Author: admin

ಬೆಂಗಳೂರು : ಟೀಮ್ ಭಾಸ್ಕರ್ ರಾವ್ ತಂಡದ ವತಿಯಿಂದ ಕೋವಿಡ್ ಕಾಲಘಟ್ಟದಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಜನರ ಜೀವ ಉಳಿಸಿದಂತಹ (covid warriors)  ಕೋವಿಡ್ ಸೇನಾನಿಗಳಿಗೆ ಪ್ರಶಂಸನ ಪತ್ರಗಳನ್ನು ಸೋಮವಾರ ವಿತರಿಸಲಾಯಿತು. ಕರ್ನಾಟಕ ರಾಜ್ಯ ರೈಲ್ವೆ ADGP, ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ದಕ್ಷ ಐಪಿಎಸ್ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಪ್ರಶಂಸನ ಪತ್ರ  ವಿತರಿಸಿ ಮಾತನಾಡಿ,  ನಿಮ್ಮ ಸೇವೆ ಅನನ್ಯವಾದದ್ದು, ನೂರಾರು ಸಾವಿರಾರು ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಾ, ತಮ್ಮ ಜೀವವನ್ನೇ ಮೂಡಿಪಾಗಿಟ್ಟು, ಜನರ ಜೀವ ಉಳಿಸಿದ್ದಾರೆ.ಇವರೆಲ್ಲರಿಂದಲೇ ಕೋವಿಡ್ ನಂತಹ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು ಎಂದು ಹೇಳಿದರು. ಜಾತಿ, ಧರ್ಮ, ಮೇಲು, ಕೀಳು ಎಂಬ ಭಾವನೆ ಇಲ್ಲದೇ ಎಲ್ಲದಿಕ್ಕಿಂತ ಮನುಷ್ಯಧರ್ಮ ಮುಖ್ಯ ಸಹಾಯ ಮಾಡುವ ಗುಣವನ್ನು ರೂಢಿಸಿಕೊಳ್ಳಿ ಪರರ ಕಷ್ಟಗಳಿಗೆ ಸ್ಪಂದಿಸಿ ಎಂದು ಅವರು ಇದೇ ವೇಳೆ ಅವರು ಮನವಿ ಮಾಡಿಕೊಂಡರು. ಇದೇ ವೇಳೆ ನಮ್ಮ ತುಮಕೂರು ಮಾಧ್ಯಮದ ವಿಶೇಷ ವರದಿಗಾರರು, ಪತ್ರಕರ್ತರಾದ ಆಂಟೋನಿ ಅವರಿಗೂ ಪ್ರಶಂಸನ ಪತ್ರ ನೀಡಿ ಗೌರವಿಸಲಾಯಿತು.…

Read More

ತುಮಕೂರು: ನಮ್ಮ ಭಾರತೀಯ ಸಂಪ್ರದಾಯ ಮತ್ತು ಜ್ಞಾನವು ಅತ್ಯಂತ ಉತ್ಕೃಷ್ಟವಾದದ್ದು, ಜೊತೆಗೆ ವೈಜ್ಞಾನಿಕತೆಯನ್ನು ಹೊಂದಿರುವಂತಹದು, ಇಂತಹ ಉತ್ಕೃಷ್ಟವಾದ ಜ್ಞಾನವನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಹಾಗೂ ಈ ಭಾರತೀಯ ಸಂಸ್ಕೃತಿಯ ಅನಾವರಣಕ್ಕಾಗಿ ಒಂದು ಆಶ್ರಮವನ್ನು ಸ್ಥಾಪನೆ ಮಾಡಬೇಕು ಎನ್ನುವ ಉದ್ದೇಶದಿಂದ 21 ದಿನಗಳ ಕಾಲ ಉಪವಾಸ ಮತ್ತು ಧ್ಯಾನ ಅನುಷ್ಠಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವ ಯೋಗಿ ತಿಳಿಸಿದರು. ಮಾಚ್೯ 10 ರಿಂದ 30 ರವರಿಗೆ ನಿರಂತರವಾಗಿ 21 ದಿನಗಳ ಈ ವಿಶೇಷ ಅನುಷ್ಠಾನ ಇರುತ್ತದೆ. ಈ ಅನುಷ್ಠಾನದ ನಂತರ ಮಾಚ್೯ 31 ಮತ್ತು ಏಪ್ರಿಲ್ 1 ಮತ್ತು 2 ರಂದು ಈ 3 ದಿನಗಳ ಕಾಲ ಸಂಪೂರ್ಣ ನಿಸರ್ಗದಲ್ಲಿ ಅಗಾಧವಾದ ಬದಲಾವಣೆ ಆಗುವಂತಹದು. ಏಕೆಂದರೆ ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಯುಗಾದಿಯೇ ನಮಗೆಲ್ಲ ಹೊಸ ವಷ೯ ಅಂದು ಸಂಪೂರ್ಣ ನಿಸರ್ಗವೇ ಬದಲಾವಣೆಯನ್ನು ಹೊಂದುತ್ತಿರುವ ಸಮಯ ಅಂತಹ ಸಮಯದಲ್ಲಿ ಅತ್ಯಂತ ಉತ್ಕೃಷ್ಟವಾದ ಶಕ್ತಿ ಈ ನಿಸರ್ಗದಲ್ಲಿ ಇರುವಂತಹದು. ಹೀಗಾಗಿ ಈ…

Read More

ತುಮಕೂರು:  ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ (ರಿ) ವತಿಯಿಂದ ಇಂದು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಕಾರ್ಯಕಾರಿಣಿ ಸಭೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ , ಏಪ್ರಿಲ್ 14 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 131ನೇ ಜಯಂತಿ  ಹಾಗೂ ಡಾ.ಬಾಬು ಜಗಜೀವನ್ ರಾಮ್ ರವರ 114ನೇ ಜಯಂತಿ ಅಂಗವಾಗಿ ಭಾರತ ಸಂವಿಧಾನ ಪೀಠಿಕೆಯನ್ನು ಮನೆಮನೆಗೂ ತಲುಪಿಸಿ ಅಂಬೇಡ್ಕರ್ ಹಬ್ಬ ಆಚರಿಸುವ ಮೂಲಕ ಪ್ರಬುದ್ಧ ಭಾರತದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿ ಭಾರತವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು. ಮನೆ ಮನೆಗೆ ಸಂವಿಧಾನ ಪೀಠಿಕೆಯ ಒಂದು ಸಾವಿರ ಪ್ರತಿಯನ್ನು ನೀಡಿ ಸಂವಿಧಾನದ ಅರಿವನ್ನು ಸಾಮಾನ್ಯ ಜನರಿಗೆ ತಿಳಿಸುವ ಮೂಲಕ ಅಂಬೇಡ್ಕರ್ ಚಿಂತನೆಯನ್ನು ಈ ಅಭಿಯಾನದ ಮೂಲಕ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತಕರಕ್ಷಣಾ ಸಮಿತಿಯಿಂದ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಂದು ಬೆಳಗ್ಗೆ  ನಗರದ ಎಳ್ಳರಬಂಡೆಗೆ ಸಮಯ ಬೆಳಗ್ಗೆ 8…

