Subscribe to Updates
Get the latest creative news from FooBar about art, design and business.
- ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
- ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
- ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
- ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
- ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
- ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
- ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
- ಖ್ಯಾತ ಖಳನಟ ಹರೀಶ್ ರಾಯ್ ನಿಧನ
Author: admin
ನವದೆಹಲಿ: ಒಬ್ಬ ವ್ಯಕ್ತಿ ಗುರಿ ಸಾಧಿಸಲು ನಿರ್ಧರಿಸಿದರೆ ಕಠಿಣ ಪರಿಶ್ರಮ ಪಡಲೇಬೇಕು. ಪ್ರತಿ ವರ್ಷ ಅನೇಕ ಅಭ್ಯರ್ಥಿಗಳು UPSCಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಅವರು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗುತ್ತಾರೆ. ಇಂದು ನಾವು ನಿಮಗೆ ಐಎಎಸ್ ಅಧಿಕಾರಿ ನಮಿತಾ ಶರ್ಮಾರ ಯಶಸ್ವಿ ಕಥೆಯನ್ನು ಹೇಳುತ್ತಿದ್ದೇವೆ. ಯುಪಿಎಸ್ಸಿಯಲ್ಲಿ ಅವರ ಪ್ರಯಾಣ ಸಾಕಷ್ಟು ಹೋರಾಟದಿಂದ ಕೂಡಿತ್ತು. ಅನೇಕ ಬಾರಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ವೈಫಲ್ಯ ಎದುರಿಸಿದ್ರೂ ಅವರು ಎದೆಗುಂದಲಿಲ್ಲ. ಛಲಬಿಡದೆ ತಮ್ಮ ಗುರಿ ಸಾಧಿಸಿದ ಅವರ ಕಥೆ ಎಲ್ಲರಿಗೂ ಸ್ಪೂರ್ತಿಯಾಗಿದೆ. UPSC ಜರ್ನಿ ತುಂಬಾ ಸವಾಲಿನದ್ದಾಗಿತ್ತು ನಮಿತಾ ಶರ್ಮಾರ ಯುಪಿಎಸ್ಸಿ ಪ್ರಯಾಣವು ತುಂಬಾ ಸವಾಲಿನದ್ದಾಗಿತ್ತು. ಇದರಲ್ಲಿ ಅವರು ಅನೇಕ ಬಾರಿ ವಿಫಲರಾಗಬೇಕಾಯಿತು. ನಾಗರೀಕ ಸೇವೆಯಲ್ಲಿ ನಮಿತಾ 5 ಬಾರಿ ಫೇಲ್ ಆಗಿದ್ದು ಗೊತ್ತಾದ್ರೆ ಆಶ್ಚರ್ಯ ಆಗುತ್ತೆ. ಎಷ್ಟೋ ಬಾರಿ ಫೇಲ್ ಆದ ನಂತರ ಹೆಚ್ಚಿನವರು ಭರವಸೆಯನ್ನೇ ಕಳೆದುಕೊಂಡುಬಿಡುತ್ತಾರೆ. ಆದರೆ, ನಮಿತಾ ಅವರು ಐಎಎಸ್ ಅಧಿಕಾರಿಯಾಗಲೇಬೇಕೆಂದು ನಿರ್ಧರಿಸಿದ್ದರು. ಈ ಉತ್ಸಾಹವೇ ಅವರಿಗೆ ದೊಡ್ಡ ಶಕ್ತಿ ನೀಡಿತ್ತು ಮತ್ತು…
ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸ್ಥಾಪಿಸಲಾಗಿರುವ ನೃಪತುಂಗ ಏಕೀಕೃತ ವಿಶ್ವವಿದ್ಯಾಲಯದ ಉದ್ಘಾಟನೆಗೆಂದು ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೀಕ್ರೆಟ್ ಆಪರೇಷನ್ ಮಾಡಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಸಚಿವ ಅಮಿತ್ ಶಾ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ರಾಜ್ಯ ರಾಜಕೀಯದ ಕುರಿತಾಗಿ ಪೂರ್ಣ ಮಾಹಿತಿ ಪಡೆದಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ ನಕಾರಾತ್ಮಕವಾಗಿ ಅಭಿಪ್ರಾಯಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಗಂಭೀರ ಕ್ರಮ ಕೈಗೊಂಡಿರುವ ಶಾ ಅವರು ಸೀಕ್ರೆಟ್ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ದಿನ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬದಲಾವಣೆ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ. ಇನ್ನು ಇದರ ಸಂಪೂರ್ಣ ನಿಯಂತ್ರಣ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿದೆ ಎನ್ನಲಾಗಿದೆ. ಪ್ರಧಾನಿಗಳ ತೀರ್ಮಾನದ ಮೇಲೆ ಸಂಪುಟ ಬದಲಾವಣೆ ವಿಚಾರ ನಿಂತಿದೆ.…
ರೆಡ್ ರಿವರ್ ಆಫ್ ಡಿ ಸೌತ್ ಸುಮಾರು 2,100 ಕಿಮೀ ಉದ್ದದ ಕೆಂಪು ನದಿಯನ್ನು ವಿಶ್ವದ ಅತ್ಯಂತ ಅಪಾಯಕಾರಿ ನದಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ನದಿಯು ವಿಚಿತ್ರವಾಗಿದೆ, ಅಂದರೆ, ಈ ನದಿಯ ಬಗ್ಗೆ ಯಾವುದೇ ಊಹೆ ಮಾಡಲಾಗುವುದಿಲ್ಲ. ಕೆಲವೊಮ್ಮೆ ಇದು ತುಂಬಾ ಶಾಂತವಾಗಿರುತ್ತದೆ ಮತ್ತು ಕೆಲವೊಮ್ಮೆ ಈ ನದಿಯೂ ಪ್ರವಾಹದಂತೆ ಹರಿಯುತ್ತದೆ. ಶನಾಯ್-ಟಿಂಪಿಶ್ಕಾ, ಪೆರು ಶನಾಯ್-ಟಿಂಪಿಷ್ಕಾ ನದಿಯನ್ನು ಸಾಮಾನ್ಯವಾಗಿ ‘ಕುದಿಯುವ ನದಿ’ ಎಂದು ಕರೆಯಲಾಗುತ್ತದೆ. ಈ ನದಿಯ ಉಷ್ಣತೆಯು 200 ಡಿಗ್ರಿ ಫ್ಯಾರನ್ಹೀಟ್ಗಿಂತ ಹೆಚ್ಚಾಗಿರುತ್ತದೆ. ಭೂಶಾಖದ ಶಕ್ತಿಯೊಂದಿಗೆ ಈ ಅಪಾಯಕಾರಿ ನದಿಯ ನೀರನ್ನು ಸ್ಪರ್ಶಿಸಿದ ತಕ್ಷಣ ಒಬ್ಬ ವ್ಯಕ್ತಿಯು ಸುಟ್ಟ ಅನುಭವವನ್ನು ಪಡೆಯುತ್ತಾನೆ. ಮೆಕಾಂಗ್ ನದಿ ಮೆಕಾಂಗ್ ನದಿಯು 6 ಏಷ್ಯನ್ ದೇಶಗಳ ಮೂಲಕ ಹಾದುಹೋಗುತ್ತದೆ ಮತ್ತು ಅನೇಕ ಮಾರಣಾಂತಿಕ ಪ್ರಾಣಿಗಳಿಗೆ ನೆಲೆಯಾಗಿದೆ. ಈ ನದಿಯಿಂದಾಗಿ ಪ್ರತಿ ವರ್ಷ ಅನೇಕ ಜನರೂ ಪ್ರಾಣ ಕಳೆದುಕೊಳ್ಳುತ್ತಾರೆ. ಅದರ ಅನಿರೀಕ್ಷಿತ ಪ್ರವಾಹವು ಜನರ ಜೀವನವನ್ನು ಕಷ್ಟಕರವಾಗಿಸುತ್ತದೆ. ಅದರೊಳಗೆ ಇರುವ ಮೊಸಳೆಗಳು ಬಹಳ ಅಪಾಯಕಾರಿಯಾಗಿವೆ. ರಿಯೊ…
