ಚಾಮರಾಜನಗರ: ಒಂದು ಕಡೆ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದರೆ, ಮತ್ತೊಂದೆಡೆ ಮಳೆಗಾಗಿ ಮಕ್ಕಳಿಂದ ಬಸವನ ಪೂಜೆ ಮಾಡಲಾಗಿದೆ. ಮಳೆಗಾಗಿ ಪ್ರಾರ್ಥಿಸಿದ ರಾಮಸಮುದ್ರ ಗ್ರಾಮದ ಪುಟಾಣಿ ಮಕ್ಕಳಿಂದ ಬಸವನ ಮೆರವಣಿಗೆ ನಡೆದಿದೆ. ಗಡಿ ಜಿಲ್ಲೆ ಚಾಮರಾಜನಗರದ ರಾಮಸಮುದ್ರ ಬಡಾವಣೆಯಲ್ಲಿ ಮಂಗಳವಾರ ಸಂಜೆ 4 ಗಂಟೆ ವೇಳೆಯಲ್ಲಿ ಪುಟಾಣಿ ಮಕ್ಕಳಿಂದ ಬಸವನ ಪೂಜೆಗೈದು ಮಳೆಗಾಗಿ ಪ್ರಾರ್ಥಿಸಿದರು.
ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಸುರಿದರೂಕೂಡ ರಾಮಸಮುದ್ರ, ಸುತ್ತಾಮುತ್ತಾ ಮಳೆ ಮಾಯವಾಗಿದ್ದು, ಮಳೆ ಇಲ್ಲದೆ ಬರದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಮಳೆಗಾಗಿ ಜನತೆ ಬಸವಣ ಮೊರೆ ಹೋಗಿದ್ದಾರೆ. ಮಳೆಯಾಗದಿದ್ರೆ ಮಕ್ಕಳು ಬಸವನ ಮರದ ಮೂರ್ತಿಗೆ ಪೂಜೆ ಸಲ್ಲಿಸಿ ಮನೆಮನೆಗೆ ತೆರಳಿ ನೀರು ಹಾಕಿಸಿಕೊಂಡರೆ ಮಳೆ ಸುರಿಯುತ್ತೆ ಎಂಬುದು ಹಿರಿಯರ ನಂಬಿಕೆ. ಬಸವನ ಮೂರ್ತಿಗೆ ಅಲಂಕಾರ ಮಾಡಿ ರಾಮಸಮುದ್ರದ ಬಸವೇಶ್ವರ ದೇವಸ್ಥಾನದಲ್ಲಿ ಪುಟಾಣಿ ಮಕ್ಕಳು ಪೂಜೆ ಸಲ್ಲಿಸಿದ್ದಾರೆ.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಳೆಗಾಗಿ ಪುಟಾಣಿಗಳು ಪ್ರಾರ್ಥಿಸಿದರು. ಇಡೀ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದರೆ, ಗಡಿ ಜಿಲ್ಲೆ ಚಾಮರಾಜನಗರಕ್ಕೆ ಮಾತ್ರ ಮಳೆ ಇಲ್ಲ. ಪರಿಣಾಮವಾಗಿ ರಾಮಸಮುದ್ರ ಬಡಾವಣೆಯ ಮಕ್ಕಳು ಇಂದು ಮಳೆಗಾಗಿ ಬಸವನ ಪೂಜೆಗೈದು ಪ್ರಾರ್ಥಿಸಿದರು. ಉಯ್ಯೋ ಉಯ್ಯೋ ಮಳೆರಾಯ ಬಸವನ ಕಟ್ಡೆಗೆ ನೀರಿಲ್ಲ … ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ ಎಂದು ಮಕ್ಕಳು ಬೇಡಿಕೊಂಡಿದ್ದಾರೆ. ಬೇಗ ಮಳೆ ಸುರಿಸುವಂತೆ ಪುಟಾಣಿ ಮಕ್ಕಳಿಂದ ಬಸವನ ಮೊರೆ ಹೋಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA