Author: admin

ಪಾವಗಡ: ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಭೀಕರ ಶನಿವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಖಾಸಗಿ ಬಸ್ಸೊಂದು ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ ನಾಲ್ಕು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಪಾವಗಡಕ್ಕೆ 5 ಕಿಲೋಮೀಟರ್ ಸಮೀಪವಿರುವ ಪಳವಳ್ಳಿ ಕಟ್ಟೆ ಬಳಿ ವೈ.ಎನ್ ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ಬರುತ್ತಿದ ಎಸ್ ವಿ ಟಿ ಎಂಬ ಖಾಸಗಿ ಬಸ್ಸು ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಉರುಳಿಬಿದ್ದು ನಾಲ್ಕು ಜನ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು 25 ಅಧಿಕ ಮಂದಿಗೆ ತೀವ್ರ ತರನಾಗಿ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹಾಗೂ ತುಮಕೂರಿನ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ವೈ.ಎನ್. ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ಸುಮಾರು 27 ಕಿಲೋಮೀಟರ್ ದೂರವಿದ್ದು ಎಂದಿನಂತೆ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಖಾಸಗಿ ಬಸ್ಸು ಚಾಲಕನ ಅಜಾಗರೂಕತೆ ಹಾಗೂ ಅತಿವೇಗದ ಪರಿಣಾಮ ಉರುಳಿಬಿದ್ದು ಈ ದುರ್ಘಟನೆ ಸಂಭವಿಸಿದೆ ಇನ್ನು ಪಾವಗಡ ವೈ.ಎನ್. ಹೊಸಕೋಟೆ ರಸ್ತೆಯಲ್ಲಿ ಅಂಕು ಡೊಂಕು ರಸ್ತೆಯಿದ್ದು ಬಸ್ ಚಲಾಯಿಸುವ ವೇಳೆ…

Read More

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಪಾವಗಡ ತಾಲೂಕಿನ ಪಳವಳಿ ಕಟ್ಟೆ ಗ್ರಾಮದ ಬಳಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸದ್ಯದ ಮಾಹಿತಿಗಳ ಪ್ರಕಾರ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ತಿರುವಿನ ಬಳಿ ಈ ಭೀಕರ ರಸ್ತೆ ಅಪಘಾತವಾಗಿದ್ದು, ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಸರಗೂರು: ಜೇಮ್ಸ್ ಚಿತ್ರ ಬಿಡುಗಡೆ ಹಾಗೂ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಆಚರಣೆಯ ವೇಳೆ ಅಭಿಮಾನಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ. ಆಕಾಶ್ ಎಂಬ ಅಪ್ಪು ಅಭಿಮಾನಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಜೇಮ್ಸ್ ಚಿತ್ರ ಹಾಗೂ ಪುನೀತ್ ಹುಟ್ಟು ಹಬ್ಬದ ಅಚರಿಸಿಕೊಂಡು ಗೆಳೆಯರ ಜೊತೆಯಲ್ಲಿ ಕುಣಿದು ಆಕಾಶ್ ಮನೆಗೆ ಬಂದಿದ್ದ. ತೀವ್ರ ಸುಸ್ತಾಗಿದ್ದ ಆತನ ತಕ್ಷಣವೇ ಬಂದು ನೀರು ಕುಡಿದಿದ್ದು, ಈ ವೇಳೆ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ಹೇಳಲಾಗಿದೆ. ಬೆಳೆದು ನಿಂತ ಮಗ ಏಕಾಏಕಿ ಮೃತಪಟ್ಟಿರುವುದರಿಂದ ಆಕಾಶ್ ಕುಟುಂಬಸ್ಥರು ತೀವ್ರವಾಗಿ ಆಘಾತಕ್ಕೊಳಗಾಗಿದ್ದಾರೆ. ಸಣ್ಣ ವಯಸ್ಸಿನ ಯುವಕರೇ ಇತ್ತೀಚೆಗೆ ಏಕಾಏಕಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ತೀವ್ರ ಆತಂಕವನ್ನುಂಟು ಮಾಡಿದೆ. ಇನ್ನೂ ಆಕಾಶ್ ಮೃತದೇಹವನ್ನು ಸ್ವಗ್ರಾಮದಲ್ಲೇ ಸಂಸ್ಕಾರ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಸ್ವಗ್ರಾಮದವರು ಹಾಗೂ ಅಪ್ಪು ಅಭಿಮಾನಿಗಳು ಭಾಗಿಯಾಗಿದ್ದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಮಧುಗಿರಿ: ಕಸಬಾ ಹೋಬಳಿ ಬಸವನಹಳ್ಳಿ ಸಮೀಪ ಈರಣ್ಣನ ಬೆಟ್ಟದ ಮೇಲ್ಭಾಗದ ಜಾಲಗಿರಿ ಮರಕ್ಕೆ ಅಪರಿಚಿತ ವ್ಯಕ್ತಿ ನೇಣುಬಿಗಿದುಕೊಂಡು ಮೃತಪಟ್ಟಿರುತ್ತಾನೆ. ಸ್ಥಳಕ್ಕೆ ಸಿಪಿಐ ಸರ್ದಾರ್ ಪಿಎಸ್ ಐ ತಾರಾ ಸಿಂಗ್ ಭೇಟಿ ನೀಡಿದರು ಸ್ಥಳ ಪರಿಶೀಲಿಸಿ ದೂರನ್ನು ದಾಖಲಿಸಿಕೊಂಡಿದ್ದಾರೆ. ಮಧುಗಿರಿ ಪೊಲೀಸ್ ಪ್ರಫೆಷನರಿ ಪಿಎಸ್ ಐ ಧಮಾಜಿ, ಪೊಲೀಸ್ ಸಿಬ್ಬಂದಿ ಕಾಂತರಾಜು, ಕಲ್ಲೇಶ್, ಶಿವಣ್ಣ, ಈರಣ್ಣಬೆಟ್ಟದಿಂದ  ಮರಕ್ಕೆ ನೇಣು ಬಿಗಿದುಕೊಂಡಿದ ವ್ಯಕ್ತಿಯ ಮೃತದೇಹವನ್ನು ಬೆಟ್ಟದಿಂದ ಕೆಳಗೆ ಇಳಿಸಿದರು. ವರದಿ: ಅಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಮಧುಗಿರಿ : ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ವಿದ್ಮಹಿ ಪ್ರೊಡಕ್ಷನ್ ಬಿಡುಗಡೆ ಮಾಡಿದ ಜೇಮ್ಸ್ ಚಲನ ಚಿತ್ರ ವೀಕ್ಷಣೆ ಅಭಿಮಾನಿಗಳು ಮುಗಿಬಿದ್ದರು. ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಬಾಲಾಜಿ ಚಲನಚಿತ್ರ ಮಂದಿರದಲ್ಲಿ ವಿದ್ಮಯಿ ಪ್ರೋಡಕ್ಷನ್   ರವರ ಜೆಮ್ಸ್ ಚಲನ ಚಿತ್ರವು ಪ್ರದರ್ಶನ ಆರಂಭಗೊಂಡಿದ್ದು  ಅಪ್ಪು ಅಭಿಮಾನಿಗಳು ಅಪ್ಪು ರವರ ಭಾವಚಿತ್ರವನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಬ್ಯಾಂಡ್ ಸೆಟ್ ಬಾರಿಸಿ ಕುಣಿಯುತ್ತಾ , ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಅಪ್ಪು ರವರ ಜನಮ ದಿನವನ್ನು ಆಚರಿಸಿದರು. ತಾಲ್ಲೂಕಿನ ವಿವಿಧ ಕಡೆ ಜೇಮ್ಸ್  ಚಲನ ಚಿತ್ರವು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಿದ್ದಗೊಳ್ಳುತ್ತಿದ್ದು ಅಪ್ಪು ಅಭಿಮಾನಿಗಳು ದೊಡ್ಡ ದೊಡ್ಡ ಕಟ್ ಓಟ್ ಗಳಿಗೆ ಬೃಹತ್ ಹೂವಿನ ಹಾರ, ಹಾಲಿನ ಅಭಿಷೇಕ ಮಾಡುವುದರೊಂದಿಗೆ ತಮ್ಮ ನೆಚ್ಚಿನ ಚಿತ್ರ ನಟ ಅಪ್ಪುರವರ ಚಲನ ಚಿತ್ರಕ್ಕೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ. ಯೋಧನ ಲುಕ್ ನಲ್ಲಿರುವ ಪವರ್ ಸ್ಟಾರ್ ಪುನೀತ್ ರವರ  ಕಟ್‌ಓಟ್ ಗಳು…

Read More

ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ದೊಡ್ಡೇರಿ ಗ್ರಾಮದಲ್ಲಿ ಶ್ರೀ ಕೋಡಿ ಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಬಹಳ ಅದ್ದೂರಿಯಿಂದ ನೇರವೇರಿತು. ಭಕ್ತಾದಿಗಳ ಮಂಡೆ ಕಾಯ೯ಕ್ರಮ, ವೀರಗಾರರ ಭಾನ ಸುಲಿಗೆ ಸೇವೆ, ರುದ್ರಾಭಿಷೇಕ ಶಯನೋತ್ಸವ , ಶ್ರೀ ರಾಮದೇವರು ಶ್ರೀ ಕೋಡಿ ಲಿಂಗೇಶ್ವರ ಸ್ವಾಮಿ,  ಶ್ರೀ ಪಾವ೯ತಿ ಅಮ್ಮನವರ ಮೆರವಣಿಗೆ ಉತ್ಸವ  ಊರಿನ ಗ್ರಾಮಸ್ಥರಿಂದ ಯಕ್ಷಗಾನ, ನಾಟಕ  ಕಾಯ೯ಕ್ರಮಗಳು ಜರುಗಿದವು. ಗ್ರಾಮದ ಯಜಮಾನರು ,  ದೊಡ್ಡೇರಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾದಿಗಳು ದೊಡ್ಡೇರಿ ನಾಡಕಛೇರಿ ಗ್ರಾಮಪಂಚಾಯಿತಿ ಅಡಳಿತ ವಗ೯ದವರು ತಹಶೀಲ್ದಾರ್ ಮುಜರಾಯಿ ಇಲಾಖೆಅಧಿಕಾರಿಗಳು ಭಾಗವಹಿಸಿದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಗದಗ: ಜನಪದ ಕಲೆಗಳನ್ನು ಮೈಗೂಡಿಸಿಕೊಂಡು ದೇಶ ವಿದೇಶಗಳಲ್ಲಿ  ಜನಪದ ಕಲಾ ಪ್ರದರ್ಶನ ನೀಡಿದ  ಬಯಲು ಸೀಮೆಯ ಜಾಲಿಗಿಡದ ಕೋಗಿಲೆ ಎಂದು ಪ್ರಸಿದ್ಧಿ ಪಡೆದ ಜನಪದ ಸಂಜೀವಿನಿ ಗದಗ ಜಿಲ್ಲೆಯ  ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ  ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರ ಜೀವಮಾನದ ಸಾಧನೆಯನ್ನು ಪರಿಗಣಿಸಿ  ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಗದ್ಗುರು  ಶ್ರೀ ಶಿವಶಕ್ತಿ ಪೀಠ ಸುಕ್ಷೇತ್ರ ಇರಕಲ್ ಮಠದಲ್ಲಿ ನಡೆದ ಜಾತ್ರಾಮಹೋತ್ಸವದಲ್ಲಿ  2022ನೇ ಸಾಲಿನ “ಕಲಾ ಶ್ರೇಷ್ಠ” ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಇರಕಲ್ ಶಿವ ಶಕ್ತಿ ಪೀಠದ  ಶ್ರೀ ಬಸವ ಪ್ರಸಾದ ಸ್ವಾಮೀಜಿ, ಶ್ರೀ ಭಗೀರಥ ಪೀಠ ಮಹಾಸಂಸ್ಥಾನದ ಪೂ.ಜ.ಪುರುಷೋತ್ತಾಮನಂದಪುರಿ ಮಹಾಸ್ವಾಮಿಗಳು, ಕುಂಚಟಗಿ ಮಹಾಸಂಸ್ಥಾನ ಮಠದ ಪೂ.ಜ.ಡಾ.ಶಾಂತವೀರ ಮಹಾಸ್ವಾಮಿಗಳು ಹೂಸದುರ್ಗ,ಭೋವಿ ಗುರುಪೀಠದ ಪೂ.ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಶ್ರೀ ಹಡಪದ ಅಪ್ಪಣ್ಣ ಗುರುಪೀಠದ ಪೂ.ಜ.ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಶ್ರೀ ಕುಂಬಾರ ಗುರು ಪೀಠದ ಪೂ.   ಬಸವ ಗುಂಡಯ್ಯಮಹಾಸ್ವಾಮಿಗಳು ,ಶ್ರೀ ಕಾಶಿ ಅನ್ನಪೂರ್ಣೇಶ್ವರಿ …

Read More

ಕೊರಟಗೆರೆ : ಡಾ.ಜಿ.ಪರಮೇಶ್ವರ್,  ಕೆ.ಎನ್.ರಾಜಣ್ಣ ಅವರು ತುಮಕೂರು ಜಿಲ್ಲೆಗೆ ರಾಮ-ಲಕ್ಷ್ಮಣರಿದ್ದಂತೆ ಎಂದು ಮಾಜಿ ಸಚಿವ ದಿವಂಗತ ಚೆನ್ನಿಗಪ್ಪನವರ ಹಿರಿಯ ಪುತ್ರ ಡಿ.ಸಿ.ಅರುಣ್ ಕುಮಾರ್ ಹೇಳಿದರು. ತಾಲ್ಲೂಕಿನ ಕೋಳಾಲ ಹೋಬಳಿಯ ಕುರುಬರಪಾಳ್ಯ(ಮಜರೆ ಪುಟ್ಟ ಸಂದ್ರ)ಗ್ರಾಮದಲ್ಲಿ ಶ್ರೀ ಮುತ್ತುರಾಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕುರುಕ್ಷೇತ್ರ ನಾಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ತುಮಕೂರು ಜಿಲ್ಲೆಗೆ ಡಾ.ಜಿ. ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ರಾಮ-ಲಕ್ಷ್ಮಣರು ಇದ್ದಂತೆ, ಇಬ್ಬರೂ ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಕೊರಟಗೆರೆ ತಾಲ್ಲೂಕು ಮತ್ತು ಮಧುಗಿರಿ ತಾಲ್ಲೂಕುಗಳನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮವಹಿಸುತ್ತಿದ್ದಾರೆ  ಎಂದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯನ್ನು ಕಂದಾಯ ಜಿಲ್ಲೆಯನ್ನಾಗಿ ಮಾಡಲು ಕೆ.ಎನ್.ರಾಜಣ್ಣ ಬಹಳ ಶ್ರಮವಹಿಸುತ್ತಿದ್ದಾರೆ.  ಇವರಿಬ್ಬರಿಂದ ನಮ್ಮ ತುಮಕೂರು ಜಿಲ್ಲೆಯು ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ  ಅಭಿವೃದ್ಧಿ ಹೊಂದುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿ, ರಾಜ್ಯದ ಮುಖ್ಯಮಂತ್ರಿಗಳಾಗಿ  ಡಿ.ಕೆ.ಶಿವಕುಮಾರ್…

