Author: admin

ತುಮಕೂರು : ಮೇ 1 ಕಾರ್ಮಿಕ ದಿನಾಚರಣೆಯ ದಿನದಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರಾದ ಕೆ.ಪುಟ್ಟಸ್ವಾಮಿ ಗೌಡ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ವಿ ಎಸ್ ಸೈಯದ್ ದಾದಾಪೀರ್ ತಿಳಿಸಿದರು. ಬೆಂಗಳೂರಿನ ಕಾರ್ಯಕ್ರಮಕ್ಕೆ ತುಮಕೂರಿನಿಂದ ಹೊರಡಲು ಕಾರ್ಯಕರ್ತರನ್ನು ಸಜ್ಜುಗೊಳಿಸುವ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಕಾರ್ಮಿಕ ಮುಖಂಡರು, ಪದಾಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ತುಮಕೂರು ಜಿಲ್ಲೆಯಿಂದಲೂ ಬೆಂಗಳೂರಿಗೆ ಹೊರಡಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು. ತುಮಕೂರು ಜಿಲ್ಲೆಯಿಂದ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಡುವ ಉದ್ದೇಶದಿಂದ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆಸಿದ್ದೇವೆ ಎಂದು ಅವರು ಇದೇ ವೇಳೆ ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರು ಅಬ್ದುಲ್ ರಹೀಮ್, ಜಿಲ್ಲಾ ಉಪಾಧ್ಯಕ್ಷರಾದ ಆದಿಲ್ ಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಜ್, ಭವ್ಯ, ಕಾರ್ಯದರ್ಶಿಗಳಾದ ಕಲೀಮ್…

Read More

ತುಮಕೂರು: ಭೂಮಿ ಮತ್ತು ವಸತಿ ವಂಚಿತರ ಆಹೋರಾತ್ರಿ ಧರಣಿ 37ನೇ ದಿನಕ್ಕೆ ಕಾಲಿಟ್ಟಿದ್ದು, ಈ ದಿನ ಪ್ರತಿಭಟನಾಕಾರರಿಗೆ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಬೆಂಬಲ ನೀಡಿತು. BSP ಪಕ್ಷದ ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ ಜಟ್ಟಿ ಅಗ್ರಹಾರ ನಾಗರಾಜು ಹಾಗೂ ಪಕ್ಷದ ಇನ್ನಿತರ ಮುಖಂಡರು ಭೂಮಿ, ವಸತಿಗಾಗಿ ಹಗಲು ರಾತ್ರಿ ಎನ್ನದೇ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಬೆಂಬಲ ಘೋಷಿಸಿದರು. ಈ ವೇಳೆ ತಾಲ್ಲೂಕು ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಸ್ನೇಹಿತರಾದ ಲಾರೆನ್ಸ್ ದಿನಪತ್ರಿಕೆ ಹಂಚಿಕೆದಾರರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ನಾದೂರು ವಾಸು,ಲಿಂಗದಹಳ್ಳಿ ಚೇತನ್, ಸೀಗಲಹಳ್ಳಿ ಮೂರ್ತಿ ಜೊತೆಗಿದ್ದರು. ಈಗಾಗಲೇ ಅನೇಕ ಸಮಸ್ಯೆಗಳು ಬಗೆಹರಿದಿದ್ದು,ಇನ್ನೇನು ಕೆಲವೇ 4,5 ಸಮಸ್ಯೆಗಳಷ್ಟೆ ಬಾಕಿ ಉಳಿದಿರುತ್ತವೆ.ಇವುಗಳು ಕೂಡ 3,4 ದಿನಗಳಲ್ಲಿ ಬಗೆಹರಿಯುವ ಭರವಸೆಯೂ ಕೂಡ ಇದ್ದು ಬಗೆಹರಿದ ತಕ್ಷಣ ಈ ನಮ್ಮ ಧರಣಿಯನ್ನು ಕೈ ಬಿಡಲಾಗುವುದು ಎಂದು ಹೋರಾಟದ ನೇತೃತ್ವ ವಹಿಸಿರುವ ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.

