nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ

    August 18, 2025

    ತಲ್ವಾರ್ ನಿಂದ ಹಲ್ಲೆ ನಡೆಸಿ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ!

    August 18, 2025

    ಭಾರೀ ಮಳೆ ಹಿನ್ನೆಲೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

    August 18, 2025
    Facebook Twitter Instagram
    ಟ್ರೆಂಡಿಂಗ್
    • ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ
    • ತಲ್ವಾರ್ ನಿಂದ ಹಲ್ಲೆ ನಡೆಸಿ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ!
    • ಭಾರೀ ಮಳೆ ಹಿನ್ನೆಲೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ
    • ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟನ್ನೂ ಬದಲಿಸಿ: ಬಿ.ವೈ.ವಿಜಯೇಂದ್ರ ಒತ್ತಾಯ
    • ನಿಡಗಲ್ಲು ಉತ್ಸವ ಸರ್ಕಾರದ ವತಿಯಿಂದ ಆಚರಿಸಲು ವಾಲ್ಮೀಕಿ ಶ್ರೀ ಒತ್ತಾಯ
    • ಅಂಗನವಾಡಿ:  257 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
    • ಸಿನಿಮಾ ಗೆಲ್ಲಿಸಲು ಸ್ಟಾರ್ ನಟರೇ ಬೇಕಿಲ್ಲ: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ
    • ಗವಿಸಿದ್ದಪ್ಪ ನಾಯಕ್ ಕೊಲೆ ಕೇಸ್ ಗೆ ಹೊಸ ತಿರುವು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗಣಿಗಾರಿಕೆ ಪ್ರಾರಂಭಕ್ಕೆ ತೆರೆಮರೆಯ ಕಸರತ್ತು:  ಎತ್ತಿನಹೊಳೆ ಪೈಪ್‍ ಲೈನ್‍ ಗೆ ಅಪಾಯ: ರೈತರ ವಿರೋಧದ ನಡುವೆಯು ದಾರಿ ಗುರುತು
    Uncategorized July 13, 2023

    ಗಣಿಗಾರಿಕೆ ಪ್ರಾರಂಭಕ್ಕೆ ತೆರೆಮರೆಯ ಕಸರತ್ತು:  ಎತ್ತಿನಹೊಳೆ ಪೈಪ್‍ ಲೈನ್‍ ಗೆ ಅಪಾಯ: ರೈತರ ವಿರೋಧದ ನಡುವೆಯು ದಾರಿ ಗುರುತು

    By adminJuly 13, 2023No Comments2 Mins Read
    koratagere news

    ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ

    ಕೊರಟಗೆರೆ:- ಕಲ್ಲುಕ್ವಾರೆ ನಡೆಸಲು 3ವರ್ಷದಿಂದ ಪಟ್ಟುಹಿಡಿದ ಕಾದುಕುಳಿತ ಗಣಿಮಾಲೀಕ.. ಕಲ್ಲು ಗಣಿಗಾರಿಕೆ ನಡೆಸಲು ರಸ್ತೆ ಗುರುತಿಸಲು ಬಂದ ಮಧುಗಿರಿ ಎಸಿ.. ಗಣಿಗಾರಿಕೆ ಪ್ರಾರಂಭ ಮಾಡದಂತೆ ಒತ್ತಾಯ ಮಾಡಿದ ಸ್ಥಳೀಯ ರೈತಾಪಿವರ್ಗ.. ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶ ಮತ್ತು ನಾಮದ ಚಿಲುಮೆ ಪ್ರವಾಸಿ ಕ್ಷೇತ್ರ ಉಳಿವಿಗೆ ಸ್ಥಳೀಯರ ಆಗ್ರಹ.


    Provided by
    Provided by

    ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ತಂಗನಹಳ್ಳಿ ಸರ್ವೇ ನಂ.32ರಲ್ಲಿ 6ಎಕರೇ ಮತ್ತು  ನೀಲಗೊಂಡನಹಳ್ಳಿ ಗ್ರಾಪಂಯ ಮಣ್ಣೂರು ತಿಮ್ಮನಹಳ್ಳಿ ಸರ್ವೆ ನಂ.4ರಲ್ಲಿ 40ಎಕರೇ ಸರಕಾರಿ ಗೋಮಾಳದ ಜಮೀನು ಬೆಂಗಳೂರು-ಬಳ್ಳಾರಿ ಮೂಲದ ಖಾಸಗಿ ವ್ಯಕ್ತಿಗೆ 25ವರ್ಷದ ಅವಧಿಗೆ 3ವರ್ಷದ ಹಿಂದೆಯೇ ಗುತ್ತಿಗೆ ನೀಡಲಾಗಿದೆ.

    ಮಣ್ಣೋರು ತಿಮ್ಮನಹಳ್ಳಿ ಕರಡಿಗುಟ್ಟೆ ಮತ್ತು ತಂಗನಹಳ್ಳಿಯ ವಡ್ಡರಹಳ್ಳಿ ಕಲ್ಲುಗುಟ್ಟೆಯ ಸರಿಸುಮಾರು 50ಎಕರೇ ಗೋಮಾಳದ ಕಬಳಿಸಲು ಹುನ್ನಾರವೇ ನಡೆದಿದೆ. ಸ್ಥಳೀಯ ರೈತಾಪಿವರ್ಗ, ಪರಿಸರ ಪ್ರೇಮಿಗಳು, ಶ್ರೀಮಠದ ಸ್ವಾಮೀಜಿಗಳು ಸೇರಿದಂತೆ ಜನಪ್ರತಿನಿಧಿಗಳು ಎಷ್ಟೇ ಹೋರಾಟ ನಡೆಸಿದ್ರು ತೆರೆಮರೆಯಲ್ಲಿ ಗಣಿಗಾರಿಕೆ ಪ್ರಾರಂಭಿಸಲು ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿ ವರ್ಗವೇ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿರುವುದು ರೈತರಲ್ಲಿ ಇನ್ನಷ್ಟು ಸಂಕಷ್ಟವನ್ನ ತಂದೊಡ್ಡಿದೆ.

    ಕಂದಾಯ ತನಿಖಾಧಿಕಾರಿ ಅಮಾನತ್ತಿಗೆ ಆಗ್ರಹ..

    ಕೋಳಾಲ ಕಂದಾಯ ತನಿಖಾಧಿಕಾರಿ ಅರುಣಕುಮಾರ್ ಗಣಿಗಾರಿಕೆ ಮಾಲೀಕರ ಜೊತೆ ಶಾಮಿಲಾಗಿ ರೈತರ ಸಹಿಯುಳ್ಳ ಪತ್ರದ ನಾಟಕ ಆಡಿದ್ದಾರೆ. ಸ್ಥಳೀಯ ರೈತರಿಗೆ ಕನ್ನಡದಲ್ಲೇ ಸಹಿ ಮಾಡಲು ಬರೋದಿಲ್ಲ. ಪತ್ರದಲ್ಲಿನ 15ಸಹಿಗಳು ಇಂಗ್ಲಿಷ್‍ನಲ್ಲಿವೆ. ಗೋಮಾಳದ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರ ಹೆಸರನ್ನೇ ಮರೆಮಾಚಿದ್ದಾರೆ. ಮಧುಗಿರಿ ಎಸಿ ಕೋಳಾಲ ಕಂದಾಯ ತನಿಖಾಧಿಕಾರಿ ವಿರುದ್ದ ತನಿಖೆ ನಡೆಸಿ ಅಮಾನತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

     ಎತ್ತಿನಹೊಳೆ ಪೈಪ್‍ ಲೈನ್‍ ಗೆ ಅಪಾಯ..

    ತಂಗನಹಳ್ಳಿ ಮತ್ತು ಐ.ಕೆ.ಕಾಲೋನಿ ನಡುವೆಯ ಬೆಟ್ಟದಲ್ಲಿ ಎತ್ತಿನಹೊಳೆ ಪೈಪ್‍ಲೈಲ್ ನಡೆಯುತ್ತಿದೆ. ಪೈಪ್‍ಲೈನ್‍ನ ಎರಡು ಭಾಗದಲ್ಲಿ ಗಣಿಗಾರಿಕೆ ನಡೆಸಲು ದಾರಿ ಗುರುತಿಸಲು ಮಧುಗಿರಿ ಎಸಿಯೇ ಖುದ್ದು ಆಗಮಿಸಿದ್ದಾರೆ. ಗಣಿಗಾರಿಕೆ ಪ್ರಾರಂಭ ಆದ್ರೇ ಎತ್ತಿನಹೊಳೆ ಯೋಜನೆಯ ಪೈಪ್‍ಲೈನ್, ಎಲೆರಾಂಪುರ ಕೆರೆಯ ಓಪನ್ ಕೇನಾಲ್, ಶ್ರೀಮಠದ ಸಮೀಪದ ಪಂಪುಹೌಸು ಸೇರಿದಂತೆ 30ಕ್ಕೂ ಅಧಿಕ ಕೆರೆಕಟ್ಟೆಗಳಿಗೆ ಅಪಾಯವು ಆಗಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಬಗೆಯ ವನ್ಯಜೀವಿ ಸಂಪನ್ಮೂಲವಿದೆ. ಕಲ್ಪತರು ನಾಡಿನ ಪ್ರವಾಸಿಗರ ಸ್ವರ್ಗಭೂಮಿ ನಾಮದ ಚಿಲುಮೆ. ವಡ್ಡರಹಳ್ಳಿ ಕಲ್ಲುಗುಟ್ಟೆ ಅಕ್ಕಪಕ್ಕ ಹತ್ತಾರು ಪುರಾತನ ದೇವಾಲಯ ಮತ್ತು ಕೆರೆಕಟ್ಟೆಗಳಿವೆ. ಬಳ್ಳಾರಿ ಗಣಿ ಮಾಲೀಕನ ಬೆದರಿಕೆಗೆ ರೈತಾಪಿವರ್ಗ ಹೆದರುವ ಪ್ರಶ್ನೆಯೇ ಇಲ್ಲ.

