ಹುಣಸೂರು ತಾಲ್ಲೂಕು ಚಿಕ್ಕಹೆಜ್ಜೂರು ಹಾಡಿ ಬಳಿ ಪಾಳು ಮನೆಯಲ್ಲಿ ಜಿಂಕೆ ಕಳೇಬರ ಪತ್ತೆಯಾಗಿದೆ. ಬೀದಿ ನಾಯಿಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದ ಜಿಂಕೆಯ ಕಳೇಬರ ವನ್ನು ಪಾಳು ಮನೆಯಲ್ಲಿ ಬಚ್ಚಿಟ್ಟಿರುವ ಆರೋಪ ಕೇಳಿ ಬಂದಿದೆ.
ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವನ್ಯಜೀವಿ ವಲಯದಂಚಿನ ಚಿಕ್ಕಹೆಜ್ಜೂರು ಹಾಡಿ-2ರಲ್ಲಿ ನೀಲಮ್ಮರಿಗೆ ಸೇರಿದ ಪಾಳು ಮನೆಯಲ್ಲಿ ಸುಮಾರು ಒಂದೂವರೆ ವರ್ಷದ ಗಂಡು ಜಿಂಕೆ ಕಳೇಬರ ಪತ್ತೆಯಾಗಿದೆ.
ಜಿಂಕೆಯನ್ನು ಬೀದಿನಾಯಿಗಳು ಅಟ್ಟಾಡಿಸಿ ಕೊಂದು ಹಾಕಿದ್ದವು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಬದಲು ಕೆಲವರು ಸೇರಿಕೊಂಡು ಮಾಂಸ ತಿನ್ನುವ ಆಸೆಗಾಗಿ ಜಿಂಕೆ ಕಳೇಬರ ವನ್ನು ಬಚ್ಚಿಟ್ಟಿದ್ದರು ಎನ್ನಲಾಗಿದೆ. ಇದೀಗ ಜಿಂಕೆ ಮಾಂಸವನ್ನ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


