Author: admin

ವಿಜಯಪುರ ಜಿಲ್ಲಾಯ ಸಿಂದಗಿ ವಿಧಾನಸಭೆ ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ನಿವೃತ್ತ ಯೋಧ ಶಿವಾನಂದ ಪಾಟೀಲ್ ಅವರು ತಮ್ಮ ನೂರಾರು ಬೆಂಬಲಿಗರ ಜತೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶಿವಾನಂದ ಪಾಟೀಲ್ ಅವರಿಗೆ ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಅವರ ಜತೆಯಲ್ಲಿ ಆ ಕ್ಷೇತ್ರದ ನೂರಾರು ಕಾರ್ಯಕರ್ತರು ಕೂಡ ಪಕ್ಷಕ್ಕೆ ಸೇರ್ಪಡೆಯಾದರು.ನಂತರ ಮಾತನಾಡಿದ ಕುಮಾರಸ್ವಾಮಿ, ಸಿಂದಗಿ ಕ್ಷೇತ್ರ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ನಡುವೆ ಕರುಳಬಳ್ಳಿ ಸಂಬಂಧ ಇದೆ.  ದೇವೇಗೌಡರ ಕಾಲದಿಂದ ಸಿಂದಗಿ ಕ್ಷೇತ್ರವನ್ನು ಅತ್ಯುತ್ತಮವಾಗಿ ಪ್ರಗತಿ ಮಾಡಲಾಗಿದೆ. ಗುಳೆ ಹೋಗುತ್ತಿದ್ದ ಅಲ್ಲಿನ ಜನರು ಪಕ್ಕದ ರಾಜ್ಯಗಳಲ್ಲಿ ಕೂಲಿಗಳು ಆಗುವುದನ್ನು ತಪ್ಪಿಸಲು ಶಾಶ್ವತವಾಗಿ ನೀರಾವರಿ ಪರಿಹಾರ ಒದಗಿಸಿದ್ದವರು ಗೌಡರು ಎಂದರು.ಮಾಜಿ ಸಚಿವರಾದ ದಿವಂಗತ ಮನಗೂಳಿ ಮತ್ತು ಗೌಡರ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮಗನಂತೆ ಅವರನ್ನು ಗೌಡರು ಸಲುಹಿದ್ದರು.…

Read More

ತುಮಕೂರು :  ಹಿಜಾಬ್  ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ತುಮಕೂರಿನ ಎಸ್‌ವಿಎಸ್ ಪಬ್ಲಿಕ್ ಸ್ಕೂಲ್ ಮುಂದೆ ಪೋಷಕರು ಜಮಾವಣೆಗೊಂಡು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ತುಮಕೂರು ನಗರದ ಎಸ್‌ ವಿಎಸ್ ಕಾಲೇಜು ಮುಂಭಾಗ ಪೋಷಕರ ಗಲಾಟೆ ಮಾಡಿದರು. ಹಿಜಾಬ್ ಮತ್ತು ಬುರ್ಕಾ ಹಾಕಿದ ಪೋಷಕರನ್ನು ಒಳಗೆ ಬಿಡದೆ ಇದ್ದಿದ್ದಕ್ಕೆ ಪೋಷಕರು ಗಲಾಟೆ ಮಾಡಿದ್ದಾರೆ. ಕಾಲೇಜು ಮುಂದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪಿಎಸ್‌ ಐ ಚಂದ್ರಕಲಾ, ಇನ್ಸ್‌ ಪೆಕ್ಟರ್​ ಮುನಿರಾಜು ಭೇಟಿ ಬಂದೋಬಸ್ತ್ ವ್ಯವಸ್ಥೆ ಮಾಡಿದರು.ಶಾಲೆಯ ಸುತ್ತಮುತ್ತ144 ಸೆಕ್ಷನ್ ಜಾರಿ ಇದೆ. ಇದೇ ರೀತಿ ಮಾಡಿದ್ರೆ ನಾವು ಕೇಸ್ ಹಾಕ್ತಿವಿ ಅಂತಾ ಪೋಷಕರನ್ನು ಪೊಲೀಸರು ಚದುರಿಸಿದರು.  ಶಾಲೆಗೆ ವಿದ್ಯಾರ್ಥಿಗಳನ್ನ ಬಿಡೋಕೆ ಅಂತಾ ಪೋಷಕರು ಬಂದಿದ್ದರು. ಅಲ್ಲದೆ ಈ ವೇಳೆ ಪೋಷಕರು ಬುರ್ಕಾ ಹಾಕಿಕೊಂಡು ಬರಬಾರ್ದು ಅಂತಾ ಶಾಲಾ ಆಡಳಿತ ಮಂಡಳಿ ಗಲಾಟೆ ಮಾಡಿದ್ದಾರೆ. ಮಕ್ಕಳು ಶಾಲೆಗೆ ಹಿಜಾಬ್ ಹಾಕಿಕೊಂಡು…

Read More

ತುಮಕೂರು: ಕೊವಿಡ್ ನಿಂದ ಮೃತಪಟ್ಟ 22 ಮಂದಿ  ಅಸ್ತಿಯನ್ನು ಶ್ರೀರಂಗಪಟ್ಟಣಕ್ಕೆ ರವಾನಿಸಲಾಗಿದ್ದು, ಕೊವಿಡ್ 2ನೇ ಅಲೆಯಲ್ಲಿ ಮೃತಪಟ್ಟ ಒಟ್ಟು 22 ಮಂದಿ ವಾರಸುದಾರರಿಲ್ಲದವರ ಚಿತಾ ಭಸ್ಮವನ್ನು ತುಮಕೂರು ಜಿಲ್ಲಾಡಳಿತದ ವತಿಯಿಂದ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಲಾಗಿದೆ. 22 ಮಂದಿಯ ಅಸ್ತಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಸಲು ಸಿದ್ಧತೆ ನಡೆಸಲಾಗಿದೆ. ಕೈಲಾಸ ರಥದ ಮೂಲಕ ಶ್ರೀರಂಗಪಟ್ಟಣಕ್ಕೆ ಅಸ್ತಿಯನ್ನು ರವಾನೆ ಮಾಡಲಾಗಿದೆ. ಇನ್ನೂ ಕೊವಿಡ್ 2ನೇ ಅಲೆಯ ಸಂದರ್ಭ ಕಲ್ಕತ್ತಾ, ಬಿಹಾರ್, ಉತ್ತರ ಪ್ರದೇಶ ಮೂಲದವರು ಮೃತಪಟ್ಟಿದ್ದರು. ಆದರೆ, ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ಅಸ್ತಿ ಸಂಗ್ರಹಕ್ಕೂ ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದಲೇ ಚಿತಾ ಭಸ್ಮ ವಿಸರ್ಜನೆಗೆ ಸಿದ್ಧತೆ ನಡೆಸಲಾಗಿದೆ. ವರದಿ: ಉದಯ್ ಕುಮಾರ್,  ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಕಷ್ಟ ಎದುರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಎಸ್ಕೆಲ ವಿರುದ್ಧ #Boycott_ChennaiSuperKings ಎಂಬ ಅಭಿಯಾನ ಆರಂಭವಾಗಿದೆ. IPL ನಲ್ಲಿ ನಾಲ್ಕು ಬಾರಿ IPL ಟ್ರೋಫಿ ಎತ್ತಿ ಹಿಡಿದಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಚೆನ್ನೈ ಸೂಪರ್ ಕಿಂಗ್ ಮೆಗಾ ಹರಾಜಿನಲ್ಲಿ ಶ್ರೀಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣರನ್ನು ಖರೀದಿಸಿದೆ. ಇದನ್ನು ವಿರೋಧಿಸಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.ಮಹೇಶ್ ತೀಕ್ಷಣ ಸಿಂಹಳೀಯ ಬೌಲರ್ ಎಂಬುದು. 2009ರಲ್ಲಿ ಎಲ್ಟಿಕಟಿಇ ವಿರುದ್ಧದ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಂಹಳೀಯ ಸೈನಿಕರು ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಯುದ್ಧಾಪರಾಧ ಎಸಗಿದ್ದರು. ಇದರಿಂದ ತಮಿಳುನಾಡು ಮತ್ತು ಶ್ರೀಲಂಕಾ ನಡುವೆ ವೈಮನಸ್ಸಿದೆ.ಇದೀಗ ತಮಿಳುನಾಡು ಮೂಲದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಂಹಳೀಯ ಬೌಲರ್ ಸೇರ್ಪಡೆ ಆಗಿರುವುದನ್ನು ಅಭಿಮಾನಿಗಳು ವಿರೋಧಿಸಲು ಆರಂಭಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ವೈರಲ್ ಆಗ ತೊಡಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಕನ್ನಡದ ಹಿರಿಯ ನಟಿ ಭಾರ್ಗವಿ ಅವರು ಸೋಮವಾರ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. 