Author: admin

ಕೊರಟಗೆರೆ: ಗ್ರಾಹಕರಿಂದ ತೆರಿಗೆ ಪಡೆಯದೇ ವಹಿವಾಟು ಮಾಡ್ತಾರಂತೆ.. ಅದಕ್ಕಾಗಿ ಸರಕಾರಕ್ಕೆ ಚಿನ್ನದ ಅಂಗಡಿ ಮಾಲೀಕರು ತೆರಿಗೆ ಕಟ್ಟಲ್ವಂತೆ.. ಜ್ಯುವೆಲರಿ , ಬ್ಯಾಂಕರ್ ಹಾಗೂ ಗೋಲ್ಡ್ ಲೋನ್ ಅಂಗಡಿಯ ಮಾಲೀಕರು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಶೇ.30ರಷ್ಟು ಮಾತ್ರ ಜಿಎಸ್ಟಿ ರಸೀದಿ ಕೋಡ್ತಾರಂತೆ.. ಇನ್ನೂಳಿದ ಶೇ.70ರಷ್ಟು ವಹಿವಾಟಿನ ಲೆಕ್ಕಕ್ಕೆ ನಕಲಿ ರಸೀದಿಯೇ ನೀಡ್ತಾರಂತೆ.. ತೆರಿಗೆಮುಕ್ತ ಆಗಿರುವ ಕೊರಟಗೆರೆ ಕ್ಷೇತ್ರದ ಬಲಿಷ್ಟ ಚಿನ್ನದ ಅಂಗಡಿಗಳ ವಹಿವಾಟಿನ ತನಿಖೆಗೆ ಆದಾಯ ಇಲಾಖೆಯ ಮೌನವೇಕೆ ಎಂಬುದೇ ಯಕ್ಷಪ್ರಶ್ನೆ. ಕೊರಟಗೆರೆ ಪಟ್ಟಣದ ಮತ್ತು ಗ್ರಾಮೀಣ ಪ್ರದೇಶದಲ್ಲಿ 30ಜ್ಯುವೆಲರ್ಸ್ , ಐದಾರು ಬ್ಯಾಂಕರ್ಸ್ ಮತ್ತು ನಕಲಿ ಗೋಲ್ಡ್ ಲೋನ್ ಅಂಗಡಿಗಳಿವೆ. ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಆದಾಯದ ಲೆಕ್ಕ ನೀಡಲು ಶೇ.30ರಷ್ಟು ಜಿಎಸ್ಟಿ ರಸೀದಿ ನೀಡ್ತಾರಂತೆ. ಆದಾಯ ಮರೆಮಾಚಲು ಶೇ.70ರಷ್ಟು ನಕಲಿ ರಸೀದಿ ನೀಡಿ ಸರಕಾರಕ್ಕೆ ತೆರಿಗೆ ಕಟ್ಟದೇ ವಂಚನೆ ಮಾಡ್ತಾರೇ. ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಬಂದಾಕ್ಷಣ ಅಂಗಡಿಗಳಿಗೆ ವಾರಪೂರ್ತಿ ರಜೆ ಘೋಷಣೆ ಮಾಡಿ ಕೇಂದ್ರ ಮತ್ತು ರಾಜ್ಯ…

Read More

ಚಿತ್ರದುರ್ಗ:  ಡಿಜಿಟಲ್ ಕಾಂಗ್ರೆಸ್ ಸದಸ್ಯತ್ವ ನೋಂದಾವಣಿ ಅಭಿಯಾನಕ್ಕೆ ಜಿಲ್ಲೆಯ ಹಿರಿಯೂರು ನಗರದ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಸಚಿವ ಡಿ.ಸುಧಾಕರ್  ಚಾಲನೆ ನೀಡಿದರು. ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್  ಪಕ್ಷದ   ಸಂಘಟನೆಗೆ  ಪ್ರತಿಯೊಬ್ಬರೂ ಹೆಚ್ಚು ಒತ್ತು ನೀಡಬೇಕು, 2023ರ ವಿಧಾನಸಭಾ ಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದು, ಈ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲಲೇ ಬೇಕು. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು. ಕೆಪಿಸಿಸಿ ಅಧ್ಯಕ್ಷ  ಡಿ.ಕೆ .ಶಿವಕುಮಾರ್ ಹಾಗೂ ರಾಜ್ಯ ಪರಿಶಿಷ್ಟ ಜಾತಿ ವಿಭಾಗದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ  ಝಕ್ಕಪ್ಪ ಸೂಚನೆಯ ಮೇರೆಗೆ ಅಧ್ಯಕ್ಷರು, ಉಪಾಧ್ಯಕ್ಷರಿಗೆ ನೇಮಕಾತಿ ಆದೇಶ ಪತ್ರವನ್ನು  ಹಾಗೂ ಯುವ ಕಾಂಗ್ರೆಸ್ ನ ಪಂಚಾಯಿತಿ ಹಾಗೂ ಇದೇ ಸಂದರ್ಭದಲ್ಲಿ ವಾರ್ಡ್ ಗಳ ಯೂಥ್ ಅಧ್ಯಕ್ಷರ ನೇಮಕಾತಿಯ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಖಾದಿರಮೇಶ್, ಡಾ.ಸುಜಾತ, ಕೆ ಪಿ ಸಿ ಸಿ ಕಾರ್ಮಿಕ ವಿಭಾಗದ …

Read More

ಕುಟುಂಬ ಪಿಂಚಣಿ ಲಭ್ಯವಿಲ್ಲದ ಕಾರಣ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪಾಲನೆ ಮತ್ತು ಜೀವನಶೈಲಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮವನ್ನು ಹೊರಡಿಸಿದೆ. ಹೊಸ ನಿಯಮಗಳ ಪ್ರಕಾರ, ಮರಣ ಹೊಂದಿದ ಸರ್ಕಾರಿ ನೌಕರರ, ಮಾನಸಿಕ ವಿಕಲಾಂಗ ಮಕ್ಕಳಿಗೂ ಕುಟುಂಬ ಪಿಂಚಣಿಯ (Family pension) ಪ್ರಯೋಜನ ಸಿಗಲಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಕೂಡ ಕುಟುಂಬ ಪಿಂಚಣಿಗೆ ಅರ್ಹರಾಗಿರುತ್ತಾರೆ (Deceased Government Employee). ಕುಟುಂಬ ಪಿಂಚಣಿ (Family pension) ಲಭ್ಯವಿಲ್ಲದ ಕಾರಣ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪಾಲನೆ ಮತ್ತು ಜೀವನಶೈಲಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಕ್ಕಳು ಇತರರನ್ನು ಅವಲಂಬಿಸಬೇಕಾಗಿರುತ್ತದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jithendra Sing) ಮಾತನಾಡಿ, ಮಾನಸಿಕ ಅಸ್ವಸ್ಥರಾಗಿರುವ ಮಕ್ಕಳಿಗೆ ಕುಟುಂಬ ಪಿಂಚಣಿಯ ಲಾಭವನ್ನು ಬ್ಯಾಂಕ್‌ಗಳು (Bank) ನೀಡುತ್ತಿಲ್ಲ ಎಂಬುದು ಪಿಂಚಣಿ ಮತ್ತು…

