Author: admin

ಆದಾಯ ತೆರಿಗೆ ಇಲಾಖೆಯು ತೆರಿಗೆಗಳ್ಳತನದ ತನಿಖೆಯ ಭಾಗವಾಗಿ ಉತ್ತರ ಪ್ರದೇಶದ ಸುಗಂಧ ವ್ಯಾಪಾರಿಗಳು ಮತ್ತು ಇತರ ಕೆಲವರ ವಹಿವಾಟಿನ ಆವರಣಗಳ ಮೇಲೆ ಇಂದು ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಾನ್ಪುರ, ಕನೌಜ್, ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಕನೌಜ್ ನಲ್ಲಿ ತನ್ನ ಪಕ್ಷದ ಎಂಎಲ್ ಸಿ ಪುಷ್ಪರಾಜ್ ಅಲಿಯಾಸ್ ಸಂಪಿ ಜೈನ್ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷವು ತನ್ನ ಅಕೃತ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ. ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪತ್ರಿಕಾಗೋಷ್ಠಿ ಕರೆದ ಬೆನ್ನಲ್ಲೇ ಬಿಜೆಪಿ ಸರ್ಕಾರ ಈ ದಾಳಿಗಳನ್ನು ನಡೆಸುತ್ತಿದೆ ಎಂದು ಎಸ್ ಪಿ ಆರೋಪಿಸಿದೆ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳ ಮುನ್ನ ಯಾದವ ಅವರು ಸಮಾಜವಾದಿ ಇತ್ರ ಎಂಬ ಹೆಸರಿನ ಸುಗಂಧ ದ್ರವ್ಯವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು.  ಇದನ್ನು ಜೈನ್ ಅವರು ತಯಾರಿಸಿದ್ದರು…

Read More

ಶುಕ್ರವಾರದಂದು  ದೇಶದಲ್ಲಿ ಓಮಿಕ್ರಾನ್ ರೋಗಿಗಳ ಸಂಖ್ಯೆ 1,000 ಗಡಿ ದಾಟಿದೆ. ಕೇವಲ 29 ದಿನಗಳಲ್ಲಿ, 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು  ರೋಗಿಗಳ ಒಟ್ಟು ಸಂಖ್ಯೆ 1315 ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರದ ಪ್ರಕರಣಗಳು 450 ಕ್ಕೆ ಏರಿಕೆಯಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು. ಗುರುವಾರ ಒಂದೇ ದಿನದಲ್ಲಿ ದಾಖಲೆಯ 198 ರೋಗಿಗಳು ಪತ್ತೆಯಾಗಿದ್ದಾರೆ. Omicron ನಿಂದ ಮೊದಲ ಸಾವು ಮಹಾರಾಷ್ಟ್ರದಲ್ಲಿಯೇ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ನಿಂದ ದೇಶದಲ್ಲಿ ಮೊದಲ ಸಾವು ದಾಖಲಾಗಿದೆ.  52 ವರ್ಷದ ಓಮಿಕ್ರಾನ್ ಸೋಂಕಿತ ವ್ಯಕ್ತಿ ಹೃದಯಾಘಾತದಿಂದ ಡಿಸೆಂಬರ್ 28 ರಂದು ಸಾವನ್ನಪ್ಪಿದ್ದಾನೆ.ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ನೈಜೀರಿಯಾದಿಂದ ಮರಳಿದ ವ್ಯಕ್ತಿ ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್‌ನ ಯಶವಂತ್ ಚವಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಹಾರಾಷ್ಟ್ರ ರಾಜ್ಯ ಸರ್ಕಾರ ಇದನ್ನು ಕೋವಿಡ್ ಅಲ್ಲದ ಕಾರಣಗಳಿಂದ ಸಾವು ಎಂದು ಪರಿಗಣಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಮಾದರಿಗಳ…

Read More

ಅಲೌಕಿಕ ವಿಚಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಹದಿನೇಳು ವರ್ಷದ ಹುಡುಗಿಯೊಬ್ಬಳು 2 ತಿಂಗಳಿನಿಂದ ಕಾಣೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಾಮನಿಸಂ ಎಂಬ ಪುರಾತನ ಧಾರ್ಮಿಕ ಆಚಾರದ ಬಗ್ಗೆ ತಿಳುದುಕೊಳ್ಳುವು ಕುತೂಹಲದಿಂದ ಕಾಣೆಯಾಗಿರಬಹುದು ಎಂದು ಪೊಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಮನಿಸಂ ಎಂಬುದೊಂದು ಧಾರ್ಮಿಕ ಆಚರಣೆಯಾಗಿದ್ದು ಇದನ್ನ ಅಭ್ಯಾಸ ಮಾಡಿದರು ಆತ್ಮಗಳೊಂದಿಗೆ ಸಂಹವಹನ ಮಾಡುತ್ತಾರೆ. ಆತ್ಮಗಳ ಪ್ರಪಂಚದ ಮೂಲಕ ಆಧ್ಯಾತ್ಮಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸುವ ಪ್ರಾಚೀನ ಅಭ್ಯಾಸವಾಗಿದೆ. ಬೆಂಗಳೂರಿನ ಅನುಷ್ಕಾ ಎಂಬ ಯುವತಿ ಅಕ್ಟೋಬರ್ 31 ರಂದು ಎರಡು ಜೊತೆ ಬಟ್ಟೆ ಮತ್ತು 2,500 ರೂ.ನಗದು ಸಮೇತ ತನ್ನ ಮನೆಯಿಂದ ಹೊರಟಿರುವುದಾಗಿ ಪೋಷಕರು ಹೇಳಿದ್ದಾರೆ. ಶಾಮನಿಸಂ ತಂತ್ರದ ಬಗ್ಗೆ ಆನ್ ಲೈನ್ ನಲ್ಲಿ ಆಗಾಗ ಓದುತ್ತಿದ್ದಳು ಎಂದು ಪೋಷಕರು ತಿಳಿಸಿದ್ದಾರೆ. ಅನುಷ್ಕಾ 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಶಾಮನಿಸಂನತ್ತ ಆಕರ್ಷಿತರಾದರು. ಆಕೆಯ ಪೋಷಕರು ಆಧ್ಯಾತ್ಮಿಕ ಜೀವನ ಮತ್ತು ಸೈಕೆಡೆಲಿಕ್ ಶಿಕ್ಷಣ ತಜ್ಞರಾಗಿದ್ದು ಇದರಿಂದ ಮಗಳು ಪ್ರಭಾವಿತರಾಗಿದ್ದಳು. ಶಾಮನಿಸಂ ಅನ್ನು ಅಭ್ಯಾಸ ಮಾಡುವ ಬಯಕೆಯ ಬಗ್ಗೆ…

Read More

ನವದೆಹಲಿ: ಶತ ಕೋಟ್ಯಾಧೀಶ ಮುಖೇಶ್ ಅಂಬಾನಿ ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟಿಷ್ ಬ್ಯಾಟರಿ ತಯಾರಿಕಾ ಸಂಸ್ಥೆ ಫರಾಡಿಯಾನ್ ಲಿಮಿಟೆಡ್‍ ನ್ನು 100 ದಶಲಕ್ಷ ಜಿಬಿಪಿ ಔದ್ಯಮಿಕಮೌಲ್ಯಕ್ಕೆ ಸ್ವಾಧೀನಪಡಿಸಿಕೊಂಡಿದೆ. ತೈಲದಿಂದ-ಚಿಲ್ಲರೆ ವಹಿವಾಟಿನವರೆಗೆ ಕಂಪನಿ ಎನಿಸಿರುವ ಔದ್ಯಮಿಕ ದೈತ್ಯ ಪರಿಶುದ್ಧ ಇಂಧನ ಖಾತೆಗೋಸ್ಕರ ಅತ್ಯಾಧುನಿಕ ತಂತ್ರಜ್ಞಾನ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರೆಸಿದೆ. ದೇಶದ ಅತ್ಯಂತ ಮೌಲಿಕ ಕಂಪನಿಯ ಒಂದು ಘಟಕವಾಗಿರುವ ರಿಯಲನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ 100 ದಶಲಕ್ಷ ಜಿಬಿಪಿ ಮೌಲ್ಯಕ್ಕೆ ಫರಾಡಿಯನ್ ಕಂಪನಿಯ ಶೇ.100ರಷ್ಟು ಷೇರುಗಳನ್ನು ಖರೀದಿಸಿ ಮತ್ತು ವಾಣಿಜ್ಯಕ ಪಾತ್ರತ್ವದ ಪ್ರವರ್ಧನೆಗಾಗಿ ಹೆಚ್ಚುವರಿ 25 ದಶಲಕ್ಷ ಜಿಬಿಪಿಯ ಬೆಳವಣಿಗೆ ಬಂಡವಾಳವನ್ನು ಹೂಡಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬ್ರಿಟನಿನ್ನ ಷೆಫೀಲ್ಡ್ ಮತ್ತು ಆಕ್ಸ್ ಫರ್ಡ್ ಮೂಲದ ಫರಾಡಿಯಾನ್ ಕಂಪೆನಿ ಸೋಡಿಯಂ ಅಯಾನ್, ಬ್ಯಾಟರಿ ತಂತ್ರಜ್ಞಾನದ ಪೇಟೆಂಟ್ ಪಡೆದಿದೆ. ಇದು ಜಗತ್ತಿನ ಮುಂಚೂಣಿ ಬ್ಯಾಟರಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದೆ.ಫರಾಡಿಯಾನ್, ಸರ್ವೋತ್ಕøಷ್ಟ, ಕಾರ್ಯತಂತ್ರಾತ್ಮಕ, ವಿಶಾಲ ವ್ಯಾಪ್ತಿಯ, ವಿಸ್ತೃತ ಸೇಡಿಯಂ-ಅಯಾನ್ ಬ್ಯಾಟರಿಗಳ…

