ಕೊರಟಗೆರೆ: ಬಿಜೆಪಿ ಪಕ್ಷವು ದಲಿತ ವಿರೋಧಿಯಾಗಿದ್ದು, ದಲಿತ ನಾಯಕ ಮಂದಕೃಷ್ಣ ಮಾದಿಗರವರನ್ನು ದಾರಿ ತಪ್ಪಿಸಿ ಸುಳ್ಳು ಹೇಳಿಸಿ ದಲಿತರನ್ನು ಒಡೆದು ಆಳುವ ನೀತಿಯನ್ನು ಮಾಡುತ್ತಿದೆ ಎಂದು ಮಾಜಿ ನಗರಸಭಾ ಉಪಾದ್ಯಕ್ಷ ಜಿಲ್ಲಾ ದಲಿತ ಮುಖಂಡ ವಾಲೆ ಚಂದ್ರಯ್ಯ ಹೇಳಿದರು.
ಪಟ್ಟಣದ ರಾಜೀವ ಭವನದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಮಾದಿಗ ಜನಾಂಗದ ರಾಷ್ಟೀಯ ಅಧ್ಯಕ್ಷರಾದ ಮಂದಕೃಷ್ಣ ಮಾದಿಗರವರು ಕಾಂಗ್ರೆಸ್ ಸದಾಶಿವ ಆಯೋಗದ ವಿರೋಧಿ ಎಂದು ಕೆಲವು ಬಿಜೆಪಿ ರಾಜಕಾರಣಿಗಳ ಜೊತೆಗೂಡಿ ಹೇಳಿದ್ದಾರೆ. ಆದರೆ ಬಿಜೆಪಿ ಪಕ್ಷವು ಮೀಸಲಾತಿಯನ್ನೆ ತೆಗೆದು ಹಾಕುವ ಹುನ್ನಾರದಲ್ಲಿದೆ.
ಸಂವಿಧಾನದ ವಿರೋಧಿ ಧೋರಣೆಯನ್ನು ಬಿಜೆಪಿ ಪಕ್ಷವು ಮಾಡುತ್ತಿದ್ದು, ದಲಿತರನ್ನು ಒಡೆದು ಅವರನ್ನು ತುಳಿಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರ ಮೀಸಲಾತಿಯನ್ನೇ ತೆಗೆದು ಹಾಕುವಾಗ ಇನ್ನು ಒಳಮೀಸಲಾತಿ ನೀಡುತ್ತಾರೆ ಎನ್ನುವ ಮಂದಕೃಷ್ಣ ಮಾದಿಗರವರ ಹೇಳಿಕೆ ತಪ್ಪು ಗ್ರಹಿಕೆಯಿಂದ ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಪಕ್ಷ ಮಾಡಿದೆ.
ದಲಿತರ ಮೀಸಲಾತಿಗೆ ಮತ್ತು ಒಳಮೀಸಲಾತಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಾ.ಜಿ.ಪರಮೇಶ್ವರ್, ಮಹದೇವಪ್ಪ, ಮುನಿಯಪ್ಪನವರ ಕೊಡುಗೆ ಸಾಕಷ್ಟಿದೆ. ಇವರೆಲ್ಲರು ಒಳಮೀಸಲಾತಿ ಪರ ಮಾತನಾಡಿ, ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಬ್ಯಾಕ್ ಲಾಗ್ ಹುದ್ದೆಗಳನ್ನು ಬಿಜೆಪಿ ಪಕ್ಷವು ದಲಿತರಿಗೆ ಸಿಗದಂತೆ ತಡೆದಿದ್ದ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷವು ಅದನ್ನು ಜಾರಿಗೆ ತರುವಲ್ಲಿ ಖರ್ಗೆ, ಡಾ.ಜಿ.ಪರಮೇಶ್ವರ್,ಮುನಿಯಪ್ಪ ರವರ ಶ್ರಮ ಬಹಳಷ್ಟಿದೆ.
ಇಂತಹವರ ವಿರುದ್ದ ಕೆಲವು ಬಿಜೆಪಿ ನಾಯಕರು ಮಂದಕೃಷ್ಣ ಮಾದಿಗರನ್ನು ಮುಂದೆ ಬಿಟ್ಟು ಸುಳ್ಳು ಅಪವಾದ ಹೊರಿಸುತ್ತಿದ್ದಾರೆ. ಮೂಲ ಆರ್ ಎಸ್ ಎಸ್ ಕೈಗೊಂಬೆಯಾಗಿರುವ ಬಿಜೆಪಿ, ಮಡಿವಂತಿಕೆ ಸಮಾಜದ ಕೈಗೊಂಬೆಯಾಗಿದ್ದು, ದಲಿತರ ವಿರೋಧಿಯಾಗಿದೆ. ಆದ್ದರಿಂದ ಎಲ್ಲಾ ದಲಿತರು ಒಟ್ಟುಗೂಡಿ ಕಾಂಗ್ರೆಸ್ ಪಕ್ಷದ ಪರವಾಗಿದ್ದೇವೆ ಎಂದರು.
ಮಾಜಿ ನಗರಸಭಾ ಸದಸ್ಯ ನರಸೀಯಪ್ಪ ಮಾತನಾಡಿ , ಮಂದಕೃಷ್ಣ ಮಾದಿಗರವರು ಕೋಮುವಾದಿಗಳ ಪರ ಪ್ರಚಾರ ಮಾಡುತ್ತಿರುವುದು ನಿಜಕ್ಕೂ ನೋವು ತಂದಿದೆ. ಮಂದಕೃಷ್ಣ ಮಾದಿಗರವರು ಇದೇ ರೀತಿ ಬಿಜೆಪಿ ಪರ ಪ್ರಚಾರ ಮಾಡಿದರೆ ಗೋ ಬ್ಯಾಕ್ ಚಳುವಳಿಯನ್ನು ದಲಿತರು ಮಾಡಬೇಕಾಗಿರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ನರಸಿಂಹಮೂರ್ತಿ, ಜಯರಾಂ, ಸುರೇಶ್, ದೊಡ್ಡಯ್ಯ, ಶಿವರಾಮಯ್ಯ, ನಂದೀಶ್, ಜಯಮೂರ್ತಿ, (ಅಟ್ಟಿಕ ಬಾಬು)ನಾಗರಾಜು, ಹನುಮಂತರಾಯಪ್ಪ, ಹರೀಶ್, ಗೋಪಿನಾಥ್, ಸೇರಿದಂತೆ ಹಲವು ಮುಖಂಡರುಗಳು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296