Read More

ದೇಶೀಯ ಹಸುಗಳನ್ನು ಸಾಕುತ್ತಿರುವ ರೈತರಿಗೆ ತಿಂಗಳಿಗೆ 900 ರೂಪಾಯಿ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರ ಹೇಳಿದೆ. ಕೃಷಿ ಕುರಿತ ನೀತಿ ಆಯೋಗದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಮಧ್ಯಪ್ರದೇಶ ನೈಸರ್ಗಿಕ ಕೃಷಿ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ. ನೈಸರ್ಗಿಕ ಕೃಷಿಗೆ ದೇಸಿ (ದೇಶಿ) ಹಸುಗಳು ಅತ್ಯಗತ್ಯವಾಗಿವೆ. ರೈತರು ಕನಿಷ್ಠ ಒಂದು ದೇಸಿ ಹಸುವನ್ನು ಸಾಕಬೇಕು. ಅಂತಹ ರೈತರಿಗೆ ತಿಂಗಳಿಗೆ 900 ರೂ.ಗಳನ್ನು ನೀಡಲು ನಿರ್ಧರಿಸಿದ್ದೇವೆ. ಆದ್ದರಿಂದ, ಒಬ್ಬ ರೈತ ದೇಸಿ ಹಸುವಿಗೆ ವರ್ಷದಲ್ಲಿ ಒಟ್ಟು 10,800 ರೂ. ಪಡೆಯಲಿದ್ದಾರೆ ಎಂದಿದ್ದಾರೆ. ರಾಜ್ಯದ 52 ಜಿಲ್ಲೆಗಳಲ್ಲಿ ತಲಾ 100 ಗ್ರಾಮಗಳಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಸಂಸದ ಸರ್ಕಾರ ವಿಶೇಷ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ. ಪ್ರಸಕ್ತ ಖಾರಿಫ್ ಬೆಳೆ ಹಂಗಾಮಿನಲ್ಲಿ ರಾಜ್ಯದ 5,200 ಗ್ರಾಮಗಳಲ್ಲಿ ನೈಸರ್ಗಿಕ ಕೃಷಿ ಚಟುವಟಿಕೆಗಳು ಆರಂಭವಾಗಲಿವೆ. ಇದುವರೆಗೆ 1.65 ಲಕ್ಷ ರೈತರು ನೈಸರ್ಗಿಕ ಕೃಷಿಯಲ್ಲಿ ಆಸಕ್ತಿ ತೋರಿದ್ದಾರೆ. ನೈಸರ್ಗಿಕ ಕೃಷಿಗೆ ವಾತಾವರಣ ನಿರ್ಮಿಸಲು ರಾಜ್ಯದಲ್ಲೂ…

