Author: admin

ಚೆನ್ನೈ : ತಮಿಳು, ತೆಲುಗು ಸಿನಿಮಾರಂಗದ ಸ್ಟಾರ್ ನಿರ್ದೇಶಕ ಪಿ.ಚಂದ್ರಶೇಖರ್ ರೆಡ್ಡಿ ಅವರು ಸೋಮವಾರ ನಿಧನರಾಗಿದ್ದಾರೆ.  ಹಿರಿಯ ಸ್ಟಾರ್ ನಟರಾದ NTR , ನಾಗೇಶ್ವರ್ ರಾವ್ ರಂತಹವರಿಗೆ ಸಿನಿಮಾ ನಿರ್ದೇಶಿಸಿದ್ದ  ಚಂದ್ರಶೇಖರ್ ರೆಡ್ಡಿ ಅವರ  ನಿಧನದಿಂದ ಸಿನಿಮಾರಂಗಕ್ಕೆ ಆಘಾತವಾಗಿದೆ. ಚಂದ್ರಶೇಖರ್ ರೆಡ್ಡಿ ಅವರು ಹಲವು ದಿನಗಳಿಂದಲೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. 86 ವರ್ಷ ವಯಸ್ಸಾಗಿದ್ದ ಚಂದ್ರಶೇಖರ್ ರೆಡ್ಡಿ ಚೆನ್ನೈನಲ್ಲಿ ವಾಸವಾಗಿದ್ದರು.  ಅಲ್ಲಿಯೇ ತಮ್ಮ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. 1959ರಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದ ಚಂದ್ರಶೇಖರ್ ರೆಡ್ಡಿ ಅವರು ತೆಲುಗು , ತಮಿಳಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಿಗೆ, ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಿದ್ರು. ಚಂದ್ರಶೇಖರ್ ನಿರ್ದೇಶನದ ಮೊದಲ ಸಿನಿಮಾ ‘ಅನುರಾಧ’. 1971ರಲ್ಲಿ ತೆರೆಕಂಡಿತ್ತು. ಭಲೇ ಅಲ್ಲುಡು ,  ಮಾನವಡು ದಾನವುಡು , ರಗಿಲೇ ಗುಂಡೆಲು, ವಿಚಿತ್ರ ದಾಂಪತ್ಯಂ ಹೀಗೆ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳನ್ನ ಚಂದ್ರಶೇಖರ್ ರೆಡ್ಡಿ ನಿರ್ದೇಶಿಸಿದ್ದಾರೆ.  2014ರಲ್ಲಿ ಬಂದ ಜಗನ್ನಾಯಕುಡು  ಚಂದ್ರಶೇಖರ್ ರೆಡ್ಡಿ ಅವರ ನಿರ್ದೇಶನದ ಕಡೆಯ ಸಿನಿಮಾ.…