Read More

ಗುಬ್ಬಿ:  ತಾಲೂಕಿನ ನಿಟ್ಟೂರು ಹೋಬಳಿಯ ಸಾಗಸಂದ್ರ  ಗ್ರಾಮದ    ಶ್ರೀ ಕೆಂಪಮ್ಮ ದೇವಿಯ ದೇವಸ್ಥಾನಕ್ಕೆ ದಲಿತ ಸಮುದಾಯದವರಿಗೆ ಪ್ರವೇಶ ನಿರಾಕರಣೆ ಮಾಡುತ್ತಿರುವ ದೇವಾಲಯದ ಅರ್ಚಕರ ವಿರುದ್ಧ ಕ್ರಮ ವಹಿಸುವಂತೆ ಗುಬ್ಬಿ ತಾಲೂಕು ದಂಡಾಧಿಕಾರಿಗಳಿಗೆ  ದಲಿತ ಸೇನೆ ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು  ಹಾಗೂ ಮುಖಂಡರು ಮನವಿ ಸಲ್ಲಿಸಿದರು. ತಾಲೂಕು ದಂಡಾಧಿಕಾರಿಗಳಿಗೆ ಭೇಟಿಯಾಗಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ  ಅವರು, ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಎಲ್ಲ ಜನಾಂಗದವರಿಗೂ ಮುಕ್ತ ಪ್ರವೇಶ ಕಲ್ಪಿಸಿದ್ದರೂ ದಲಿತ ಸಮುದಾಯದವರನ್ನು ಪ್ರವೇಶ ನಿರಾಕರಣೆ ಮಾಡುತ್ತಿರುವುದು ಸರಿಯಲ್ಲ. ಸಂವಿಧಾನದಡಿಯಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದರೂ ಸಹ ಉದ್ದೇಶಪೂರ್ವಕವಾಗಿ ಅಸ್ಪೃಷ್ಯತೆ ಆಚರಿಸಲಾಗುತ್ತಿದೆ.  ಸಾಗಸಂದ್ರ ಗ್ರಾಮದ ಶ್ರೀ ಕೆಂಪಮ್ಮದೇವಿ ದೇವಾಲಯದಲ್ಲಿ ಅಸ್ಪೃಶ್ಯತೆ  ಇನ್ನೂ ಜೀವಂತವಾಗಿದ್ದು,  ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ಇದಾಗಿದೆ ಎಂದರು. ಇಂದು ತಾಲೂಕು ದಂಡಾಧಿಕಾರಿಗಳಿಗೆ ಘಟನೆ ಕುರಿತು ಮನವಿಯನ್ನು ಸಲ್ಲಿಸಿದ್ದು, ತಾಲ್ಲೂಕು ದಂಡಾಧಿಕಾರಿಗಳು ದಲಿತ ಸಮುದಾಯದವರಿಗೆ ದೇವಾಲಯದಲ್ಲಿ ಆಗಿರುವ ಘಟನೆಯ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ದೇವಾಲಯದ…

Read More

ತುರುವೇಕೆರೆ: ಪಟ್ಟಣದಲ್ಲಿ  ಸಿ.ಐ.ಟಿ.ಯು. ಕಾರ್ಮಿಕ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಸತೀಶ್  ನೇತೃತ್ವದಲ್ಲಿ, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ  ‘ಸರ್ಕಾರಿ ಉದ್ದಿಮೆಗಳ ಖಾಸಗೀಕರಣ’ವನ್ನು ವಿರೋಧಿಸಿ ಬೃಹತ್  ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಬಾಲಕರ ಪ್ರಾಥಮಿಕ ಶಾಲೆಯ ಬಳಿ ಸೇರಿದ ಪ್ರತಿಭಟನಾಕಾರರು ಬಳಿಕ, ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆಯಲ್ಲಿ ಸಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲ್ಲೂಕು ಕಚೇರಿಯ ಮುಂಭಾಗದ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ  ಸಿ.ಐ.ಟಿ. ಯು.ಸತೀಶ್ , ಇದೆ ತಿಂಗಳ 28 ಮತ್ತು 29 ರಂದು, ಸಿ.ಐ.ಟಿ.ಯು. ಸಂಘಟನೆಯ ಕರೆಯ ಮೇರೆಗೆ, ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣವನ್ನು ವಿರೋದಿಧಿಸಿ ದೇಶವ್ಯಾಪಿ ಮುಷ್ಕರ, ಹಮ್ಮಿಕೊಂಡಿದ್ದು ,ಇದಕ್ಕೆ ಗ್ರಾಮ ಪಂಚಾಯಿತಿ ನೌಕರರ ಸಂಘಟನೆ, ಅಕ್ಷರ ದಾಸೋಹದ , ಸಂಘಟನೆ, ಅಂಗನವಾಡಿ ನೌಕರರ ಸಂಘದ ಸಂಘಟನೆ, ಕಟ್ಟಡ ಕಾರ್ಮಿಕರ ಸಂಘಟನೆ, ರಾಜ್ಯ ರೈತ ಸಂಘಟನೆಗಳು, ವಿವಿಧ ಪ್ರಗತಿಪರ ಸಂಘಟನೆಗಳು ,ನಮಗೆ ಬೆಂಬಲಿಸಿವೆ ಎಂದರು. ಈಗಾಗಲೇ ಕೇಂದ್ರ ಸರ್ಕಾರ, ಬಿ.ಎಸ್.ಎನ್. ಎಲ್. , ಪೆಟ್ರೋಲಿಯಮ್…

Read More

ಬೆಂಗಳೂರು: ನಗರದ ಕೋರಮಂಗಲ ಪೊಲೀಸರು ಈಗ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ವಿಶಾಖಪಟ್ಟಣಂನಿಂದ ಗಾಂಜಾ ತಂದು ರಾಜಧಾನಿಯಲ್ಲಿ ಸಪ್ಲೈ ಮಾಡ್ತಿದ್ದ ಸಂದರ್ಭದಲ್ಲಿ ಪೋಲೀಸರ ಕೈಗೆ ಸಿಕ್ಕಿದ್ದಾರೆ ಎನ್ನಲಾಗಿದೆ. ನಗರದ ಕೋರಮಂಗಲ ವ್ಯಾಪ್ತಿಯ ಪೋಲಿಸ್ ಠಾಣೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 40 ಲಕ್ಷ ಮೌಲ್ಯದ 102 ಕೆ.ಜಿ 200 ಗ್ರಾಂ ಗಾಂಜಾ, ಬೈಕ್ ಜಪ್ತಿ ಮಾಡಲಾಗಿದೆ. ಬಂಧಿತ ವ್ಯಕ್ತಿಗಳನ್ನು ರಮೇಶ್, ಮಂಜುನಾಥ್, ಅಭಿಲಾಶ್, ಮೂರ್ತಿ,ಶಿವರಾಜ್ ಎಂದು ತಿಳಿದುಬಂದಿದೆ.ಈಗ ಬಂಧಿತರ ವಿರುದ್ಧ ಕೋರಮಂಗಲ, ಹೆಚ್ ಎಸ್ ಆರ್ ಲೇಔಟ್, ಬೇಗೂರು, ಕೋಣನಕುಂಟೆ, ಕೆಆರ್ ಪುರಂ ಠಾಣೆಗಳಲ್ಲಿ ಗಾಂಜಾ, ಕೊಲೆ ಯತ್ನ, ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ವರದಿ: ಆಂಟೋನಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಚೆನ್ನೈ : ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧ ಮಾನಹಾನಿಕರ, ಸುಳ್ಳು, ಹಗರಣ ಮತ್ತು ನೀಚ ಹೇಳಿಕೆಗಳನ್ನು ನೀಡಿದ ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈಗೆ ಶನಿವಾರ ಲೀಗಲ್ ನೋಟಿಸ್ ನೀಡಿದೆ. ನೋಟಿಸ್ ಅನ್ನು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ನೀಡಿದ್ದಾರೆ, ಅಣ್ಣಾಮಲೈ(K Annamalai) 24 ಗಂಟೆಗಳ ಒಳಗೆ ಸಾರ್ವಜನಿಕ ಕ್ಷಮೆಯಾಚಿಸಬೇಕು, ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಮತ್ತು ನಷ್ಟವನ್ನು ಪಾವತಿಸದಿದ್ದರೆ ಅವರ ವಿರುದ್ಧ “ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗುತ್ತದೆ” ಎಂದು ತಿಳಿಸಲಾಗಿದೆ. ಎರಡು ದಿನಗಳಲ್ಲಿ ಸಿಎಂ ಸಾರ್ವಜನಿಕ ಪರಿಹಾರ ನಿಧಿಗೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೀಡಬೇಕು ಎಂದು ತಿಳಿಸಿದ್ದಾರೆ. ದುಬೈ ಎಕ್ಸ್‌ಪೋ 2020(Dubai Expo 2020) ರಲ್ಲಿ ಭಾಗವಹಿಸಲು ಮತ್ತು ತಮಿಳುನಾಡಿನಲ್ಲಿ ಹೂಡಿಕೆ ಮಾಡಲು ಗಲ್ಫ್ ರಾಷ್ಟ್ರದ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲು ಸ್ಟಾಲಿನ್ ಪ್ರಸ್ತುತ ಯುಎಇಗೆ ಅಧಿಕೃತ ಭೇಟಿಯಲ್ಲಿದ್ದಾರೆ. ಮಾರ್ಚ್ 24 ಮತ್ತು 25…