Read More

ಜೂನ್ ಕೊನೆ ವಾರದಲ್ಲಿ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲು ಸಿದ್ಧತೆಗಳು ಆರಂಭವಾಗಿವೆ. ಏಪ್ರಿಲ್ 22 ರಿಂದ ಪಿಯು ಪರೀಕ್ಷೆ ಆರಂಭವಾಗಿದ್ದು, ಒಂದೊಂದು ವಿಷಯದ ಪರೀಕ್ಷೆ ಆಗುತ್ತಿದ್ದಂತೆ ಮೌಲ್ಯಮಾಪನ ಶುರುವಾಗುತ್ತದೆ. ಜೂನ್ ಕೊನೆ ವಾರ ಪಿಯುಸಿ ಫಲಿತಾಂಶ ಬರುವುದು ಪಕ್ಕಾ ಎಂದು ಮೂಲಗಳಿಂದ ತಿಳಿದುಬಂದಿದೆ. ಮೇ 20 ರಿಂದ ಜೂ.15ರೊಳಗೆ ಮೌಲ್ಯಮಾಪನ ಮುಗಿಸಿ ಜೂನ್ ಕೊನೆ ವಾರದೊಳಗೆ ಫಲಿತಾಂಶ ಪ್ರಕಟ ಮಾಡಬೇಕೆಂದು ಕಾಲಾವಧಿಯನ್ನು ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು. ಹಾಗಾಗಿ ಆದಷ್ಟು ಬೇಗ ಫಲಿತಾಂಶ ನೀಡುತ್ತೇನೆ ಎಂದು ಪಿಯು ಬೋರ್ಡ್ ನಿರ್ದೇಶಕ ಆರ್.ರಾಮಚಂದ್ರನ್ ಅವರು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಪರೀಕ್ಷೆ ನಡೆಯದೆ ಫಲಿತಾಂಶದ ಸಮಯದಲ್ಲಿ ಏರುಪೇರಾಗಿತ್ತು. ಈಗ ನಿಗದಿತ ಅವಧಿಯಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಫಲಿತಾಂಶವನ್ನೂ ನಿಗದಿತ ಅವಧಿಯಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಒಂದು ವೇಳೆ ನಾಲ್ಕನೇ ಕೋವಿಡ್ ಅಲೆ ಬಂದರೂ ಜನತೆ ಭಯಬೀಳಬೇಕಾದ ಅಗತ್ಯವಿಲ್ಲ. ಸರ್ಕಾರ ಇದನ್ನು ನಿಯಂತ್ರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಒಂದು ಮತ್ತು ಎರಡನೆ ಅಲೆ ನಮಗೆ ಸಾಕಷ್ಟು ಪಾಠ ಕಲಿಸಿದೆ.ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಮೂರನೆ ಅಲೆಯಲ್ಲಿ ಯಾವುದೇ ರೀತಿಯ ಹೆಚ್ಚಿನ ದುಷ್ಪರಿಣಾಮ ಬೀರಲಿಲ್ಲ ಎಂದು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಒಂದು ತಿಂಗಳು ಮುಂಚಿತವಾಗಿಯೇ ಕೋವಿಡ್ ನಾಲ್ಕನೆ ಅಲೆ ಬರಬಹುದೆಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ನಾವು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಜನರು ವದಂತಿಗಳಿಗೆ ಕಿವಿಕೊಡದೆ ಮೊದಲು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು.ಐಐಟಿ ಕಾನುರ್ ಅವರನ್ನೊಳಗೊಂಡ ತಜ್ಞರ ತಂಡ ಜೂನ್ ತಿಂಗಳ ಅಂತ್ಯಕ್ಕೆ ನಾಲ್ಕನೆ ಕೋವಿಡ್ ಅಲೆ ಬರಬಹುದೆಂದು ಹೇಳಿದ್ದರು. ಆದರೆ, ಇದೀಗ ಒಂದು ತಿಂಗಳು ಮುಂಚಿತವಾಗಿಯೇ ಬರಬಹುದೆಂದು ವರದಿ ಕೊಟ್ಟಿದ್ದಾರೆ. ಒಂದು, ಎರಡು ಮತ್ತು ಮೂರನೆ…

