Author: admin

ತಿಪಟೂರು:  ತಾಲ್ಲೂಕು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಸಂತ ಶ್ರೀ ಸೇವಾಲಾಲ್  ರವರ 283 ನೇ ಜಯಂತಿ ಆಚರಿಸಲಾಯಿತು. ನಗರದ  ಕೆ.ಆರ್.ಬಡಾವಣೆಯಲ್ಲಿರುವ ಯಶಸ್ವಿನಿ ವೃದ್ಧಾಶ್ರಮಕ್ಕೆ  ಹಣ್ಣು ಮತ್ತು ಬ್ರೆಡ್  ಗಳನ್ನು  ವಿತರಿಸಿ, ಮಧ್ಯಾಹ್ನದ  ಊಟದ ವ್ಯವಸ್ಥೆ ಮಾಡಿ, ಸಿಹಿಯನ್ನು ವಿತರಿಸಲಾಯಿತು. ತಿಪಟೂರು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್  ನಟರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.    ಆಯೋಜಕ ಮತ್ತು ಅಧ್ಯಕ್ಷ ಬಿ.ಟಿ.ಕುಮಾರ್, ಪದಾಧಿಕಾರಿ ಬೆಸ್ಕಾಂ ಚೇತನ್ ,ಆಶ್ರಮದ ಕಲ್ಪನಾ, ವಿದ್ಯಾರ್ಥಿ ಘಟಕದ ರಾಖಿ ರಾಥೋಡ್ ಮತ್ತು ರಾಹುಲ್ ಸೇರಿದಂತೆ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು   ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಸಿರಾ: ಧ್ಯಾನ ಹಾಗೂ ಯೋಗಾಸನದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಿರಾ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪಾಂಡುರಂಗಪ್ಪ ಹೇಳಿದರು ಜಿಲ್ಲೆಯ ಸಿರಾ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಯೋಗ ಮತ್ತು ಯೋಗಾಸನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಗತ್ತೇ ಒಂದು ಕುಟುಂಬ ಎನ್ನುವ ತತ್ತ್ವದಡಿ ಸೇವೆ ಮಾಡುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ. ಮನಸ್ಸು ಏರುಪೇರು ಆದಾಗ ಶಾರೀರಿಕವಾಗಿ ನಾವು ತೊಂದರೆಗೀಡಾಗುತ್ತೇವೆ. ಆರೋಗ್ಯವಂತರಾಗಿರಬೇಕಾದರೆ ಧ್ಯಾನ ಬಹಳ ಅವಶ್ಯಕವಿದೆ. ಮನಸ್ಸಿನ ಆರೋಗ್ಯ ಅಷ್ಟೇ ಮುಖ್ಯವಾಗಿದೆ. ಮನಸ್ಸು ಆರೋಗ್ಯವಾಗಿರಬೇಕಾದರೆ ಅಧ್ಯಾತ್ಮ ಜ್ಞಾನ ಒಳ್ಳೆಯ ಚಿಂತನೆಗಳು ಮುಖ್ಯವಾಗಿವೆ. ನಾವು ಏನು ನೋಡುತ್ತಿದ್ದೇವೋ ಇದೇನು ಶಾಶ್ವತವಲ್ಲ, ಧ್ಯಾನ ಒಂದು ಅದ್ಭುತವಾದ ಶಕ್ತಿ ಅದರಲ್ಲಿ ನಾವು ತಲ್ಲೀನರಾದಾಗ ಮನಸ್ಸಿನ ಗೊಂದಲ ದೂರವಾಗುತ್ತವೆ ಎಂದರು. ಬ್ರಹ್ಮಕುಮಾರಿ ಆಧ್ಯಾತ್ಮಿಕ ಪ್ರವಚನಕ ರಾಜಯೋಗಿ ಡಾ.ಮಹೇಂದ್ರಪ್ಪ ಪಿ.ಹೆಚ್. ಮಾತನಾಡಿ, ಯೋಗಾಸನ ಶರೀರದ ಆರೋಗ್ಯವನ್ನು ಸದೃಢ ಮಾಡುತ್ತದೆ. ಧ್ಯಾನ ಮನಸ್ಸಿನ ಆರೋಗ್ಯವನ್ನು ಸದೃಢ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತನಾಗಲು…

Read More

ತುಮಕೂರು: ದಲಿತ ಸಮುದಾಯಗಳಾದ ಎಡ-ಬಲ ಸಮುದಾಯಗಳು ಒಂದಾಗದಿದ್ದರೆ , ಮುಂದಿನ ದಿನಗಳು ಕ್ಲಿಷ್ಟಕರ ದಿನಗಳಾಗಿ ಸಮುದಾಯಗಳನ್ನು ಕಾಡಲಿದೆ ಎಂದು ಆದಿಜಾಂಬವ ಬೃಹನಮಠದ ಸ್ವಾಮೀಜಿ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮಿ ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಎಡ-ಬಲ ಸಮುದಾಯಗಳ ಸಮನ್ವಯ ಸಮಿತಿಯ ವತಿಯಿಂದ ನಡೆದ ಎಡ-ಬಲ ಸಮುದಾಯಗಳ ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದಾಗಬೇಕು ಆಗ ಅವಕಾಶಗಳು ತಮ್ಮನ್ನ ಹುಡುಕಿ ಬರುವುದು ಈ ಮೂಲಕ ಅಸ್ಪೃಶ್ಯ ಸಮಾಜಗಳು ಇತರ ಸಮುದಾಯಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಎಡಬಲ ಸಮುದಾಯಗಳ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಪಿ.ಎನ್ ರಾಮಯ್ಯ, ಶೋಷಿತ ಸಮುದಾಯಗಳಿಗೆ ಸಂವಿಧಾನವೇ ಆಧಾರ ಇಂದಿನ ದಿನದಲ್ಲಿ ಸಂವಿಧಾನ ಹಾಗೂ ಸಂವಿಧಾನದ ಬರೆದ ಮಹಾಪುರುಷರಿಗೆ ಅವಮಾನ ಮಾಡುತ್ತಿದ್ದಾರೆ ಹಾಗಾಗಿ ಇಂತಹ ಬೆಳವಣಿಗೆಗಳನ್ನು ತಡೆಯದೆ ಇದ್ದಲ್ಲಿ ಮುಂದಿನ ದಿನಗಳು ದಲಿತ ಸಮುದಾಯಗಳಿಗೆ ಮಾರಕವಾಗಲಿದೆ ಹಾಗಾಗಿ ಸಮುದಾಯಗಳನ್ನು ಒಟ್ಟುಗೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಎಡ-ಬಲ ಸಮನ್ವಯ ಸಮಿತಿ ಮುಂದಾಗಲಿದೆ. ಪ್ರಥಮ ಬಾರಿಗೆ…

Read More

ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ದೇಶದಲ್ಲಿ ಹೆಚ್ಚಿನ ಜನರು ಪ್ರಯೋಜನ ಪಡೆದಿದ್ದಾರೆ. ಆದರೆ, ಈ ಯೋಜನೆಯ ಎಲ್ಲಾ ಷರತ್ತುಗಳನ್ನು ಪೂರೈಸುವ ಅನೇಕ ಜನರಿದ್ದಾರೆ, ಆದರೆ ಇದುವರೆಗೆ ಅವರ ಖಾತೆಗೆ ಸಬ್ಸಿಡಿ ಹಣ ಬಂದಿಲ್ಲ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ಖಾತೆಯಲ್ಲಿ ಸಬ್ಸಿಡಿ ಸಿಗದಿರಲು ಕಾರಣಗಳೇನು? ಇಲ್ಲಿದೆ ನೋಡಿ.. ಪ್ರಧಾನ ಮಂತ್ರಿ ಆವಾಸ್ ಯೋಜನೆ(PM Awas Yojana)ಯಡಿ ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಮನೆ ನಿರ್ಮಿಸಲು ಅನುದಾನ ನೀಡಲಾಗುತ್ತದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕವಾಗಿ ದುರ್ಬಲ ವರ್ಗದ ಜನರ ‘ಅಪ್ನಾ ಘರ್’ ಕನಸನ್ನು ನನಸಾಗಿಸಲು ಈ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯ ಫಲಾನುಭವಿಗಳಿಗೆ ಮೊದಲ ಬಾರಿಗೆ ಮನೆ ಖರೀದಿಸಲು ಸರ್ಕಾರದಿಂದ 2.67 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಆದರೆ ಈ ಯೋಜನೆಯ ಎಲ್ಲಾ ಷರತ್ತುಗಳನ್ನು ಪೂರೈಸುವ ಅನೇಕ ಜನರಿದ್ದಾರೆ, ಆದರೆ ಅವರ ಸಬ್ಸಿಡಿ ಇನ್ನೂ ಅಂಟಿಕೊಂಡಿದೆ.ಈ ಕಾರಣಗಳಿಂದ ಸಬ್ಸಿಡಿ ಸ್ಥಗಿತಗೊಳ್ಳುತ್ತದೆ ಅನೇಕ ಬಾರಿ ಅರ್ಜಿದಾರರು ಯೋಜನೆಗೆ ಅರ್ಜಿ(PM Awas…