Read More

ತುಮಕೂರು: ಈ ಮಣ್ಣಲ್ಲಿ ಹುಟ್ಟಿದ ಪ್ರತಿಯೊಬ್ಬ ಕ್ರೀಡಾ ಪಟುವಿನ ಮಹದಾಸೆ ಏನೆಂದರೆ ಒಂದಲ್ಲ ಒಂದು ದಿನ ದೇಶದ ಪರವಾಗಿ ಆಡಬೇಕು ಎಂಬುದು. ಇಂತಹ ಆಸೆಗಳು ಬಹಳಷ್ಟು ಮಂದಿಗೆ ಈಡೇರುವುದಿಲ್ಲ.ಅದಕ್ಕೆ ತಕ್ಕಂತೆ ಪರಿಶ್ರಮ , ತಪಸ್ಸು ಮತ್ತು ಕೆಲವೊಂದು ಸಲ ಅದೃಷ್ಟವೂ ಬೇಕು. ಆದರೆ ಇಂತಹ ಮಹದಾಸೆಯನ್ನು ಈಡೇರಿಸಿಕೊಂಡು ಭಾರತ ದೇಶವನ್ನು ಪ್ರತಿನಿಧಿಸಲು ಹೊರಟಿದೆ. ತುಮಕೂರು ಜಿಲ್ಲೆಯ ಹ್ಯಾಂಡ್ ಬಾಲ್ ವಿದ್ಯಾರ್ಥಿಗಳ ತಂಡ. ನೇಪಾಳದ ಕಠ್ಮಂಡುವಿನಲ್ಲಿ ” The Association For Traditional Youth Games And Sports ” ವತಿಯಿಂದ ನಡೆಯುತ್ತಿರುವ 5 ನೇವರ್ಷದ ಅಂತರರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿ ( 2021-2022 )ಯಲ್ಲಿ ಭಾಗವಹಿಸಲು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಟಿ.ಬಿ.ಯ SBG ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಹೊರಟಿದೆ. ಹೊರಡುವ ಮುನ್ನ ಶ್ರೀ ನಿರ್ಮಲಾನಂದ ಮತ್ತು ಶ್ರೀ ಪ್ರಸನ್ನಾನಂದ ಸ್ವಾಮಿಯವರ ಆಶೀರ್ವಾದ ಪಡೆದ ತಂಡ , ಇಂದು ಸಂಜೆ ಹೊರಡಲಿದೆ. ಈ ಬಗ್ಗೆ ಮಾತನಾಡಿದ ವಿದ್ಯಾಲಯದ ದೈಹಿಕ ಶಿಕ್ಷಕರಾದ…

Read More

ಮಧುಗಿರಿ:  ತಾಲೂಕಿನಲ್ಲಿ ಕೃಷಿ ಇಲಾಖೆಯ ಬಗ್ಗೆ ಹಲವಾರು  ಆರೋಪಗಳಿದ್ದು, ರೈತರ ಪರ ಕೆಲಸ ನಿರ್ವಹಿಸಬೇಕಾದ ಇಲಾಖೆಯೇ ರೈತರಿಗೆ ತಲೆ ನೋವಾಗಿದೆ. ನಿಮಗೆ ನಿಭಾಯಿಸಲು ಸಾಧ್ಯ ವಾಗದ್ದಿದ್ದರೆ ವರ್ಗಾವಣೆ ಪಡೆದುಕೊಂಡು ಹೋಗಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಅವರ ಬಗ್ಗೆ ಶಾಸಕ ಎಂ.ವಿ.ವೀರಭದ್ರಯ್ಯ ಕೆ.ಡಿ.ಪಿ.ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಎಂ.ವಿ.ವೀರಭದ್ರಯ್ಯ ನವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಶಾಸಕರು ಕೃಷಿ ಇಲಾಖೆಯ ಕಾರ್ಯ ವೈಖರಿ ಬಗ್ಗೆ ತರಾಟೆಗೆತ್ತಿಕೊಂಡರು. ರಾಜಕೀಯ ಮಾಡುವುದನ್ನು ಬಿಟ್ಟು ರೈತರ ಪರ ಕೆಲಸ ನಿರ್ವಹಿಸಿ, ಇಲಾಖೆಯ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ನಿರ್ವಹಿಸಿ ಇಲ್ಲದಿದ್ದರೆ ವರ್ಗಾವಣೆ ಪಡೆದು ಹೊರಟು ಹೋಗಿ ಬೇರೆಯವರು ಬಂದು ನಿಮ್ಮ ಇಲಾಖೆಯ ಕೆಲಸ ನಿರ್ವಹಿಸುತ್ತಾರೆ ಎಂದರು. ತಾಲೂಕಿನ ಪ್ರತಿ ಗ್ರಾಮಗಳ ಪೆಟ್ಟಿಗೆ ಅಂಗಡಿಗಳಲ್ಲೂ ಕೂಡ ಮದ್ಯ ದೊರೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಅಬಕಾರಿ ಇಲಾಖೆ ಏನು ಕ್ರಮ ತೆಗೆದುಕೊಂಡಿದೆ ಎಂದು ಅಬಕಾರಿ ನಿರೀಕ್ಷಕ…