Read More

ಕ್ರಿಕೆಟ್ ಲೋಕದ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಅವರು ಈಗ ಸುದ್ದಿಯಾಗಿರುವುದು ಪುತ್ರಿ ಸಾರಾರ ವಿಷಯಕ್ಕಾಗಿ. ಸಚಿನ್‍ ರ ಪುತ್ರಿ ಸಾರಾ ತಾಯಿಯಂತೆಯೇ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿದ್ದು, ಈಗ ನಟನಾ ಲೋಕದತ್ತ ಗಮನ ಹರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಜೀವನ ಚರಿತ್ರೆ ಆಧಾರಿತ ದಿ ಮಿಲೇನರ್ ಚಿತ್ರ ಬಿಡುಗಡೆಗೊಂಡ ಸಂದರ್ಭದಲ್ಲೇ ಸಾರಾಗೆ ಬಾಲಿವುಡ್‍ ನಿಂದ ಬುಲಾವ್ ಬಂದಿತ್ತಾದರೂ ಅವರ ತಾಯಿ ಅಂಜಲಿ ಪುತ್ರಿಯನ್ನು ನಟಿಯಾಗಿಸಲು ಒಪ್ಪಿರಲಿಲ್ಲ. ಆದರೆ ಈಗ ಅಂಜಲಿಯೇ ಸಾರಾಗೆ ನಟನೆಯ ತರಬೇತಿಯನ್ನು ಕೊಡಿಸಲು ಮುಂದಾಗಿದ್ದು , ಮಗಳನ್ನು ನಟನೆಯ ಲೋಕಕ್ಕೆ ಕರೆ ತರಲು ಸಜ್ಜಾಗಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿ ಇರುವ ಸಾರಾ ತೆಂಡೂಲ್ಕರ್‍ಗೆ ಇನ್‍ ಸ್ಟಾಗ್ರಾಂನಲ್ಲಿ 1.9 ಮಿಲಿಯನ್ ಫಾಲೋವರ್ಸ್  ಇದ್ದು, ಇನ್ನು ಅವರು ಬಾಲಿವುಡ್ ಲೋಕಕ್ಕೆ ಬಂದರೆ ಅದರ ಸಂಖ್ಯೆಯೂ ಹೆಚ್ಚಾಗಲಿದೆ. ಸಚಿನ್ ಪುತ್ರ ಅರ್ಜುನ್ ತಂದೆಯಂತೆಯೇ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ಹೆಚ್ಚಳವಾಗುತ್ತಿದ್ದು, ನಮ್ಮಲ್ಲೂ 60 ರಿಂದ 80 ಪ್ರಕರಣಗಳು ದಾಖಲಾಗುತ್ತಿವೆ. ಕೊರೊನಾ ನಿಯಂತ್ರಣಕ್ಕಾಗಿ ಬೂಸ್ಟರ್ ಡೋಸ್ ಅತ್ಯಗತ್ಯವಾಗಿದ್ದು, ಜನರು ಅದನ್ನು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಜನ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದುಕೊಂಡಿದ್ದಾರೆ. ವ್ಯಾಕ್ಸಿನೇಷನ್‍ನಿಂದಾಗಿ ಮೂರನೆ ಅಲೆ ಪರಿಣಾಮ ಬೀರಿಲ್ಲ. ಹೀಗಾಗಿ ಈಗಲೂ ಬೂಸ್ಟರ್ ಡೋಸ್ ಅಗತ್ಯವಾಗಿ ಪಡೆಯಬೇಕು. ಸ್ವಪ್ರೇರಣೆಯಿಂದ ಎಲ್ಲರೂ ಡೋಸ್ ಪಡೆಯಬೇಕು ಎಂದು ಹೇಳಿದರು. ಜಿನೋವಿಕ್ ಸೀಕ್ವೆನ್ಸಿಂಗ್ ನಿರಂತರವಾಗಿ ನಡೆಯುತ್ತಿದೆ. ಟಾಸ್ಕ್‍ಫೆÇೀರ್ಸ್ ಅಡ್ವೈಸರಿ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಕೊರೊನಾ ನಿಯಂತ್ರಣ ಮಾರ್ಗಸೂಚಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ನಾಳೆ ಚರ್ಚೆ ನಡೆಸಲಿದ್ದಾರೆ. ಕೊರೊನಾ ಪ್ರಕರಣಗಳು ಎಲ್ಲಿ ಪತ್ತೆಯಾಗುತ್ತಿವೆ, ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿರುವ ಬಗ್ಗೆ, ಸೋಂಕಿತರ ಲಕ್ಷಣಗಳ ಬಗ್ಗೆ ನಾವು ಮಾನಿಟರ್ ಮಾಡುತ್ತೇವೆ. ಸದ್ಯ ಈವರೆಗೆ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಗಂಭೀರ ಲಕ್ಷಣಗಳು ಕಂಡುಬಂದಿಲ್ಲ. ಪರಿಸ್ಥಿತಿ ಸುಧಾರಣೆಯಲ್ಲಿದೆ.ಹೊರದೇಶದಿಂದ ಬರುವವರು ಲಕ್ಷಣ…

Read More

ದಾವಣಗೆರೆ : ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ಜಿಲ್ಲಾ ರೋಗವಾಹಕ ಆಶಿತಾ ರೋಗಗಳ ನಿಯಂತ್ರಣ ಕಾರ್ಯಕ್ರಮ ನಡೆಯಿತು. ಮಲೇರಿಯಾ ರೋಗವು ಒಬ್ಬರಿಂದೊಬ್ಬರಿಗೆ ಹರಡುವ ಕಾಯಿಲೆ ಆದ್ದರಿಂದ ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ ಎನ್ನುವ ಗುರಿ ಇಟ್ಟುಕೊಂಡು ದಾವಣಗೆರೆ ಜಿಲ್ಲೆಯಿಂದ ಕೊಟ್ರೇಶ್  ಹಾಗೂ ಅಂಜನೇಯ ಆಗಮಿಸಿ ಮಲೇರಿಯಾ ವಿರೋಧಿ ಮಾಸಾಚರಣೆ ತರಬೇತಿ ಜಗಳೂರು ತಾಲೂಕು ಆಶಾ ಕಾರ್ಯಕರ್ತೆಯರಿಗೆ ನೀಡಿದರು. ಈ ಕಾರ್ಯಕ್ರಮದಲ್ಲಿ ತಾಲ್ಲೂಕುಆರೋಗ್ಯ ಅಧಿಕಾರಿಗಳಾದ ನಾಗರಾಜ್ ,  ಪ್ರಾಸ್ತಾವಿಕ ನುಡಿಗಳನ್ನಾಡಿ , ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರು ಲಾರ್ವ ಸರ್ವೆ ಮಾಡಿ ಜನಗಳಿಗೆ ಆರೋಗ್ಯ ಶಿಕ್ಷಣ ನೀಡಿ, ಮಲೇರಿಯಾ,  ಚಿಕನ್ ಗ್ಯೂನ್ಯ,  ಡೆಂಗ್ಯೂ ಜ್ವರ ಈ ಎಲ್ಲಾ ಕಾಯಿಲೆ ಸೊಳ್ಳೆಯಿಂದ ಬರುತ್ತಿವೆ ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಬೇಕು.  ಇದೇ ತಿಂಗಳ 29ನೇ ತಾರೀಖಿನಂದು ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸರ್ ರವರು ಜಗಳೂರು…

