Author: admin

ಮುಂಬೈ: ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ (Indian Premier League 2022) ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ ತಂಡವು ಬೆಂಗಳೂರು ತಂಡವನ್ನು 20 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ಪಡೆಯುವ ಮೂಲಕ 205 ರನ್ ಗಳಿಗೆ ನಿಯಂತ್ರಿಸಿತು. ಬೆಂಗಳೂರು ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ದುಫ್ಲೆಸಿಸ್ ನಾಯಕನ ಆಟವನ್ನು ಆಡಿದರು.ಕೇವಲ 57 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಏಳು ಸಿಕ್ಸರ್ ಗಳ ನೆರವಿನಿಂದ 88 ರನ್ ಗಳನ್ನು ಗಳಿಸಿದರು. ಇದಾದ ನಂತರ ಅನುಜ್ ರಾವತ್ 21 ರನ್ ಗಳಿಸಿ ಔಟಾದಾಗ ಕ್ರೀಸ್ ಗೆ ಬಂದಂತಹ ಕೊಹ್ಲಿ ಹಾಗೂ ಕಾರ್ತಿಕ್ ಕ್ರಮವಾಗಿ 41 ಹಾಗೂ 32 ರನ್ ಗಳಿಸುವ ಮೂಲಕ ತಂಡದ ಮೊತ್ತವು 200 ರ ಗಡಿಯನ್ನು ದಾಟಲು ನೆರವಾದರು. ರಾಯಲ್ ಚಾಲೆಂಜರ್ಸ್…

Read More

ಬೆಂಗಳೂರು: 1970 ಮತ್ತು 80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಮಂಜುಳ ಬದುಕಿದ್ದು ಕೇವಲ 34 ವರ್ಷ ಮಾತ್ರ. ಪ್ರತಿಭಾವಂತ ನಟಿ ಮಂಜುಳ ಇಲ್ಲ ಅನ್ನೋದನ್ನಇಂದಿಗೂ ನಂಬೋದಕ್ಕೆ ಆಗುತ್ತಿಲ್ಲ. ಅವರ ಸಾವು ಆಕಸ್ಮಿಕ ಅಲ್ಲ, ಆತ್ಮಹತ್ಯೆ ಅನ್ನೋ ಮಾತು ಮತ್ತೇ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಇಂಟ್ರಸ್ಟಿಂಗ್‌ ವಿಚಾರ ನಿಮ್ಮ ಮುಂದೆ.  ‘ಸಂಪತ್ತಿಗೆ ಸವಾಲ್’, ‘ಎರಡು ಕನಸು’, ‘ಬೆಸುಗೆ’,‌ ‘ಭಕ್ತ ಕುಂಬಾರ’, ‘ಮೂರೂವರೆ ವಜ್ರಗಳು’, ‘ಮಯೂರ’, ‘ದಾರಿ ತಪ್ಪಿದ ಮಗ’, ‘ನೀ ನನ್ನ ಗೆಲ್ಲಲಾರೆ’, ‘ತಾಯಿಗಿಂತ ದೇವರಿಲ್ಲ’, ‘ಎರಡು ಮುಖ’, ‘ಯಾರ ಸಾಕ್ಷಿ?’ ಈ ಸಿನಿಮಾಗಳನ್ನು ಯಾರು ನೋಡಿಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ಹಂಡ್ರೆಡ್‌ ಪರ್ಸೆಂಟ್‌ ನೋಡರ್ತೀರಿ. ಯಾಕಂದ್ರೆ ಇವೆಲ್ಲವೂ ನಟಿ ಮಂಜುಳ ಅವರು ಮುಖ್ಯಭೂಮಿಕೆಯಲ್ಲಿ ಅಭಿನಯಿರೋ ಆಗಿನ ಸೂಪರ್ ಡೂಪರ್ ಹಿಟ್ ಸಿನಿಮಾಗಳು. ಸುಮಾರು  54ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಮಂಜುಳ ಅವರ ಜೀವನವೇ ರೋಚಕ. ಏಕೆಂದರೆ ಸಣ್ಣ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡ ನಟಿ ಮಂಜುಳ…