84 ವರ್ಷದ ಭಾರ್ಗವಿ ಅವರು ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.  ಕಲಾವಿದೆ ಭಾರ್ಗವಿ ನಾರಾಯಣ ಅವರು ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ವಂಶವೃಕ್ಷ ಸೇರಿದಂತೆ 22 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇವರು ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಕೂಡಾ ಸಕ್ರಿಯರಾಗಿದ್ದು 600ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿದ್ದಾರೆ. 2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಭಾರ್ಗವಿ ಅವರು, ಭಾರ್ಗವಿಯವರು ರಂಗಭೂಮಿಯಲ್ಲಿ ‘ಮೇಕಪ್ ನಾಣಿ’ ಎಂದೇ ಹೆಸರಾಗಿದ್ದ ಬೆಳವಡಿ ನಂಜುಡಯ್ಯ ನಾರಾಯಣ ಅವರನ್ನು ವಿವಾಹವಾಗಿದ್ದರು. ದಂಪತಿಗೆ ನಟರಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಸೇರಿ ನಾಲ್ಕು ಮಕ್ಕಳಿದ್ದಾರೆ. ಭಾರ್ಗವಿಯವರು ಬಿಎಸ್ಸಿ ಮತ್ತು ಇಂಗ್ಲೀಷ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರು ನಾ ಕಂಡ ನಮ್ಮವರು ಕೃತಿ ರಚಿಸಿದ್ದರು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಪಾವಗಡ: ಯುವಕರು ದುಶ್ಚಟಕ್ಕೆ ಬಲಿಯಾಗದೆ, ನಿಮ್ಮನ್ನು ಹೆತ್ತು ಹೊತ್ತು ಕಷ್ಟ ಪಟ್ಟು ಸಾಕಿದ ತಂದೆ ತಾಯಂದಿರನ್ನು ಸುಖವಾಗಿ ಜೀವಿಸಲು ಪಣ ತೊಡುವಂತೆ ವೈ. ಎನ್. ಹೊಸಕೋಟೆ.  ಪಿ. ಎಸ್. ಐ. ಭಾರತಿ ಯುವ ಸಮುದಾಯವನ್ನು ಜಾಗೃತಿಗೊಳಿಸಿದರು. ಸಂತ ಸೇವಾಲಾಲ್ 283ನೇ ಜಯಂತಿ ಹಾಗೂ ಹೆಲ್ಪ್ ಸೊಸೈಟಿ ವತಿಯಿಂದ  ವೈ. ಎನ್ ಹೊಸಕೋಟೆ ಹೋಬಳಿ ಮೆಗಲಪಾಳ್ಯ ದೊಡ್ಡ ಹಟ್ಟಿ ತಾಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಎಚ್ಚರ ವಹಿಸಿ ಶಾಂತಿ ಸೌಹಾರ್ದತೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ  ಇದೇ ವೇಳೆ ಮನವಿ ಮಾಡಿದರು. ಸಂತ ಸೇವಾಲಾಲ್ ಜಯಂತಿ ಪೂಜಾ ಹಾಗೂ ಶಾಲಾ ಮಕ್ಕಳಿಗೆ ಹೆಲ್ಪ್ ಸೊಸೈಟಿ ವತಿಯಿಂದ ಬ್ಯಾಗ್ ವಿತರಿಸಿ ಮಾತನಾಡಿದ ಸಮಾಜ ಸೇವಕ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಮಕ್ಕಳು ವಿದ್ಯಾವಂತರಾಗಿ ಶಿಕ್ಷಣ ನೀಡಿದ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು. ಗ್ರಾಮದ ಅಭಿವೃದ್ಧಿಯ…

