Author: admin

ಮತ್ತಿಹಳ್ಳಿ:ವಸತಿ ಯೋಜನೆಯ ಸಂಬಂಧಪಟ್ಟಂತೆ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಪಂಚಾಯಿತಿ ಅಧ್ಯಕ್ಷರಾದ ಚಿನ್ನಸ್ವಾಮಿಯವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆಯನ್ನು ಏರ್ಪಡಿಸಲಾಗಿತ್ತು. ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ನವೀನ್ ಕುಮಾರ್  ಉಪಾಧ್ಯಕ್ಷೆ ತೇಜಾವತಿ ಮಾಜಿ ಅಧ್ಯಕ್ಷ ಮಾಧುಸ್ವಾಮಿ.  ಸದಸ್ಯರು ಸೇರಿದಂತೆ ಪಾಲ್ಗೊಂಡಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಪರಿಟಾಲ ರವೀಂದ್ರ ಅವರ 17ನೇ ವರ್ಧಂತಿಯನ್ನು  ಹೆಲ್ಪ್ ಸೊಸೈಟಿ  ಕಾರ್ಯಾಲಯದಲ್ಲಿ ಸೋಮವಾರ ಆಚರಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಿರಿಯ ರಾಜಕೀಯ ಮುಖಂಡರಾದ ಮಾನಂ ವೆಂಕಟಸ್ವಾಮಿ, ಪರಿಟಾಲ ರವೀಂದ್ರ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಇದೇ ಸಮಯದಲ್ಲಿ ಪಾವಗಡ ಶಾಂತಿ ಮೆಡಿಕಲ್ ದೇವರಾಜ್  ಮಾತನಾಡಿ, ಪರಿಟಾಲ ರವೀಂದ್ರ ಅವರ ಸೇವಾ ಮನೋಭಾವವನ್ನು ಕೊಂಡಾಡಿದರು. ಪಾವಗಡ ತಾಲ್ಲೂಕು ಜೆಡಿಎಸ್ ರೈತ ಘಟಕದ ಅಧ್ಯಕ್ಷರಾದ ಗಂಗಾಧರ ನಾಯ್ಡು ಅವರು ಮಾತನಾಡಿ,  ಪರಿಟಾಲ ರವೀಂದ್ರ ಅವರ ಮೇಲೆ ಇರುವಂತಹ ಅಭಿಮಾನಕ್ಕೆ ಪ್ರಾಂತೀಯತೆ ಇಲ್ಲ, ಜಾತಿ ಭೇದ ಇಲ್ಲ,  ಪಕ್ಷ ಭೇದ ಇಲ್ಲ,  ಭಾಷಾ ಭೇದ ಇಲ್ಲ ಇವೆಲ್ಲವನ್ನೂ ಮೀರಿ ಎಲ್ಲೆಲ್ಲಿ ತೆಲುಗು ಮಾತನಾಡುತ್ತಾರೆ, ಎಲ್ಲಾ ಕಡೆ ಪರಿಟಾಲ ರವೀಂದ್ರ ಅವರ ಅಭಿಮಾನಿಗಳೇ ಇರುತ್ತಾರೆ. ಅವರು ಬಡವರ ಪರ ಅನ್ಯಾಯಕ್ಕೊಳಗಾದವರ ಪರ ಹೋರಾಡಿ, ತನ್ನ ಪ್ರಾಣವನ್ನೆ ತ್ಯಾಗ ಮಾಡಿದಂತಹ  ಮಹನೀಯರು ಎಂದು ಕೊಂಡಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಆಂಜನೇಯಲು, ನರಸಿಂಹ ಮೂರ್ತಿ,…

Read More

ತಿಪಟೂರು : ಬೆಸ್ಕಾಂ ಇಲಾಖೆಯ ಮಹಿಳಾ ಮಾಪಕ  ಸಿಬ್ಬಂದಿಗಳಿಗೆ ಬೆಸ್ಕಾಂ ಇಲಾಖೆ ಕಂದಾಯ ಸಹಾಯಕ ಬಿ.ಕೆ.ಜಗದೀಶ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿ, ಬೆಸ್ಕಾಂ ಕಾರ್ಯನಿರ್ವಾಹಕ  ಇಂಜಿನಿಯರ್ ಕಚೇರಿಯಲ್ಲಿ ಅಹೋ ರಾತ್ರಿ ಧರಣಿ ನಡೆಸುತ್ತಿರುವ ಘಟನೆ ನಡೆದಿದೆ. ನಗರದ ಬೆಸ್ಕಾಂ ಕಾರ್ಯನಿರ್ವಾಹಕ  ಇಂಜಿನಿಯರ್ ಕಚೇರಿಯಲ್ಲಿ ಸೋಮವಾರ ಸಂಜೆಯಿಂದ ಪ್ರತಿಭಟನೆಗೆ ಸಿಬ್ಬಂದಿಗಳು ಮುಂದಾಗಿದ್ದಾರೆ.  ಪ್ರತಿಭಟನೆಯಲ್ಲಿ ವಿಭಾಗೀಯ ಉಪಾಧ್ಯಕ್ಷ ವಿ.ನಂದೀಶ್, ಸಮಿತಿ ಸದಸ್ಯ ಎಂ.ಎಸ್. ಸೋಮಶೇಖರಯ್ಯ ಮತ್ತು  ಮಹಿಳಾ ದೂರು ನಿರ್ವಹಣಾ ಸಮಿತಿ ಅಧ್ಯಕ್ಷೆ ವಿ.ಕೆ.ನೇತ್ರಾವತಿ ಮಾತನಾಡಿದರು.  ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ರಾಜಶೇಖರಯ್ಯ, ವಿಭಾಗೀಯ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಕುಮಾರಸ್ವಾಮಿ,ಉಪ ವಿಭಾಗ ಸಮಿತಿ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ನವೀನ್ ಕುಮಾರ್, ಸಿಬ್ಬಂದಿಗಳಾದ ರವಿ ಕುಮಾರ್ ನಾಯ್ಕ್, ಚಂದ್ರಪ್ಪ ಮತ್ತು ಶಿವಲಿಂಗಸ್ವಾಮಿ ಸೇರಿದಂತೆ  ಸಿಬ್ಬಂದಿವರ್ಗ  ಉಪಸ್ಥಿತರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ತುಮಕೂರು: ನಗರ ಮತ್ತು ತುಮಕೂರು ಗ್ರಾಮಾಂತರ ಅರ್ಹ ಫಲಾನುಭವಿಗಳಿಗೆ ನೋಂದಾಯಿತ ಫಲಾನುಭವಿಗಳನ್ನು ಗುಣವಾಗಿ ಇಂದು ತುಮಕೂರು ಕಾರ್ಮಿಕ ಇಲಾಖೆ ವತಿಯಿಂದ ಮೇಷನ್ ಕಿಟ್ ವಿತರಣಾ ಕಾರ್ಯಕ್ರಮ ನೆರವೇರಿಸಲಾಯಿತು ಈ ಸಂದರ್ಭ ತುಮಕೂರು ಜಿಲ್ಲಾ ಕಾರ್ಮಿಕ ಇಲಾಖೆಯ ಹೆಚ್.ಎನ್. ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ನೀಡುವ ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕಾಗಿ ಅದೇ ರೀತಿ ಅರ್ಹ ಫಲಾನುಭವಿಗಳು ಅಲ್ಲದೆ ಇರುವ ಕಾರ್ಮಿಕರು ಸಹ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಇದ್ದು, ಅಂತಹ ಫಲಾನುಭವಿಗಳನ್ನು ಕಾರ್ಮಿಕರ ಗಮನಕ್ಕೆ  ಬಂದಲ್ಲಿ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕ್ರಮ ವಹಿಸುವುದಾಗಿ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ. ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಹೆಚ್.ಎನ್ . ರಮೇಶ್, ಕಾರ್ಮಿಕ ಇಲಾಖೆಯ ನಿರೂಪಕ ವೆಂಕಟೇಶ್ ಬಾಬು,  ಕಾರ್ಮಿಕ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಸೇರಿ ಮೇಷನ್ ಕಿಟ್ ವಿತರಣೆ ಸಲಾಯಿತು ವರದಿ: ಸಿದ್ದೇಶ್ ಎನ್.ಎಸ್. ನೇಗಲಾಲ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಹರಿಹರ: ಪಂಚಮಸಾಲಿ ಸಮಾಜದವರು ಮತಾಂತರ ಆಗುತ್ತಿದ್ದಾರೆ. ಆದಕಾರಣ ಧಾರ್ಮಿಕವಾಗಿ ಸಂಘಟನೆಯ ಮೂಲಕ ಸಮಾಜದಲ್ಲಿ ಮತಾಂತರ ಕಾರ್ಯ ನಿಲ್ಲಬೇಕು ಎಂದು ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ಪಂಚಮಸಾಲಿ ಮಠದಲ್ಲಿ ಮೂರನೇ ಮಠ ಸ್ಥಾಪನೆ ವಿಚಾರದ ಗೊಂದಲದ ಹಿನ್ನಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ನಾಡಿನಲ್ಲಿ ಪಂಚಮಸಾಲಿ ಮಠಗಳು ಹೆಚ್ಚಾದರೆ ನಮ್ಮ ಪೀಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಭೀತಿ ನಮಗೆ ಇಲ್ಲ. ಮಠಗಳು ಹೆಚ್ಚಾದರೆ ನಮ್ಮ ಸಮಾಜ ಹೆಚ್ಚು ಸಂಘಟನೆಯಾಗುತ್ತದೆ ಎಂದರು. ಹರಿಹರ ತಾಲೂಕಿನಲ್ಲಿರುವ ಪಂಚಮಸಾಲಿ ಪೀಠವು 20 ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದೆ. ಈ ಹಿಂದೆ ಮಠಕ್ಕೆ ಭೇಟಿ ನೀಡಿದ್ದ ವೀರಶೈವ ಪಂಚಮಸಾಲಿ ಒಕ್ಕೂಟದ ಪದಾಧಿಕಾರಿಗಳು, ಪಂಚಮಸಾಲಿ ಸಮಾಜದ ಮೂಲ ಪೀಠ ಎಂದರೆ ಅದು ಹರಿಹರದ ಪಂಚಮಸಾಲಿ ಪೀಠ ಎಂದು ತಿಳಿಸಿದ್ದಾರೆ. ಮೂರನೆ ಪೀಠದ ನಿರ್ಮಾಣಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೇಳಿದ್ದರು, ನಾವು ಸಹಕಾರ ಕೊಡುತ್ತೇವೆ ಎಂದು ಭರವಸೆ ನೀಡಿದ್ದೇವೆ…

Read More

ಹೆಣ್ಣು ಎಂದರೆ ತಾಯಿ. ಹೆಣ್ಣು ಎಂದರೆ ಸಹೋದರಿ. ಹೆಣ್ಣು ಎಂದರೆ ಗೆಳತಿ. ಹೆಣ್ಣು ಎಂದರೆ ಪತ್ನಿ. ಹೆಣ್ಣು ಎಂದರೆ ಮಗಳು. ಹೀಗೆ ಪ್ರತಿಯೊಬ್ಬರ ಪುರುಷನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಣ್ಣನ್ನು ಗೌರವಿಸುವುದಕ್ಕಾಗಿ ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದುವೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಭಾರತದಲ್ಲಿ ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಹೆಣ್ಣು ಮಕ್ಕಳ ದಿನದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಹೆಣ್ಣು ಮಕ್ಕಳ ಹಕ್ಕುಗಳು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಕಳೆದ 2008ರಲ್ಲಿ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯವು ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಹೆಣ್ಣು ಶಿಶುಹತ್ಯೆ, ಲಿಂಗ ಅಸಮಾನತೆ ಮತ್ತು ದೈಹಿಕ ದೌರ್ಜನ್ಯದಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಲಾಗಿದೆ. ಹೆಣ್ಣು ಮಕ್ಕಳು ಎದುರಿಸುತ್ತಿರುವ…

Read More

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‍ಡಿಆರ್ ಎಫ್)ಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಹ್ಯಾಕ್ ಮಾಡುವ ಯತ್ನ ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಣತರು ಈ ವಿಷಯವನ್ನು ಪರಿಶೀಲಿಸುತ್ತಿದ್ದು, ಹ್ಯಾಂಡಲ್ ಅನ್ನು ಶೀಘ್ರವೇ ಪುನರ್ ಸ್ಥಾಪನೆ ಮಾಡಲಾಗುವುದು ಎಂದು ಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹ್ಯಾಂಡಲ್ @NDRFHQ ಸಂಕ್ಷಿಪ್ತವಾಗಿ ಕೆಲವು ತತ್ ಕ್ಷಣದ ಸಂದೇಶಗಳನ್ನು ಪೋಸ್ಟ್ ಮಾಡಿದ್ದು, ಈಗಾಗಲೇ ಪ್ರಕಟಿಸಿದ ಮೆಸೇಜ್ ಗಳು ಲೋಡ್ ಆಗುತ್ತಿರಲಿಲ್ಲ. ಹೀಗಿದ್ದರೂ ಕೇಂದ್ರೀಯ ಪಡೆಯ ಅಧಿಕೃತ ಫೋಟೋ ಮತ್ತು ಬಯೋ ಡಿಸ್ ಪ್ಲೇ ಗೋಚರವಾಗಿತ್ತು. ಎನ್ ಡಿಆರ್ ಎಫ್ ಮಾನವ ನಿರ್ಮಿತ ಹಾಗೂ ನೈಸರ್ಗಿಕ ವಿಕೋಪಗಳ ವಿರುದ್ಧದ ಕೇಂದ್ರೀಯ ಸಂಯುಕ್ತ ಪಡೆಯಾಗಿ 2006ರಲ್ಲಿ ಸ್ಥಾಪನೆಗೊಂಡಿತು ಮತ್ತು ಜನವರಿ 19ರಂದು 17ನೇ ಸಂಸ್ಥಾಪನಾ ದಿನವನ್ನು ಆಚರಿಸಿತ್ತು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಪ್ರತಿಷ್ಠಿತ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಬೆಂಗಳೂರಿನ ಸೈಯದ್ ಫತೀನ್ ಅಹ್ಮದ್ ಅವರಿಗೆ ಲಭಿಸಿದೆ. ಪ್ರತಿವರ್ಷದಂತೆ ಈ ಬಾರಿ  ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರಕಟವಾಗಿದೆ. ದೇಶದ 29 ಮಕ್ಕಳಿಗೆ ಪುರಸ್ಕಾರ ಲಭಿಸಿದ್ದು, ಸಂಗೀತ-ಮನರಂಜನೆಯಲ್ಲಿ ಸೈಯದ್ ಫತೀನ್ ಅಹ್ಮದ್ ಆಯ್ಕೆಯಾಗಿದ್ದಾರೆ. ಪಿಯಾನೋ ನುಡಿಸೋದರಲ್ಲಿ 16 ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಫತೀನ್ ಪಡೆದಿದ್ದಾರೆ. ಇವರು ಬೆಂಗಳೂರಿನ ಜಯನಗರದ ನಿವಾಸಿ ಡಾ. ಅಸ್ಮಾ ಅವರ ಪುತ್ರನಾಗಿದ್ದಾರೆ. ಈ ಪ್ರಶಸ್ತಿಯನ್ನು 5 ವರ್ಷಕ್ಕಿಂತ ಮೇಲ್ಪಟ್ಟ 18 ವರ್ಷ ಮೀರಿರದ ಬಾಲಕರು ಮತ್ತು ಪ್ರೌಢಾವಸ್ಥೆಯಲ್ಲಿರುವವರ ಅಸಾಧಾರಣ ಸಾಧನೆ ಗುರುತಿಸಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡಲಾಗುತ್ತದೆ. ಸಮಾಜ ಸೇವೆ, ಪಾಂಡಿತ್ಯ, ಕ್ರೀಡೆ, ಕಲೆ, ಸಂಸ್ಕೃತಿ, ಶೌರ್ಯ ಮತ್ತು ನಾವೀನ್ಯತೆ ಎಂಬ ಆರು ವಿಭಾಗಗಳಲ್ಲಿ ಅಸಾಧಾರಣ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ರೂ ನಗದು ಬಹುಮಾನ, ಪದಕ ಮತ್ತು ಪ್ರಮಾಣಪತ್ರ ಒಳಗೊಂಡಿರುತ್ತದೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ. ಇನ್ನೂ…

Read More

ಬಲ್ಗೇರಿಯಾ… ಯೂರೋಪ್ ಅತ್ಯಂತ ಪ್ರಾಚೀನ ಹಾಗೂ ಸುಂದರ ದೇಶ…!! ಅಧಿಕೃತ ಹೆಸರು ಬರಿಪಬ್ಲಿಕ್ ಆಫ್ ಬಲ್ಗೇರಿಯಾ.. ಬಲ್ಗೇರಿಯಾದ ರಾಜಧಾನಿ – ಸೋಫಿಯಾ ಸಿಟಿ ರಷ್ಯಾ, ಟರ್ಕಿ , ಉಕ್ರೇನ್ , ರೊಮಾನಿಯಾದ ಜೊತೆಗೆ ಈ ದೇಶ ತನ್ನ ಗಡಿ ಹಂಚಿಕೊಂಡಿದೆ. ಬಲ್ಗೇರಿಯಾ ( ವಿಸ್ತೀರ್ಣದಲ್ಲಿ ) ವಿಶ್ವದ 105 ಹಾಗೂ ಯೂರೋಪ್ ನ 16 ನೇ ದೊಡ್ಡ ದೇಶ. ಆಕಾರ ವಿಸ್ತೀರ್ಣದಲ್ಲಿ ನೋಡುವುದಾದ್ರೆ ತಮ್ಮ ದೇಶದ ತೆಲಂಗಾಣಾ ರಾಜ್ಯದಷ್ಟು ಈ ದೇಶ ದೊಡ್ಡದಿದೆ. ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿರುವ ದೇಶ. ಕಡಿಮೆ ಜನಸಂಖ್ಯೆ ಹೊಂದಿರುವುದು ಈ ದೇಶ ಶ್ರೀಮಂತ ಹಾಗೂ ಅಭಿವೃದ್ಧಿ ದೇಶ ಎನಿಸಿಕೊಳ್ಳಲು ಪ್ರಮುಖ ಕಾರಣ. ಈ ದೇಶದ ಲಿಟ್ರೆಸಿ ರೇಟ್ 92 %  ಸ್ಥಾಪನೆಯಾದಾಗಿನಿಂದ ಹಿಡಿದು ಇಲ್ಲಿಯ ವರೆಗೂ ಸಹ ಹೆಸರು ಬದಲಾಯಿಸಿದ ವಿಶ್ವದ ಏಕಮಾತ್ರ ರಾಷ್ಟ್ರ ಬಲ್ಗೇರಿಯಾ. ಈ ದೇಶದಲ್ಲಿ 80 % ರಷ್ಟು ಜನ ಕ್ರೈಸ್ತರು , ಸುಮಾರು 10 ರಷ್ಟು ಮುಸ್ಲಿಮರು ,…

Read More

ರಾತ್ರಿ ವೇಳೆ ನಿದ್ರೆ ಬರುತ್ತಿಲ್ಲವೇ..? ಬೆಡ್‌ ಮೇಲೆ ಆ ಕಡೆ ಈ ಕಡೆ ಒದ್ದಾಡಿದ್ರೂ ಕಣ್ಣು ಮುಚ್ಚುತ್ತಿಲ್ಲವೇ..? ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ ಚೆನ್ನಾಗಿ ನಿದ್ರೆ ಮಾಡಿ.. * ಮಲಗುವ ಮುನ್ನ ನಾಟಿ ಹಸುವಿನ ತುಪ್ಪವನ್ನು ಉಗುರುಬೆಚ್ಚಗೆ ಮಾಡಿ ಮೂಗಿನ ರಂಧ್ರಗಳಲ್ಲಿ ಎರಡು ಹನಿಗಳನ್ನು ಹಾಕಿಕೊಳ್ಳಬೇಕು. *ಗಸಗಸೆಯನ್ನು ಹುರಿದು ತೆಳುವಾದ ಬಟ್ಟೆಯಲ್ಲಿ ಸುತ್ತಿ ಮಲಗುವ ಮುನ್ನ ಅದರ ವಾಸನೆಯನ್ನು ಎಳೆದುಕೊಳ್ಳಬೇಕು. *ನಿಮ್ಮ ಬೆರಳುಗಳಿಂದ ಅಥವಾ ಬಾಚಣಿಗೆಯಿಂದ ಕೂದಲನ್ನು ನಿಧಾನವಾಗಿ ಬಾಚಿಕೊಳ್ಳಿ. * ಕಾಲುಗಳ ಅಡಿಭಾಗವನ್ನು ಕೈಗಳಿಂದ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ರಾತ್ರಿ ಮಲಗುವ ಮುನ್ನ ಪಾದದ ಅಡಿಭಾಗಕ್ಕೆ ಕ್ಯಾಸ್ಟರ್ ಆಯಿಲ್ ಅಥವಾ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ. *ರಾತ್ರಿಯಲ್ಲಿ ಉಗುರುಬೆಚ್ಚಗಿನ ಹಾಲನ್ನು ಕುಡಿಯಿರಿ. *ಮಲಗುವ ಎರಡು ಗಂಟೆಗಳ ಮೊದಲು ಮೊಬೈಲ್ ಫೋನ್ ನೋಡುವುದನ್ನು ನಿಲ್ಲಿಸಿ. ಜೊತೆಗೆ ರಾತ್ರಿ ವೇಳೆ ಮೊಬೈಲ್ ಫೋನ್ ಅನ್ನು ತಲೆಯ ಪಕ್ಕದಲ್ಲಿಟ್ಟರೆ ವಿಕಿರಣದ ಪ್ರಭಾವದಿಂದ ಸರಿಯಾಗಿ ನಿದ್ದೆ ಬರುವುದಿಲ್ಲ. ಹಾಗಾಗಿ ಮೊಬೈಲ್ ಅನ್ನು ದೂರ…

Read More