ತುಮಕೂರು: ತುಮಕೂರಿನ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಕೋಟೆಗೆ ಸ್ಥಳೀಯ ಶೈಕ್ಷಣಿಕ ಪ್ರವಾಸವನ್ನು ನವೆಂಬರ್ 28ರಂದು ಹಮ್ಮಿಕೊಂಡಿದ್ದರು.
ಇದೇ ವೇಳೆ ಪ್ರವಾಸಿಗ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ ಡಿ.ಹೆಚ್. ಅವರು, ಚನ್ನರಾಯನದುರ್ಗ ಕೋಟೆಯ ಇತಿಹಾಸವನ್ನ ವಿವರಿಸುತ್ತಾ, 1613 ರಲ್ಲಿ ಚಿಕ್ಕಪ್ಪ ಗೌಡನ ಕಿರಿಯ ಮಗನ ಆಕಾಲಿಕ ಮರಣದ ನೆನಪಿಗಾಗಿ ಕೋಟೆಯನ್ನ ನಿರ್ಮಿಸಿದ್ದರು. ಕೋಟೆಯಲ್ಲಿ ಕಂಡುಬರುವ ಸ್ಮಾರಕಗಳಾದ ಅರಮನೆ, ಕಾವಲುಮಂಟಪ, ದೇವಾಲಯ, ಕಣಜಗಳು ಹಾಗೂ ಶಾಸನಗಳನ್ನು ಪುರಾತತ್ವದ ಹಿನ್ನೆಲೆಯಲ್ಲಿ ವಿವರಿಸಿದರು. ಇದಲ್ಲದೇ ಮುಂದಿನ ಪೀಳಿಗೆಗೆ ಇದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಂಗಸ್ವಾಮಿ ಎಂ.ಆರ್. ಅವರು ಮಾತನಾಡಿ, ಕೌಟಿಲ್ಯನ ಸಪ್ತಂಗಗಳಲ್ಲಿ ಕೋಟೆಗಳು ಮಹತ್ವದ ಸ್ಥಾನ ಪಡೆದಿದ್ದು, ಇಂತಹ ಬೃಹತ್ ಕೋಟೆ ಜಿಲ್ಲೆಯಲ್ಲಿರುವುದು ನಮ್ಮೆಲ್ಲರ ಹೆಮ್ಮೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರವಾಸಿ ಮಿತ್ರರು ಹಾಜರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700