Read More

ತುರುವೇಕರೆ: ಕಳೆದ ಹಲವು ವರ್ಷಗಳಿಂದ ಮಾಯಸಂದ್ರ ಹೋಬಳಿ ಘಟಕದ  ಕನ್ನಡ ಸಾಹಿತ್ಯ ಪರಿಷತ್’ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್.ಆರ್.ಜಯರಾಮ್’ರವರನ್ನು  ಕ.ಸಾ.ಪ ತುರುವೇಕೆರೆ ಘಟಕದ  “ಮಹಾಪೋಷಕ “ರನ್ನಾಗಿ ಆಯ್ಕೆ ಮಾಡಲಾಗಿದೆ. ಮಾಯಸಂದ್ರದ ಕನ್ನಡ ಭವನದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷರಾದ ಡಿ.ಪಿ.ರಾಜುರವರು ” ಎನ್.ಆರ್.ಜಯರಾಮ್’ರವರು ಹೋಬಳಿ ಘಟಕದ ಅಧ್ಯಕ್ಷರಾಗಿ ಮಾಡಿದ ಕನ್ನಡ ತಾಯಿಯ ಸೇವೆಯನ್ನು ಗುರುತಿಸಿ ಅವರ ಸೇವೆ ತಾಲ್ಲೂಕಿಗೂ ದೊರೆಯಲಿ ಎಂಬ ಆಶಯದಿಂದ ಅವರಿಗೆ ಈ ಸ್ಥಾನ ನೀಡಲಾಗಿದೆ ” ಎಂದು ತಿಳಿಸಿದರು. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಪಾವಗಡ: ತಾಲೂಕು ನಿಡಗಲ್ಲು ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ  ಕೊತ್ತೂರು  ಗ್ರಾಮದಲ್ಲಿ ಸಮಾಜಸೇವಕ ನೆರಳೆಕುಂಟೆ ನಾಗೇಂದ್ರಪ್ಪ ಈ ಗ್ರಾಮಗಳ ಅಭಿವೃದ್ಧಿಯ  ಸ್ಥಿತಿಗತಿಗಳ ಬಗ್ಗೆ ವೀಕ್ಷಣೆಯನ್ನು ಮಾಡಿದರು. ಬಳಿಕ ಕೊತ್ತೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ  ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿನ  ಗ್ರಾ. ಪಂ.ಅಧ್ಯಕ್ಷರು,  ಸದಸ್ಯರು, ಅಧಿಕಾರಿಗಳು ಗ್ರಾಮದ ಅಭಿವೃದ್ಧಿಯ ಜೊತೆಗೆ ಸ್ವಚ್ಛತೆಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಕರಿಬಸಪ್ಪ ಮಾತನಾಡಿ, ತಾಲೂಕಿನ ನಾಗೇಂದ್ರಪ್ಪನವರು ಸಮಾಜ ಸೇವೆಯಲ್ಲಿ ತಾಲೂಕಿನ ಎಲ್ಲಾ ಜನರಿಗೂ ಚಿರಪರಿಚಿತರಾಗಿದ್ದಾರೆ. ಇವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರಿಗೆ ಎಲ್ಲ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಗ್ರಾಮದ  ಪಂಚಾಯಿತಿ  ಉಪಾಧ್ಯಕ್ಷರಾದ ಜೈರಾಮ್ ಮಾತನಾಡಿ,  ಸಮಾಜಸೇವಕರಾದ ನೇರಳೆಕುಂಟೆ ನಾಗೇಂದ್ರಪ್ಪನವರ ಗುರುತು ಯಾವುದೇ ಆಗಿರಲಿ. ಕೊತ್ತೂರಿನ ನಮ್ಮ ಅಣ್ಣತಮ್ಮಂದಿರು ಅಕ್ಕ ತಂಗಿಯರು ನಾವು ಎಲ್ಲಾ ಸೇರಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರು. ವರದಿ: ನಂದೀಶ್ ಕೊತ್ತೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಮಧುಗಿರಿ: ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ ಗಣರಾಜ್ಯೋತ್ಸವ ದಿನದಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ  ತೆರವುಗೊಳಿಸಿ ಅವಮಾನಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ,  ವೃತ್ತಿ ಗೌರವಕ್ಕೆ ಧಕ್ಕೆ ತಂದಿರುವುದಲ್ಲದೆ ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ನ್ಯಾಯಾಧೀಶರನ್ನು ಕೂಡಲೇ ವಜಾ ಮಾಡಬೇಕೆಂದು ಎಂದು ಅಖಿಲ ಕರ್ನಾಟಕ ಶ್ರೀ ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ಸಂಘದ ಅಧ್ಯಕ್ಷ ಶ್ರೀಹರಿ ಗಣೇಶ್ ಒತ್ತಾಯಿಸಿದ್ದಾರೆ. ಪಟ್ಟಣದ ಉಪವಿಭಾಗಾಧಿಕಾರಿಗಳು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರು ನ್ಯಾಯಾಧೀಶ ಸ್ಥಾನದಲ್ಲಿ ಕೂರಲು ಅರ್ಹತೆಯುಳ್ಳವರಲ್ಲ . ಇವರ ಹಿನ್ನೆಲೆ ತಿಳಿಯದೇ ಇವರಿಗೆ ನ್ಯಾಯಾಧೀಶರ ಹುದ್ದೆ ನೀಡಿರಬಹುದು. ಈ ಕೂಡಲೇ ಇವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣವನ್ನು ದಾಖಲಿಸಬೇಕು . ತನಿಖೆ ನಡೆಸಿ ನ್ಯಾಯಾಧೀಶ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಈ…