Read More

ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನವನ್ನು ಸರ್ಕಾರ ಘೋಷಿಸಿದೆ. ಅವರ ಕುಟುಂಬದವರ ಬಳಿ ಮಾತನಾಡಿ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ನಿಗದಿ ಮಾಡಲಾಗುವುದು. ಪುನೀತ್ ರಾಜ್‍ಕುಮಾರ್ ಅವರ ಪ್ರತಿಭೆ ಹಾಗೂ ಮಾನವೀಯ ಗುಣಗಳಿಗೆ ತಕ್ಕ ರೀತಿಯಲ್ಲಿ ಅರ್ಥಪೂರ್ಣವಾಗಿ ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ರತ್ನ ನೀಡಲು ಚಿಂತನೆ ಮಾಡಿದ್ದು, ತಯಾರಿಯನ್ನೂ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ಅವರು ಇಂದು ಬಿಬಿಎಂಪಿ ನೌಕರರ ಕನ್ನಡ ಸಂಘ ಆಯೋಜಿಸಿದ್ದ ಡಾ: ರಾಜ್ ಕುಮಾರ್ ಗಾಜಿನ ಮನೆ, ಬಿಬಿಎಂಪಿ ಕಚೇರಿ ಆವರಣದಲ್ಲಿ ಡಾ: ಪುನೀತ್ ರಾಜ್‍ಕುಮಾರ್ ಅವರ ಕಂಚಿನ ಪುತ್ಥಳಿಯ ಅನಾವರಣ ಹಾಗೂ ಗಂಧದಗುಡಿ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪುನೀತ್ ರಾಜ್‍ಕುಮಾರ್ ನಿಜವಾಗಿಯೂ ನಮ್ಮ ಕರ್ನಾಟಕದ ರತ್ನ (Karnataka Ratna award ).ಈ ರತ್ನದ ಪುತ್ಥಳಿಯನ್ನು ಬಿಬಿಎಂಪಿ ಕನ್ನಡ ನೌಕರರ ಸಂಘ ಅನಾವರಣ ಮಾಡಿರುವುದು ನಿಜವಾಗಿಯೂ ಪುನೀತ್ ರಾಜ್ ಕುಮಾರ್ ಅವರ ಬಗೆಗಿನ ಪ್ರೀತಿ ಬಹಳ ದೊಡ್ಡದು. ಅದರಲ್ಲಿ…