Read More

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ  ಏರಿಕೆಯಾಗಿದೆ. ಇನ್ನು ಕಳೆದ 7 ದಿನಗಳಲ್ಲಿ 6 ಬಾರಿ  ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಒಟ್ಟು 4 ರೂಪಾಯಿ 10 ಪೈಸೆ ಏರಿಕೆಯಾಗಿದೆ.  ಇದರೊಂದಿಗೆ ಪೆಟ್ರೋಲ್ ಡೀಸೆಲ್ ದರ ನೂರರ ಗಡಿ ಮುಟ್ಟುತ್ತಿದೆ. ಸೋಮವಾರ ಬೆಳಗ್ಗೆಯಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 30 ಪೈಸೆ ಹಾಗೂ ಡೀಸೆಲ್ ಬೆಲೆ 35 ಪೈಸೆ ಏರಿಕೆಯಾಗಿದೆ. ಈ ಏರಿಕೆ ಇಂದು ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬಂದಿದೆ. ಇದಾದ ಬಳಿಕ ಇಂದು ಪೆಟ್ರೋಲ್ ಬೆಲೆ ಲೀಟರ್‌ ಗೆ 99.41 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಲೀಟರ್‌ ಗೆ 90.77 ರೂ.ಗೆ ಏರಿಕೆಯಾಗಿದೆ. ದೇಶದಲ್ಲಿ ಮಾರ್ಚ್ 22 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಒಂದು ವಾರದಲ್ಲಿ ತೈಲ ಬೆಲೆ 4.10 ರೂ. ಹೆಚ್ಚಳಗೊಂಡಿದೆ. ಆರ್ಥಿಕ ತಜ್ಞರ ಪ್ರಕಾರ ರಷ್ಯಾ-ಉಕ್ರೇನ್ ಯುದ್ಧವು ಕೊನೆಗೊಳ್ಳುವವರೆಗೆ, ಈ ಬೆಳವಣಿಗೆಯು ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ನಂಬಲಾಗಿದೆ. ಸಾರ್ವಜನಿಕ…

Read More

ತಿಪಟೂರು: ಅತಿ ಹೆಚ್ಚು  ವಿದ್ಯಾಭ್ಯಾಸ ಮಾಡಿದವರು ತಂದೆ ತಾಯಂದಿರ ನಿರ್ಲಕ್ಷ ಮಾಡಿ ಪಾಲನೆ-ಪೋಷಣೆ ಮಾಡುವುದನ್ನು ಬಿಟ್ಟು ದುಬಾರಿ ನಾಯಿಗಳ ಪಾಲನೆ-ಪೋಷಣೆ ಮಾಡುವತ್ತ ಜಗತ್ತು ಮಾರ್ಪಾಡು ಆಗುತ್ತಿದೆ ಎಂದು ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ಅವರು ಕಳವಳ ವ್ಯಕ್ತಪಡಿಸಿದರು. ನಗರದ ಗೊರಗೊಂಡನಹಳ್ಳಿ  ಕುಪ್ಪೂರು ತಮ್ಮಡಿಹಳ್ಳಿ ಅಭಿನವ ಮಲ್ಲಿಕಾರ್ಜುನಾ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ಅಭಿನವ ಸದನ ಕಟ್ಟಡದ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಜಗತ್ತಿನಲ್ಲಿ ಅಶಾಂತಿ ಅಧರ್ಮ ತಾಂಡವಾಡುತ್ತಿದ್ದು,  ಒಂದು ಅಣುಬಾಂಬ್  ಹಾಕಿದರೆ ಇಡೀ ವಿಶ್ವವೇ ಸರ್ವನಾಶ ಆಗುತ್ತದೆ. ಇಡೀ ವಿಶ್ವವೇ ಮನುಕುಲ ಜಗತ್ತು ಶಾಂತಿ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ವಿದ್ಯಾವಂತರು ಯುವಕರು ತಮ್ಮ ತಂದೆ-ತಾಯಿ ನಿರ್ಲಕ್ಷ ಮಾಡುತ್ತಿದ್ದು, ವಿದ್ಯೆಯ  ಜೊತೆಗೆ ಅವರಿಗೆ ಸಂಸ್ಕಾರವನ್ನೂ ಕೊಡಬೇಕು. ಸಂಸ್ಕಾರ ಕೊರತೆಯಿಂದಾಗಿ ಮಕ್ಕಳು ತಂದೆತಾಯಿಯನ್ನು ನಿರ್ಲಕ್ಷ ಮಾಡುತ್ತಿದ್ದಾರೆ.  ಮಠ ಮಾನ್ಯಗಳಿಗಿಂತ ಹೆತ್ತ ತಂದೆ-ತಾಯಿಗಳೇ ದೇವರು. ತಂದೆ ತಾಯಿಯವರನ್ನು ಅನಾಥಾಶ್ರಮಗಳಿಗೆ ಕಳುಹಿಸಿ ಮಠಮಾನ್ಯಗಳಿಗೆ ಬಂದು ಕಾಲಿಗೆ ಬೀಳುವುದು ಬಿಟ್ಟು ತಂದೆ ತಾಯಿಯವರನ್ನು ಪತಿ ಜಾಗೃತೆಯಿಂದ…

