ಬೆಂಗಳೂರು: ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಗರಂ ಆದ ಘಟನೆ ನಡೆಯಿತು.
ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಗಳ ಬಗ್ಗೆ ಏನು ಹೇಳ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದ ವೇಳೆ ಸಿಎಂ ಗರಂ ಆದರು.
ರಾಜ್ಯದಲ್ಲಿ ಎಷ್ಟು ಗಣೇಶ ಮೂರ್ತಿಗಳಿತ್ತಯ್ಯಾ? ಸುಮಾರು 40 ಸಾವಿರ ಮೂರ್ತಿಗಳನ್ನಿಟ್ಟಿದ್ರು. ಅದರಲ್ಲಿ ಗಲಭೆಯಾಗಿದ್ದು ಕೇವಲ ಎರಡು ಕಡೆ ಮಾತ್ರ. ಒಂದು ನಾಗಮಮಂಗಲದಲ್ಲಿ ಇನ್ನೊಂದು ದಾವಣಗೆರೆಯಲ್ಲಿ. ದಾವಣಗೆರೆಯಲ್ಲಿ ಬರೀ ಕಲ್ಲು ತೂರಾಟ ಆಗಿತ್ತಷ್ಟೇ. ಆದರೆ ನೀವು ಎಲ್ಲಾ ಕಡೆ ಗಲಾಟೆ ಆಗಿದೆ ಎನ್ನುವ ಹಾಗೆ ಪ್ರಶ್ನಿಸುತ್ತಿದ್ದೀರಿ. ಎರಡು ಗಲಭೆ ಪ್ರಕರಣ ಅಂತ ಮಾತ್ರ ಹೇಳಿ ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ಘಟನೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಂತೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಅವರು ಎಲ್ಲಾ ಮಾಡ್ತಾರೆ. ಈ ಗಲಭೆ ವಿಚಾರವನ್ನು ಬಿಜೆಪಿಯವರು ದೊಡ್ಡದು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296