Subscribe to Updates
Get the latest creative news from FooBar about art, design and business.
- ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
- ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
- ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
- ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
- ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
- ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
- ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
- ಖ್ಯಾತ ಖಳನಟ ಹರೀಶ್ ರಾಯ್ ನಿಧನ
Author: admin
ತುಮಕೂರು: ಯಾರು ಎಲ್ಲಿ ಬೇಕಾದ್ರು ಸ್ಪರ್ಧೆ ಮಾಡಬಹುದು, ತೊಂದ್ರೆ ಏನು ಇಲ್ಲ. ಯಾರೂ ಎಲ್ಲಿ ಬೇಕಾದ್ರು ಚುನಾವಣೆ ನಿಲ್ಲಬಹುದು. ಚುನಾವಣೆಗೆ ನಿಲ್ಬೇಡಿ ಅಂತಾ ಹೇಳೋಕಾಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುತ್ತಿರುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಅವ್ರೆ ನಿರ್ಧಾರ ಮಾಡಿ, ಅವ್ರು ಎಲ್ಲಿ ಅಭ್ಯರ್ಥಿ ಹಾಕ್ತಾರೋ ಅದು ಅವರಿಗೆ ಸೇರಿದ್ದು, ನಮ್ಮ ಪಕ್ಷ ಸಂಘಟನೆಗೆ ನಾವೇನ್ ಮಾಡ್ಬೇಕೊ, ನಾವು ಅದನ್ನ ಮಾಡ್ತೀವಿ ಎಂದರು. ಬಿಬಿಎಂಪಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ವಾರ್ಡ್ ವಿಂಗಡಣೆ ಬಗ್ಗೆ ಈಗಾಗ್ಲೇ ಹಲವಾರು ಗೊಂದಲಗಳಿವೆ. ಬಹುಶಃ ಚುನಾವಣೆ ನಡಿಯಬಾರ್ದು ಅನ್ನೋ ಹಿನ್ನೆಲೆಯಲ್ಲಿ ಗೊಂದಲಗಳನ್ನ ಸೃಷ್ಟಿ ಮಾಡೋದಕ್ಕೆ ಹೊರಟಿದ್ದಾರೆ. ಮುಂದೆ ಏನೇನಾಗುತ್ತೆ ಅಂತಾ ನೋಡೋಣ ಎಂದು ಅವರು ಹೇಳಿದರು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ತುಮಕೂರು: ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಬರಗೂರು ರಾಮಚಂದ್ರಪ್ಪನವರು 150 ತಪ್ಪುಗಳನ್ನು 169 ಪೇಜ್ ಗಳಲ್ಲಿ ಮಾಡಿದ್ರು. ನಮ್ಮ ಕಾಲ ದಲ್ಲಿ ಕೇವಲ 17 ತಪ್ಪುಗಳಾಗಿವೆ ಅದನ್ನು ಸರಿಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ತುಮಕೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಹೆಸರು ಬದಲಾವಣೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸುತ್ತಾ, ಎನ್.ಇ.ಪಿ ಪ್ರಕಾರ ಶಿಕ್ಷಣ ಇಲಾಖೆಯ ಹೆಸರನ್ನು ಬದಲಾಯಿಸಲಾಗಿದೆ. ಆಡಳಿತಾತ್ಮಕ ಬದಲಾವಣೆ ಬಗ್ಗೆ ಮುಂದೆ ಚರ್ಚಿಸುತ್ತೇವೆ ಎಂದರು. ಡಿ.ಕೆ.ಶಿವಕುಮಾರ್ ಪಠ್ಯಪುಸ್ತಕ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರಸ್ವತಿಯನ್ನ ಹರಿದು ಹಾಕುವ ಸಂಸ್ಕ್ರತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಅಕಸ್ಮಾತ್ ಕಾಲಿಗೆ ತಾಗಿದ್ರೆ ನಾವು ಕಣ್ಣಿಗೆ ಒತ್ತಕೊಂಡು ನಮಸ್ಕಾರ ಮಾಡ್ತಿವಿ. ಡಿ.ಕೆ.ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ. ಅದ್ಕೆ ನಾವೇನು ಮಾಡೋಕ್ಕಾಗಲ್ಲ ಎಂದ ಅವರು, ಈಗಾಗಲೆ 75 % ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿದೆ ಎಂದು ಇದೇ ವೇಳೆ ತಿಳಿಸಿದರು. ದೇವೇಗೌಡರ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದೇವೆಗೌಡರು ಹಿರಿಯರು, ಗೌರವಾನ್ವಿತರು. …
ತುಮಕೂರು: ಈ ದೇಶ ವಿಶಿಷ್ಟ ದೇಶ ಆಚಾರ ವಿಚಾರ ಸಂಸ್ಕೃತಿ ಎಲ್ಲವೂ ವಿಭಿನ್ನವಾಗಿದ್ದು, ನಮ್ಮ ಮೇಲೆ ಆಕ್ರಮಣ ನಡೆದರೂ ನಮ್ಮ ತನವನ್ನು ಉಳಿಸಿಕೊಂಡಿದೆ ಎಂದು ಮಾಜಿ ಸಿಎಂ ಸದಾನಂದ ಹೇಳಿದರು. ಕುಂಚಿಟಿಗ ಒಕ್ಕಲಿಗ ಸಮಾವೇಶದಲ್ಲಿ ಮಾತನಾಡಿದ ಅವರು, ಒಬ್ಬ ದೇವೇಗೌಡ ಈ ದೇಶದ ಪ್ರಧಾನಿ ಆಗಿದ್ದು ನಮ್ಮ ಒಕ್ಕಲಿಗ ಸಮಾಜದ ಹೆಮ್ಮೆ. ಕುವೆಂಪು ವಿಶ್ವಮಾನವ ಸಮಾಜದ ಸಂದೇಶ ಕೊಟ್ಟಿದ್ದು, ಅವರು ನಮ್ಮ ಒಕ್ಕಲಿಗ ಸಮುದಾಯದವರು ಎನ್ನೋದು ಹೆಮ್ಮೆಯ ಸಂಗತಿ. 500 ವರ್ಷಗಳ ಹಿಂದೆ ಕೆಂಪೇಗೌಡರು ಸ್ಮಾರ್ಟ್ ಸಿಟಿ ಯೋಜನೆ ಪರಿಕಲ್ಪನೆ ಕೊಟ್ಟವರು. ಅಮೇರಿಕಾದಲ್ಲೂ ಕುಂಚಿಟಿಗ ಒಕ್ಕಲಿಗರ ಸಮುದಾಯ ಪಾರುಪತ್ಯ ಇದೆ ಎಂದು ಸದಾನಂದ ಗೌಡ ಹೇಳಿದರು. ಎಲ್ಲೋ ಒಂದು ಕಡೆ ನಾನು ಗೌಡ ನಾನು ಒಕ್ಕಲಿಗ ಎಂದು ಹೇಳಲು ನಮ್ಮವರಲ್ಲಿ ಕೀಳರಿಮೆ ಇದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಒಕ್ಕಲಿಗರನ್ನು ಸೇರಿಸಲು ನನ್ನ ಪ್ರಯತ್ನ ನಿರಂತರವಾಗಿ ಕುಲ ಅಧ್ಯಯನ ಮಾಡಿ ಎಂದು ನಾನು ರಾಜ್ಯಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರಕ್ಕೆ ಒತ್ತಡ ತರುವ ಕೆಲಸ…
ತುಮಕೂರು: ಡಿ ಎಸ್ ಎಸ್ ಮುಖಂಡ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿಯನ್ನು ಹತ್ಯೆ ಮಾಡಿದ 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾದ್ ತಿಳಿಸಿದರು. ಎಸ್ ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನರಸಿಂಹಮೂರ್ತಿ ಹತ್ಯಾರೋಪಿಗಳ ಬಂಧನ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 13 ಮಂದಿ ಆರೋಪಿಗಳನ್ನು ಕನಕಪುರದ ಹಾರೋಹಳ್ಳಿ ಸಮೀಪ ಫಾರಂ ಹೌಸ್ ನಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು. ಕಿರಣ್, ಕ್ಯಾಟ್ ರಾಜ, ಮಂಜು, ಅಭಿಷೇಕ್, ನಯಾಜ್, ವೆಂಕಟೇಶ, ಕೀರ್ತಿ, ಚಂದ್ರಶೇಖರ್, ಭರತ್, ಧೀರಜ್ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. 7 ದಿನ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತೇವೆ ಎಂದರು. ಜೂನ್ 15 ರಂದು ನರಸಿಂಹಮೂರ್ತಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. 7 ಮಂದಿ ಆರೋಪಿಗಳು ಹತ್ಯೆ ನಡೆಸಿದ್ದರೆ, 6 ಜನ ಆರೋಪಿಗಳು ಹತ್ಯೆಗೆ ಸಹಕರಿಸಿದ್ದರು ಎಂದು ಅವರು ತಿಳಿಸಿದರು. ಭೂ ವಿವಾದ ಹಾಗೂ…
ತುಮಕೂರು: ಕುವೆಂಪು ಕುರಿತಂತೆ ಪಠ್ಯದಲ್ಲಿ ಹೆಚ್ಚಿನ ವಿಚಾರ ಸೇರಿಸಿದ್ದು ಬಿಜೆಪಿ. ಕುವೆಂಪು ಅವರ ಎರಡು ಕವನವನ್ನ ನಾಡಗೀತೆ ಮಾಡಿದ್ದು ಬಿಜೆಪಿ. ಹಾಗಾಗಿ ನಾವು ಕುವೆಂಪುಗೆ ಅಪಮಾನ ಮಾಡಲು ಸಾಧ್ಯನಾ..? ಎಂದು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಪಠ್ಯಪುಸ್ತಕ ವಾಪಸ್ ಪಡೆದುಕೊಳ್ಳುವಂತೆ ದೇವೇಗೌಡರ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಮಾತನಾಡೋದಕ್ಕೆ ಸಿಎಂ ಹಾಗೂ ಶಿಕ್ಷಣ ಸಚಿವರು ತಯಾರಿದ್ದಾರೆ. ಆದರೆ ದೇವೇಗೌಡರೇ ಮಾತನಾಡೋಕೆ ಬಾರದೇ ಮಾರ್ಗದಲ್ಲಿ ಕುಳಿತುಕೊಳ್ತೇನೆ ಅಂದರೆ ಹೇಗೆ ಎಂದು