ತಿಪಟೂರು: ತಾಲ್ಲೂಕು ಆಡಳಿತದ ವತಿಯಿಂದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಎಸ್.ಕೆ ಜಗನ್ನಾಥ್ , ಜಗತ್ತಿಗೆ ಬೆಳಕಾಗಿದ್ದ ಶ್ರೀ ಬಸವೇಶ್ವರರ ಮಾನವೀಯ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಸರ್ಕಾರಿ ಸೇವೆ ಮಾಡುವ ನಾವು ಕನಿಷ್ಠ ಸಮಸ್ಯೆಗಳನ್ನು ಒತ್ತು ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬೆಳಕಾಗಬೇಕು ಎಂದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 889ನೇ ಶ್ರೀ ಬಸವೇಶ್ವರ ಜಯಂತೊತ್ಸವದಲ್ಲಿ ಮಾತನಾಡಿದ ಅವರು, ಜನರ ಸೇವೆಗಾಗಿ ನೇಮಕಗೊಂಡಿರುವ ನಾವುಗಳು ಶ್ರದ್ಧೆ, ಸಂಯಮ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಪಾಪ ಪುಣ್ಯಗಳನ್ನು ತಮ್ಮ ಕಾಯಕದಲ್ಲೆ ಕಾಣಬಹುದು ಎಂದು ಸಲಹೆ ನೀಡಿದರು. ಸದರಿ ಕಾರ್ಯಕ್ರಮದಲ್ಲಿ ಗ್ರೇಡ್ -2 ತಹಸೀಲ್ದಾರ್ ಎಸ್.ಕೆ ಜಗನ್ನಾಥ್, ಸಿ.ಡಿ.ಪಿ.ಒ ಇಲಾಖಾ ಅಧಿಕಾರಿಗಳಾದ ಶ್ರೀ ಓಂಕಾರಪ್ಪ, ಬಿ.ಸಿ.ಎಂ. ಇಲಾಖೆಯ ಶ್ರೀಮತಿ ಜಲಜಾಕ್ಷಿ ರವರು, ಶಿರಸ್ತೇದಾರ್ ಶ್ರೀ ರವಿಕುಮಾರ್, ಪುನೀತ್, ಕೋದಂಡರಾಮು, ರವಿಶಂಕರ್, ಹಾಗೂ ಕಚೇರಿ ಸಿಬ್ಬಂದಿವರ್ಗದವರು ಹಾಜರಿದ್ದರು . ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಗುಬ್ಬಿ: ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ಜಮೀನಿನ ಕೆಲಸ ಮಾಡಲು ತೆರಳಿದ ಇಬ್ಬರು ಕೂಲಿ ಕಾರ್ಮಿಕರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ. ಜಿ.ಹೊಸಹಳ್ಳಿ ಗ್ರಾಮದಲ್ಲಿ ಶಿವಕುಮಾರ್ ಮತ್ತು ಮಂಜುನಾಥ್ ಒಡೆತನದ ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದ ಸಮಯದಲ್ಲಿ ಸ್ಥಳೀಯ ನಿವಾಸಿ ಲತಾ ಪ್ರಶಾಂತ್ ಎಂಬುವ ವ್ಯಕ್ತಿ ಹಾಗೂ ಇತರರು ಈ ಜಮೀನು ನಮಗೆ ಸೇರಿದ್ದು ನೀವು ಕೆಲಸ ಮಾಡಲು ಬರುವುದಕ್ಕೆ ಹೇಳಿದವರು ಯಾರು ಎಂದು ಪ್ರಶ್ನಿಸಿ ಕಾರ್ಮಿಕರಾದ ಕೃಷ್ಣ ಮೂರ್ತಿ, ರವಿ ಎಂಬುವ ಏಕ ಏಕಿ ಹಲ್ಲೆ ನಡೆಸಿ ಥಳಿಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಕೃಷ್ಣ ಮೂರ್ತಿ ಸಹೋದರ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಕಾರ್ಮಿಕರನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆ ಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ಕುರಿತು ಗುಬ್ಬಿ ಠಾಣೆಗೆ ದೂರು ಸಲ್ಲಿಸಲಾಗಿದೆ. ವರದಿ: ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ತಿಪಟೂರು: ತಾಲ್ಲೂಕಿನ ಹಾಲ್ಕುರಿಕೆ ಕೆರೆಗೆ ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಚಿಕ್ಕನಾಯ್ಕನಹಳ್ಳಿ ತಾಲ್ಲೋಕಿನ 22ಕೆರೆಗಳಿಗೆ ನೀರು ಒದಗಿಸುವ ಯೋಜನೆಯ ಭಾಗವಾಗಿ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆರೆ ಹಾಗೂ ಪಟ್ಟದದೇವರಕೆರೆಗಳಿಗೆ ನೀರುಹರಿಸುವ ಕಾಮಗಾರಿಗೆ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗುದ್ದಲಿಪೂಜೆ ನೆರವೇರಿಸಿದರು. ನಂತರ ಹಾಲ್ಕುರಿಕೆ ಗ್ರಾಮದೇವತೆ ಶ್ರೀಕೆಂಪಮ್ಮ ದೇವಿ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಹಾಗೂ ಸಚಿವ ಬಿ.ಸಿ. ನಾಗೇಶ್ ರವರಿಗೆ ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಾಲ್ಕುರಿಕೆ ಕೆರೆಗೆ ಹೇಮಾವತಿ ನೀರು ಹರಿಸಬೇಕು ಎನ್ನುವುದು ಈ ಭಾಗದ ಜನರ ದಶಕಗಳ ಕನಸು ಹಲವಾರು ಅಡ್ಡಿ ಅತಂಕಗಳನ್ನ ನಿವಾರಿಸಿ ಪ್ರಾರಂಭಗೊಳುತ್ತಿದ್ದು, ಯೋಜನೆಯನ್ನ ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. ಸಚಿವ ಜೆ.ಸಿ. ಮಾಧುಸ್ವಾಮಿಯವರ ಸಹಕಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ನೀರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಸಹಕಾರದಿಂದ ಸುಮಾರು 89ಕೋಟಿ ವೆಚ್ಚದ ಕಾಮಗಾರಿಗೆ ಪೂಜೆ ಮಾಡುತ್ತಿದ್ದು, ಈ ವರ್ಷದ ಹೇಮಾವತಿ…
ಹಿರಿಯೂರು: ವಿಶ್ವದಾದ್ಯಂತ ಮಂಗಳವಾರ ರಂಜಾನ್ ಹಾಗೂ ಬಸವಜಯಂತಿ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಕಳೆದ ಎರಡು ವರ್ಷಗಳಿಂದ ಓಮಿಕ್ರೋನ್ ಹಾಗೂ ಕೊರೊನಾ ಸಾಂಕ್ರಾಮಿಕ ಕಾಯಿಲೆಗಳಿಂದ ಸ್ಥಬ್ದಗೊಂಡಿದ್ದ ಹಬ್ಬ ಈ ವರ್ಷ ಸಡಗರ ಸಂಭ್ರಮದಿಂದ ನಡೆಯಿತು. ಹಿರಿಯೂರು ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೋಮಶೇಖರ್ ಬಿ. ಅವರು ರಂಜಾನ್ ಹಬ್ಬದಲ್ಲಿ ಭಾಗಿಯಾಗಿ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದರು. ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರಿಗೆ ಸೋಮಶೇಖರ್ ಬಿ. ಅವರ ಅಭಿಮಾನಿಗಳು ಕುಡಿಯಲು ತಂಪಾದ ಪಾನಿಯಗಳು , ನೀರು, ಮಜ್ಜಿಗೆ ಗಳನ್ನು ನೀಡುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು. ಇದೇ ಸಂದರ್ಭದಲ್ಲಿ ನಮ್ಮ ತುಮಕೂರು ಮಾಧ್ಯಮದ ಮೂಲಕ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂಗಿರಿ ಅಕ್ರಮ್ , ಕಳೆದ ಚುನಾವಣೆಯಲ್ಲಿ ಸೋಮಶೇಖರ್ ಬಿ. ಅವರು ಸೋಲನ್ನು ಕಂಡಿದ್ದು ನಿಜಕ್ಕೂ ಸಹ ಬೇಸಾರದ ಸಂಗತಿಯಾಗಿದೆ . ಆದರೆ ಇದೀಗ 2023ರಲ್ಲಿ ಬರುವಂತಹ ಸಾರ್ವತ್ರಿಕ…
ತಿಪಟೂರು: ತಂದೆ-ತಾಯಿ ಸಂಸ್ಕಾರ ಕೊಟ್ಟು ಬೆಳೆಸಿದ ಮಕ್ಕಳು ಲೋಕ ವೀರರಾಗಿದ್ದಾರೆ ಎಂದು ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು. ತಿಪಟೂರು ತಾಲೂಕು ಗಂಗನಘಟ್ಟ ಗೇಟ್ ಬಳಿ ಶ್ರೀರಂಗ ವಿದ್ಯಾಸಂಸ್ಥೆ ಕೀರ್ತಿಶೇಷ ಮಾತೃಶ್ರೀ ಶಾರದಮ್ಮ ಅವರ ಸ್ಮಾರಕ ಶಾಲಾ ಕಟ್ಟಡ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆಚಾರಕ್ಕೆ ಅರಸನಾಗಿ ನೀತಿಗೆ ಪ್ರಭುವಾಗಿ ಜ್ಯೋತಿಯಾಗು ಜಗ ಕೆಲ ಎಂಬಂಥ ಮಕ್ಕಳು ಈಗಿನ ಸಮಾಜಕ್ಕೆ ಬೇಕು. ಇಂಥ ಮಕ್ಕಳನ್ನು ರೂಪಿಸುವುದು ತಾಯಿಂದ ಸಾಧ್ಯ ಎಂದರು. ತಂದೆ ತಾಯಿಯಿಂದ ಸಂಸ್ಕಾರ ಕಲಿತು ಬೆಳೆದಿರುವ ಡಾ.ವಿವೇಚನ್ ತಮ್ಮ ತಂದೆ ಪ್ರೊಫೆಸರ್ ಜಿ.ಕೆ.ಬಸವರಾಜ ಸ್ಥಾಪಿಸಿದ ಶ್ರೀರಂಗ ವಿದ್ಯಾಸಂಸ್ಥೆ ವಿಸ್ತರಿಸಿ ತಾಯಿಯ ಸ್ವರ್ಣ ಪ್ರೌಢಶಾಲೆ ಆರಂಭಿಸುತ್ತಿರುವುದು ನಾಡಿನ ಸೌಭಾಗ್ಯ ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಜ್ಞಾನಕ್ಕೆ ತ್ಯಾಗಕ್ಕೆ ಹೆಸರಾದ ನಮ್ಮ ಭೂಮಿ ತಂದೆ-ತಾಯಿಯ ಆದರ್ಶ ಪುತ್ರನಾಗಿ ಜೀವನವನ್ನು ಸಮಾಜಸೇವೆಗೆ ಮುಡುಪಾಗಿಟ್ಟಿರುವ ಡಾ. ವಿವೇಚನೆ ಅವರ ಆದರ್ಶ ಎಂದರು. ಕೆರಗೋಡಿ ರಂಗಾಪುರ…