Read More

ಸರಗೂರು:  ಇಂದು ತಾಲ್ಲೂಕಿನ ಜೆ.ಎಸ್.ಎಸ್. ಪ್ರೌಢಶಾಲೆಯಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತಾಲೂಕು ತಹಶೀಲ್ದಾರ್ ಚಲುವರಾಜು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ,  ಸರಗೂರು ತಾಲೂಕಿನ ವ್ಯಾಪ್ತಿಯಲ್ಲಿರುವ 15 ರಿಂದ 18 ವರ್ಷದ ಸುಮಾರು 2,450 ಮಕ್ಕಳಿಗೆ, 7 ರಿಂದ 10 ದಿನಗಳೊಳಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದೇವೆ ಎಂದರು. ಜನವರಿ 3 ರಿಂದ ರಾಜ್ಯಾದ್ಯಂತ 15 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಹಾಕಲಾಗುವುದು.  ತಾಲೂಕಿನಲ್ಲಿ ಇಂದು 15 ರಿಂದ 18 ವರ್ಷದ ಹತ್ತನೇ ತರಗತಿ, ಪ್ರಥಮ ಪಿ.ಯು.ಸಿ. ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು. ತಾಲೂಕಿನ ಸಾಗರೆ, ಬಡಗಲಪುರ, ಮನುಗನಹಳ್ಳಿ ಹಾಗೂ ಶಾಂತಿಪುರ ಗ್ರಾಮಗಳಲ್ಲಿ ಲಸಿಕಾ ಹಾಕಲಾಗುತ್ತಿದೆ.  ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ ಆದುದರಿಂದ ಎಲ್ಲಾ ಮಕ್ಕಳು ಲಸಿಕೆಯನ್ನೂ ತಪ್ಪದೇ…

Read More

ಮತ್ತೆ ಮತ್ತೆ ಲಾಕ್ ಡೌನ್ ಸಾಧ್ಯತೆ ಬಗ್ಗೆ ಹೆದರಿಸುತ್ತಿರುವ ಸರ್ಕಾರ ಮತ್ತು ಮಾಧ್ಯಮಗಳೇ ಇಲ್ಲಿದೆ ನೋಡಿ ಲಾಕ್ ಡೌನ್ ಪರಿಣಾಮ…! ಲಾಕ್ ಡೌನ್ ನುಂಗಿದ ಬದುಕು ರಾತ್ರಿ ಸುಮಾರು 11 ಗಂಟೆ… ನಮ್ಮ ರಸ್ತೆ ಬದಿ ” ಊಟದ ಮನೆ ” ತಳ್ಳುಗಾಡಿಯ ಆಹಾರವೆಲ್ಲ ಮುಗಿದು ಅಮ್ಮ ತಟ್ಟೆ ಲೋಟ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅಪ್ಪ ಗ್ಯಾಸ್ ಸ್ಟವ್ ಆರಿಸಿ, ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕುರ್ಚಿಗಳನ್ನು ಎತ್ತಿ ಗಾಡಿಯ ಮೇಲಿಡುತ್ತಿದ್ದರೆ. ಎಂದಿನಂತೆ ಅಂದಿನ ಸಂಪಾದನೆಯ ಗಲ್ಲಾ ಪೆಟ್ಟಿಗೆಯ ನೋಟು – ನಾಣ್ಯಗಳನ್ನು ಒಂದು ತಟ್ಟೆಯಲ್ಲಿ ಹಾಕಿ ನಾನು ಎಣಿಸುತ್ತಾ ಲೆಕ್ಕದ ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಈಗ ಮೊದಲಿನಂತಿಲ್ಲ. ಕ್ಯಾಷ್ ಸ್ವಲ್ಪ ಕಡಿಮೆ. ಮೊಬೈಲ್ ಗೂಗಲ್ ಅಕೌಂಟಿಗೂ ಒಂದಷ್ಟು ಹಣ ಬರುತ್ತದೆ. ಅದನ್ನು ಮನೆಗೆ ಹೋಗಿ ಲೆಕ್ಕ ಹಾಕುತ್ತೇನೆ. ನಾನು ಪಿಯುಸಿ ಸೇರಿದ ಮೇಲೆ ಕಳೆದ ಎರಡು ವರ್ಷದಿಂದ ನಮ್ಮ ತಳ್ಳುಗಾಡಿಯ ಲೆಕ್ಕವನ್ನು ಇಷ್ಟ ಪಟ್ಟು ನೋಡುತ್ತಿದ್ದೇನೆ.‌ ಅಮ್ಮನಿಗೆ ಲೆಕ್ಕ ಬರುವುದಿಲ್ಲ. ಅಪ್ಪನಿಗೆ ಸ್ವಲ್ಪ ಮಟ್ಟಿಗೆ…

Read More

ತುಮಕೂರು:  ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ವತಿಯಿಂದ ಸಾವಿತ್ರಿ ಬಾಯಿಪುಲೆ 191 ನೇ ಜಯಂತೋತ್ಸವವನ್ನು ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ಇದೇ ವೇಳೆ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ರಾಜ್ಯ ಅಧ್ಯಕ್ಷರಾದ ನಗುತಾರಂಗನಾಥ್, ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರಸಮಿತಿ ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷರು ಶ್ರೀನಿವಾಸ್.ಎನ್., ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ತುಮಕೂರು ಜಿಲ್ಲಾ ಅಧ್ಯಕ್ಷ ಎನ್ .ಕೆ. ನಿಧಿಕುಮಾರ್, ಡಾ.ಅಂಬೇಡ್ಕರ್ ಪ್ರಚಾರಸಮಿತಿ ಯುವ ಘಟಕದ ಜಿಲ್ಲಾ ಅಧ್ಯಕ್ಷ ಗೋವಿಂದರಾಜ ಕೆ., ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ರಾಜೇಶ್  ಹೆಚ್.ಬಿ., ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಯದರ್ಶಿ ಶಿವರಾಜ್ ಕುಚಂಗಿ, ಕರ್ನಾಟಕದಲ್ಲಿ ಸಂಘರ್ಷ ಸಮಿತಿ ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷರು ಮಧು ಟಿ.ಎನ್., ನರಸಿಂಹರಾಜ ಜೆ.ಸಿ,  ಕವಿತಾ, ದಿವ್ಯ, ಅಶ್ವಿನಿ, ಮಮತಾ, ಹೇಮಾ, ಮನು ಟಿ., ಸಿದ್ದಲಿಂಗಯ್ಯ ಕೆ.ಎನ್, ರಜನಿಕಾಂತ್, ನರಸಿಂಹರಾಜ ಎ.ಡಿ, ನರಸಿಂಹಮೂರ್ತಿ,…

Read More

ಹಿರಿಯೂರು:  ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ  ಕುವೆಂಪುರವರು ಬರೆಯದ ಸಾಹಿತ್ಯವಿಲ್ಲ,  ಸಮಾಜದ ಎಲ್ಲಾ ವಿಷಯಗಳ ಕುರಿತಂತೆ ತಮ್ಮದೇ ಆದ ಅದ್ಭುತ ಶೈಲಿ ಹಾಗೂ ವೈಚಾರಿಕ ಹಿನ್ನೆಲೆಯಲ್ಲಿ ಕಥೆ-ಕಾವ್ಯ-ಕಾದಂಬರಿಗಳನ್ನು ರಚಿಸುವ ಮೂಲಕ ಕುವೆಂಪುರವರು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಎಂಬುದಾಗಿ ವಾಣಿ ಕಾಲೇಜಿನ ಪ್ರಾಂಶುಪಾಲರಾದ ಡಿ.ಧರಣೇಂದ್ರಯ್ಯ ಹೇಳಿದರು. ಹಿರಿಯೂರು ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ಕುವೆಂಪುರವರ 116 ನೇ ಜನ್ಮ ದಿನಾಚರಣೆಯಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರು ಮಾತನಾಡಿದರು. ಇಂದಿನ ಯುವಜನತೆ ಜಡತ್ವದಿಂದ ಹೊರಬಂದು ಕ್ರಿಯಾಶೀಲತೆಯಿಂದ ಕೂಡಿದವರಾಗಿ ಕುವೆಂಪುರವರ ವೈಚಾರಿಕತೆ ವಿಚಾರಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಮಾಡಬೇಕಲ್ಲದೆ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಮನಸ್ಸಿನ ಅಂಧಕಾರವನ್ನು ಅಳಿಸಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಕರೆ ನೀಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಆರ್.ಪುಷ್ಪಲತಾ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಕುವೆಂಪುರವರ ದಿನಾಚರಣೆಯನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲು ಆದೇಶಿಸಿರುವುದು ಶ್ಲಾಘನೀಯ…

Read More

ತುಮಕೂರು: ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯು ಸಾವಿತ್ರಿ ಬಾಯಿ ಪುಲೆ ಮಹಿಳಾ ಸ್ವ ಸಹಾಯ ಸಂಘ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮತ್ತು ದಲಿತ ಸಂಘಟನೆಗಳ ಒಕ್ಕೂಟ ದ ವತಿಯಿಂದ ಹೊಸಹಳ್ಳಿ ಗ್ರಾಮದಲ್ಲಿ  ನಡೆಯಿತು. ಈ ವೇಳೆ ಮಾತನಾಡಿದ ಮುಖಂಡರು ಸಾವಿತ್ರಿ ಬಾಯಿ ಫುಲೆ ಅವರ ಇತಿಹಾಸವನ್ನು ತಿಳಿಸಿದರು.  ಬಳಿಕ ಸಿಹಿ ಹಂಚುವ ಮೂಲಕ ಸರಳವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತಿ ಎಂ.ರಾಮಯ್ಯ ಮತ್ತು  ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ  ಜಿಲ್ಲಾಧ್ಯಕ್ಷರು  ನಟರಾಜು ಜಿ.ಎಲ್. ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರು ರಾಜಣ್ಣ ಯಲದಬಾಗಿಯವರನ್ನು ಗ್ರಾಮದ ಸಾವಿತ್ರಿಬಾಯಿ ಫುಲೆ ಸ್ವಸಹಾಯ ಸಂಘದವರು ಸನ್ಮಾನ ಮಾಡಲಾಯಿತು. ಈ ವೇಳೆ  ಮಹಿಳಾ ಅಧ್ಯಕ್ಷೆ ಮಂಜುಳಾ ಹಾಗೂ ಸಂಘದ ಪದಾಧಿಕಾರಿಗಳಾದ  ಮಂಜುಳ ಎನ್,  ರೂಪಾ, ಶ್ವೇತಾ,  ಅನು,  ರೂಪ,  ಅಂಜನಮ್ಮ, ಅಂಜಿನಮ್ಮ,  ಗೌರಮ್ಮ, ಅನಂತಕುಮಾರಿ,  ನಂದಕುಮಾರಿ,  ಮಂಜಮ್ಮ,  ಮಾಲಾಶ್ರೀ,  ಜಯಲಕ್ಷ್ಮೀ,  ಶಕುಂತಲಾ, ಸಿದ್ದಗಂಗಮ್ಮ, ಶಿವಮ್ಮ ಭಾಗವಹಿಸಿದ್ದರು. ಎಲ್ಲಾ ಮಹಿಳೆಯರು ಸಮವಸ್ತ್ರ ಧರಿಸಿ…