Read More

ಕೊರಟಗೆರೆ: ತಾಲ್ಲೂಕಿನ ಹೊರವಲಯದಲ್ಲಿರುವ ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ  ಹೊರಾಂಗಣದಲ್ಲಿ ವಿಷ್ಣು ಸಮಾಜವು ಹೋಳಿ ಹಬ್ಬವನ್ನು ಸಡಗರ ಸಂಭ್ರಮ ಆಚರಿಸಿದರು. ವಿಷ್ಣು ಸಮಾಜದ ಹೆಣ್ಣು ಮಕ್ಕಳು ಅವರ ಜನಾಂಗದಲ್ಲಿ ಬರುವ ಜನಪದ ಗೀತೆಗಳನ್ನು ಹಾಡುತ್ತಾ ಸಂಭ್ರಮಿಸಿದರೆ, ಇತ್ತ ಹುಡುಗರು ನಾವೇನು ಕಮ್ಮಿ ಎನ್ನುವಂತೆ ಸಮಾಜದ ಹಲವು ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ವಿಷ್ಣು ಸಮುದಾಯದ ಮುಖಂಡ  ಜಯರಾಂ ಮಾತನಾಡಿ, ನಮ್ಮ ಪೂರ್ವಿಕರ ಕಾಲದಿಂದಲೂ ಮಾಡಿಕೊಂಡು ಬಂದಿರುವ ಹೋಳಿ ಹಬ್ಬದ ಸಂಭ್ರಮಾಚರಣೆ ನಾವು ಕೂಡ ಮುಂದುವರಿಸುತ್ತಿದ್ದೇವೆ. ಪ್ರತಿವರ್ಷ ಹೋಳಿ ಹಬ್ಬ ಬಂತೆಂದರೆ ಸಾಕು ನಮ್ಮ ಸಮುದಾಯದ ಎಲ್ಲಾ ಜನರು ಒಟ್ಟಿಗೆ ಕೂಡಿ ಸಂಭ್ರಮಿಸುತ್ತೇವೆ. ಕಳೆದ 3ವರ್ಷಗಳಿಂದ ಕೋವಿಡ್ ಹಿನ್ನೆಲೆ ಯಾವುದೇ ಸಂಭ್ರಮಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ  ಇದೀಗ ದೇವರ ದಯೆಯಿಂದ ಎಲ್ಲಾ ಮಹಾಮಾರಿಯಿಂದ ದೂರವಾಗಿ ಸಂಭ್ರಮಗಳು ಮನೆ ಮಾಡುತ್ತಿವೆ ಎಂದು ತಿಳಿಸಿದರು. ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಕೊರಟಗೆರೆ : ಹುಲಿಕುಂಟೆ ಗ್ರಾಮ ಪಂಚಾಯಿತಿ ಮಾಜಿ  ಅಧ್ಯಕ್ಷ ಜೆ.ಸಿ.ರಮೇಶ್ ರಾಜೀನಾಮೆಯಿಂದ  ತೆರವಾಗಿದ್ದ ಸಾಮಾನ್ಯ ಮೀಸಲು ಕ್ಷೇತ್ರದ  ಅಧ್ಯಕ್ಷ ಸ್ಥಾನಕ್ಕೆ ಫ್ರೆಂಡ್ಸ್ ಗ್ರೂಪ್ ಡಿ.ಎಲ್.ಮಲ್ಲಣ್ಣ ಸರ್ವ ಸದಸ್ಯರ  ಬೆಂಬಲದಿಂದ ಅವಿರೋಧವಾಗಿ ಆಯ್ಕೆ  ಆಗಿದ್ದಾರೆ. ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂಯಲ್ಲಿ ಇಂದು ನಡೆದ  ಅಧ್ಯಕ್ಷರ ಚುನಾವಣೆಯಲ್ಲಿ ಫ್ರೆಂಡ್ಸ್ ಗ್ರೂಪ್  ಮಲ್ಲಣ್ಣ ನೂತನ ಅಧ್ಯಕ್ಷರಾಗಿ ಅವಿರೋಧ  ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ  ಹುಲೀಕುಂಟೆ ಅನ್ನಪೂರ್ಣ ಮುಂದುವರಿದಿದ್ದಾರೆ. ಈ ಸಂದರ್ಭ ಕೊರಟಗೆರೆ ತಹಶೀಲ್ದಾರ್ ನಾಹೀದಾ ಮಾತನಾಡಿ, ಹುಲೀಕುಂಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದೆ. ಅಧ್ಯಕ್ಷ ಸ್ಥಾನದ  ಆಕಾಂಕ್ಷಿಯಾಗಿ ಮಲ್ಲಣ್ಣ ಒಬ್ಬರೇ ನಾಮಪತ್ರ  ಸಲ್ಲಿಸಿದ್ದಾರೆ.  ಮಲ್ಲಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಯಾರೂ ಪ್ರತಿಸ್ಪರ್ಧಿಗಳಿಲ್ಲದ ಕಾರಣ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ  ನಡೆದಿಲ್ಲ ಹಾಗೇ ಮುಂದುವರೆಯಲಿದ್ದಾರೆ  ಎಂದು ತಿಳಿಸಿದರು. ಹುಲೀಕುಂಟೆ ಗ್ರಾಮ ಪಂಚಾಯಿತಿಯ  ನೂತನ ಅಧ್ಯಕ್ಷ ಮಲ್ಲಣ್ಣ ಮಾತನಾಡಿ, ಕರುನಾಡಿನ ಯುವರಾಜ  ಅಪ್ಪು ಹುಟ್ಟಿದ ದಿನ ನಾನು ಗ್ರಾಮ ಪಂಚಾಯಿತಿಯ ಅಧ್ಯಕ್ಷನಾಗಿ…

Read More