Read More

ಹಿಜಾಬ್ ಟೆನ್ಶನ್ ನಡುವೆ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ರಾಜ್ಯದಲ್ಲಿ ಒಟ್ಟು 8,73,846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.‌ ಕಳೆದ ಎರಡು ವರ್ಷಗಳಿಂದ ಕೊರೊನಾವೈರಸ್ (Coronavirus) ಭಯದ ನಡುವೆ ಕೇವಲ ಮೂರು ದಿನ ಮಾತ್ರ ಪರೀಕ್ಷೆ ನಡೆದಿತ್ತು. ಆದರೆ ಈ ವರ್ಷ ಯಾವುದೇ ಭಯವಿಲ್ಲದೆ ಪರೀಕ್ಷೆ ನಡೆಯಲಿದೆ. ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ, ಬೆಳಗ್ಗೆ 10:30ಕರಿಂದ ಮಧ್ಯಾಹ್ನ 01:45ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ವೇಳಾಪಟ್ಟಿ: 28-3-2022- ಪ್ರಥಮ ಭಾಷೆ 30-3-2022- ದ್ವಿತೀಯ ಭಾಷೆ 1-4-2022- ಅರ್ಥ ಶಾಸ್ತ್ರ, ಕೋರ್ ಸುಬ್ಜೆಕ್ಟ್ಸ್ 4-4-2022- ಗಣಿತ, ಸಮಾಜಶಾಸ್ತ್ರ 6-4-2022- ಸಮಾಜ ವಿಜ್ಞಾನ 8-4-2022- ತೃತೀಯ ಭಾಷೆ 11-4-2022- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ. ಪರೀಕ್ಷೆಗೆ ತಯಾರಿ: ಮಾರ್ಚ್ 28 ರಿಂದ ಎಪ್ರಿಲ್ 11ರವರೆಗೆ ನಡೆಯಲಿರುವ ಪರೀಕ್ಷೆ * ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳು * ಗಂಡು ಮಕ್ಕಳು -…

