Author: admin

ಸರಗೂರು: ತಮ್ಮನ್ನು ಶೋಷಣೆ, ದೌರ್ಜನ್ಯ ಮಾಡಿದ ಸಮಾಜದ ವಿರುದ್ಧ ಅಂಬೇಡ್ಕರ್ ಎಂದಿಗೂ ಪ್ರತಿಕಾರದಿಂದ ಸಿಡಿದು ನಿಂತವರಲ್ಲ. ಪ್ರತಿಯೊಬ್ಬರೂ ಸಹೋದರತ್ವದಿಂದ ಬದುಕಬೇಕು ಎಂದು ಕನಸು ಕಂಡವರು ಎಂದು ಪಶು ಸಂಗೋಪನೆ ಇಲಾಖೆಯ ಸಹಯಕ ನಿರ್ದೇಶಕ ಡಾ.ವೈ.ಡಿ.ರಾಜಣ್ಣ ಹೇಳಿದರು. ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಪಟ್ಟಣ ಪಂಚಾಯಿತಿಯ ಸಹಯೋಗದೊಂದಿಗೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ 131ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ರವರು ಶೋಷಿತ ಸಮುದಾಯಗಳ ಏಳಿಗೆಗಾಗಿ ನಿರಂತವಾಗಿ ಶ್ರಮಿಸಿ ಚಳುವಳಿಗಳನ್ನು ಮಾಡಿದವರು. ಜಾಗೃತಿ ಮತ್ತು ಜ್ಞಾನದ ದೀಪವಾಗಿ ಈ ದೇಶದ ಅಭಿವೃದ್ಧಿಗೆ ದಾರಿಯಾದವರು. ಅಂತಹ ಮಹನೀಯರು ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲ ಅವರು ದೇಶದ ಆಸ್ತಿ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ ಮಾತನಾಡಿ, ಅಂಬೇಡ್ಕರ್‍ ಅವರ  ಆದರ್ಶಗಳು ಸಾಮಾನ್ಯ ಜನರಿಗೆ, ರೈತಪಿ ವರ್ಗದವರಿಗೆ ತಲುಪುದಾದರು ಹೇಗೆ? ಕಾರ್ಯಕ್ರಮದಲ್ಲಿ ಕೇವಲ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾತ್ರ ಸೀಮಿತವಲ್ಲ. ಇನ್ನೂ ಮುಂದೆಯಾದರು ಅಧಿಕಾರಿಗಳು ಎಲ್ಲರ…

Read More

ತುರುವೇಕೆರೆ:  ತಾಲ್ಲೂಕು ಆಡಳಿತ ಮತ್ತು ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಬಾಬು ಜಗಜೀವನ್ ರಾಮ್.ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಗುರುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುರುವೇಕೆರೆ ವಿಧಾನ ಸಭಾ ಸದಸ್ಯ ಮಸಾಲ ಜಯರಾಮ್, ಕಳೆದ ನಾಲ್ಕು ವರ್ಷಗಳಿಂದ ಚುನಾವಣಾ ನೀತಿ ಸಂಹಿತೆ, ಕೊರೊನಾದಂತಹ  ಕಾರಣಗಳಿಂದ ಇಬ್ಬರು ನಾಯಕರುಗಳ ಜಯಂತಿ ಕಾರ್ಯಕ್ರಮಗಳನ್ನು ಮಾಡಲು ಆಗಿರಲಿಲ್ಲ, ಆದರೆ ಈ ಬಾರಿ ಆಚರಿಸಲು ಯಾವುದೇ ಅಡೆ ತಡೆಯಾಗಲಿಲ್ಲ ಎಂದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡದಿದ್ದರೆ, ನಿಮ್ಮ ಮಸಾಲ ಜಯರಾಮ್ ಶಾಸಕ ಆಗುತ್ತಿರಲಿಲ್ಲ ಎಂದ ಹೇಳಿದ ಅವರು, ಅಂಬೇಡ್ಕರ್ ಜಯಂತಿಯಲ್ಲಿ ಭಾಗಿಯಾದ ಅಪಾರ ಸಂಖ್ಯೆಯ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮೊದಲು ಇಬ್ಬರು ಮಹಾನ್ ನಾಯಕರುಗಳ ಭಾವಚಿತ್ರಗಳಿಗೆ  ,ಸಿಂಗಾರ ಮಾಡಿ, ನಾಸಿಕ್ ಡೋಲು, ತಮಟೆ , ಕಹಳೆ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಗೌರವಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ,…

Read More

ಕೊರಟಗೆರೆ: ನಾನು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದೆ, ಹಲವು ಬಾರಿ ಶಾಸಕನಾಗಿ ಮಂತ್ರಿಯಾಗಿ ಅತ್ಯುನ್ನತ ಡಾಕ್ಟರೇಟ್ ಪದವಿಯನ್ನೂ ಪಡೆದು ಹಲವು ದೇಶ ಸುತ್ತಿ ಬಂದಿರುವೆ. ಆದರೂ ಕೂಡ ನಾನು ದಲಿತ ಎಂಬ ಕಾರಣಕ್ಕೆ ದೇವಾಲಯಗಳಲ್ಲಿ ನನ್ನನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಅವರು ಬಹಿರಂಗವಾಗಿಯೇ ಬೇಸರ ಹೊರಹಾಕಿದರು. ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂಭಾಗ ಗುರುವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪರಮೇಶ್ವರ್, ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ನೋವಿನಲ್ಲೇ ಬಿಚ್ಚಿಟ್ಟರು. ನಾನು ಫಾರಿನ್‌ ಗೂ ಹೋಗಿ ಬಂದೆ. ನಾನು ಶಾಸಕನಾಗಿದ್ದೀನಿ, ಸಚಿವನಾಗಿದ್ದೀನಿ, ಕರ್ನಾಟಕದಲ್ಲಿ ನಂ 2 ಆಗಿದ್ದೀನಿ. ಆದರೆ ನನಗೇ ದೇವಸ್ಥಾನಕ್ಕೆ ಸೇರಿಸಲ್ಲ. ನಾನು ದೇವಸ್ಥಾನಕ್ಕೆ ಹೋದ್ರೆ ಸ್ವಲ್ಪ ಸ್ವಲ್ಪ ಅಲ್ಲೇ ನಿಂತುಕೊಳ್ಳಿ ಮಂಗಳಾರತಿ ತರ್ತೀನಿ ಅಂತಾರೆ. ನನ್ನ ನೋಡಿ ಅವರೇ ಮಂಗಳಾರತಿ ತಟ್ಟೆ ತಂದುಬಿಡ್ತಾರೆ. ಯಾಕಂದ್ರೆ ನಾನು ಎಲ್ಲಿ ಒಳಗೆ ಬಂದು ಬಿಡ್ತೀನೋ ಅಂತ… ಇಂತಹ ಪರಿಸ್ಥಿತಿ ಈಗಲೂ ಸಮಾಜದಲ್ಲಿ  ಅಂದ್ರೆ ನಾನು ಏನು ಹೇಳೋದು? ಎಂದು ಅಸಮಾಧಾನ…

Read More

ತುರುವೇಕೆರೆ: ಕಾಂಗ್ರೆಸ್ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಬೆಮೆಲ್ ಕಾಂತರಾಜು ಅವರ ಕಚೇರಿಯಲ್ಲಿ , ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಹಾಗೂ ಸಂವಿಧಾನ ಶಿಲ್ಪಿ, ಡಾ ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 300 ಜನ ಕಾರ್ಯಕರ್ತರು ಭಾಗವಹಿಸಿದ್ದರು.  ಈ ವೇಳೆ ಮಾತನಾಡಿದ ಬೆಮೆಲ್ ಕಾಂತರಾಜು, ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನು ಒಡೆಯಲು ಹೊರಟಿದ್ದಾರೆ. ಆದರೆ , ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದರು. ಎಂ.ಡಿ.ಮೂರ್ತಿ  ಮಾತನಾಡಿ, ಭಾರತದ ಈಗಿನ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಸಂವಿಧಾನ  ಬದಲಾವಣೆ ಮಾಡುತ್ತೇವೆ, ನಾವು  ಬದಲಾವಣೆ ಮಾಡಲೇ ಬಂದಿದ್ದೇವೆ ಎಂದು ಬೇರೆಯವರ ಬಾಯಿಯಿಂದ ಮಾತನಾಡಿಸುತ್ತಿದ್ದಾರೆ. ಆದರೆ ಅದು ಇಲ್ಲಿ ನಡೆಯದು, ಸಂವಿಧಾನ ಬದಲಾವಣೆಗೆ ನಾವು ಬಿಡುವುದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದು, ಪ್ರತಿರೋಧ ಮಾಡೋಣ ಎಂದರು. ಈ ಕಾರ್ಯಕ್ರಮದಲ್ಲಿ ತಾಲೋಕು ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್, ನಾಗೇಶ್, ತಾವರೆಕೆರೆ ದಾನಿಗೌಡರು, ಬುಗುಡನಹಳ್ಳಿ ಕೃಷ್ಣಮೂರ್ತಿ,    ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಶ್ಮೀ ದೇವಮ್ಮ, ಜೋಗಿಪಾಳ್ಯ…

Read More

ಗುಬ್ಬಿ: ತಾಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಆಡಳಿತದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರವಿಕುಮಾರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು. ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲೇ ಅಂಬೇಡ್ಕರ್ ಅವರ ಭಾವಚಿತ್ರ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರವಿಕುಮಾರ್ ಮಾತನಾಡಿ, ಬಾಬಾ ಸಾಹೇಬರು ಕೇವಲ ದಲಿತ ಸಮುದಾಯಕ್ಕೆ ಸಿಮೀತವಾದವರಲ್ಲ ಎಲ್ಲಾ ವರ್ಗದವರಿಗೆ ಮೀಸಲಾತಿ ನೀಡುವ ಮೂಲಕ ಸರ್ವರು ಸಮಾನರು ಎಂಬ ಐಕ್ಯತೆ ಭಾವನೆ ಮೂಡಿಸಿದ ಮಹನ್ ಚೇತನರಾಗಿದ್ದಾರೆ ಅವರ ಆದರ್ಶ ಗಳು ಇಂದಿಗೂ ಜೀವಂತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಾಜಿ ತಾ.ಪಂ.ಅಧ್ಯಕ್ಷ ಬಿ.ಹೆಚ್.ಭಾರತೀ ಸುರೇಶ್ ಮಾತನಾಡಿ, ಅಂಬೇಡ್ಕರ್ ರವರು ಪ್ರತಿ ಪ್ರಜೆಗಳು ಆಡಳಿತ ನೆಡೆಸುವ ದೃಷ್ಟಿಯಿಂದ ಸಂವಿಧಾನ ರಚಿಸಿ ಎಲ್ಲಾ ವರ್ಗದವರಿಗೂ ರಾಜಕೀಯ ಪ್ರತಿನಿದ್ಯ ನೀಡುವ ಮೂಲಕ ಎಲ್ಲಾರಿಗೂ ಸಮಾನತೆ .ಶಿಕ್ಷಣ.ದೊರೆಯುವ ನಿಟ್ಟಿನಲ್ಲಿ  ಸರ್ವಧರ್ಮದ ನಾಯಕರಾಗಿ ಪ್ರಖ್ಯಾತಿ ಪಡೆದಿದ್ದಾರೆ.ಬೇರೆ ರಾಷ್ಟ್ರ ಗಳಲ್ಲಿ…

Read More

ಮಧುಗಿರಿ (ಮಿಡಿಗೇಶಿ): ಭಾರತದಲ್ಲಿನ ಹಲವಾರು ಸಾಮಾಜಿಕ ಶೋಷಣೆಗಳನ್ನು ಹೊಡೆದೋಡಿಸಿ ಭಾರತ ಪ್ರಜ್ವಲಿಸುವಂತೆ ಮಾಡುವ ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಬೆಳೆಸುವ ಕನಸನ್ನು ಕಂಡು ಹಲವಾರು ಸುಧಾರಣೆಗಳಿಗೆ ಬುನಾದಿ ಹಾಕಿ, ವಿಭಿನ್ನ ಧರ್ಮ, ಜಾತಿ, ವರ್ಗ, ಪಂಗಡಗಳಿರುವ ಬೃಹತ್ ರಾಷ್ಟ್ರವನ್ನು ಸಂವಿಧಾನದ ಮೂಲಕ ಒಟ್ಟುಗೂಡಿಸಿದ ಆಧುನಿಕ ಭಾರತದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರದು ಪ್ರಖರ ವ್ಯಕ್ತಿತ್ವ, ವಿಶ್ವಮೆಚ್ಚಿದ ಜ್ಞಾನಿಗಳಲ್ಲಿ ಅಗ್ರಗಣ್ಯರಾಗಿದ್ದರು. ಆಧು ಎಂದು ಕಾಲೇಜು ಶಿಕ್ಷಣ ಧಾರವಾಡ ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ.ಹನುಮಂತರಾಯ ವೈ.ಎಸ್. ತಿಳಿಸಿದರು. ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಅಂಬೇಡ್ಕರ್ ಶತಮಾನಗಳಿಂದ ಶೋಷಣೆಗೆ ಒಳಗಾದ ಜನರ ಪ್ರತಿನಿಧಿಯಾಗಿ, ಇಲ್ಲಿನ ಸಾಮಾಜಿಕ ಪಿಡುಗುಗಳ ವಿರುದ್ದ ಗಟ್ಟಿಧ್ವನಿಯೆತ್ತಿದ ಛಲಗಾರರಾಗಿದ್ದರು. ಶಿಕ್ಷಣ ಪಡೆಯುವ ಮೂಲಕ ಏನನ್ನಾದರೂ ಸಾಧಿಸಬಹುದೆಂಬ ಅಚಲ ವಿಶ್ವಾಸ ಹೊಂದಿದ್ದು, ಅಂದಿನ ಕಾಲದಲ್ಲಿ ಅತ್ಯುನ್ನತ ವಿದ್ಯಾಭ್ಯಾಸ ಪಡೆದು, ತಮ್ಮ ಜೀವನವನ್ನೇ ಸಮಾಜದ ಸುಧಾರಣೆಗಾಗಿ ಸಮರ್ಪಿಸಿಕೊಂಡರು. ಕತ್ತಲೆಯ ಕೂಪದಲ್ಲಿ ನರಳುತ್ತಿದ್ದ…

Read More

ಮಧುಗಿರಿ: ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಅವರ 72ನೇ ಹುಟ್ಟು ಹಬ್ಬದ ಪ್ರಯುಕ್ತ ಕೆ.ಎನ್.ಆರ್. ಅಭಿಮಾನಿ ಬಳಗ ಹಾಗೂ ಆರ್.ಆರ್ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಕೆ.ಎಸ್‍.ಆರ್.ಟಿ.ಸಿ.  ಬಸ್ಟ್ಯಾಂಡ್ ಮುಂಭಾಗ ಟ್ಯಾಕ್ಸಿ ಚಾಲಕರಿಗೆ ಉಚಿತ ಸಮವಸ್ತ್ರ ನೀಡಲಾಯಿತು. ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ಕೆ.ಎನ್.ರಾಜಣ್ಣ ಅವರು ಶಾಸಕರಾಗಿದ್ದ ಅವಧಿಯಲ್ಲಿ ಮಧುಗಿರಿ ಕ್ಷೇತ್ರವು ಬಹಳಷ್ಟು ಅಭಿವೃದ್ಧಿಗೊಂಡಿತ್ತು. ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಕ್ಷೇತ್ರದಲ್ಲಿ ಅವರು ಹಮ್ಮಿಕೊಂಡಿದ್ದ ಅನೇಕ ಜನಪರ ಕೆಲಸಗಳಿಂದ ಜನರ ಜೀವನಮಟ್ಟ ಸಾಕಷ್ಟು ಸುಧಾರಣೆಗೊಂಡಿತ್ತು. ಅಂತಹ ನಾಯಕನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ದೇವರು ಅವರಿಗೆ ಇನ್ನಷ್ಟು ಆರೋಗ್ಯ ಅಧಿಕಾರ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೆಸರು ಬೇಳೆ ಪಾನಕ ಹಾಗೂ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು ಹಾಗೂ ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಪುರಸಭಾ ಸದಸ್ಯರುಗಳಾದ ಎಂ.ಎಸ್.ಚಂದ್ರಶೇಖರ್, ಲಾಲಾಪೇಟೆ ಮಂಜುನಾಥ್, ಅಲೀಮ್, ಮಾಜಿ ಸದಸ್ಯರಾದ ಎಂ.ಜಿ.ರಾಮು ತಲ್ಲಿ ಮಂಜುನಾಥ್,…

Read More

ತಿಪಟೂರು:ರಾಜಕಾರಣ ಎಂದರೆ ಸಂಸದರು ಶಾಸಕರು ಮತ್ತು ಮುಖ್ಯಮಂತ್ರಿಯಾಗಿ ಅಧಿಕಾರ ಪಡೆಯುವುದೊಂದೇ ಅಲ್ಲ ಸಿದ್ಧಾಂತವನ್ನು ಅಳವಡಿಸಿಕೊಂಡು ಸಮಾಜವನ್ನು ರೂಪಿಸುವಲ್ಲಿ ನೈಜ ರಾಜಕಾರಣ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟರು. ತಿಪಟೂರು ನಗರದ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಸಮಿತಿ ಹೋರಾಟ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ 2020 ಹಾಗೂ ಎಲ್ಲಾ ರೈತರಿಗೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು. ರೈತರಿಗೆ ಯಾವುದೇ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇದ್ದಾಗ ಮಾತ್ರ ಸೂಕ್ತ ದರ ಸಿಗಲು ಸಾಧ್ಯ. ಇಲ್ಲವಾದಲ್ಲಿ ಅನ್ನದಾತನ ಸ್ಥಿತಿ ಶೋಚನೀಯವಾಗಲಿದೆ. ಇದರಿಂದ ಹೊರಬರಬೇಕಾದರೆ ಸಂಘಟಿತ ಹೋರಾಟ ಎಂದು ರೈತರಿಗೆ ಕರೆ ನೀಡಿದರು. ಜನಸ್ಪಂದನ ಪ್ರಶ್ನ ಸಿಬಿ ಶಶಿಧರ್ ಮಾತನಾಡಿ, ಚಳುವಳಿಗಳು ರೈತರ ಸಂಕಷ್ಟಕ್ಕೆ ಪರಿಹಾರ ಯುವಜನರು ವಿಚಾರವಂತ ರಾಗುವ ಮೂಲಕ ಸಮಾಜದ ಮುಖಿಯಾಗಬೇಕೆಂದು ಅಂದರು. ಈ ಕಾರ್ಯಕ್ರಮದಲ್ಲಿ ಸಂಯುಕ್ತ ಹೋರಾಟ ಜಿಲ್ಲಾ ಸಂಚಾಲಕ ಯತಿರಾಜ್ ಅಧ್ಯಕ್ಷತೆ…

Read More

ದಾವಣಗೆರೆ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಸಮಿತಿ ಹುಚ್ಚವನಹಳ್ಳಿ ಬಣ ಸಂಘಟನೆ ವತಿಯಿಂದ ರಸಗೊಬ್ಬರ ಬೆಲೆ ಏರಿಕೆ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ರಸಗೊಬ್ಬರದ  ದಾಸ್ತಾನು ಅಭಾವ ಖಂಡಿಸಿ ಬುಧವಾರದಂದು  ದಾವಣಗೆರೆ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ದಾವಣಗೆರೆ  ಜಿಲ್ಲೆಯ ಜಯಚಾಮ ರಾಜೇಂದ್ರ ಸರ್ಕಲ್ ನಿಂದ ಎ ಸಿ ಆಫೀಸ್ ವರಗೆ ಕಾಲ್ ನಡೆಗೆಯಲ್ಲಿ ಸರ್ಕಲ್ ಬಂದ್  ಮಾಡಿ  ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಧ್ಯಕ್ಷರಾದ ಮಂಜುನಾಥ್  ಮಾತನಾಡಿ, ಕೇಂದ್ರ ಸರ್ಕಾರವು ರಸಗೊಬ್ಬರದ ಬೆಲೆಯನ್ನು ನಿಯಂತ್ರಿಸಲು ಆಗದೆ ಇರುವ ಕಾರಣ ರಸಗೊಬ್ಬರದ ಬೆಲೆ ಗಗನಕ್ಕೆ ಏರಿದೆ. ಕೇಂದ್ರ ಸರ್ಕಾರವು ಈ ಕೂಡಲೇ ಮಧ್ಯ ಪ್ರವೇಶ ಮಾಡಿ ರಸಗೊಬ್ಬರದ ಬೆಲೆ ಕಡಿಮೆ ಮಾಡಿ ರೈತರಿಗೆ ಅನುಕೂಲ ಮಾಡಬೇಕಾಗಿದೆ ಎಂಬುದಾಗಿ ಒತ್ತಾಯಿಸಿದರು. ದೇಶದಲ್ಲಿ ರಸಗೊಬ್ಬರ ,ಡೀಸೆಲ್ ,ಪೆಟ್ರೋಲ್ , ಗ್ಯಾಸ್, ಆಹಾರ ಪದಾರ್ಥಗಳು ಹಾಗೂ ಎಣ್ಣಿ ಪದಾರ್ಥಗಳು ಕಾಲೇಜು ಶುಲ್ಕ…

Read More

ಕೊರಟಗೆರೆ :  ಸವಿತಾ ಸಮಾಜದ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿರುವುದರ ವಿರುದ್ಧ ತಾಲ್ಲೂಕಿನ  ಸವಿತ ಸಮಾಜದ ವತಿಯಿಂದ ತಾಲ್ಲೂಕು ಪಂಚಾಯ್ತಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಹಾತ್ಮ ಗಾಂಧೀಜಿ ಹಾಗೂ ಡಾ ಬಿ ಆರ್ ಅಂಬೇಡ್ಕರ್  ಭಾವ ಚಿತ್ರವನ್ನಿಟ್ಟು ಕೊಂಡು ಪ್ರತಿಭಟಿಸಿದ ಪ್ರತಿಭಟನಾಕಾರರು ಪಿಡಿಒ ರಮೇಶ್ ವಿರುದ್ಧ ಆಕ್ರೋಶ ಹೊರ ಹಾಕಿದರು. ಕರ್ತವ್ಯದಿಂದ ವಜಾ ಗೊಂಡಿರುವ ಲಲಿತಾ ಮಾತನಾಡಿ, ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳದೆ ತುಂಬಾಡಿ ಪಿಡಿಒ ರಮೇಶ್ ರವರು ನನ್ನನ್ನು ಅನ್ಯಜಾತಿ ಹೆಣ್ಣುಮಗಳು  ಎಂದು ನಿಂದಿಸಿದ್ದಾರೆ. ಕೆಲಸಕ್ಕೆ ತೆಗೆದುಕೊಳ್ಳದೆ ನಾಳೆ ಬಾ, ನಾಡಿದ್ದು ಬಾ ಎಂದು ಸತಾಯಿಸುತ್ತಿದ್ದಾರೆ. ನನ್ನ ಕೆಲಸಕ್ಕೆ ಬೇರೊಬ್ಬರನ್ನು ತೆಗೆದುಕೊಂಡಿದ್ದಾರೆ. ಅವರಿಗೆ ಸಂಬಳ ನೀಡುತ್ತಿದ್ದಾರೆ ನನಗೆ ಅನೇಕ ತಿಂಗಳ ಸಂಬಳವನ್ನು ಕೊಟ್ಟಿಲ್ಲ. ನ್ಯಾಯಾಲಕ್ಕೂ ಬೆಲೆ ಕೊಡದೆ ಸಂಬಳ  ಕೊಡದೆ ಸತಾಯಿಸುತ್ತಿದ್ದಾರೆ. ದಯವಿಟ್ಟು ಮೇಲಧಿಕಾರಿಗಳು ಇತ್ತ ಗಮನ ಹರಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸವಿತ ಸಮಾಜದ ಮುಖಂಡರಾದ, ಚಲನಚಿತ್ರ ಹಾಸ್ಯ ನಟರು ಮುತ್ತುರಾಜ್ ಮಾತನಾಡಿ, ನಮ್ಮ ಸಮಾಜದ ಒಬ್ಬ…

Read More