Read More

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಆನಡುಗು ಗ್ರಾಮದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರಾದ ಎಂ.ಜಿ. ಶಿವಶಂಕರ್ ರವರ  ಮಾಯಸಂದ್ರ ಗ್ರಾಮದಲ್ಲಿನ ತಮ್ಮ ಸ್ವಗೃಹದ  ಅಂಗಳದಲ್ಲಿ 7 ಅಡಿ ಎತ್ತರದ, ಎರಡೂವರೆ ವರ್ಷದ, ಅಪರೂಪದ “ತುಳಸಿ ಗಿಡ” ಬೆಳೆದಿದ್ದು, ಗ್ರಾಮದ ಸಾರ್ವಜನಿಕರಲ್ಲಿ ಆಕರ್ಷಣೀಯವಾಗಿದೆ. ಸುಮಾರು ಎರಡೂವರೆ ವರ್ಷ ಪೂರೈಸಿರುವ ತುಳಸಿ ಗಿಡವು ದಿನೇ-ದಿನೇ ಅತಿ ಉದ್ದವಾಗಿ ಬೆಳೆಯುತ್ತಿರುವುದು, ಆಶ್ಚರ್ಯಕರ ಸಂಗತಿಯಾಗಿದೆ. ತುಳಸಿ ಗಿಡದ ಪಾಲನೆ -ಪೋಷಣೆಗಾಗಿ ಯಾವುದೇ ಗೊಬ್ಬರಗಳು ಅಥಾವ ಕೆಮಿಕಲ್ ಗಳನ್ನು ಬಳಸದೆ, ನೈಸರ್ಗಿಕವಾಗಿ ತುಳಸಿ ಗಿಡವು ಬೆಳೆಯುತ್ತಿದೆ ಎಂದು ಶಿಕ್ಷಕರಾದ ಎಂ.ಜಿ.ಶಿವಶಂಕರ್ ಅವರ ಪತ್ನಿ ಶ್ರೀಮತಿ ನೇತ್ರಾವತಿ  ತಿಳಿಸಿದ್ದಾರೆ. ಶ್ರೀ ಕಾಲಭೈರವೇಶ್ವರ ಸ್ವಾಮಿಯನ್ನು ಸದಾ ನೆನೆಯುತ್ತ, ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ, ಸ್ಮರಣೆಯೊಂದಿಗೆ, ಸರ್ವೇ ಜನ: ಸುಖಿನೋ ಭವಂತು, ಎಂದು ಮನೆಯ ಅಂಗಳದಲ್ಲಿರುವ ತುಳಸಿ ಗಿಡಕ್ಕೆ ಹಾಗೂ ಭಗವಂತನಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಿ ಪ್ರಾರ್ಥಿಸುವುದಾಗಿ, ಮೂಲತಃ ಮಾವಿನಕೆರೆಯ ಲಕ್ಷ್ಮಮ್ಮ ಗಂಗಾಧರಯ್ಯ ನವರ ಪುತ್ರ ಶಿಕ್ಷಕರಾದ ಎಂ.ಜಿ. ಶಿವಶಂಕರ್…

Read More

ನರಸೀಪುರ: ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಪಟ್ಟಣದ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ  ಬೆಳಿಗ್ಗೆ ಸಂಭವಿಸಿದೆ. ತಾಲ್ಲೂಕಿನ ಅಕ್ಕೂರು ಗ್ರಾಮದ ಕೆಂಪರಾಜು ಎಂಬುವರ ಪುತ್ರಿ ಅನುಶ್ರೀ(16) ಎಂಬಾಕೆಯೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬಂದು ಸಾವನ್ನಪ್ಪಿದ ವಿದ್ಯಾರ್ಥಿನಿ. ತಾಲ್ಲೂಕಿನ‌ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ಅನುಶ್ರೀ ಇಂದು ಪಟ್ಟಣದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದಳು. ತಾನು ಪರೀಕ್ಷೆ ಬರೆಯಬೇಕಾಗಿದ್ದ ಕೇಂದ್ರಕ್ಕೆ ಹಾಜರಾಗಬೇಕಾದ ಆಕೆ ಗೊಂದಲ ಮಾಡಿಕೊಂಡು ಪಕ್ಕದಲ್ಲೇ ಇದ್ದ ಶಿವಾನಂದ ಶರ್ಮ ಆಂಗ್ಲ ಮಾಧ್ಯಮ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಮುಂದಾಗಿ ಸುಮಾರು ಹದಿನೈದು ನಿಮಿಷಗಳ ಕಾಲ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ. ಆದರೆ ಆಕೆ ಕುಳಿತು ಪರೀಕ್ಷೆ ಬರೆಯುತ್ತಿದ್ದ ಹಾಲ್ ಟಿಕೆಟ್ ನಂಬರ್ ವಿದ್ಯಾರ್ಥಿಯೊಬ್ಬರದ್ದಾಗಿದ್ದು, ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರು ಆಕೆಗೆ ಮನವರಿಕೆ ಮಾಡಿ ಪಕ್ಕದ ಸೆಂಟರ್ ಕರೆದೊಯ್ಯುತ್ತಿದ್ದ ಸಂಧರ್ಭ…

Read More