Read More

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಎಲ್ಲರ ಗಮನದಲ್ಲಿದೆ. ಕೋವಿಡ್‍ನಿಂದಾಗಿ ಸರಿಯಾಗಿ ಶಾಲಾಕಾಲೇಜುಗಳು ನಡೆದಿಲ್ಲ. ಶೇ.80ರಷ್ಟು ಪಠ್ಯಗಳು ಮುಗಿದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರದವರೆಗೆ ಕಾಲೇಜಿಗೆ ರಜೆ ನೀಡಲಾಗಿದೆ. ಇಂದು ಮುಖ್ಯಮಂತ್ರಿಯವರು ಸಭೆ ನಡೆಸಿ ಕಾಲೇಜುಗಳನ್ನು ಮರು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ತುಂಬ ವಿಳಂಬ ಮಾಡುವುದಿಲ್ಲ. ಇಂದಿನಿಂದ ಪ್ರೌಢಶಾಲೆಗಳು ಆರಂಭವಾಗಿದ್ದು, ಶಾಲೆಗಳ ಬಳಿ ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲಾ ಆಡಳಿತ ಮಂಡಳಿಗಳು ತೆಗೆದುಕೊಳ್ಳುವ ಕ್ರಮಗಳಿಗೆ ಪೊಲೀಸರು ಬೆಂಬಲವಾಗಿ ಇರುತ್ತಾರೆ. ಮಕ್ಕಳ ಪೋಷಕರು ಭಯಪಡುವುದು ಬೇಡ, ನಿನ್ನೆ ಉಡುಪಿಯಲ್ಲಿ ಶಾಂತಿ ಸಭೆ ನಡೆಸಿರುವುದು ಸಂತಸ ತಂದಿದೆ. ಆ ಸಭೆಯಲ್ಲಿ ಕೋರ್ಟ್ ಆದೇಶ ಪಾಲನೆ ಮಾಡುವುದಾಗಿ ಹೇಳಿದ್ದಾರೆ. ಇದೇ ರೀತಿ ಎಲ್ಲ ಕಡೆಯೂ ಕೋರ್ಟ್ ಆದೇಶ ಪಾಲನೆ ಮಾಡಿ ಸಾಮರಸ್ಯದಿಂದ…

Read More

ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಅವರನ್ನು ವಿಧಾನಸೌಧದ ಮೆಟ್ಟಿಲುಗಳ (ಗ್ರಾಂಡ್ ಸ್ಟೆಪ್ಸ್) ಬಳಿ ವಿಧಾನಸಭಾಧ್ಯಕ್ಷ ವಿಶ್ವೇರ್ಶವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕಾನೂನು ಸಚಿವ ಮಾಧುಸ್ವಾಮಿ, ಉಭಯ ಸದನದ ಕಾರ್ಯದರ್ಶಿಗಳು ಸ್ವಾಗತ ಕೋರಿದರು. ನಂತರ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಹಾಕಿದ್ದ ರತ್ನಗಂಬಳಿ ಮೇಲೆ ರಾಜ್ಯಪಾಲರನ್ನು ಬರಮಾಡಿಕೊಂಡರು. ರಾಜ್ಯಪಾಲರು ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಪೊಲೀಸ್ ವಾದ್ಯಗೋಷ್ಠಿಯಿಂದ ಸ್ವಾಗತವನ್ನು ಕೋರಲಾಯಿತು.ಸಭಾಧ್ಯಕ್ಷರು ಮತ್ತು ಸಭಾಪತಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯರು ರಾಜ್ಯಪಾಲರನ್ನು ವಿಧಾನಸಭೆಯ ಸಭಾಂಗಣಕ್ಕೆ ಕರೆತಂದರು. ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ, ಅವರನ್ನು ಅದೇ ರೀತಿ ಬೀಳ್ಕೊಡಲಾಯಿತು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ 54 ಚೀನಿ ಆ್ಯಪ್‍ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಸ್ವೀಟ್ ಸೆಲಿ ಎಚ್ಡಿ, ಬ್ಯೂಟಿ ಕ್ಯಾಮೆರಾ – ಸೆಲಿ ಕ್ಯಾಮೆರಾ, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಎಕ್ಸ್ರಿರ್ವ, ಒನ್ಮಿಯೋಜಿ ಅರೆನಾ, ಆಪ್ಲಾಕ್ ಮತ್ತು ಡ್ಯುಯಲ್ ಸ್ಪೇಸ್ ಲೈಟ್ ಸೇರಿದಮತೆ ಸುಮಾರು 54 ಆ್ಯಪ್‍ಅಪ್ಲಿಕೇಶನ್‍ ಗಳ ನಿಷೇಧಿಸುವ ಸಾಧ್ಯತೆ ಇದೆ. ಕಳೆದ ವರ್ಷ ಜೂನ್‍ನಲ್ಲಿ, ರಾಷ್ಟ್ರದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆಯನ್ನು ಉಲ್ಲೇಖಿಸಿದಕ್ಕಾಗಿ ಭಾರತ ಸರ್ಕಾರ ಟಿಕ್ಟಾಕï, ವೀಚಾಟ್ ಮತ್ತು ಹೆಲೋನಂತಹ ಆ್ಯಪ್ ಸಾಮಾಜಿಕ ಮಾಧ್ಯಮ ಪ್ಲಾಟಾರ್ಮಳು ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿತು. ಮೇ 2020 ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಂತರ ಭಾರತದಲ್ಲಿ ಈವರೆಗೆ ಸುಮಾರು 300 ಅಪ್ಲಿಕೇಶನ್ಗಳನ್ನು ನಿರ್ಬಂಧಿಸಲಾಗಿದೆ. ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎನ್ನಲಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಚಿತ್ರದುರ್ಗ: ಬುಡಕಟ್ಟು ಜನಾಂಗಕ್ಕೆ ಸೇರಿದ ರಾಜ್ಯ ಕಾಡುಗೊಲ್ಲರ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ತುಂಬಾ ಹಿಂದುಳಿದ ಸಮಾಜವಾಗಿದ್ದು, ಈ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ  ಸೇರಿಸಲು ಎಲ್ಲಾ ಅರ್ಹತೆ  ಹೊಂದಿದ್ದು, ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಶಿವಲಿಂಗೇಗೌಡರು, ಮಾಧುಸ್ವಾಮಿ, ರಂಗನಾಥ್ ಕುಣಿಗಲ್, ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಎಲ್ಲಾ ಶಾಸಕರುಗಳನ್ನು ಪಕ್ಷಾತೀತವಾಗಿ ಕಾಡುಗೊಲ್ಲ ಸಮಾಜದಿಂದ ಅಭಿನಂದಿಸುತ್ತೇವೆ ಎಂಬುದಾಗಿ ಕಾಡುಗೊಲ್ಲರ ಮುಖಂಡ ಹಾಗೂ ಜಿ.ಪಂ.ಸದಸ್ಯರಾದ ಸಿ.ಬಿ.ಪಾಪಣ್ಣ ಹೇಳಿದರು. ಹಿರಿಯೂರು ನಗರದ ಎನ್ .ಹೆಚ್. 4ರ ಬಳಿ ಇರುವ ನಗರದ ಸಂಗೀತ ಕಂರ್ಪಟ್ಸ್  ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಡುಗೊಲ್ಲರ ಸಮಾಜದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಡುಗೊಲ್ಲರ ಮುಖಂಡರಾದ  ಗೋಪಿಯಾದವ್ ಮಾತನಾಡಿ, ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮಾಜದ ಹೆಚ್ಚು ಜನರಿದ್ದು, ಈ ಜನರಿಂದ ಮತ ಪಡೆದು ಆಯ್ಕೆಯಾದ ನಮ್ಮ ಜಿಲ್ಲೆಯ ಶಾಸಕರುಗಳಾದ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಚಳ್ಳಕೆರೆ ಶಾಸಕ ರಘುಮೂರ್ತಿ,…