Read More

ಕೊರಟಗೆರೆ:  ತಾಲ್ಲೂಕಿನ ಕೊಳಾಲ ಹೋಬಳಿಯ ಕೋಳಾಲ ವಲಯದ ವಜ್ಜನಕುರಿಕೆ ವ್ಯಾಪ್ತಿಯ ಕಾರ್ಯಕ್ಷೇತ್ರದ ವಿಜಯವೀರ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1.50 ಲಕ್ಷ ರೂ.ಗಳ ಡಿಡಿ ವಿತರಣೆ ಮಾಡಲಾಯಿತು.  ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿ, ಈ ಗ್ರಾಮದಲ್ಲಿ ಅಲ್ಪ ಪ್ರಮಾಣದ ಗ್ರಾಮಸ್ಥರಿದ್ದರು ಸಹ ಈಭಾಗದಲ್ಲಿ ಎರಡು ದೇವಾಲಗಳನ್ನು ಜೀರ್ಣೊದ್ದಾರ ಮಾಡುತ್ತಿರುವುದು ನೋಡಿದರೆ ನಿಜವಾಗಿಯೂ ಉನ್ನತ ಶಿಕ್ಷಣವಿದ್ದಂತೆ, ನಿಮ್ಮ ಈ ಒಳ್ಳೆಯ  ಕಾರ್ಯಕ್ಕೆ ಶ್ರೀ ಕ್ಷೇತ್ರದ ಪೂಜ್ಯರಾದ ಡಾ.ವೀರೇಂದ್ರ ಹೆಗ್ಗೆಡೆ ರವರು ಈ ಒಂದು ಮೊತ್ತದ ಡಿಡಿಯನ್ನು ನೀಡಿರುತ್ತಾರೆ ಎಂದರು.   ನಂತರ ತಾಲ್ಲುಕು ಯೋಜನಾಧಿಕಾರಿ ಬಾಲಕೃಷ್ಣ ಮಾತನಾಡಿ, ಪ್ರತಿ ಗ್ರಾಮಗಳಿಗೂ ಏಳಿಗೆ ಆಗಬೇಕಾದರೆ ಅಂತ ಕಡೆ ಇಂತಹ ವೀರಾಂಜನೇಯ ಸ್ವಾಮಿ ದೇವಸ್ಥಾನಗಳು ಇರಬೇಕು. ಇಂತಹ ದೇವಾಲಯಗಳನ್ನು ನಿರ್ಮಿಸಿ ಅವುಗಳನ್ನು ಜೀರ್ಣೋದ್ಧಾರ ಮಾಡಬೇಕು. ದೇವಾಲಯಗಳು ಇರುವ ಕಡೆ ಸಂಸ್ಕೃತಿ ಬೆಳೆಯುತ್ತದೆ. ಒಳ್ಳೆಯ ಸಂಸ್ಕಾರ ಇರುತ್ತದೆ. ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಹ ಗ್ರಾಮಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ.…

Read More