ಹಿರಿಯೂರು: ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಕರ್ಪೂರದಾರತಿ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ನಡೆಯಿತು.
ಜಾತ್ರೆಯಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾಶ್ರೀನಿವಾಸ್ ಅವರು ಭಾಗಿಯಾಗಿದ್ದರು. ಇನ್ನೂ ಕರ್ಪೂರದಾರತಿ ಪೂಜೆಯಲ್ಲಿ ಮೊದಲ ಕರ್ಪೂರದಾರತಿಯನ್ನು ನಗರ ಸಭಾ ಸದಸ್ಯರಾದ ಈ .ಮಂಜುನಾಥ್ 64,500 ರೂಪಾಯಿಗೆ ನಡೆಸಿದರು.
ಎರಡನೆಯ ಕರ್ಪೂರದ ಆರತಿಯನ್ನು ಮಾಹಿ ಜ್ಯೂಯಲರ್ಸ್ ಮಾಲೀಕ ಕೌಶಿಕ್ ನಾಯ್ಡು 35,500 ರೂಪಾಯಿಗಳಿಗೆ ನಡೆಸಿದರು. ಮೂರನೇ ಕರ್ಪೂರದಾರತಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೇತ್ರಾವತಿ ಅರುಣ್ ಕುಮಾರ್ ಬ್ಯಾಡರಹಳ್ಳಿ ಅವರು 31,500 ರೂಪಾಯಿಗಳಿಗೆ ನಡೆಸಿದರು.
ಈ ಸಂದರ್ಭದಲ್ಲಿಹಿರಿಯೂರು ತಾಲ್ಲೂಕಿನ ಶಾಸಕಿ ಪೂರ್ಣಿಮಾ ಅವರು ಸ್ವಾಮಿಗೆ ಕರ್ಪೂರದಾರತಿಯನ್ನು ಬೆಳಗಿದರು. ಬಳಿಕ ಕೌಶಿಕ್ ನಾಯ್ಡು ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್ ವಿ, ನಗರಸಭೆ ಅಧ್ಯಕ್ಷರಾದ ಶಂಶುದ್ ಉನ್ನಿಸಾ, ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ಕೌಶಿಕ್ ನಾಯ್ಡು , ಜಿ.ಎಲ್.ಮೂರ್ತಿ, ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಆರ್.ನಾಗೇಂದ್ರ ನಾಯ್ಕ, ಆರ್.ರವಿಚಂದ್ರ ನಾಯ್ಕ ನಗರಸಭೆ ಸದಸ್ಯರಾದ ಮಂಜುನಾಥ್, ಸುರೇಖಾ ಮಣಿ, ಯಶೋಧರ,ಶಿವರಂಜನಿ, ಮಮತ, ಹಾಗೂ ಗ್ರಾಮಲೆಕ್ಕಾಧಿಕಾರಿಗಳಾದ ಮಾಯವರ್ಮ ಆರ್ ., ಗಿರೀಶ್ , ರಾಜು , ಮಂಜುನಾಥ್ , ಬಬ್ಬೂರು ಶಿವಣ್ಣ, ಐಮಂಗಲ ಹೋಬಳಿಯ ರಾಜಸ್ವ ನಿರೀಕ್ಷಕರಾದ ಗೋಪಿ ನಾಯ್ಕ , ಪೋಲಿಸ್ ಸಿಬ್ಬಂದಿ ವರ್ಗದವರಾದ ಮಹಂತೇಶ್, ಸಿದ್ದಪ್ಪ, ಶಿವಮೂರ್ತಿ, ಪ್ರವೀಣ್ , ಪಿ ಎಸ್ ಐ ಅನುಸೂಯಮ್ಮ , ಚಂದ್ರಪ್ಪ , ಪ್ರಸನ್ನ , ಅನಿಲ್ ಕುಮಾರ್ , ಚಿದಾನಂದ್ , ಇಬ್ರಾಹಿಂ ಖಲೀಲ್ , ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು , ಮುಖಂಡರುಗಳು ಇತರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB