Subscribe to Updates
Get the latest creative news from FooBar about art, design and business.
- ಚಿಕ್ಕಬಳ್ಳಾಪುರ: ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ; ನವವಿವಾಹಿತೆ ದುರ್ಮರಣ, ಪತಿಗೆ ಗಂಭೀರ ಗಾಯ
- ಯಾವ ಶಕ್ತಿಯಿಂದಲೂ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮುಂದಿನ ವಾರ 24ನೇ ಕಂತಿನ ಹಣ ಬಿಡುಗಡೆ!
- ಕೊರಟಗೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ
- ಮೇಲನಹಳ್ಳಿ ತ್ಯಾಜ್ಯ ಘಟಕಕ್ಕೆ ಗ್ರಾಮಸ್ಥರ ತೀವ್ರ ವಿರೋಧ: ತಹಶೀಲ್ದಾರ್ ಭೇಟಿ
- ಕರ್ನಾಟಕ ಒಲಂಪಿಕ್ 2025: ಕ್ರೀಡಾಪಟುಗಳ ಬೆನ್ನಿಗೆ ನಿಂತ ಸರ್ಕಾರ; ಪದಕ ಗೆದ್ದರೆ ಕೋಟಿ ಕೋಟಿ ನಗದು ಸಂಭಾವನೆ
- ಪಾವಗಡ ತಾಲ್ಲೂಕಿನಲ್ಲಿ ಪಲ್ಸ್ ಪೋಲಿಯೋ ಅಭಿಯಾನ: 17 ಸಾವಿರ ಮಕ್ಕಳಿಗೆ ಲಸಿಕೆ ಗುರಿ
- ಸಂತಪುರದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
Author: admin
ರೆಡ್ ರಿವರ್ ಆಫ್ ಡಿ ಸೌತ್ ಸುಮಾರು 2,100 ಕಿಮೀ ಉದ್ದದ ಕೆಂಪು ನದಿಯನ್ನು ವಿಶ್ವದ ಅತ್ಯಂತ ಅಪಾಯಕಾರಿ ನದಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ನದಿಯು ವಿಚಿತ್ರವಾಗಿದೆ, ಅಂದರೆ, ಈ ನದಿಯ ಬಗ್ಗೆ ಯಾವುದೇ ಊಹೆ ಮಾಡಲಾಗುವುದಿಲ್ಲ. ಕೆಲವೊಮ್ಮೆ ಇದು ತುಂಬಾ ಶಾಂತವಾಗಿರುತ್ತದೆ ಮತ್ತು ಕೆಲವೊಮ್ಮೆ ಈ ನದಿಯೂ ಪ್ರವಾಹದಂತೆ ಹರಿಯುತ್ತದೆ. ಶನಾಯ್-ಟಿಂಪಿಶ್ಕಾ, ಪೆರು ಶನಾಯ್-ಟಿಂಪಿಷ್ಕಾ ನದಿಯನ್ನು ಸಾಮಾನ್ಯವಾಗಿ ‘ಕುದಿಯುವ ನದಿ’ ಎಂದು ಕರೆಯಲಾಗುತ್ತದೆ. ಈ ನದಿಯ ಉಷ್ಣತೆಯು 200 ಡಿಗ್ರಿ ಫ್ಯಾರನ್ಹೀಟ್ಗಿಂತ ಹೆಚ್ಚಾಗಿರುತ್ತದೆ. ಭೂಶಾಖದ ಶಕ್ತಿಯೊಂದಿಗೆ ಈ ಅಪಾಯಕಾರಿ ನದಿಯ ನೀರನ್ನು ಸ್ಪರ್ಶಿಸಿದ ತಕ್ಷಣ ಒಬ್ಬ ವ್ಯಕ್ತಿಯು ಸುಟ್ಟ ಅನುಭವವನ್ನು ಪಡೆಯುತ್ತಾನೆ. ಮೆಕಾಂಗ್ ನದಿ ಮೆಕಾಂಗ್ ನದಿಯು 6 ಏಷ್ಯನ್ ದೇಶಗಳ ಮೂಲಕ ಹಾದುಹೋಗುತ್ತದೆ ಮತ್ತು ಅನೇಕ ಮಾರಣಾಂತಿಕ ಪ್ರಾಣಿಗಳಿಗೆ ನೆಲೆಯಾಗಿದೆ. ಈ ನದಿಯಿಂದಾಗಿ ಪ್ರತಿ ವರ್ಷ ಅನೇಕ ಜನರೂ ಪ್ರಾಣ ಕಳೆದುಕೊಳ್ಳುತ್ತಾರೆ. ಅದರ ಅನಿರೀಕ್ಷಿತ ಪ್ರವಾಹವು ಜನರ ಜೀವನವನ್ನು ಕಷ್ಟಕರವಾಗಿಸುತ್ತದೆ. ಅದರೊಳಗೆ ಇರುವ ಮೊಸಳೆಗಳು ಬಹಳ ಅಪಾಯಕಾರಿಯಾಗಿವೆ. ರಿಯೊ…
ತಿಪಟೂರು: ತಾಲ್ಲೂಕು ಆಡಳಿತದ ವತಿಯಿಂದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಎಸ್.ಕೆ ಜಗನ್ನಾಥ್ , ಜಗತ್ತಿಗೆ ಬೆಳಕಾಗಿದ್ದ ಶ್ರೀ ಬಸವೇಶ್ವರರ ಮಾನವೀಯ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಸರ್ಕಾರಿ ಸೇವೆ ಮಾಡುವ ನಾವು ಕನಿಷ್ಠ ಸಮಸ್ಯೆಗಳನ್ನು ಒತ್ತು ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬೆಳಕಾಗಬೇಕು ಎಂದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 889ನೇ ಶ್ರೀ ಬಸವೇಶ್ವರ ಜಯಂತೊತ್ಸವದಲ್ಲಿ ಮಾತನಾಡಿದ ಅವರು, ಜನರ ಸೇವೆಗಾಗಿ ನೇಮಕಗೊಂಡಿರುವ ನಾವುಗಳು ಶ್ರದ್ಧೆ, ಸಂಯಮ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಪಾಪ ಪುಣ್ಯಗಳನ್ನು ತಮ್ಮ ಕಾಯಕದಲ್ಲೆ ಕಾಣಬಹುದು ಎಂದು ಸಲಹೆ ನೀಡಿದರು. ಸದರಿ ಕಾರ್ಯಕ್ರಮದಲ್ಲಿ ಗ್ರೇಡ್ -2 ತಹಸೀಲ್ದಾರ್ ಎಸ್.ಕೆ ಜಗನ್ನಾಥ್, ಸಿ.ಡಿ.ಪಿ.ಒ ಇಲಾಖಾ ಅಧಿಕಾರಿಗಳಾದ ಶ್ರೀ ಓಂಕಾರಪ್ಪ, ಬಿ.ಸಿ.ಎಂ. ಇಲಾಖೆಯ ಶ್ರೀಮತಿ ಜಲಜಾಕ್ಷಿ ರವರು, ಶಿರಸ್ತೇದಾರ್ ಶ್ರೀ ರವಿಕುಮಾರ್, ಪುನೀತ್, ಕೋದಂಡರಾಮು, ರವಿಶಂಕರ್, ಹಾಗೂ ಕಚೇರಿ ಸಿಬ್ಬಂದಿವರ್ಗದವರು ಹಾಜರಿದ್ದರು . ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಗುಬ್ಬಿ: ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ಜಮೀನಿನ ಕೆಲಸ ಮಾಡಲು ತೆರಳಿದ ಇಬ್ಬರು ಕೂಲಿ ಕಾರ್ಮಿಕರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ. ಜಿ.ಹೊಸಹಳ್ಳಿ ಗ್ರಾಮದಲ್ಲಿ ಶಿವಕುಮಾರ್ ಮತ್ತು ಮಂಜುನಾಥ್ ಒಡೆತನದ ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದ ಸಮಯದಲ್ಲಿ ಸ್ಥಳೀಯ ನಿವಾಸಿ ಲತಾ ಪ್ರಶಾಂತ್ ಎಂಬುವ ವ್ಯಕ್ತಿ ಹಾಗೂ ಇತರರು ಈ ಜಮೀನು ನಮಗೆ ಸೇರಿದ್ದು ನೀವು ಕೆಲಸ ಮಾಡಲು ಬರುವುದಕ್ಕೆ ಹೇಳಿದವರು ಯಾರು ಎಂದು ಪ್ರಶ್ನಿಸಿ ಕಾರ್ಮಿಕರಾದ ಕೃಷ್ಣ ಮೂರ್ತಿ, ರವಿ ಎಂಬುವ ಏಕ ಏಕಿ ಹಲ್ಲೆ ನಡೆಸಿ ಥಳಿಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಕೃಷ್ಣ ಮೂರ್ತಿ ಸಹೋದರ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಕಾರ್ಮಿಕರನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆ ಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ಕುರಿತು ಗುಬ್ಬಿ ಠಾಣೆಗೆ ದೂರು ಸಲ್ಲಿಸಲಾಗಿದೆ. ವರದಿ: ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ತಿಪಟೂರು: ತಾಲ್ಲೂಕಿನ ಹಾಲ್ಕುರಿಕೆ ಕೆರೆಗೆ ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಚಿಕ್ಕನಾಯ್ಕನಹಳ್ಳಿ ತಾಲ್ಲೋಕಿನ 22ಕೆರೆಗಳಿಗೆ ನೀರು ಒದಗಿಸುವ ಯೋಜನೆಯ ಭಾಗವಾಗಿ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆರೆ ಹಾಗೂ ಪಟ್ಟದದೇವರಕೆರೆಗಳಿಗೆ ನೀರುಹರಿಸುವ ಕಾಮಗಾರಿಗೆ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗುದ್ದಲಿಪೂಜೆ ನೆರವೇರಿಸಿದರು. ನಂತರ ಹಾಲ್ಕುರಿಕೆ ಗ್ರಾಮದೇವತೆ ಶ್ರೀಕೆಂಪಮ್ಮ ದೇವಿ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಹಾಗೂ ಸಚಿವ ಬಿ.ಸಿ. ನಾಗೇಶ್ ರವರಿಗೆ ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಾಲ್ಕುರಿಕೆ ಕೆರೆಗೆ ಹೇಮಾವತಿ ನೀರು ಹರಿಸಬೇಕು ಎನ್ನುವುದು ಈ ಭಾಗದ ಜನರ ದಶಕಗಳ ಕನಸು ಹಲವಾರು ಅಡ್ಡಿ ಅತಂಕಗಳನ್ನ ನಿವಾರಿಸಿ ಪ್ರಾರಂಭಗೊಳುತ್ತಿದ್ದು, ಯೋಜನೆಯನ್ನ ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. ಸಚಿವ ಜೆ.ಸಿ. ಮಾಧುಸ್ವಾಮಿಯವರ ಸಹಕಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ನೀರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಸಹಕಾರದಿಂದ ಸುಮಾರು 89ಕೋಟಿ ವೆಚ್ಚದ ಕಾಮಗಾರಿಗೆ ಪೂಜೆ ಮಾಡುತ್ತಿದ್ದು, ಈ ವರ್ಷದ ಹೇಮಾವತಿ…
ಹಿರಿಯೂರು: ವಿಶ್ವದಾದ್ಯಂತ ಮಂಗಳವಾರ ರಂಜಾನ್ ಹಾಗೂ ಬಸವಜಯಂತಿ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಕಳೆದ ಎರಡು ವರ್ಷಗಳಿಂದ ಓಮಿಕ್ರೋನ್ ಹಾಗೂ ಕೊರೊನಾ ಸಾಂಕ್ರಾಮಿಕ ಕಾಯಿಲೆಗಳಿಂದ ಸ್ಥಬ್ದಗೊಂಡಿದ್ದ ಹಬ್ಬ ಈ ವರ್ಷ ಸಡಗರ ಸಂಭ್ರಮದಿಂದ ನಡೆಯಿತು. ಹಿರಿಯೂರು ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೋಮಶೇಖರ್ ಬಿ. ಅವರು ರಂಜಾನ್ ಹಬ್ಬದಲ್ಲಿ ಭಾಗಿಯಾಗಿ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದರು. ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರಿಗೆ ಸೋಮಶೇಖರ್ ಬಿ. ಅವರ ಅಭಿಮಾನಿಗಳು ಕುಡಿಯಲು ತಂಪಾದ ಪಾನಿಯಗಳು , ನೀರು, ಮಜ್ಜಿಗೆ ಗಳನ್ನು ನೀಡುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು. ಇದೇ ಸಂದರ್ಭದಲ್ಲಿ ನಮ್ಮ ತುಮಕೂರು ಮಾಧ್ಯಮದ ಮೂಲಕ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂಗಿರಿ ಅಕ್ರಮ್ , ಕಳೆದ ಚುನಾವಣೆಯಲ್ಲಿ ಸೋಮಶೇಖರ್ ಬಿ. ಅವರು ಸೋಲನ್ನು ಕಂಡಿದ್ದು ನಿಜಕ್ಕೂ ಸಹ ಬೇಸಾರದ ಸಂಗತಿಯಾಗಿದೆ . ಆದರೆ ಇದೀಗ 2023ರಲ್ಲಿ ಬರುವಂತಹ ಸಾರ್ವತ್ರಿಕ…
ತಿಪಟೂರು: ತಂದೆ-ತಾಯಿ ಸಂಸ್ಕಾರ ಕೊಟ್ಟು ಬೆಳೆಸಿದ ಮಕ್ಕಳು ಲೋಕ ವೀರರಾಗಿದ್ದಾರೆ ಎಂದು ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು. ತಿಪಟೂರು ತಾಲೂಕು ಗಂಗನಘಟ್ಟ ಗೇಟ್ ಬಳಿ ಶ್ರೀರಂಗ ವಿದ್ಯಾಸಂಸ್ಥೆ ಕೀರ್ತಿಶೇಷ ಮಾತೃಶ್ರೀ ಶಾರದಮ್ಮ ಅವರ ಸ್ಮಾರಕ ಶಾಲಾ ಕಟ್ಟಡ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆಚಾರಕ್ಕೆ ಅರಸನಾಗಿ ನೀತಿಗೆ ಪ್ರಭುವಾಗಿ ಜ್ಯೋತಿಯಾಗು ಜಗ ಕೆಲ ಎಂಬಂಥ ಮಕ್ಕಳು ಈಗಿನ ಸಮಾಜಕ್ಕೆ ಬೇಕು. ಇಂಥ ಮಕ್ಕಳನ್ನು ರೂಪಿಸುವುದು ತಾಯಿಂದ ಸಾಧ್ಯ ಎಂದರು. ತಂದೆ ತಾಯಿಯಿಂದ ಸಂಸ್ಕಾರ ಕಲಿತು ಬೆಳೆದಿರುವ ಡಾ.ವಿವೇಚನ್ ತಮ್ಮ ತಂದೆ ಪ್ರೊಫೆಸರ್ ಜಿ.ಕೆ.ಬಸವರಾಜ ಸ್ಥಾಪಿಸಿದ ಶ್ರೀರಂಗ ವಿದ್ಯಾಸಂಸ್ಥೆ ವಿಸ್ತರಿಸಿ ತಾಯಿಯ ಸ್ವರ್ಣ ಪ್ರೌಢಶಾಲೆ ಆರಂಭಿಸುತ್ತಿರುವುದು ನಾಡಿನ ಸೌಭಾಗ್ಯ ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಜ್ಞಾನಕ್ಕೆ ತ್ಯಾಗಕ್ಕೆ ಹೆಸರಾದ ನಮ್ಮ ಭೂಮಿ ತಂದೆ-ತಾಯಿಯ ಆದರ್ಶ ಪುತ್ರನಾಗಿ ಜೀವನವನ್ನು ಸಮಾಜಸೇವೆಗೆ ಮುಡುಪಾಗಿಟ್ಟಿರುವ ಡಾ. ವಿವೇಚನೆ ಅವರ ಆದರ್ಶ ಎಂದರು. ಕೆರಗೋಡಿ ರಂಗಾಪುರ…
ಸಿರಾ: ರಸ್ತೆಯಲ್ಲಿ ಗುಂಡಿ ತೆಗೆದು ನಗರಸಭೆ ಅಧಿಕಾರಿಗಳು ಕೆಲವೊಂದಿಷ್ಟು ಕಾಟಾಚಾರದ ಕಾಮಗಾರಿ ನಡೆಸಿ ಹಾಗೆ ಬಿಟ್ಟಿದ್ದು, ಇದರಿಂದಾಗಿ ರಸ್ತೆ ಸಂಚಾರ ಸುರಕ್ಷತೆ ಇಲ್ಲದಂತಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಸಿರಾದ ಅಮರಾಪುರ ರಸ್ತೆಯಲ್ಲಿ ನೀರು ಸರಬರಾಜು ಮಾಡುವ ಪೈಪ್ ಲೈನ್ ಕಾಮಗಾರಿಗೆ ರಸ್ತೆ ಬದಿಯನ್ನು ಅಗೆದು ಬೃಹತ್ ಗುಂಡಿ ಮಾಡಲಾಗಿದೆ. ಕಾಮಗಾರಿ ನಡೆದು ವಾರಗಳು ಕಳೆದರೂ, ಅತ್ತ ಕೆಲಸ ಪೂರ್ಣಗೊಳ್ಳುವುದೂ ಕಾಣುತ್ತಿಲ್ಲ ಇತ್ತ ರಸ್ತೆಬದಿಯಲ್ಲಿ ಕನಿಷ್ಠ ಬ್ಯಾರಿಕೇಡ್ ಆದದರೂ ಬಳಸುವುದು ಕಾಣುತ್ತಿಲ್ಲ ಎಂದು ಅಧಿಕಾರಿಗಳ ಮತ್ತು ಗುತ್ತಿಗೆ ದಾರರ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿರಾ ನಗರದಿಂದ ಆಂಧ್ರಪ್ರದೇಶ ಗಡಿ ಮತ್ತು ತಾಲ್ಲೂಕಿನ ವಿವಿಧ ಊರುಗಳಿಗೆ ಹಾದು ಹೋಗುವ ಮತ್ತು ಸದ್ಯ ಪ್ರತಿಷ್ಠಿತ ರಸ್ತೆ ಎಂದೇ ಕರೆಯಲಾಗುತ್ತಿರುವ ರಸ್ತೆಯಲ್ಲಿ ಇಂತಹದ್ದೊಂದು ಸ್ಥಿತಿ ಕಂಡು ಬಂದಿದೆ. ಈ ರಸ್ತೆಯಲ್ಲಿ ಮಾಜಿ ಸಚಿವರು, ನಗರ ಸಭೆ ಅಧಿಕಾರಿಗಳು ದಿನನಿತ್ಯ ಪ್ರಯಾಣಿಸುತ್ತಿದ್ದರೂ, ಯಾರಿಗೂ ಇದೊಂದು ಅಪಾಯ ಅನ್ನಿಸದಿರುವುದು ಸೋಜಿಗವಾಗಿದೆ. ತಾಂತ್ರಿಕ ಕಾರಣಕ್ಕೆ ಗುಂಡಿಯನ್ನು ಮುಚ್ಚುವ ಕೆಲಸ…
ತುರುವೇಕೆರೆ: ಗ್ರಾಮಾಂತರ ಯೋಜನಾ ಕಛೇರಿ, ಚುಂಚನಗಿರಿ ವಲಯದ ಮಾಯಸಂದ್ರ ಕಾರ್ಯಕ್ಷೇತ್ರದ “ಸಿ” ಒಕ್ಕೂಟದ ಸಭೆಯನ್ನು ಮಂಗಳವಾರ ಮಾಯಸಂದ್ರದ ಡಾ.ಅಂಬೇಡ್ಕರ್ ಭವನದಲ್ಲಿ ,ಹಮ್ಮಿಕೊಳ್ಳಲಾಗಿತ್ತು. ಸಭೆಯನ್ನು ಒಕ್ಕೂಟದ ಅಧ್ಯಕ್ಷರಾದ ರತ್ನಮ್ಮ ಉದ್ಘಾಟನೆ ನೆರೆವೇರಿಸಿದರು. ಯೋಜನಾಧಿಕಾರಿಗಳಾದ ಅನಿತಾ ಶೆಟ್ಟಿ ಈ ಸಂಸ್ಥೆಯ ಯೋಜನೆಯಿಂದ ಸಿಗುವ ಸೇವೆಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ,ನೀಡಿದರು. ಜಿಲ್ಲಾ ಸಿ.ಎಸ್.ಸಿ.ಸಂಯೋಜಕರಾದ , ಶ್ರೀಮುರುಳಿ, ಸಿ.ಎಸ್.ಸಿ.ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಚುಂಚನಗಿರಿ ವಲಯದ ಮೇಲ್ವಿಚಾರಕರಾದ ಮಧು ಹೆಚ್.ಆರ್., ಸೇವಾ ಪ್ರತಿನಿದಿಗಳಾದ ಗಿರೀಶ್, ಜ್ಯೋತಿ, ಸ್ವ ಸಹಾಯಸಂಘಗಳ, ಪ್ರತಿನಿಧಿಗಳು ಉಪಸ್ಥಿತರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಚಿತ್ರದುರ್ಗ: ಜಿಲ್ಲೆಯ ಬಸವಕೇಂದ್ರ ಮುರುಘಾಮಠದಿಂದ ಕೊಡ ಮಾಡುವಂತ ಪ್ರತಿಷ್ಠಿತ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಇಂದು ಪ್ರದಾನ ಮಾಡಲಾಗುತ್ತದೆ. ಬಸವ ಜಯಂತಿಯ ದಿನವಾದ ಇಂದು, ಚಿತ್ರದುರ್ಗದ ಅನುಭವ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಡಾ.ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ, ಕೃಷಿ ಸಚಿವ ಬಿ.ಸಿ ಪಾಟೀಲ್, ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುರುಘಾ ಶ್ರೀಗಳು ಮರಣೋತ್ತರವಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು, ರಾಜ್ ಕುಟುಂಬ ಪ್ರಶಸ್ತಿಯನ್ನು ಸ್ವೀಕರಿಸಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತುಮಕೂರು: ಅಂಬೇಡ್ಕರ್ ಅವರ ಕಾಲದಲ್ಲಿ ಅನುಭವಿಸಿದ ಶೋಷಣೆಗಳು ಇಂದಿಗೂ ಮುಂದು ವರೆದಿವೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಂದಿಗೂ ಶೋಷಣೆ ಅನುಭವಿಸುತ್ತಿದ್ದೇವೆ.ಇದು ಅಂತ್ಯ ಕಾಣಬೇಕಾದರೆ ನಾವೆಲ್ಲರೂ ರಾಜಕೀಯ ಅಧಿಕಾರ ಪಡೆದಾಗ ಮಾತ್ರ ಸಾಧ್ಯ.ಸಿದ್ದಾಂತಗಳನ್ನು ನಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು. ನಗರದ ಎಂಪ್ರೆಸ್ ಶಾಲೆಯ ಸಭಾಂಗಣದಲ್ಲಿ ವಿವಿಧ ಪ್ರಗತಿಪರ,ದಲಿತ ಪರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಬುದ್ದ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದಾಂತಗಳನ್ನು ಸ್ವಾರ್ಥಕ್ಕೆ ಬಳಸದೇ ಸಮಾಜದ ಒಳಿತಿಗೆ ಬಳಕೆ ಮಾಡಿಕೊಳ್ಳಬೇಕಿದೆ. ದಲಿತರಲ್ಲಿ ಜಾಗೃತಿ ಮೂಡದ ಹೊರತು ಶೋಷಣೆಯಿಂದ ಹೊರ ಬರಲು ಸಾಧ್ಯವಿಲ್ಲ.ನಮ್ಮ ಹಕ್ಕು,ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿ ಬದುಕನ್ನು ಕಂಡುಕೊಳ್ಳಲು ನಾವೆಲ್ಲರೂ ಬದ್ದರಾಗಬೇಕು ಎಂದರು. ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ,ಇದೊಂದು ಆರೋಗ್ಯ ಪೂರ್ಣ ಬೆಳವಣಿಗೆ,ಬುದ್ದ, ಬಸವ, ಅಂಬೇಡ್ಕರ್ ಜಯಂತಿಗೆ ಎಲ್ಲಾ ಸಮಾಜದ ಯುವಜನತೆ ಪಾಲ್ಗೊಂಡಿರುವುದು ಸಂತೋಷ ತಂದಿದೆ.ಈ ರೀತಿಯ ಬೆಳವಣಿಗೆ ರಾಜ್ಯದ ಎಲ್ಲೆಡೆ ಆಗಬೇಕಿದೆ.ಎಲ್ಲಾ ಕಾಲದಲ್ಲಿ ಸಮಾಜದ ಒಳಿತಿಗಾಗಿ ದುಡಿದ…