    –ಸರ್ವೇಶ್. ಗ್ರಾಪಂ ಸದಸ್ಯ. ಎಲೆರಾಂಪುರ

     

    2018ರಿಂದ 2023ರಿಂದ ಗಣಿಗಾರಿಕೆ ವಿರುದ್ದ ರೈತರ ಹೋರಾಟ ನಡೆದಿದೆ. ಕಂದಾಯ ಮತ್ತು ಸರ್ವೆ ಇಲಾಖೆ ಗಣಿಗಾರಿಕೆ ಮಾಲೀಕರ ಪರವಾಗಿ ಕೆಲಸ ಮಾಡ್ತಿದ್ದಾರೆ. ಕೋಳಾಲ ಕಂದಾಯ ತನಿಖಾಧಿಕಾರಿ ಅರುಣ್‍ಕುಮಾರ್ ರೈತರನ್ನು ವಂಚಿಸಿ ನಕಲಿ ಸಹಿ ಮಾಡಿಸಿದ್ದಾರೆ. ಗೃಹ ಸಚಿವರು ಕೊರಟಗೆರೆ ಕ್ಷೇತ್ರದ ರೈತರಿಗೆ ನ್ಯಾಯ ನೀಡಬೇಕಿದೆ.

    –ತಿಮ್ಮರಾಜು. ಸ್ಥಳೀಯ ರೈತ. ತಂಗನಹಳ್ಳಿ

     

    ತಂಗನಹಳ್ಳಿ ಸರ್ವೆ ನಂ.32ರಲ್ಲಿ ಗಲ್ಲುಗಣಿಗಾರಿಕೆ ನಡೆಸಲು ದಾರಿಯ ಸ್ಥಳ ಪರಿಶೀಲನೆ ನಡೆದಿದೆ. ಗಣಿಗಾರಿಕೆ ನಡೆಸದಂತೆ ಸ್ಥಳೀಯ ರೈತರು ಮನವಿ ಮಾಡಿದ್ದಾರೆ. ಬೆಟ್ಟದ ಸುತ್ತಲಿನ ಅರಣ್ಯ, ಕೆರೆಕಟ್ಟೆ ಮತ್ತು ಗ್ರಾಮಗಳ ಪರಿಶೀಲನೆ ನಡೆಸಲಾಗಿದೆ. ಗಣಿಗಾರಿಕೆ ಪರ ಮತ್ತು ವಿರೋಧದ ಸಂಪೂರ್ಣ ಮಾಹಿತಿ ಜಿಲ್ಲಾಧಿಕಾರಿಗೆ ನೀಡುತ್ತೇವೆ.

    –ರಿಷಿಆನಂದ್. ಎಸಿ. ಮಧುಗಿರಿ

     

    ವಿಡಿಯೋ ನೋಡಿ:

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ನಟ ದರ್ಶನ್ ಜೈಲು ಪಾಲಾದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀ ಭಾವನಾತ್ಮಕ ಪೋಸ್ಟ್!

    August 16, 2025

    ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೂ ಕೀಳಲು ಹೋಗಿದ್ದ ವ್ಯಕ್ತಿ ಸಾವು!

    August 8, 2025

    ರಾಜ್ಯ ಹೆದ್ದಾರಿಯನ್ನೇ ನುಂಗಿ ತೇಗಿದ ಹೊಟೇಲ್: ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ

    August 4, 2025
    Our Picks

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025

    ದೀಪಾವಳಿಗೆ ಡಬಲ್ ಗಿಫ್ಟ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

    August 15, 2025

    ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

    August 11, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ

    August 18, 2025

    ಕೊರಟಗೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯತೆ ಇಲ್ಲದೆ ಇದ್ದರೆ ಅಭಿವೃದ್ಧಿ ಅಸಾಧ್ಯ ಎಂದು ಕೇಂದ್ರ ಸಚಿವ…

    ತಲ್ವಾರ್ ನಿಂದ ಹಲ್ಲೆ ನಡೆಸಿ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ!

    August 18, 2025

    ಭಾರೀ ಮಳೆ ಹಿನ್ನೆಲೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

    August 18, 2025

    ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟನ್ನೂ ಬದಲಿಸಿ: ಬಿ.ವೈ.ವಿಜಯೇಂದ್ರ ಒತ್ತಾಯ

    August 18, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.