ಗದಗ: ಭಾರತದಾದ್ಯಂತ ಕಾಂಗ್ರೆಸ್ ‘ಬೆಲೆ ಏರಿಕೆ ಮುಕ್ತ ಭಾರತ’ ಎಂಬ ಅಭಿಯಾನದಡಿಯಲ್ಲಿ ವಿನೂತನ ಹೋರಾಟವನ್ನು ನರಗುಂದ ತಾಲೂಕಿನ ಸೋಮಾಪೂರ ಓಣಿಯ ಐದು ಮತ್ತು ಹದಿನೆಂಟನೆಯ ವಾರ್ಡ್ ನ ಜನರು ಹಮ್ಮಿಕೊಂಡರು.
ಎಐಸಿಸಿ ಮಾನವ ಹಕ್ಕುಗಳ ಘಟಕದಿಂದ ಅಧ್ಯಕ್ಷರಾದ ಶಿವಾನಂದ ಮಾಯಣ್ಣ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಬಿಜೆಪಿ ಸರಕಾರ ಹತ್ತೇದಿನದಲ್ಲಿ ಹನ್ನೊಂದು ಬಾರಿ ಪೆಟ್ರೊಲ್ ಬೆಲೆಯನ್ನು ಏರಿಕೆ ಮಾಡಿದೆ. ಇದೊಂದು ಸುಳಿಗೆ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ರಸಗೊಬ್ಬರಗಳ ವರ್ಷಕ್ಕೆ ಎರಡು ಕೋಟಿ ಇಪ್ಪತ್ತು ಲಕ್ಷ ಟನ್ ಅವಶ್ಯವಿದ್ದು, 2300ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ರೈತರಿಂದ ವಸೂಲಿ ಮಾಡಿದೆ. ಇದೊಂದು ಜನವಿರೋಧಿ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆಗಳನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನರಗುಂದ ತಾಲೂಕಿನ ಸೋಮಾಪೂರ ಓಣಿಯ5 ಮತ್ತು 18ನೇಯ ವಾರ್ಡಿನ ಹಿರಿಯರಾದ ಬಸನಗೌಡ ಕ ಪಾಟೀಲ, ಚನ್ನಬಸುವ ಹುಲಜೋಗಿ, ಪಕ್ರುಸಾಬ ಬಿಳಗಿ, ವಿಠ್ಠಲ ಬಾರಕೇರ, ಶರಣಪ್ಪ ಹುಲಜೋಗಿ, ಬಸವರಾಜ ಪೂಜಾರ, ಚಂದ್ರಶೇಖರ ಹುಲಜೋಗಿ, ಮೈಲಾರಿ ಕುರಿ, ಮಾಬುಸಾಬ ಕಡಕೋಳ, ರಾಜುಗೌಡ ಪಾಟೀಲ, ಶಿವಪ್ಪ ಹುಲಜೋಗಿ, ಸಂಗಪ್ಪ ಗಾಣಗೇರ, ನಾಗಪ್ಪ ಹುಲಜೋಗಿ, ವಿರೂಪಾಕ್ಷಗೌಡ ತಿಪ್ಪನಗೌಡ, ಮುಂತಾದವರು ಉಪಸ್ಥಿತರಿದ್ದರು.
ವರದಿ: ಎ.ಎನ್. ಪೀರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5