Read More

ಸರಗೂರು :  ಪಟ್ಟಣ ಪಂಚಾಯಿತಿಗೆ ಬರಬೇಕಾದ ಕಂದಾಯಗಳನ್ನು ನಿಗತ ಸಮಯಕ್ಕೆ ಸರಿಯಾಗಿ ವಸೂಲಿ ಮಾಡಿ ಇದರಿಂದ ಬಂದ ಹಣದಿಂದ ಪಟ್ಟಣದ ಅಭಿವೃದ್ಧಿಗಳಿಗೆ ಬಳಸಿಕೊಳ್ಳಬಹುದು ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯ ವ್ಯಕ್ತಪಡಿಸಿದರು. ಸರಗೂರು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಸರಗೂರು ಪಟ್ಟಣದ ಅಭಿವೃದ್ಧಿ ಸಂಬಂಧ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,  ಪಟ್ಟಣ ವ್ಯಾಪ್ತಿಯಲ್ಲಿ ಈ ಬಾರಿ ಸಂಗ್ರಹವಾದ ಕಂದಾಯ, ಏನೆಲ್ಲಾ ಖರ್ಚು ವೆಚ್ಚಗಳಾಗಿವೆ. ತಿಂಗಳಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಖರ್ಚಾಗುವ ಹಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ಸೇರಿದಂತೆ ಸಭೆಯ ಅಂಜೆಡಾಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆ ಮುಖ್ಯಾಧಿಕಾರಿ ಬಿ.ಜಿ.ಸತೀಶ್ ರವರನ್ನು ತರಾಟೆಗೆ ತೆಗೆದುಕೊಂಡರು. ಮೊದಲು ಕಂದಾಯ ವಸೂಲಿಯನ್ನು ಮಾಡಬೇಕು ಇದಕ್ಕಾಗಿ ಒಂದು ಕಂದಾಯ ಅದಾಲತ್ ಕಾರ್ಯಕ್ರಮ ಮಾಡಿ ಇದರಿಂದ ಪಂಚಾಯಿತಿಗೂ ಹೆಚ್ಚಿನ ಆದಾಯ ಬಂದು ಪಟ್ಟಣದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬಹುದು ಎಂದರು. ಸರ್ಕಾರದಿಂದ ಈಗಾಗಲೇ ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುತ್ತಿದ್ದಾರೆರೆ. ಆದ್ದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಎಷ್ಟು…

Read More

ತುಮಕೂರು: ತುಮಕೂರು ನಗರದ ಶಿರಾಗೇಟ್ ಕನಕ ವೃತ್ತದಲ್ಲಿ ಬಳಿ ಇರುವ ಪಾರ್ಕ್ ನಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಇಂದು ಬೆಳಗ್ಗೆ ವ್ಯಕ್ತಿ ನೇಣುಬಿಗಿದುಕೊಂಡಿರುವ ಘಟನೆ ನಡೆದಿದ್ದು ಪಾರ್ಕಿಗೆ ಸಹಜವಾಗಿ ಜನರು ಆಗಮಿಸಿದಾಗ ನೇಣುಬಿಗಿದುಕೊಂಡಿರುವ ಪ್ರಕರಣ ಬಯಲಿಗೆ ಬಂದಿದೆ ಮೃತಪಟ್ಟ ವ್ಯಕ್ತಿ ಮಧ್ಯವಯಸ್ಕನಾಗಿದ್ದು ಮೃತಪಟ್ಟ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. ವರದಿ: ರಾಜೇಶ್ ರಂಗನಾಥ್ ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿಪಟೂರು: ಜನಸ್ಪಂದನ ಟ್ರಸ್ಟ್ ನ ನೂತನ ಕಚೇರಿಯಲ್ಲಿ ಡಾ. ಸಿಬಿ ಶಶಿಧರ್ 2022ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ತಾಲೂಕಿನ ಹೆಸರಾಂತ ಐತಿಹಾಸಿಕ ಸ್ಥಳಗಳು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸಾರುವ ತಿಪಟೂರು ತಾಲೂಕಿನ ಐತಿಹಾಸಿಕ ಸ್ಥಳಗಳ ವಿನೂತನವಾದ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಇನ್ನು ಹಲವಾರು ಪ್ರಮುಖ ಕ್ಷೇತ್ರಗಳಾದ ಯಕ್ಷಗಾನ ಸೋಮನ ಕುಣಿತ ಸಾಂಸ್ಕೃತಿಕ ಕಲೆಗಳನ್ನು  ಸಾರುವ ಹಾಗೂ ಇವುಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುವ ನಿಟ್ಟಿನಲ್ಲಿ ನಮ್ಮ ಜನಸ್ಪಂದನ ಟ್ರಸ್ಟ್ ಸದಸ್ಯರುಗಳು ಇದ್ದೇವೆ ಎಂದರು. ಒಂದು ವಿನೂತನ ಕಾರ್ಯಕ್ರಮದಲ್ಲಿ ಸುಮಾರು ಎರಡು ತಿಂಗಳಿಂದ ಕೆಲಸ ನಿರ್ವಹಿಸಿದ ಶ್ರೀಕಾಂತ್ ಕೆಳ ಹಟ್ಟಿ ಮಮದ್ ಗೌಸ್ ಇವರುಗಳು 12 ತಿಂಗಳ ವರ್ಷದ ಕ್ಯಾಲೆಂಡರ್ ನ್ನು ಸಿದ್ಧಪಡಿಸಿದ್ದು,  ತಿಪಟೂರು ತಾಲೂಕಿನ ಐತಿಹಾಸಿಕ ಒಂದೊಂದು ತಿಂಗಳಿಗೆ ಒಂದೊಂದು ಸ್ಥಳದ ಮಾಹಿತಿಯನ್ನು ನೀಡಿ ಕಾರ್ಯನಿರ್ವಹಿಸಿ 2022ರ ಬಹುರೂಪಿಯಾಗಿ ಕ್ಯಾಲೆಂಡರ್ ಮೂಡಿಬಂದಿದೆ ಎಂದು ಟ್ರಸ್ಟ್ ಅಧ್ಯಕ್ಷರು ತಿಳಿಸಿದರು. ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಕುಂದೂರು ತಿಮ್ಮಯ್ಯ, ಮನೋಹರ್…

Read More

ತುರುವೇಕೆರೆ: ತಾಲ್ಲೂಕಿನ ಇತಿಹಾಸದಲ್ಲಿಯೇ ಚೊಚ್ಚಲ ಬಾರಿಗೆ ತಿಪ್ಪೇಸ್ವಾಮಿ’ಯವರ ಮಾಲೀಕತ್ವದ ಕೇಕ್ ಪಾಯಿಂಟ್ ವತಿಯಿಂದ ಹೊಸವರ್ಷದ ಪ್ರಯುಕ್ತ ” ಕೇಕ್ ಷೋ ” ಅನ್ನು ಏರ್ಪಡಿಸಲಾಗಿದೆ. ಈ ಬಗ್ಗೆ ಮಾತನಾಡಿದ ಆಯೋಜಕರು ಮತ್ತು ಕೇಕ್ ಪಾಯಿಂಟ್ ಮಾಲೀಕರಾದ ತಿಪ್ಪೇಸ್ವಾಮಿ’ಯವರು  ” ಇದು ನಮ್ಮ ಕೇಕ್ ಪಾಯಿಂಟ್ ಬಳಗದ ಬಹುದಿನದ ಕನಸು ಮತ್ತು ಪ್ರತಿ ಹೊಸವರ್ಷದ ಸಂಭ್ರಮಾಚರಣೆಯನ್ನು ಯಾವುದೇ ನಗರಗಳಿಗೆ ಕಮ್ಮಿ ಇಲ್ಲದಂತೆ ನಮ್ಮ ತಾಲ್ಲೂಕಿನಲ್ಲೂ ಆಚರಿಸಬೇಕೆಂಬುದೇ ನಮ್ಮ ಬಯಕೆ ” ಎಂದು ತಿಳಿಸಿದರು. ಇಂದಿನಿಂದ(ಡಿ.30) ಆರಂಭವಾದ ಈ ಪ್ರದರ್ಶನ ಭಾನುವಾರದವರೆಗೂ ಇರಲಿದೆ. ಕೇಕ್ ಪ್ರಿಯರು ಮತ್ತು ಮಕ್ಕಳು ಇಲ್ಲಿಗೆ ಬೇಟಿ ಕೊಟ್ಟು ಉಚಿತವಾಗಿಯೇ ವೀಕ್ಷಿಸಬಹುದಾಗಿದೆ. ಇಲ್ಲಿ ಬಗೆ ಬಗೆಯ ಕೇಕ್’ಗಳಿವೆ. ಅದರಲ್ಲಿ ಬಹು ಆಕರ್ಷಕವಾಗಿ ಕಾಣಿಸುತ್ತಿರುವ ಐಫಿಲ್ ಟವರ್ ಕೇಕ್ ಈ ಪ್ರದರ್ಶನದ ಕೇಂದ್ರ ಬಿಂದುವಾಗಿದೆ. ಇದಲ್ಲದೇ ಬಾರ್ಬಿ ಗರ್ಲ್ ,  ಮಿಕ್ಕಿ ಮೌಸ್ , ಗೀಟರ್ , ಕಲ್ಲಂಗಡಿ ಮತ್ತು ಇನ್ನಿತರ ವೈವಿಧ್ಯಮಯ ಕೇಕ್’ಗಳು ಜನರ ಗಮನ ಸೆಳೆಯುತ್ತಿದೆ. ಇಲ್ಲಿ ಕೇವಲ…

Read More

ಬೆಂಗಳೂರು: ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ನಾಳೆ ಕರೆ ಕೊಟ್ಟಿದ್ದ ‘ಕರ್ನಾಟಕ ಬಂದ್’ ನ್ನ ವಾಟಾಳ್ ನಾಗರಾಜ್ ಅವರು ಹಿಂಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಕನ್ನಡ ಧ್ವಜ ಸುಟ್ಟು ಹಾಕಿರುವುದನ್ನ ಖಂಡಿಸಿ ಡಿಸೆಂಬರ್ 31(ನಾಳೆ) ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಗಳು ಘೋಷಣೆ ಮಾಡಿದ್ದವು. ಆದರೆ, ಕರ್ನಾಟಕ ಬಂದ್ ಗೆ ಹಲವು ಕನ್ನಡ ಪರ ಸಂಘಟನೆಗಳು ಬಂದ್ ಹಿಂಪಡೆದ ಹಿನ್ನೆಲೆಯಲ್ಲಿ  ಇಂದು ಸಂಜೆ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಹಾಗೂ ಉಮೇಶ್ ಬಣಕಾರ್ ಸೇರಿ ಹಲವು ಮುಖಂಡರು ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದರು. ಭೇಟಿ ಬಳಿಕ ನಾಳೆ ಕರ್ನಾಟಕ ಬಂದ್ ಮಾಡುವ ನಿರ್ಧಾರವನ್ನ ಹಿಂಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸಿರಾ: ನಗರಸಭೆ ಚುನಾವಣೆಯಲ್ಲಿ ಸಿರಾ ಶಾಸಕರಾದ ಸಿ.ಎಂ. ರಾಜೇಶ್ ಗೌಡ ರವರ ನೇತೃತ್ವದ ಬಿಜೆಪಿಯ ನಾಲ್ಕು ಜನ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಮೊದಲನೇ ವಾರ್ಡಿನ ರಂಗರಾಜು , 27ನೇ ವಾರ್ಡಿನ ಅಂಬುಜಾಕ್ಷಿ,  28ನೇ ವಾರ್ಡಿನ ಉಮಾ ವಿಜಯರಾಜ್, 30 ನೇ ವಾರ್ಡಿನ ಸ್ವಾತಿ ಮಂಜೇಶ್ ಜಯಭೇರಿ ಬಾರಿಸಿದ್ದಾರೆ ವರದಿ : ಸಿದ್ದರಾಜು ಟಿ.ಎಚ್. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More