Read More

ತುಮಕೂರು: ಭಾರತದಲ್ಲಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರು ಶಾಂತಿ ಮತ್ತು ಸಹಬಾಳ್ವೆಯಿಂದ ಎಲ್ಲ ಸಮುದಾಯದ ಜನರೊಂದಿಗೆ ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲವು ಮತೀಯ ದುಷ್ಕರ್ಮಿಗಳು ಚರ್ಚ್ ಗಳು, ಪಾದ್ರಿಗಳು ಹಾಗೂ ಕ್ರೈಸ್ತ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತಿದ್ದು, ದ್ವೇಷದ ಭಾಷಣದ ಮೂಲಕ  ಏಕತೆಗೆ ಧಕ್ಕೆ ತರುತ್ತಿದ್ದು, ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ. ಹರಿದ್ವಾರದಲ್ಲಿ ನಡೆದಿರುವ ಧರ್ಮ ಸಂಸತ್ ಸಭೆಯಲ್ಲಿ ಮತೀಯ ಭಾವನೆಯುಳ್ಳ ನಾಯಕರು ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಕಡಿತೀವಿ, ಬಡಿತೀವಿ ಎಂದು ಹೇಳಿಕೆ ನೀಡಿದರೂ ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ಮಾತನಾಡದೇ ಇರುವುದು ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದೆ. ತೇಜಸ್ವಿ ಸೂರ್ಯ ತನ್ನ ಮಾತುಗಳನ್ನು ವಾಪಸ್ ಪಡೆದಿದ್ದರೂ, ಈ ರೀತಿಯ ಮಾತುಗಳು ಸಮಾಜದ ಸೌಹಾರ್ದತೆಗೆ ಧಕ್ಕೆ ತರುತ್ತಿದೆ.  ಪಾಂಡವಪುರದಲ್ಲಿ  ಶಾಲೆಗೆ ನುಗ್ಗಿ ಕ್ರಿಸ್ಮಸ್ ಗೆ ಹಬ್ಬ ಆಚರಿಸದಂತೆ ತಡೆಯಲಾಗಿದೆ. ಗೋಕಾಕ್ ನಲ್ಲಿ ಕೆಲವು ವ್ಯಕ್ತಿಗಳು ಚರ್ಚ್ ಗೆ…

Read More

ತುಮಕೂರು:  ನಗರದ ಮಹಾತ್ಮ ಗಾಂಧಿ ಸ್ಟೇಡಿಯಂ ಎದುರಿನ ಒಳಾಂಗಣ ಕ್ರೀಡಾಂಗಣದಲ್ಲಿ  ಮುಂಜಾನೆ ಗೆಳೆಯರ ಬಳಗದ ತುಮಕೂರು ನಗರದ ಅಂತರಾಷ್ಟ್ರೀಯ ಕ್ರೀಡಾಪಟು ಆನಂದ್ ಅವರ 74ನೇ ಹುಟ್ಟು ಆಚರಣೆಯನ್ನು ಆಚರಿಸಲಾಯಿತು. ಇಂದು ಬೆಳಿಗ್ಗೆ ಪ್ರಾತಃಕಾಲದ ವಾಕಿಂಗ್ ಸಮಯದಲ್ಲಿ 74ನೇ ವಸಂತಕ್ಕೆ ಕಾಲಿಟ್ಟ  ಆನಂದ್ ಅವರಿಗೆ ಶುಭಾಶಯ ಕೋರಿ ಸನ್ಮಾನಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಮುಂಜಾನೆ ಗೆಳೆಯರ ಬಳಗದ ಸದಸ್ಯ ಧನ್ಯಕುಮಾರ್ ಮಾತನಾಡಿ, ಹೋಬಳಿ ತಾಲ್ಲೂಕು ರಾಜ್ಯ ದೇಶಗಳ ಮಟ್ಟದಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿ 74 ಇಳಿವಯಸ್ಸಿನಲ್ಲೂ ನವಯುವಕನಂತೆ ಸಾಧನೆಗೆ ಸಿದ್ದವಿರುವ ಆನಂದ್ ಅವರ ಕಾರ್ಯ ವೈಖರಿ ಶ್ಲಾಘನೀಯ ಎಂದರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿರುವ ಆನಂದ್ ಅವರು ಅನೇಕ ಕ್ರೀಡಾಸಕ್ತರುನ್ನು ಬೆಳೆಸಿ ಪ್ರೋತ್ಸಾಹಿಸಿದ್ದಾರೆ ಹಲವು ಕ್ರೀಡಾಸಕ್ತರಿಗೆ ಕ್ರೀಡಾ‌ ಉಪಕರಣ ಹಾಗೂ ಶೂ, ಬಟ್ಟೆ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ತೆರಳಲು ಉಚಿತ ಪ್ರವಾಸ ಖರ್ಚು ಭರಿಸುತ್ತಿದ್ದರು. ಇಂತಹ ಅಮೋಘ ಸಾಧನೆ ಮಾಡಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಿಗೆ ಗೌರವಾರ್ಥವಾಗಿ…

Read More