Read More

ಬೆಂಗಳೂರು : ಮೂಲನಿವಾಸಿ ಅಂಬೇಡ್ಕರ್ ಸಂಘದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಬಿ. ಎಂ ಮುನಿಮಾರಪ್ಪ ಅವರು ಬುದ್ಧ ಪೂರ್ಣಿಮೆಯ ದಿನವನ್ನು ಸರ್ಕಾರವೇ ಆಚರಿಸಲಿ,  ಸಾರ್ವಜನಿಕ ರಜೆ ಘೋಷಿಸಲಿ ಎಂದು ಮನವಿ ಮಾಡಿದರು. ನಮ್ಮತುಮಕೂರು ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಅನೇಕ ಹಲವಾರು ದಾರ್ಶನಿಕರ, ಮಹನೀಯರ ಜಯಂತಿಗಳನ್ನು ಆಚರಿಸುತ್ತಿದ್ದು, ಬುದ್ಧ ಪೂರ್ಣಿಮೆಯ ದಿನವನ್ನು ಸರ್ಕಾರವೇ ಆಚರಿಸಿ,  ಸಾರ್ವಜನಿಕ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದರು. ಭಾರತವನ್ನು “ಲ್ಯಾಂಡ್ ಆಫ್ ಬುದ್ಧ ” ಎಂದು ವಿದೇಶಗಳಲ್ಲಿ ಪ್ರಧಾನ ಮಂತ್ರಿಗಳೇ ಕರೆಯುತ್ತಾರೆ. ವಿಧಾನಸೌಧದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಶಾಸಕರು ಭಗವಾನ್ ಗೌತಮಬುದ್ಧರ ಬಗ್ಗೆ ಚರ್ಚೆ ಮಾಡಿರುತ್ತಾರೆ. ಹೀಗೆ ಭಾರತದ ಹೆಮ್ಮೆಯ ಸಂಕೇತವಾಗಿರುವ ಬುದ್ಧರನ್ನು ಆತನ ತತ್ವಗಳನ್ನು  ಪ್ರಜೆಗಳಿಗೆ ಅರ್ಥ ಮಾಡಿಸಲು ಪ್ರತಿ ವರ್ಷ ಬುದ್ಧ ಪೂರ್ಣಿಮೆಯನ್ನು ಸರ್ಕಾರ ಅರ್ಥ ಪೂರ್ಣವಾಗಿ ಆಚರಿಸಿ, ಸಾರ್ವಜನಿಕ ರಜೆ ಘೋಷಿಸಬೇಕು  ಎಂದು ಸರ್ಕಾರಕ್ಕೆ ಮೂಲನಿವಾಸಿ ಅಂಬೇಡ್ಕರ್ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಂಡರು.…

Read More

ಚಿಕ್ಕನಾಯಕನಹಳ್ಳಿ:  ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪ ವಿ .  ಅವರು ಶ್ರೀರಾಮ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಹಾಗೂ  ಭೂಮಿಯ ಸಂರಕ್ಷಣೆ ದಿನದ ಅಂಗವಾಗಿ ನೆಹರು ವೃತ್ತದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ  ನೀಡಿದರು. ಶ್ರೀರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂ. ಲಿ ಚಿಕ್ಕನಾಯಕನ ಹಳ್ಳಿ ಶಾಖೆಯು ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ  ಪ್ರೋತ್ಸಾಹಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ  ಮಾತನಾಡಿ,  ಶ್ರೀರಾಮ ಫೌಂಡೇಶನ್ ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಮಕ್ಕಳನ್ನು ಪ್ರೇರೇಪಿಸುತ್ತಿದೆ . ಇದು ಸಂತೋಷದ ವಿಷಯ ಇಷ್ಟಾದರೆ , ಸಾಲದು ಮಕ್ಕಳಲ್ಲಿ  ಗುರುಹಿರಿಯರಿಗೆ ಕಾನೂನಿಗೆ ಗೌರವ ನೀಡುವ ಪರಿಪಾಠವನ್ನು ಪೋಷಕರು ಸಂಸ್ಕಾರದ ಮೂಲಕ ಮಕ್ಕಳಲ್ಲಿ ಬೆಳೆಸಬೇಕು. ಇದರಿಂದ ಆ ಮಕ್ಕಳಿಗೆ ನಾವು ಕೂಡ ಹೆಚ್ಚು ಗೌರವಕ್ಕೆ ಅರ್ಹ ರಾಗಬೇಕು ಎಂದು ನಡೆದುಕೊಳ್ಳುತ್ತಾರೆ  ಎಂದರು. ವೃತ್ತ ನಿರೀಕ್ಷಣ ಅಧಿಕಾರಿ ಶ್ರೀಮತಿ ನಿರ್ಮಲ ವಿ. ಮಾತನಾಡಿ, ಭೂಮಿಯ ರಕ್ಷಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಈ ಎರಡು ಅಂಶಗಳು ಅತ್ಯಂತ ಮಹತ್ವಪೂರ್ಣ…

Read More