Read More

ಮಧುಗಿರಿ: ಮಧುಗಿರಿ ತಾಲೂಕಿನ ಕೆರಗಳಪಾಳ್ಯ ಬಳಿ ಇರುವ  ಬೈಲಾಂಜನೇಯ ದೇವಾಲಯ ತಾವರೆಕೊಳದ ಸಮೀಪ   ಭಾನುವಾರ ಬೆಳಗ್ಗೆ ಕೆ ಎಸ್‌ ಆ ರ್‌ಟಿಸಿ ಬಸ್ ಮತ್ತು ದ್ವಿಚಕ್ರ ವಾಹನ ನಡುವೆ  ಅಪಘಾತ ಸಂಭವಿಸಿದ್ದು , ಸ್ಥಳದಲ್ಲೇ ದಂಪತಿ ಮೃತಪಟ್ಟಿದ್ದಾರೆ . ಮಧುಗಿರಿ ಕಡೆಯಿಂದ ಬೆಂಗಳೂರಿಗೆ ಹೊಗುತ್ತಿದ್ದ ಕೆ ಎಸ್‌ ಆರ್‌ ಟಿ ಸಿ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ದ್ವಿಚಕ್ರ ವಾಹನದಲ್ಲಿ ಕುಳಿತಿದ್ದ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರು ಮಧುಗಿರಿ ತಾಲೂಕಿನ ಗೊಂದಿಹಳ್ಳಿ ಮೂಲದ ಸಾಂಬಶಿವಯ್ಯ(73) ಶಂಕ್ರಮ್ಮ(66)ನಿವಾಸಿಗಳು ಎನ್ನಲಾಗಿದ್ದು,   ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ  ರವಾನಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ವಿದೇಶಿ ವಿನಿಮಯ ಸಂಕಷ್ಟ ಮತ್ತು ಮುದ್ರಣ ಕಾಗದದ ದರ ಏರಿಕೆಯಿಂದ ಜರ್ಝರಿತವಾದ ಸುದ್ದಿ ಸಂಸ್ಥೆಗಳ ಪೈಕಿ ಎರಡು ಪ್ರಮುಖ ಪತ್ರಿಕೆಗಳು ತಮ್ಮ ದೈನಂದಿನ ಸಂಚಿಕೆ ಮುದ್ರಣವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿವೆ. ದ್ವೀಪ ರಾಷ್ಟ್ರ ಶ್ರೀಲಂಕ ಹಿಂದೆಂದು ಕಾಣದಷ್ಟು ವಿದೇಶಿ ವಿನಿಮಯ ಕೊರತೆಯನ್ನು ಅನುಭವಿಸುತ್ತಿದೆ. ಇದರಿಂದಾಗಿ ಮುದ್ರಣ ಕಾಗದ ಆಮದು ದರ ಏರಿಕೆ ಏರಿಕೆಯಾಗಿದ್ದು, ಕೊರತೆಯು ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ದಿ ಐಲ್ಯಾಂಡ್ ಇಂಗ್ಲಿಷ್ ದೈನಿಕ ಮತ್ತು ಅದರ ಸಹೋದರ ಸಂಸ್ಥೆ ಸಿಂಹಳಿ ಭಾಷೆಯ ದಿವಾಯಿನಾ ಮುಂದಿನ ಆದೇಶದವರೆಗೂ ಸಂಚಿಕೆ ಮುದ್ರಣವನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ. ಈ ಪ್ರಕಟಣೆಗಳ ಮಾತೃ ಸಂಸ್ಥೆ ಉಪಾಲಿ ನ್ಯೂಸ್ ಪೆಪರ್ ಲಿಮಿಟೆಡ್, ಶನಿವಾರ ತಮ್ಮ ಓದುಗರ ಬಳಿ ವಿಷಾದ ವ್ಯಕ್ತ ಪಡಿಸಿದ್ದು, ಶನಿವಾರದಿಂದ ಮುಂದಿನ ಸೂಚನೆಯವರೆಗೆ ಮುದ್ರಣವನ್ನು ನಿಲ್ಲಿಸುತ್ತಿದ್ದೇವೆ ಎಂದು ತಿಳಿಸಿದೆ. ಪ್ರವಾಸೋದ್ಯಮ ಆಧಾರಿತ ಆದಾಯವನ್ನೇ ಅವಲಂಬಿಸಿದ ಶ್ರೀಲಂಕ ಕೋವಿಡ್ ನಿಂದಾಗಿ ಪ್ರವಾಸಿಗರ ಕೊರತೆಯಿಂದ ತೀವ್ರ ಆರ್ಥಿಕ ಹಿನ್ನೆಡೆ ಅನುಭವಿಸುತ್ತಿದೆ. ಹಿಂದೆಂದು ಕಾಣದಷ್ಟು ವಿದೇಶಿ ವಿನಿಮಯದ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ…

Read More

ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಶ್ರೀಗಳು ಜಗತ್ತಿಗೆ ಮಾದರಿ ಪುರುಷರು ಮಾಜಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು. ಶನಿವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಸಚಿವ  ಎಂ.ಬಿ ಪಾಟೀಲ್,  ಸಿದ್ದಗಂಗಾ ಶ್ರೀಗಳ  ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಅದರ ಸಲುವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲು ಮಠಕೆ ಆಗಮಿಸಿ ರುವುದಾಗಿ ತಿಳಿಸಿದರು. ತುಮಕೂರಿನ ಸಿದ್ದಗಂಗಾ ಮಠದ ಸೇವೆ ಇಡೀ ಜಗತ್ತಿಗೆ ಮಾದರಿಯಾದ ಸೇವೆ ಮಠದಿಂದ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದು, ತಾವು ಕೂಡ ಹಲವು ಬಾರಿ ಶ್ರೀ ಮಠಕ್ಕೆ ಬೇಡಿ ಭೇಟಿಕೊಟ್ಟು ಹಲವು ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು. ಇನ್ನು ಶ್ರೀ ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ತಾವು ಕೂಡ ಶ್ರೀಗಳ ಸೇವೆ ಮಾಡುವ…