Read More

ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಜೊತೆ ವೀಲಿಂಗ್‌ ಚೋರರ ಕಾಟ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ರೀತಿ ಏರ್ ಪೋರ್ಟ್ ರಸ್ತೆಯಲ್ಲಿ ಡೆಡ್ಲಿ ವಿಲಿಂಗ್ ಮಾಡುತ್ತಿದ್ದ ಪುಂಡನನ್ನು ಅಂದರ್‌ ಮಾಡಿದ್ದಾರೆ ಸಿಲಿಕಾನ್‌ ಸಿಟಿ ಪೊಲೀಸರು. ಹೋಂಡಾ ಡಿಯೋ ಬೈಕ್ ನಲ್ಲಿ ಡೆಡ್ಲಿ ವೀಲಿಂಗ್(Bike Wheeling) ಮಾಡುತ್ತಿದ್ದ ಪುಂಡನ ವಿಡಿಯೋ ನೋಡಿ ಅಲರ್ಟ್‌ ಆದ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದರು. ಆರ್.ಟಿ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಕಡೆಗೂ ಪುಂಡ ಲಾಕ್‌ ಆಗಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.ಪುಂಡನಿಗೆ ರೀಲ್ಸ್‌ ಚಟ! ಬಂಧಿತ ಆರೋಪಿಯನ್ನು 20 ವರ್ಷದ ವಿಜಯ್‌ ಎಂದು ಗುರುತಿಸಲಾಗಿದೆ. ಈತನಿಗೆ ರೀಲ್ಸ್‌(Reels) ಮಾಡುವ ಹ್ಯಾಬಿಟ್‌ ಇತ್ತು. ಅಲ್ಲೋ, ಇಲ್ಲೋ ನಿಂತು ಎಲ್ಲರಂತೆ ಈತನೂ ರೀಲ್ಸ್‌ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈತ ಮಾಡಿದ್ದೇ ಬೇರೆ. ಬೈಕ್‌ ಜೊತೆ ಸರ್ಕಸ್‌ ಮಾಡುತ್ತಾ, ಬ್ಯುಸಿ ರೋಡ್‌ನಲ್ಲೇ ವೀಲಿಂಗ್‌ ಮಾಡಿ ಎಲ್ಲರಿಗೂ ಟಾರ್ಚರ್ ಕೊಡುತ್ತಿದ್ದ. ಹೀಗೆ ರೀಲ್ಸ್‌ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ(Social Media) ಶೇರ್‌…