ಪ್ರಶ್ನಿಸಿದರು. ಎಲ್ಲವೂ ರಾಜಕೀಯ ಪ್ರೇರಿತವಾಗಿರಬಾರದು. ಈಗಾಗಲೇ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. ನಾವು ಯಾವುದರಲ್ಲೂ ರಾಜಕಾರಣ ತುರುಕಿ, ಬೆಳೆಯುವಂತಾ ಮಕ್ಕಳ ಮನಸ್ಸನ್ನ ಹಾಳು ಮಾಡಲ್ಲಾ. ದೇಶದ ಸಂಸ್ಕೃತಿ, ಸಂಸ್ಕಾರ ಉಳಿಯಬೇಕು. ಪರದೇಶದ ಶಿಕ್ಷಣ ಪದ್ದತಿಯಿಂದ ನಾವು ಹೊರಬರಲೇಬೇಕು. ಮೆಕಾಲೆ ಆಧಾರಿತ ಶಿಕ್ಷಣ ಪದ್ದತಿಯನ್ನ ಭಾರತೀಯ ಶಿಕ್ಷಣ ಪದ್ದತಿಯಾಗಿ ಬದಲಾಯಿಸಬೇಕು. ಹಾಗಂತ…
ಸರಗೂರು: ವಿಶೇಷಚೇತನರ ತ್ರಿಚಕ್ರ ಬೈಕ್ ಸವಾರನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಬೈಕ್ ಸವಾರನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸರಗೂರು ತಾಲ್ಲೂಕಿನ ಶಾಂತಿನಿವಾಸ ಗ್ರಾಮದ ಬಳಿ ನಡೆದಿದೆ. ಸರಗೂರು ತಾಲ್ಲೂಕಿನ ಕಲ್ಲಹಳ್ಳ ಹಾಡಿಯ ಕಾಳ ಅಲಿಯಾಸ್ ಅಪ್ಪಿ, ನಾಗಮ್ಮ, ವಿಜಯೇಂದ್ರ ಎಂಬುವವರು ತ್ರಿಚಕ್ರ ವಾಹನದಲ್ಲಿ ಸುಂಗೇವಾಡಿ ಹಾಡಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಮುಗಿಸಿ ತಮ್ಮ ಸ್ವಗ್ರಾಮಕ್ಕೆ ಮರಳುವ ವೇಳೆ ಈ ದುರ್ಘಟನೆ ನಡೆದಿದ್ದು, ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಸವಾರರಾದ ನಾಗಮ್ಮ, ವಿಜಯೇಂದ್ರ ಎಂಬುವವರು ಮೃತಪಟ್ಟಿದ್ದು, ಬೈಕ್ ಸವಾರ ಕಾಳ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಹೆಚ್.ಡಿ.ಕೋಟೆ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗಾಯಗೊಂಡಿದ್ದ ಕಾಳ ಎಂಬುವವರನ್ನು ವಿವೇಕಾನಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ತಿಪಟೂರು : ನಾಡಿನ ಏಳಿಗೆಗಾಗಿ ಶ್ರಮಿಸಿದ ಮಹಾನ್ ಚೇತನಗಳ ವಿಚಾರಧಾರೆಯನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿಸದೇ ಪಠ್ಯದ ಹೊರತಾಗಿಯೂ ಮನವರಿಕೆ ಮಾಡುವ ಕಾರ್ಯವನ್ನು ಮಾಡಬೇಕಿದೆ ಎಂದು ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ನಾಡಪ್ರಭು ಶ್ರೀ ಕೆಂಪೇಗೌಡರ 513ನೇ ಜಯಂತ್ಯೋತ್ಸವವನ್ನು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಸಂಘ ಜೀವಿಯಾಗಿದ್ದು, ಮಾನವನ ಆಚರಣೆಗಳ ಅನ್ವಯದಲ್ಲಿ ಜಾತಿ, ಮತ, ಧರ್ಮಗಳನ್ನು ರೂಢಿಸಿಕೊಂಡಿದ್ದಾನೆ. ಅಂತಹ ಕಂದಾಚಾರದಿಂದ ಹೊರ ಬಂದು ಎಲ್ಲಾ ಮಾನವರು ಒಂದೇ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಮಹಾನ್ ಚೇತನಗಳಿಗೆ ಅಪಮಾನವಾಗದಂತೆ ಪಠ್ಯದಲ್ಲಿ ವಿಚಾರಗಳನ್ನು ಸೇರಿಸುವ ಅಗತ್ಯವಿದೆ. ಜೊತೆಗೆ ಪಠ್ಯದ ಹೊರತಾಗಿಯೂ ಮಕ್ಕಳಿಗೆ ವಿಚಾರಗಳನ್ನು ತಿಳಿಸುವಂತಹ ಕಾರ್ಯವನ್ನು ಮಾಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ. ಸಮಾಜದಲ್ಲಿ ಜಾತಿ, ಮತ, ಧರ್ಮಗಳ ಬೇಧವನ್ನು ಮರೆತು ಎಲ್ಲರೂ ಎಲ್ಲರಿಗೂ ಗೌರವ, ಪ್ರೀತಿ, ಸಹಕಾರ ನೀಡಿ ಒಂದಾಗಿ ಬಾಳುವಂತಹ ಮನೋಭಾವವನ್ನು…
ಬಾಗಲಕೋಟೆ: ಆ ಚಿಂಕಿ ಅಂದ್ರೆ ಏರಿಯಾ ಜನ್ರಿಗೆಲ್ಲ ಅಚ್ಚುಮಚ್ಚು. ರಂಗಭೂಮಿ ಕಲಾವಿದೆ ಮನೆಯಲ್ಲಿನ ಚಿಂಕಿಯ ಹಾರಾಟ ಚೆಲ್ಲಾಟ ನೋಡಲು ಎರಡು ಕಣ್ಗಳು ಸಾಲದು. ನಿಯತ್ತಿಗೆ ಹೆಸರಾದ ಆ ಚಿಂಕಿ ವಾರದ ಹಿಂದೆ ತುಂಬು ಗರ್ಭಿಯಾಗಿದ್ಲು. ಹೀಗಾಗಿ ಪ್ರೀತಿಯ ಚಿಂಕಿಗೆ ಸೀರೆ, ಬಳೆ, ಅರಶಿನ ಕುಂಕಮ ಹಚ್ಚಿ ಆರತಿ ಬೆಳಗಿ ಏರಿಯಾ ಜನ್ರು ಖುಷಿಪಟ್ಟಿದ್ರು. ಸಿಹಿ ತಿಂಡಿ ತಿನಿಸು ಮಾಡಿ ದಿನವನ್ನ ಸಂತಸದಿಂದ ಕಳೆದ್ರು. ಸದ್ಯ ಆ ಚಿಂಕಿ ಆರು ಪುಟಾಣಿ ಮಕ್ಕಳನ್ನ ಹೆತ್ತು ಕೊಟ್ಟಿದೆ. ಕಲಾವಿದೆಯ ಚಿಂಕಿ ಪ್ರೀತಿ, ಚಾರ್ಲಿ ಸಿನೆಮಾ ನೆನಪಸುತ್ತೆ. ಬನ್ನಿ ಹಾಗಿದ್ರೆ ಆ ಚಿಂಕಿ ಯಾರು? ರಂಗಭೂಮಿ ಕಲಾವಿದೆಯ ಪ್ರಾಣಿ ಪ್ರೀತಿ ಕುರಿತ ಸ್ಟೋರಿ ಇಲ್ಲಿದೆ. ಹಸಿರು ಸೀರೆ, ಹಸಿರು ಬಳೆಗಳಿಂದ ಚಿಂಕಿಗೆ ಸಿಂಗಾರ. ಆರತಿ ಬೆಳಗಿ ಸಿಹಿ ತಿಂಡಿ ತನಿಸು ತಿನ್ನಿಸಿ ಶ್ವಾನಕ್ಕೆ ಸೀಮಂತ ಕಾರ್ಯ ಮಾಡುವುದರ ಮೂಲಕ ಈಗ ಇಲ್ಲಿನ ರಂಗಭೂಮಿ ಕಲಾವಿದೆ ಶ್ವಾನ ಪ್ರೀತಿ ಮೆರೆದಿದ್ದಾರೆ.ನಟ ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರ 777…
ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ಖತರ್ನಾಕ್ ಡಿಜೆಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 6.5 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಬಂಧಿತ ಡಿಜೆ ಡಾರ್ಕ್ವೆಬ್ ಸೈಟ್ ಮೂಲಕ ಡ್ರಗ್ಸ್ ತರಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಬಂಧಿತನಿಂದ 6.5 ಲಕ್ಷ ಮೌಲ್ಯದ 15.08 ಗ್ರಾಂ ತೂಕದ 25 ಎಂಡಿಎಂಎ ಎಕ್ಸ್ಟಸಿ ಪಿಲ್ಸ್ ಗಳು, 0.48 ಗ್ರಾಂ ತೂಕದ 29 ಎಲ್.ಎಸ್.ಡಿ ಸ್ಟ್ರಿಪ್ಸ್ಗಳು 1 ಕೆಜಿ ಗಾಂಜಾ, ಲ್ಯಾಪ್ಟಾಪ್ ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಆಯುಕ್ತ ರಮಣ್ ಗುಪ್ತ ತಿಳಿಸಿದ್ದಾರೆ. ಆರೋಪಿಯು ಕಡಿಮೆ ಬೆಲೆಗೆ ನಗರದಲ್ಲಿ ನೆಲೆಸಿರುವ ಆಫ್ರಿಕಾ ಪ್ರಜೆಯಿಂದ ಎಂಡಿಎಂಎ ಹಾಗೂ ಸ್ಥಳೀಯ ಪೆಡ್ಲರ್ ಗಳಿಂದ ಗಾಂಜಾವನ್ನು ಖರೀದಿಸಿ ಒಂದು ಎಂಡಿಎಂಎ ಎಕ್ಸ್ ಟೆಸಿ ಪಿಲ್ಸ್ ಅನ್ನು3 ದ 4 ಸಾವಿರದಂತೆ, ಒಂದು ಎಲ್ಎಸ್ಡಿ ಸ್ಟ್ರಿಪ್ಸ್ 8ರಿಂದ 10 ಸಾವಿರದಂತೆ ಹಾಗೂ 10 ಗ್ರಾಂ ಗಾಂಜಾವನ್ನು 1 ರಿಂದ 2 ಸಾವಿರದಂತೆ ಹೆಚ್ಚಿನ ಬೆಲೆಗೆ…
ಮುಳುಬಾಗಿಲು ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ಮೋಹನರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಪಾರಿ ಹಂತಕ ಬಾಲಾಜಿ ಸಿಂಗ್ ನನ್ನು ಗುಂಡಿಕ್ಕಿ ಬಂಧಿಸಿದ್ದಾರೆ. ಸುಪಾರಿ ಹಂತಕ ಬಾಲಾಜಿ ಸಿಂಗ್ಗಬ್ಬರ್ ಗಾಯಗೊಂಡಿದ್ದು, ಆತನನ ಕೋಲಾರದ ಎಸ್ಎಎನ್ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ಮೋಹನರೆಡ್ಡಿ ಕೊಲೆ ಬಾರಿ ಸಂಚಲನ ಸೃಷ್ಟಿಸಿತ್ತು. ಜೂ.7 ರಂದು ಮುತ್ಯಾಲಪೇಟೆಯ ಗಂಗಮ್ಮ ದೇವಾಲಯದ ಮುಂಭಾಗದಲ್ಲಿ ದುಷ್ಕರ್ಮಿಗಳು ಭರ್ಬರವಾಗಿ ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದರು. ಕೋಲಾರ ತಾಲ್ಲೂಕಿನ ಚೆಲುವನ ಹಳ್ಳಿ ಬಳಿ ಸುಪಾರಿ ಹಂತಕರು ಅಡಗಿರುವ ಬಗ್ಗೆ ಪೊಲೀಸರುಗೆ ಖಚಿತ ಮಾಹಿತಿ ದೊರೆಯಿತು. ಮುಳಬಾಗಿಲು ಸಿಪಿಐ ಜಿ. ಲಕ್ಷಿಕಾಂತಯ್ಯ ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಪೇದೆ ವಿನಾಯಕ ಅವರ ಮೇಲೆ ಆರೋಪಿ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಲಕ್ಷ್ಮಿಕಾಂತಯ್ಯ ಆರೋಪಿ ಬಾಲಾಜಿ ಸಿಂಗ್ ಬಲ ಗಾಲಿಗೆ ಗುಂಡು ಹೊಡೆದಿದ್ದಾರೆ. ಸ್ಥಳದಲ್ಲೇ ಕುಸಿದು ಬಿದ್ದ ಆರೋಪಿಯನ್ನು…