Read More

ಈಗಾಗಲೇ ಬೇಸಿಗೆಯ ತಾಪಕ್ಕೆ ಬಳಲಿ ಬೆಂಡಾಗಿರುವ ವಾಹನ ಸವಾರರಿಗೆ ಬಿಬಿಎಂಪಿ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣದ ಹೆಸರಿನಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಲವು ರಸ್ತೆಗಳನ್ನು ಬಂದ್ ಮಾಡಲು ಮುಂದಾಗಿದೆ. ಏ.4ರಿಂದ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ. ಮೌರ್ಯ ವೃತ್ತದಿಂದ ಕೆ.ಆರ್ ಸರ್ಕಲ್‍ ವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯಲಿದ್ದು, ಈ ರಸ್ತೆ ಬಂದ್ ಆಗಲಿದೆ. ಪ್ರತಿದಿನ ಈ ರಸ್ತೆ ಮೂಲಕ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಟ್ರಾಫಿಕ್‍ನಿಂದ ಕೂಡಿರುತ್ತದೆ. ಈಗಾಗಲೇ ರಸ್ತೆಯ ಅಕ್ಕಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದೆ. ಶೇಷಾದ್ರಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆದರೆ ಇಡೀ ಬೆಂಗಳೂರಿಗೆ ಟ್ರಾಫಿಕ್ ಸಮಸ್ಯೆ ಕಾಡುತ್ತದೆ. ಶೇಷಾದ್ರಿ ರಸ್ತೆಗೆ ಪರ್ಯಾಯವಾಗಿ ಮತ್ತೊಂದು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಈಗಾಗಲೇ ಸಂಚಾರಿ ಪೊಲೀಸ್ ಆಯುಕ್ತರ ಜೊತೆ ಮಾತುಕತೆ ಕೂಡ ನಡೆದಿದೆ. 70ರಿಂದ 80 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಅಕಾರಿಗಳು ಹೇಳಿದ್ದು, ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ…

Read More

ಬೆಂಗಳೂರು:  ನಗರದಲ್ಲಿ ಇಬ್ಬರು ಮಹಿಳೆಯರ ಕೊಲೆಯಾಗಿದೆ. ಒಂದು ಪ್ರಕರಣದಲ್ಲಿ ತವರಿನಿಂದ ಹಣ, ಆಭರಣ ತರುವಂತೆ ಪತಿಯೇ ಪತ್ನಿಯನ್ನು ಕೊಲೆ ಮಾಡಿದರೆ, ಮತ್ತೊಂದು ಪ್ರಕರಣದಲ್ಲಿ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಹೆಚ್ಚಾಗಿ ಮಾತನಾಡುತ್ತೀಯ ಎಂದು ಪತಿ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಇದೀಗ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಚಾಕುವಿನಿಂದ ಇರಿದು ಕೊಲೆ ಯಾವಾಗಲೂ ಮೊಬೈಲ್  ನಲ್ಲಿ ಮಾತನಾಡುತ್ತೀಯ ಎಂದು ಪತ್ನಿ ಜತೆ ಜಗಳವಾಡಿದ ಪತಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ನೇಪಾಳ ಮೂಲದ ಕಮಲಾದೇವಿ (45) ಕೊಲೆಯಾದ ದುರ್ದೈವಿ. ಈಕೆ ಪತಿ ತೇಜ್ ಬಹದ್ದೂರ್ (52)ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ನೇಪಾಳ ಮೂಲದ ಈ ದಂಪತಿ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದು, ಮೊದಲು ಸಂಜಯನಗರದಲ್ಲಿ ವಾಸವಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಮನೆ ಬದಲಿಸಿ ಬಿ.ಚನ್ನಸಂದ್ರದಲ್ಲಿ ವಾಸವಾಗಿದ್ದು, ಇವರಿಗೆ ಒಬ್ಬ ಮಗ ಹಾಗೂ ಮಗಳಿದ್ದು, ಮಗಳನ್ನು ಮದುವೆ ಮಾಡಿಕೊಡಲಾಗಿದೆ.…

Read More