nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ

    June 1, 2025

    ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ

    June 1, 2025

    ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು

    June 1, 2025
    Facebook Twitter Instagram
    ಟ್ರೆಂಡಿಂಗ್
    • ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ
    • ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ
    • ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು
    • ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ!
    • ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!
    • ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ
    • ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ
    • ಶಿಕ್ಷಕನ ಅಮಾನತು ಪ್ರಕರಣ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಧಿಕಾರಿಗಳಿಂದ ವಿನಾ ಕಾರಣ ಕಾಲಹರಣ: ದಯಾಮರಣ ಕೇಳುವ ಸ್ಥಿತಿಗೆ ತಲುಪಿದ ಕುಟುಂಬ
    ತುಮಕೂರು February 3, 2022

    ಅಧಿಕಾರಿಗಳಿಂದ ವಿನಾ ಕಾರಣ ಕಾಲಹರಣ: ದಯಾಮರಣ ಕೇಳುವ ಸ್ಥಿತಿಗೆ ತಲುಪಿದ ಕುಟುಂಬ

    By adminFebruary 3, 2022No Comments2 Mins Read
    press meet

    ತುಮಕೂರು: ಪವತಿ ಖಾತೆಯ ಆಧಾರದಲ್ಲಿ ಪಹಣಿ, ಎಂ.ಆರ್‌ ಗಳು ಸಕ್ರಮವಾಗಿದ್ದರು, ಪ್ರತ್ಯೇಕ ಪೋಡಿ ಮಾಡಿಕೊಡದೇ ವಿನಾ ಕಾರಣ ಕಾಲಹರಣ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ನೊಂದ ಮಹಿಳೆಗೆ ನ್ಯಾಯದೊರಕಿಸಿ ಕೊಡಬೇಕೆಂದು ಶೂದ್ರಸೇನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಸಿ.ರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

    ನಿರ್ಮಲ ಕೆ.ಎನ್ ಕೋಂ ಲೇಟ್ ರಾಜಕುಮಾರ್ ಬಿನ್, ಕಮಲಮ್ಮ ತುಮಕೂರು ನಗರ ನಿವಾಸಿಯಾದ ಇವರ ಪತಿಯವರಾದ ಲೇಟ್ ರಾಜ್ ಕುಮಾರ್ ಬಿನ್ ಕಮಲಮ್ಮರವರಿಗೆ ಭೂ ನ್ಯಾಯ ಮಂಡಳಿಯಿಂದ 10 ಗುಂಟೆ ವಿಸ್ತೀರ್ಣದ ಜಮೀನು ಸರ್ವೇ ನಂ.3.3ರ ಚನ್ನನದಿಣ್ಣೆ ಪ್ರದೇಶದಲ್ಲಿ ಮಂಜೂರಾಗಿದ್ದು ನ್ಯಾಯಯುತವಾಗಿದೆ.


    Provided by

    ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ಸತ್ಯವಾಗಿವೆ. ತದನಂತರ ಇವರ ಪತಿಯಾದ ರಾಜ್‌ಕುಮಾರ್‌ ರವರು ಮರಣ ಹೊಂದಿದ್ದು, ಪವತಿ ಆಧಾರದಲ್ಲಿ ಇವರ ಹೆಸರಿಗೆ 10ಗುಂಟೆ ವಿಸ್ತೀರ್ಣದಲ್ಲಿ 02ಗುಂಟೆ ಸಾರ್ವಜನಿಕ ರಸ್ತೆಗೆ ಮಿಸಲಾಗಿದ್ದು, ಉಳಿದ 08 ಗುಂಟೆ ಇವರ ಹೆಸರಿಗೆ ಪಹಣಿ, ಎಂ.ಆರ್‌ , ದಾಖಲಾತಿಗಳಿವೆ, ಆದರೆ ಇದೇ ಸರ್ವೆ ನಂಬರ್‌ ಗಳಲ್ಲಿ ಕೆಲವರಿಗೆ ಭೂ ನ್ಯಾಯ ಮಂಡಳಿಯಲ್ಲಿ ಮಂಜೂರಾಗಿದ್ದು, ಅವರೆಲ್ಲರೂ ಜಿಲ್ಲಾಧಿಕಾರಿಗಳ ಮುಖಾಂತರ ಭೂ ಪರಿವರ್ತನೆ ಮಾಡಿಕೊಂಡು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ

    ಈ ಸರ್ವೇ ನಂಬರ್ ನಲ್ಲಿ ಮೂಲ ವಿಸ್ತೀರ್ಣ ವ್ಯತ್ಯಾಸವಾಗಿ ಮೂಲ ವಿಸ್ತೀರ್ಣಕ್ಕಿಂತ ಈಗಿನ ವಿಸ್ತೀರ್ಣ ವ್ಯತ್ಯಾಸವಾಗಿದೆ. ಆದ್ದರಿಂದ ನಾವುಗಳು ಈ ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದಂತೆ ವಿಸ್ತೀರ್ಣ ವ್ಯತ್ಯಾಸದ ಬಗ್ಗೆ ತುಮಕೂರು ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದೆವು, ಈ ಮನವಿಗೆ ಸ್ಪಂದಿಸಿದ ವಿಭಾಗಾಧಿಕಾರಿಗಳು ತಮ್ಮ ಪತ್ರದೊಂದಿಗೆ ತುಮಕೂರು ತಾಲ್ಲೂಕು, ತಹಶೀಲ್ದಾರ್‌ರವರಿಗೆ ಈ ವಿಸ್ತೀರ್ಣದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ತಹಶೀಲ್ದಾರ್ ಕಛೇರಿಯಲ್ಲಿರುವ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಅಜಯ್‌ ರವರು ಹಾಗೂ ಗ್ರಾಮಲೆಕ್ಕಿಗರಾದ ರವಿಕುಮಾರ್ ಭೂಮಿಕೇಂದ್ರದ ಹೇಮಲತಾರವರು ವಿನ ಕಾರಣ ಯಾವುದೇ ಲೋಪಗಳು ಇಲ್ಲದಿದ್ದರೂ ವಿಸ್ತೀರ್ಣ ವ್ಯತ್ಯಾಸಗಳನ್ನು ಗುರುತಿಸದೇ ಕಳೆದ ಫೆಬ್ರವರಿ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಏನು ಮಾಡದೇ ಅಲೆದಾಡಿಸಿ, ಅಲೆದಾಡಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿರುತ್ತಾರೆ ಎಂದು ಅವರು ತಿಳಿಸಿದರು.

    ನೊಂದ ಕುಟುಂಬಕ್ಕೆ ನ್ಯಾಯಯುತವಾಗಿ ಬಂದಿರುವ 8 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಿಸ್ತೀರ್ಣ ವ್ಯತ್ಯಾಸವಾಗಿರುವುದನ್ನು ಸರಿಪಡಿಸಿಕೊಡಬೇಕು ಹಾಗೂ ಇವರಿಗೆ ಮಾನಸಿಕವಾಗಿ ಹಿಂಸೆಯನ್ನು ನೀಡಿದ ಈ ಮೇಲಿನ ಅಧಿಕಾರಿಗಳ ವಿರುದ್ದ ಕಾನೂನು ರೀತ್ಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.

    “ತಾಲೂಕು ಕಚೇರಿ ಬಾಗಿಲು ತಟ್ಟಿ ತಟ್ಟಿ ನಮಗೆ ಸಾಕಷ್ಟು ನೋವು ಉಂಟಾಗಿದೆ. ಜಿಲ್ಲಾಧಿಕಾರಿಗಳು ಕೂಡಲೆ ನಮಗೆ ನ್ಯಾಯ ಕೊಡಿಸಲು ಮುಂದಾಗಬೇಕಿದೆ. ನಮಗೆ ನ್ಯಾಯ ಸಿಗದಿದ್ದರೆ, ನಾವು ಕುಟುಂಬ ಸಮೇತರಾಗಿ ಬಂದು ಜಿಲ್ಲಾಧಿಕಾರಿಗಳಿಗೆ ತುಮಕೂರು ಜಿಲ್ಲೆಯ ಸಂಘಟನೆಗಳ ಮುಖಾಂತರ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಸಿದ್ದರಿದ್ದೇವೆ” ಎಂದು ನೊಂದ ಮಹಿಳೆಯ ಮಗನಾದ ಸಂದೀಪ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

     

    ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

     

    admin
    • Website

    Related Posts

    ಹೇಮಾವತಿ ಎಕ್ಸ್‌ ಪ್ರೆಸ್ ಲಿಂಕ್ ಕೆನಾಲ್ ವಿವಾದ ಸಿಎಂ ಸಿದ್ದರಾಮಯ್ಯ, ಸಚಿವ ಪರಮೇಶ್ವರ್ ಪ್ರತಿಕ್ರಿಯೆ

    June 1, 2025

    ನಿಷೇಧಾಜ್ಞೆ ಧಿಕ್ಕರಿಸಿ ಹೇಮಾವತಿ ಎಕ್ಸ್‌ ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ವಿರೋಧಿಸಿ ಹೋರಾಟ

    May 31, 2025

    ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿಗೆ ತಾತ್ಕಾಲಿಕ ಬ್ರೇಕ್

    May 31, 2025
    Our Picks

    ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ

    June 1, 2025

    ಅಡುಗೆ ಎಣ್ಣೆ ದರ ಇಳಿಕೆ ಸಾಧ್ಯತೆ

    May 31, 2025

    ನಾನು ಪ್ರೀತಿಯಿಂದ ಹೇಳಿದ್ದೇನೆ: ಕನ್ನಡ ಬಗ್ಗೆ ಹೇಳಿಕೆಗೆ ಕಮಲ್ ಹಾಸನ್ ವಿವರಣೆ

    May 29, 2025

    ಪುಟಿನ್ ಹುಚ್ಚ: ರಷ್ಯಾ ಅಧ್ಯಕ್ಷ ವಿರುದ್ಧ ಟ್ರಂಪ್ ಕಿಡಿ

    May 26, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ

    June 1, 2025

    ಬೆಂಗಳೂರು: ಮಂಡ್ಯದಲ್ಲಿ  ಟ್ರಾಫಿಕ್ ಪೊಲೀಸರ ಅಮಾನವೀಯ ವರ್ತನೆಗೆ 3 ವರ್ಷದ ಬಾಲಕಿ ಸಾವನ್ನಪ್ಪಿದ ಬಳಿಕ  ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ವಾಹನ…

    ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ

    June 1, 2025

    ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು

    June 1, 2025

    ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ!

    June 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.