕೇಳಿದ್ದ. ಅದರಂತೆ ಮೊದಲಿಗೆ 50 ಸಾವಿರ, ನಂತರ ಬ್ಯಾಂಕ್ನಲ್ಲಿ 3 ಲಕ್ಷ ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು 14 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಉದ್ಯಮಿ ಬಳಿ ವಸೂಲಿ ಮಾಡಿದ್ದ. ಹಲಸೂರು ಗೇಟ್ ಬಳಿ…
ಕ್ರೇಜಿಸ್ಟಾರ್ ರವಿಚಂದ್ರನ್ ಅಂದ್ರೇನೆ ಡಿಫರೆಂಟ್..ತನಗನಿಸಿದ್ದು ಏನು ಅದನ್ನೇ ಮಾಡಿ ತೋರಿಸೋರು ಅಂದ್ರೆ ಅದು ಕೇವಲ ನಮ್ಮ ಕನಸುಗಾರ. ನೋಡ್ರೋ ನಿಮಗಾಗಿ ಸಿನಿಮಾ ಮಾಡ್ತೀನಿ..ಪ್ರಚಾರ ಮಾಡಲ್ಲ..ನೀವೇ ಮಾಡ್ಕೊಳ್ಳಿ ಅಂತ ಅಭಿಮಾನಿಗಳ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡ್ತಾರೆ. ಅಂತೆಯೇ ಇದೀಗ ಕನಸುಗಾರನ ಕನಸಿನ ಕೂಸು “ರವಿ ಬೋಪಣ್ಣ” ಸಿನಿಮಾ ಭರ್ಜರಿಯಾಗಿ ತೆರೆ ಕಂಡಿದೆ. ಹಾಗಾದ್ರೆ “ರವಿ ಬೋಪಣ್ಣ” ಸಿನಿಮಾ ಹೇಗಿದೆ ಅನ್ನೋದ್ರ ಪಕ್ಕಾ ರಿವ್ಯೂ ನಿಮ್ಮ ಜೀ ಕನ್ನಡ ನ್ಯೂಸ್ ನಿಮ್ಮ ಮುಂದಿಡುತ್ತಿದೆ. ವಿಭಿನ್ನ ಪಾತ್ರಗಳನ್ನ ಮಾಡಲು ಸಾಧ್ಯವಾಗೋದು ಚಿತ್ರಬ್ರಹ್ಮನಿಗಷ್ಟೇ. ಹೊಸತನವಿರಬೇಕು ಅಂತ ಡಿಫರೆಂಟಾಗೇ ಚಿತ್ರಗಳನ್ನ ಮಾಡುತ್ತಾರೆ.ಸೋಲು-ಗೆಲುವು ಏನೇ ಬಂದ್ರು ಗಟ್ಟಿತನದಿಂದ ಸ್ವೀಕಾರ ಮಾಡುತ್ತಾರೆ. ‘ರವಿ ಬೋಪಣ್ಣ’ ಚಿತ್ರದಲ್ಲಿ ಅವರು ನಮ್ಮೊಳಗಿರೋ ವ್ಯಕ್ತಿತ್ವವನ್ನ ಇಟ್ಕೊಂಡೆ ಅದ್ಬುತವಾಗಿ ಕಥೆ ಬರೆದಿದ್ದಾರೆ. ‘ರವಿ ಬೋಪಣ್ಣ’ ಸಿನಿಮಾದಲ್ಲಿ ಅಥಿತಿ ಪಾತ್ರದಲ್ಲಿ ಕಿಚ್ಚ ಕಮಲ್ ಮಾಡಿದ್ದಾರೆ. ಇದು ಈ ಸಿನಿಮಾ ಇನ್ನಷ್ಟು ತೂಕ ಹೆಚ್ಚಾಗಿದೆ. ಕಾವ್ಯಾ ಶೆಟ್ಟಿ, ರಾಧಿಕಾ ಕುಮಾರಸ್ವಾಮಿ ಅವರ ಮೈಮಾಟ ಪಕ್ಕಾ ಪಡ್ಡೆ ಹುಡುಗರ ನಿದ್ದೆ…
ಡ್ರೋನ್ ಮೂಲಕ ಇಲ್ಲಿನ ವಿಕ್ಟೋರಿಯಾ ಸ್ಮಾರಕ ಭವನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಛಾಯಾಚಿತ್ರಗಳನ್ನು ಸೆರೆಹಿಡಿದ ಆರೋಪದ ಮೇಲೆ ಇಬ್ಬರು ಬಾಂಗ್ಲಾದೇಶೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮ್ಯೂಸಿಯಂನ ಭದ್ರತೆಯಲ್ಲಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಹೇಸ್ಟಿಂಗ್ಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಕಾರ್ಯಾಚರಣೆ ಕೈಗೊಂಡು ಬಾಂಗ್ಲಾದೇಶದ ಇಬ್ಬರನ್ನು ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಕಾಂಪೌಂಡ್ನಲ್ಲಿ ಬಂಧಿಲಾಗಿದೆ. ಆರಂಭಿಕ ತನಿಖೆಯಲ್ಲಿ ಇಬ್ಬರು ಬಾಂಗ್ಲಾದೇಶಿಗಳು ಮಾನವರಹಿತ ವೈಮಾನಿಕ ವಾಹನ ಡ್ರೋನ್ ಬಳಸಿ ಅವರು ಸ್ಮಾರಕ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಸೇನೆಯ ಪೂರ್ವ ಕಮಾಂಡ್ ಪ್ರಧಾನ ಕಛೇರಿಯೂ ಇದೆ ಇಬ್ಬರು ಬಾಂಗ್ಲಾದೇಶೀಯರನ್ನು ಆಗಸ್ಟ 23 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅವರು ವಿಮಾನ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ. ವಿಕ್ಟೋರಿಯಾ ಸ್ಮಾರಕ ಸಭಾಂಗಣದಲ್ಲಿ ಡ್ರೋನ್ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ ಏಕೆಂದರೆ ಇದು ಡ್ರೋನ್ ರಹಿತ ವಲಯವಾಗಿದೆ ಮತ್ತು ರಕ್ಷಣಾ ಪ್ರದೇಶದಲ್ಲಿಯೂ ಬರುತ್ತದೆ.…