Read More

ಶ್ರೀಹರಿಕೋಟಾ: 2022ರಲ್ಲಿ ತನ್ನ ಪ್ರಥಮ ಉಪಗ್ರಹ ಉಡಾವಣಾ ಕಾರ್ಯ ಕೈಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ನಸುಕಿನ ಜಾವ ಪಿಎಸ್‍ ಎಲ್‍ ವಿ-ಸಿ52 ರಾಕೆಟ್ ಮೂಲಕ ಭೂ ವೀಕ್ಷಣಾ ಉಪಗ್ರಹ ಇಒಎಸ್-04 ಮತ್ತು ಇತರ ಎರಡು ಚಿಕ್ಕ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರ್ಪಡಿಸುವಲ್ಲಿ ಯಶಸ್ವಿಯಾಯಿತು. ಇದು ಒಂದು ಅದ್ಭುತ ಸಾಧನೆಯಾಗಿದೆ ಎಂದು ಇಸ್ರೋ ಬಣ್ಣಿಸಿದೆ. 25 ಗಂಟೆ, 30 ನಿಮಿಷಗಳ ಕ್ಷಣಗಣನೆ ಬಳಿಕ ಇಸ್ರೋ ಪಿಎಸ್‍ಎಲ್‍ವಿ ರಾಕೆಟ್ ಮುಂಜಾನೆ 5.59ರಲ್ಲಿ ಈ ಮೂರು ಉಪಗ್ರಹಗಳನ್ನು ಕಪ್ಪು ಆಗಸದೆಡೆಗೆ ಚಿಮ್ಮಿ ಹೊತ್ತೊಯ್ದು ಉದ್ದೇಶಿತ ಕಕ್ಷೆಗೆ ಸೇರ್ಪಡೆಗೊಳಿಸಿತು. ವರ್ಷದ ಪ್ರಥಮ ಉಪಗ್ರಹ ಉಡಾವಣೆ ಉಸ್ತುವಾರಿ ಹೊತ್ತಿದ್ದ ವಿಜ್ಞಾನಿಗಳು ಹರ್ಷೋದ್ಗಾರ ಮಾಡಿದರು. ಸುಮಾರು 17 ನಿಮಿಷ 34 ಸೆಕೆಂಡ್‍ಗಳ ಪಯಣದ ಬಳಿಕ ಎಒಎಸ್-04, ಐಘೆಖPಐ್ಕಉ-ಸ್ಪಾಟ್ ಮತ್ತು ಐಘೆಖS2Sಈ-ಸ್ಪಾಟ್ ಉಪಗ್ರಹಗಳನ್ನು 529ಕಿ.ಮೀ.ಗಳಷ್ಟು ದೂರದ ಸನ್ ಸಿಂಕ್ರೋನಸ್ ಸೌರಕಕ್ಷೆಗೆ ಸಫಲವಾಗಿ ಸೇರ್ಪಡೆಗೊಳಿಸಲಾಯಿತು.ಬೇರ್ಪಡೆಗೊಂಡ ಬಳಿಕ ಇಒಎಸ್-4ರ ಎರಡು ಸೌರ ಸಾಧನಗಳು ಸ್ವಯಂಚಾಲಿತವಾಗಿ ನಿಯೋಜನೆಗೊಂಡವು. ಬೆಂಗಳೂರಿನ ಟೆಲಿಮೆಟ್ರಿ ಟ್ರ್ಯಾಕಿಂಗ್…