Read More

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನೇತ್ರದಾನದ ಬಗ್ಗೆ ಕನ್ನಡಿಗರಲ್ಲಿ ಮೂಡಿಸಿರುವ ಜಾಗೃತಿ ಎಂದೆಂದಿಗೂ ಜೀವಂತ. ಹೀಗೆ ಕನ್ನಡದ ಪ್ರತಿಷ್ಠಿತ ಝೀ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು’ ಷೋ ಖ್ಯಾತಿಯ ದಂಪತಿ ತಮ್ಮ ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಶಿಬಿರ ಆಯೋಜಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ‘ನೇತ್ರದಾನ ಮಹಾದಾನ'(Eye Donation) ಎಂಬ ಮಾತಿದೆ. ಈ ಮಾತಿಗೆ ಮತ್ತಷ್ಟು ಮಹತ್ವ ತಂದುಕೊಟ್ಟವರೇ ವರನಟ ಡಾ.ರಾಜ್‌ಕುಮಾರ್‌(Dr.Rajkumar). ವರನಟ ರಾಜ್‌ಕುಮಾರ್‌ ಅವರು ನೇತ್ರದಾನ ಮಾಡುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಮಾದರಿಯಾಗಿದ್ದರು. ಹಾಗೇ ದಿವಂಗತ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಕೂಡ ತಮ್ಮ ನೇತ್ರದಾನ ಮಾಡಿ ಕನ್ನಡಿಗರಲ್ಲಿ ನೇತ್ರದಾನದ ಬಗ್ಗೆ ಅರಿವು ಮೂಡಿಸಿದ್ದಾರೆ. ಹೀಗೆ ಮಹಾನ್‌ ನಟರು ಮೂಡಿಸಿರುವ ನೇತ್ರದಾನದ ಅರಿವು ಇಂದು ದೊಡ್ಡ ಜ್ಯೋತಿಯಾಗಿ ಕನ್ನಡಿಗರ ಹೃದಯದಲ್ಲಿ ಬೆಳಗುತ್ತಿದೆ. ಜನಮೆಚ್ಚಿದ ಶಿಬಿರ: ಅಂದಹಾಗೆ ‘ಕಾಮಿಡಿ ಕಿಲಾಡಿಗಳು’ ಷೋ ಖ್ಯಾತಿಯ ಗೋವಿಂದೇಗೌಡರ  ಪತ್ನಿ ದಿವ್ಯಶ್ರೀ(Govinde Gowda and Divyashree)ಯವರ ಸೀಮಂತ ಕಾರ್ಯಕ್ರಮ ಸರಳವಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಶಿಬಿರವೊಂದು…

Read More

ಮನೆಯಲ್ಲಿ ಕುಳಿತು ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವ ಮತ್ತು ನವೀಕರಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸಲಾಗಿದೆ. ಈ ಸೇವೆಗಳನ್ನು ಪಡೆಯಲು ಬಯಸುವ ಅರ್ಜಿದಾರರು ಇನ್ನು ಮುಂದೆ ಆನ್‌ಲೈನ್‌ನಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾದ ಕಾರಣ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ. ಚಾಲನಾ ಪರವಾನಗಿಯನ್ನು ನವೀಕರಿಸಲು(Driving license Renew) ಅಥವಾ ನಕಲಿಸಲು ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಯಾವುದೇ ಅನಾನುಕೂಲತೆಯನ್ನು ಎದುರಿಸಬಾರದು ಎಂದು ಅಧಿಕಾರಿಗಳು ಈ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದಾರೆ. ಇನ್ನು ಮುಂದೆ, ಈ ಪ್ರಕ್ರಿಯೆಗಾಗಿ ಅರ್ಜಿದಾರರು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.ಗಮನಾರ್ಹವಾಗಿ, ಅರ್ಜಿದಾರರು ತಮ್ಮ ಚಾಲನಾ ಪರವಾನಗಿಯನ್ನು(DLA) ಪಡೆಯಲು RTO ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. DL ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿದಾರರು ಅಧಿಕೃತ ವೆಬ್‌ಸೈಟ್ ಅಂದರೆ https://parivahan.gov.in/parivahan/ ಗೆ ಭೇಟಿ ನೀಡಬಹುದು ಮತ್ತು ತಮ್ಮ ಡ್ರೈವಿಂಗ್ ಲೈಸೆನ್ಸ್‌ಗಳ ನಕಲು, ನವೀಕರಣ ಮತ್ತು ಮಾರ್ಪಾಡುಗಾಗಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೋಡ್(Online) ಅನ್ನು ಪರಿಚಯಿಸುವ ಮೊದಲು, ಅರ್ಜಿದಾರರು ಸ್ಮಾರ್ಟ್‌ಚಿಪ್ ಕಂಪನಿಯ ಮೂಲಕ ಡ್ರೈವಿಂಗ್ ಲೈಸೆನ್ಸ್ ಅನ್ನು ನವೀಕರಿಸಬೇಕಾಗಿತ್ತು ಅಥವಾ ನಕಲು ಮಾಡಬೇಕಾಗಿತ್ತು.…

Read More

ಈ ವರ್ಷದ ನಾಗರಿಕ ಸೇವಾ ಪರೀಕ್ಷೆಯ ಮೂಲಕ ಐಆರ್‌ಎಂಎಸ್ ಗ್ರೂಪ್ ‘ಎ’ಗೆ 150 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. IRMS ನಲ್ಲಿ ಖಾಲಿ ಇರುವ 150 ಹುದ್ದೆಗಳಲ್ಲಿ ಆರು ಹುದ್ದೆಗಳನ್ನು ಬೆಂಚ್‌ಮಾರ್ಕ್ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ (PWBD) ಕಾಯ್ದಿರಿಸಲಾಗಿದೆ.ಆದ್ದರಿಂದ, ಸಿವಿಲ್ ಸರ್ವೀಸ್ ಪರೀಕ್ಷೆಯ ತಾತ್ಕಾಲಿಕ ಖಾಲಿ ಹುದ್ದೆಗಳ ಸಂಖ್ಯೆಯು ಈ ಹಿಂದೆ ಸೂಚಿಸಿದಂತೆ 861 ರ ಬದಲಿಗೆ 1,011 ಆಗಿರುತ್ತದೆ.ಕೊನೆಯ ಬಾರಿಗೆ, ಯುಪಿಎಸ್ಸಿ 2016 ರಲ್ಲಿ 1,000 ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಘೋಷಿಸಿತು.ಆ ಸಮಯದಲ್ಲಿ, 1,079 ಉದ್ಯೋಗ ಪೋಸ್ಟ್‌ಗಳನ್ನು ಬಿಡುಗಡೆ ಮಾಡಲಾಗಿತ್ತು.ಅದರ ನಂತರ, 2017 ರಲ್ಲಿ, ಇದು 2017 ರಲ್ಲಿ 980, 2018 ರಲ್ಲಿ 782 ಮತ್ತು 2019 ರಲ್ಲಿ 896, 2020 ರಲ್ಲಿ 796, ಮತ್ತು 2021 ರಲ್ಲಿ 712 ಹುದ್ದೆಗಳನ್ನು ನಾಗರಿಕ ಸೇವೆ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು.ಅಧಿಕೃತ ಅನುಬಂಧದ ಪ್ರಕಾರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಗುರುವಾರ ನಾಗರಿಕ ಸೇವಾ ಪರೀಕ್ಷೆಯ ಮೂಲಕ ನೇಮಕಾತಿಗಾಗಿ ಸೇವೆಗಳ…

Read More

1. ಗೋವಾನಲ್ಲಿದೆ ಫಾರೆನರ್ಸ್ ಓನ್ಲಿ ಬೀಚ್ – ಹೆಚ್ಚಿನ ಸಂಖ್ಯೆಯ ಭಾರತೀಯ ಮತ್ತು ವಿದೇಶಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಾರೆ, ಆದರೆ ಇಲ್ಲಿ ಕೆಲವು ಕಡಲತೀರಗಳಿಗೆ ಭಾರತೀಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಕೆಲವು ಕಡಲತೀರಗಳು ವಿದೇಶಿಯರಿಗೆ ಮಾತ್ರ ಇವೆ. ವಿದೇಶಿ ಪ್ರವಾಸಿಗರಿಗಾಗಿಯೇ ಇಂತಹ ಬೀಚ್ ಮಾಡಲು ಕಾರಣ ಎಂದರೆ ಅವರ ಆಚಾರ-ವಿಚಾರ ಮತ್ತು ಸಾಂಸ್ಕೃತಿಕ ವಾತಾವರಣ ಭಾರತಕ್ಕಿಂತ ಭಿನ್ನವಾಗಿದೆ. ಈ ಕಡಲತೀರಗಳಲ್ಲಿ, ಅವರು ತನ್ನ ಜಾಗದಲ್ಲಿ ವಾಸಿಸುವಾಗ ಆರಾಮವಾಗಿ ಪ್ರಕೃತಿಯನ್ನು ಆನಂದಿಸುತ್ತಾನೆ. ಅವರ ಖಾಸಗಿತನವನ್ನು ಇಲ್ಲಿ ಸಂಪೂರ್ಣವಾಗಿ ನೋಡಿಕೊಳ್ಳಲಾಗುತ್ತದೆ. 2. ನಾರ್ತ್ ಸೆಂಟಿನಲಿ ಐಲ್ಯಾಂಡ್ ನಲ್ಲಿ ಹೊರಗಿನವರಿಗೆ ಅವಕಾಶ ಇಲ್ಲ – ಉತ್ತರ ಸೆಂಟಿನೆಲ್ ಇದು ದಕ್ಷಿಣ ಅಂಡಮಾನ್‌ನ ಬಂಗಾಳ ಕೊಲ್ಲಿಯಲ್ಲಿರುವ ಸಣ್ಣ ದ್ವೀಪವಾಗಿದೆ. ಇಲ್ಲಿ ವಾಸಿಸುವ ಬುಡಕಟ್ಟುಗಳ ರಕ್ಷಣೆಯ ಉದ್ದೇಶದಿಂದ ಭಾರತ ಸರ್ಕಾರವು ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ಈ ದ್ವೀಪದಲ್ಲಿ ವಾಸಿಸುವ ಬುಡಕಟ್ಟುಗಳಿಗೆ ಹೊರ ಪ್ರಪಂಚದ ಸಂಪರ್ಕವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬುಡಕಟ್ಟುಗಳನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ ಯಾವುದೇ ರೀತಿಯ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. 2011…

Read More

ನಿವೇಶನ ಕಬಳಿಸಿರುವ ವಿಚಾರವಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಕುಟುಂಬಸ್ಥರ ವಿರುದ್ಧ ಆರೋಪ‌ ಕೇಳಿಬಂದಿದ್ದು, ಈ ಸಂಬಂಧ‌ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಶಾಹೀತಾ ನಾಜೀನ್ ಎಂಬುವರು ಶಾಸಕ ಜಮೀರ್ ಅಹಮದ್ ಹಾಗೂ ಅವರ ಸಹೋದರ ಜಮೀಲ್ ಅಹಮದ್ ತಮಗೆ ಮಾರಾಟ ಮಾಡಲಾಗಿದ್ದ ನಿವೇಶನಗಳನ್ನು ಕಬಳಿಸಲು ಯತ್ನಿಸಿದ್ದರು.‌ಪ್ರಶ್ನಿಸಿದರೆ ಅವರ ಕಡೆಯವರು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಇದೇ ವೇಳೆ ವಾದ-ಪ್ರತಿವಾದ ಆಲಿಸಿದ 7 ನೇ ಎಸಿಎಂಎ ನ್ಯಾಯಾಲಯ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಪಿಗೆಹಳ್ಳಿ ಪೊಲೀಸರಿಗೆ ನಿರ್ದೇಶನ ನೀಡಿದ ಮೇರೆಗೆ ಈಗ ಅವರು ಶಾಸಕ ಜಮೀರ್ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ‌‌.2015 ರಲ್ಲಿ ಚೊಕ್ಕನಹಳ್ಳಿ ಬಡಾವಣೆಯಲ್ಲಿರುವ ನಿವೇಶನವನ್ನ ಜೆ.ಸಿ.ನಗರ ನಿವಾಸಿ ಶಾಹೀತಾ ನಾಜೀನ್ ಎಂಬುವರು ಜಮೀರ್ ಕುಟುಂಬಸ್ಥರಿಂದ ಖರೀದಿ ಮಾಡಿದ್ದರು. 2018 ರಲ್ಲಿ ಜಮೀರ್ ಕುಟುಂಬಸ್ಥರಿಂದಲೇ ಮತ್ತೊಂದು ಸೈಟ್ ಖರೀದಿಸಿದ್ದರು.ನಿವೇಶನ ಖರೀದಿಸಿ ಕೆಲವರ್ಷಗಳಾದರೂ ಸೈಟ್ ಗಳ ಕಡೆ…

Read More