ಸಿರಾ: ರಸ್ತೆಯಲ್ಲಿ ಗುಂಡಿ ತೆಗೆದು ನಗರಸಭೆ ಅಧಿಕಾರಿಗಳು ಕೆಲವೊಂದಿಷ್ಟು ಕಾಟಾಚಾರದ ಕಾಮಗಾರಿ ನಡೆಸಿ ಹಾಗೆ ಬಿಟ್ಟಿದ್ದು, ಇದರಿಂದಾಗಿ ರಸ್ತೆ ಸಂಚಾರ ಸುರಕ್ಷತೆ ಇಲ್ಲದಂತಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಸಿರಾದ ಅಮರಾಪುರ ರಸ್ತೆಯಲ್ಲಿ ನೀರು ಸರಬರಾಜು ಮಾಡುವ ಪೈಪ್ ಲೈನ್ ಕಾಮಗಾರಿಗೆ ರಸ್ತೆ ಬದಿಯನ್ನು ಅಗೆದು ಬೃಹತ್ ಗುಂಡಿ ಮಾಡಲಾಗಿದೆ. ಕಾಮಗಾರಿ ನಡೆದು ವಾರಗಳು ಕಳೆದರೂ, ಅತ್ತ ಕೆಲಸ ಪೂರ್ಣಗೊಳ್ಳುವುದೂ ಕಾಣುತ್ತಿಲ್ಲ ಇತ್ತ ರಸ್ತೆಬದಿಯಲ್ಲಿ ಕನಿಷ್ಠ ಬ್ಯಾರಿಕೇಡ್ ಆದದರೂ ಬಳಸುವುದು ಕಾಣುತ್ತಿಲ್ಲ ಎಂದು ಅಧಿಕಾರಿಗಳ ಮತ್ತು ಗುತ್ತಿಗೆ ದಾರರ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿರಾ ನಗರದಿಂದ ಆಂಧ್ರಪ್ರದೇಶ ಗಡಿ ಮತ್ತು ತಾಲ್ಲೂಕಿನ ವಿವಿಧ ಊರುಗಳಿಗೆ ಹಾದು ಹೋಗುವ ಮತ್ತು ಸದ್ಯ ಪ್ರತಿಷ್ಠಿತ ರಸ್ತೆ ಎಂದೇ ಕರೆಯಲಾಗುತ್ತಿರುವ ರಸ್ತೆಯಲ್ಲಿ ಇಂತಹದ್ದೊಂದು ಸ್ಥಿತಿ ಕಂಡು ಬಂದಿದೆ. ಈ ರಸ್ತೆಯಲ್ಲಿ ಮಾಜಿ ಸಚಿವರು, ನಗರ ಸಭೆ ಅಧಿಕಾರಿಗಳು ದಿನನಿತ್ಯ ಪ್ರಯಾಣಿಸುತ್ತಿದ್ದರೂ, ಯಾರಿಗೂ ಇದೊಂದು ಅಪಾಯ ಅನ್ನಿಸದಿರುವುದು ಸೋಜಿಗವಾಗಿದೆ. ತಾಂತ್ರಿಕ ಕಾರಣಕ್ಕೆ ಗುಂಡಿಯನ್ನು ಮುಚ್ಚುವ ಕೆಲಸ…
ತುರುವೇಕೆರೆ: ಗ್ರಾಮಾಂತರ ಯೋಜನಾ ಕಛೇರಿ, ಚುಂಚನಗಿರಿ ವಲಯದ ಮಾಯಸಂದ್ರ ಕಾರ್ಯಕ್ಷೇತ್ರದ “ಸಿ” ಒಕ್ಕೂಟದ ಸಭೆಯನ್ನು ಮಂಗಳವಾರ ಮಾಯಸಂದ್ರದ ಡಾ.ಅಂಬೇಡ್ಕರ್ ಭವನದಲ್ಲಿ ,ಹಮ್ಮಿಕೊಳ್ಳಲಾಗಿತ್ತು. ಸಭೆಯನ್ನು ಒಕ್ಕೂಟದ ಅಧ್ಯಕ್ಷರಾದ ರತ್ನಮ್ಮ ಉದ್ಘಾಟನೆ ನೆರೆವೇರಿಸಿದರು. ಯೋಜನಾಧಿಕಾರಿಗಳಾದ ಅನಿತಾ ಶೆಟ್ಟಿ ಈ ಸಂಸ್ಥೆಯ ಯೋಜನೆಯಿಂದ ಸಿಗುವ ಸೇವೆಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ,ನೀಡಿದರು. ಜಿಲ್ಲಾ ಸಿ.ಎಸ್.ಸಿ.ಸಂಯೋಜಕರಾದ , ಶ್ರೀಮುರುಳಿ, ಸಿ.ಎಸ್.ಸಿ.ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಚುಂಚನಗಿರಿ ವಲಯದ ಮೇಲ್ವಿಚಾರಕರಾದ ಮಧು ಹೆಚ್.ಆರ್., ಸೇವಾ ಪ್ರತಿನಿದಿಗಳಾದ ಗಿರೀಶ್, ಜ್ಯೋತಿ, ಸ್ವ ಸಹಾಯಸಂಘಗಳ, ಪ್ರತಿನಿಧಿಗಳು ಉಪಸ್ಥಿತರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5