Read More

ಪಾವಗಡ:  ತಾಲ್ಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯತಿಯ ಸಿ.ಕೆ.ಪುರ ಗ್ರಾಮದಲ್ಲಿ ಸಮಾಜ ಸೇವಕರಾದ ನೆರಳೇಕುಂಟೆ  ನಾಗೇಂದ್ರಪ್ಪ ರೋಡ್ ಶೋ ನಡೆಸುವ ಮೂಲಕ ಗ್ರಾಮ ವೀಕ್ಷಣೆ  ಮಾಡಿದರು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದ  ಸ್ವಚ್ಛತೆಯನ್ನು ಕಾಪಾಡಿಕೊಂಡಾಗ ಮಾತ್ರ ಪ್ರತಿಯೊಬ್ಬರು ಆರೋಗ್ಯವಂತರಾಗಲು ಕಾರಣವಾಗಿರುತ್ತದೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ  ಶ್ರೀ ಚೆನ್ನಕೇಶವ ಕ್ರಿಕೆಟ್ ಆಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ಯುವಜನತೆ ದೈಹಿಕವಾಗಿ ಸದೃಢರಾಗಲು  ಕ್ರೀಡೆ ಮುಖ್ಯ ಕಾರಣವೆಂದು ತಿಳಿಸಿದರು ಮುಂದಿನ ದಿನಗಳಲ್ಲಿ ಆಟಗಾರರಾದ ನೀವುಗಳು,  ತಾಲ್ಲೂಕು ಮಟ್ಟ,  ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲಿ ಉತ್ತಮವಾದ  ಕ್ರೀಡೆಗಳನ್ನು ಆಡುವುದರ ಮೂಲಕ ಊರಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಲಕ್ಷಮ್ಮ ಈರಣ್ಣ,  ಮಾದಿಗ ಜನಾಂಗದ ಎಸ್. ಹನುಮಂತರಾಯಪ್ಪ, ಕನ್ನಮೇಡಿ,  ಮೀನಕುಂಟನಹಳ್ಳಿ, ನರಸಿಂಹಪ್ಪ, ಮಾಜಿ ಗ್ರಾ.ಪಂ.ಉಪಾಧ್ಯಕ್ಷರು, ಯುವ ಮುಖಂಡ  ಕಂಡಕ್ಟರ್ ಪ್ರಭು, ಮೊಬೈಲ್ ರವಿ, ಮುಖಂಡರಾದ ನರಸಿಂಹರೆಡ್ಡಿ,   ನಲಿಗಾನಹಳ್ಳಿ ಮಂಜುನಾಥ್  ಆಟಗಾರರು ಮತ್ತು ಊರಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.…

Read More

ತಿಪಟೂರು : ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಗ್ಲೋಬಲ್ ಎಜುಕೇಷನ್ ಟ್ರಸ್ಟ್  ಮೈಸೂರು ಇವರ ಸಹಯೋಗದೊಂದಿಗೆ ದಕ್ಷ ಪಿ.ಯು.ಕಾಲೇಜಿನಲ್ಲಿ ನಾಡಿನ ಸಹಸ್ರರಾರು ಕವಿಗಳು ರಚಿಸಿರುವ “ನಮಸ್ತೆ ಸೈನಿಕ” ಕೃತಿ ಬಿಡುಗಡೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಿತು. ಕರ್ನಾಟಕ ಗಡಿನಾಡು ಪ್ರಾಧಿಕಾರದ ಅದ್ಯಕ್ಷರಾದ ಡಾ.ಸಿ.ಸೋಮಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿ, ಸೈನಿಕರು ಸರ್ವರಿಂದಲೂ ಸೈ ಎನಿಸಿಕೊಳ್ಳುವ ಮಹಾ ತ್ಯಾಗಿಗಳು. ನೆಲ ಜಲ ಭಾಷೆಗಾಗಿ ನಮ್ಮ ಕನ್ನಡಿಗರು ಸದಾ ಸಿದ್ದರಿದ್ದಾರೆ ಎಂದರು. ಸಮಾರಂಭದ ರೂವಾರಿಗಳು , ಸಿನಿಮಾ ನಿರ್ದೇಶಕರಾದ ಗುಣವಂತ ಮಂಜು ಪ್ರಾಸ್ತಾವಿಕ ನುಡಿ ನಮನ ಸಲ್ಲಿಸಿದರು.  ಶ್ರೀ ಕೊಳದ ಮಠದ ಡಾ.ಶಾಂತವೀರ ಮಹಾ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಮಸ್ತೆ ಸೈನಿಕ ಕೃತಿಯ ಸಾಹಿತಿಗಳಲ್ಲಿ ಒಬ್ಬರಾದ ತಿಪಟೂರು ತಾಲೂಕಿನ ರೈತಕವಿ ಪಿ.ಶಂಕರಪ್ಪಬಳ್ಳೇಕಟ್ಟೆ ರವರಿಗೆ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗೆ ರಾಷ್ಟ್ರೀಯ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಡಾ.ಜಯಚಂದ್ರರಾಜು, ದಕ್ಷ ಕಾಲೇಜು…

Read More