ಚಿತ್ರದುರ್ಗ: ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಬಿಡದ ಕಾಂಗ್ರೆಸ್ ಶಾಸಕರು ಕಲಾಪ ವ್ಯರ್ಥವಾಗಲು ಕಾರಣರಾಗಿದ್ದು, ಈಶ್ವರಪ್ಪನವರ ಹೇಳಿಕೆಯನ್ನು ತಿರುಚಿ, ಸದನ ನಡೆಯಲು ಬಿಡದೇ ಜನರ ತೆರಿಗೆ ವ್ಯರ್ಥವಾಗುವಂತೆ ಮಾಡಿದ್ದಾರೆ ಎಂದು ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ಆರೋಪಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ವಿ.ವಿಶ್ವನಾಥ್ ರವರ ನೇತೃತ್ವದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಡಿ . ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಧರ್ಮ – ಧರ್ಮಗಳ ನಡುವೆ ಸಂಘರ್ಷ ಉಂಟುಮಾಡುವಂತ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಶಿವಮೊಗ್ಗದ ಬಜರಂಗದಳದ ನಿಷ್ಠಾವಂತ ಕಾರ್ಯಕರ್ತ ಹರ್ಷನ ಹತ್ಯೆಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ. ಅಧಿಕಾರ ಕಳೆದು ಕೊಂಡಾಗ ಪಾದಯಾತ್ರೆ ನೆಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಪಟನಾಟಕದ ಎರಡನೇ ಭಾಗ ಪ್ರಾರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಕೇಂದ್ರ ಸರ್ಕಾರ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಹಾಗೂ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರುತ್ತಿದ್ದು , ಈ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಕುತಂತ್ರ ಮಾಡುವುದನ್ನು ಬಿಟ್ಟು ತಮ್ಮನ್ನು ಚುನಾಯಿಸಿದ ಕ್ಷೇತ್ರಗಳಿಗೆ ಅವರು ನ್ಯಾಯದೊರಕಿಸಿ ಕೊಡಲಿ. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಜನರು ನಿಮ್ಮ ಅಸ್ತಿತ್ವವನ್ನು ಕೊನೆಗಾಣಿಸುತ್ತಾರೆ ಎಂದು ಪೂರ್ಣಿಮಾ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೇಶವ ಮೂರ್ತಿ, ಮುಖಂಡರುಗಳಾದ ಎಂ.ಎಸ್.ರಾಘವೆಂದ್ರ , ಟಿ.ಚಂದ್ರಶೇಖರ್ , ಎಂ.ಡಿ.ಸಣ್ಣಪ್ಪ ದ್ಯಾಮೇಗೌಡ , ಮಂಜುಳ ಎಂ.ವಿ.ಹರ್ಷ, ಎ.ರಾಘವೇಂದ್ರ, ಸರವಣ, ನಿತ್ಯಾನಂದ, ಬಿ.ಎನ್ ತಿಪ್ಪೇಸ್ವಾಮಿ, ನಗರಸಭಾ ಸದಸ್ಯೆ ಮಂಜುಳ ಶೋಭ, ಚಂದ್ರಹಾಸ್ , ಮಾಜಿ ಅಧ್ಯಕ್ಷೆ ಮಂಜುಳ , ಅಂಬಿಕಾ , ಅಸ್ಟರ್ ಅಹಮದ್ , ದೇವರಾಜ್ , ಬಸವರಾಜ ನಾಯಕ್ ಎಂ.ಎ ವಿಶ್ವನಾಥ್ , ಎಚ್.ವೆಂಕಟೇಶ್ , ಹರ್ಷ ಗಿರೀಶ್ ಪಿ.ಕೃಷ್ಣಮೂರ್ತಿ , ,ಶಿವಣ್ಣ ಉಪಸ್ಥಿತರಿದ್ದರು .
ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ-ದಾವಣಗೆರೆ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB