ತಿಪಟೂರು : ನಗರದ ವಿನೋದ ಚಿತ್ರಮಂದಿರದ ಪಕ್ಕದಲ್ಲಿನ ವೀರ ಆಂಜನೇಯ ದೇವಾಲಯದ ಮೇಲ್ಚಾವಣಿಯನನ್ನು ಮುರಿದು ತಡ ರಾತ್ರಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ದೇವಾಲಯದ ಅರ್ಚಕ ದರ್ಶನ್ ಹೇಳುವ ಪ್ರಕಾರ, ಭಾನುವಾರ ಭಕ್ತಾಧಿಗಳು ಸೇರಿ ರಾಮನವಮಿ ಆಚರಣೆಯನ್ನು ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿದ್ದು ಪ್ರಸಾದ, ಪಾನಕ-ಫಲಹಾರವನ್ನು ನೀಡಲಾಗಿತ್ತು.
ಇಂದು ಬೆಳಿಗ್ಗೆ ಪೂಜೆಗೆ ಬಂದಾಗ ದೇವಸ್ಥಾನದ ಮೇಲ್ಛಾವಣಿಯನ್ನು ಒಡೆದುಕಳ್ಳರು ಹುಂಡಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಹುಂಡಿ ಬಿಟ್ಟರೆ ಬೇರೆ ಯಾವುದೇ ಬೆಲೆ ಬಾಳುವ ಆಭರಣಗಳು ದೇವಸ್ಥಾನದಲ್ಲಿರಲಿಲ್ಲ. ಹುಂಡಿಯಲ್ಲಿ ಸುಮಾರು 5-6 ಸಾವಿರ ನಗದು ಹಣ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಹುಂಡಿಯೂ ದೇವಾಲಯದ ಪಕ್ಕದಲ್ಲಿ ಬಿದ್ದಿದ್ದು ಕಲ್ಲಿನಿಂದ ಹೊಡೆದು ಹಣ ತೆಗೆದುಕೊಂಡು ಹೋಗಿದ್ದಾರೆ.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5