ತುಮಕೂರು: ಜಾತಿ ಗಣತಿ ವರದಿ ವಿಚಾರದಲ್ಲಿ ಎಲ್ಲ ಸಚಿವರಿಗೂ ವರದಿ ಸಾರಾಂಶದ ಒಂದೊಂದು ಪ್ರತಿ ಕೊಟ್ಟಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ಈ ವರದಿಯಲ್ಲಿ ಸುಮಾರು 8–10 ಸಂಪುಟ ಇದೆ. ಓದಲು ಮೂರುತಿಂಗಳು ಬೇಕು. ನಮಗೆ ಕೊಟ್ಟಿರೋದು ಕೇವಲ ಸಾರಾಂಶದ ಪ್ರತಿ ಮಾತ್ರ. ಜಾತಿ ಗಣತಿ ವರದಿ ಸಂಬಂಧಿಸಿದಂತೆ ಒಕ್ಕಲಿಗ ಸಮುದಾಯದ ಸಭೆಗೆ ನನ್ನ ಅಭ್ಯಂತರ ಇಲ್ಲ ಎಂದರು.
ಸಭೆ ಮಾಡಿ ಚರ್ಚೆ ಮಾಡಲಿ, ಅದರಲ್ಲಿ ಯಾವ ಅಂಶ ತಮಗೆ ಇಷ್ಟ ಆಗಿಲ್ಲ ಎಂದು ತಿಳಿಸಲಿ. ಅದನ್ನು ಸರಿಪಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದರು.
ಬಿಜೆಪಿ ಅವರು ಮೀಸಲಾತಿ ವಿರೋಧಿಗಳು, ಅದಕ್ಕೆ ಜಾತಿ ಗಣತಿ ವಿರೋಧಿಸುತ್ತಾರೆ. 10 ವರ್ಷಗಳ ಹಳೆಯ ವರದಿ ಮರು ಸರ್ವೆ ಆಗಲಿ ಅನ್ನೋದನ್ನು ಒಪ್ಪಬಹುದು ಎಂದರು.
ತೆಲಂಗಾಣದಲ್ಲಿ ಒಳ ಮೀಸಲಾತಿ ಜಾರಿಯಾಗಿರುವಂತೆ ಕರ್ನಾಟಕದಲ್ಲಿ ಜಾರಿಯಾಗಲಿದೆ. ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ದವಾಗಿದೆ ಎಂದರು.
ಸರ್ಕಾರದಿಂದ ಯಾವ ನೇಮಕಾತಿ ಸದ್ಯ ಮಾಡೋದಿಲ್ಲ. ಒಳ ಮೀಸಲಾತಿ ತೀರ್ಮಾನ ಆಗೋವರೆಗೂ ಯಾವುದೇ ನೇಮಕಾತಿ ಇಲ್ಲ ಎಂದರು. ಎರಡು ತಿಂಗಳಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW